ಯುವ ಭವನ ಹಸ್ತಾಂತರಕ್ಕಾಗಿ ಯುವ ಒಕ್ಕೂಟದಿಂದ ಶಾಸಕರಿಗೆ ಮನವಿ
ಕೊಡಗು

ಯುವ ಭವನ ಹಸ್ತಾಂತರಕ್ಕಾಗಿ ಯುವ ಒಕ್ಕೂಟದಿಂದ ಶಾಸಕರಿಗೆ ಮನವಿ

February 5, 2019

ಮಡಿಕೇರಿ: ಯುವ ಚಟುವಟಿಕೆ ಗಳಿಗಾಗಿ ನಗರದ ಸುದರ್ಶನ ಅತಿಥಿ ಗೃಹದ ರಸ್ತೆ ಸಮೀಪ ಸುಮಾರು 6 ವರ್ಷಗಳ ಹಿಂದೆ ನಿರ್ಮಾಣಗೊಂಡು ಇದೀಗ ಮಹಿಳಾ ಕಾಲೇಜು ವಶದಲ್ಲಿರುವ ಯುವ ಭವನವನ್ನು ಯುವ ಒಕ್ಕೂಟಕ್ಕೆ ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿ ಜಿಲ್ಲಾ ಯುವ ಒಕ್ಕೂಟದ ಪ್ರಮುಖರು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಸೋಮವಾರಪೇಟೆಯಲ್ಲಿ ಶಾಸಕರ ಕಚೇರಿಯಲ್ಲಿ ರಂಜನ್ ಅವರನ್ನು ಭೇಟಿ ಯಾದ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ. ಸುಕುಮಾರ್ ಹಾಗೂ ಪದಾಧಿಕಾರಿಗಳು ಮಹಿಳಾ ಕಾಲೇಜನ್ನು ಸ್ಥಳಾಂತರಿಸುವ ಮೂಲಕ ಯುವ ಭವನವನ್ನು ಯುವ ಒಕ್ಕೂಟಕ್ಕೆ ಬಿಟ್ಟು ಕೊಡಬೇಕೆಂದು ಮನವಿ ಮಾಡಿದರು.

ಮಡಿಕೇರಿ ನಗರ ವ್ಯಾಪ್ತಿಯ ಕರ್ಣಂಗೇರಿ ಸರ್ವೆ ನಂ. 512/1 ರಲ್ಲಿ 0.10 ಎಕರೆ ನಿವೇ ಶನವು 2004ರಲ್ಲಿ ಜಿಲ್ಲಾ ಯುವ ಭವನ ಕಟ್ಟಡ ನಿರ್ಮಾಣಕ್ಕಾಗಿ ಆಗಿನ ಜಿಲ್ಲಾಧಿ ಕಾರಿಗಳು ಮಂಜೂರು ಮಾಡಿದ್ದರು. ಈ ನಿವೇಶನದಲ್ಲಿ ಯುವ ಭವನ ಕಟ್ಟಡ ನಿರ್ಮಾಣಕ್ಕೆ 2005 ರಲ್ಲಿ ಸಂಸದರಾಗಿದ್ದ ಡಿ.ವಿ. ಸದಾನಂದ ಗೌಡ ಅವರು 1 ಲಕ್ಷ ರೂ. ಅನುದಾನವನ್ನು ನೀಡಿದ್ದರು.

2008ರಲ್ಲಿ ಯುವ ಭವನದ ನಕಾಶೆ ಯನ್ನು ಮತ್ತು ಅಂದಾಜು ಪಟ್ಟಿಯನ್ನು ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಅಂದಿನ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಅವರನ್ನು ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡಲು ಕೋರಲಾಗಿತ್ತು. ಅದರಂತೆ 2009 ರಲ್ಲಿ ಕಟ್ಟಡದ ನಿರ್ಮಾಣಕ್ಕೆ ರೂ. 31.00 ಲಕ್ಷ ರೂ. ಬಿಡುಗಡೆ ಮಾಡಿದರು.

ಭೂ ಸೇನಾ ನಿಗಮ ನೀಲಿ ನಕಾಶೆಗೆ ಅನುಗುಣವಾಗಿ ಕೆಲಸವನ್ನು ನಿರ್ವಹಿಸದೆ, 2013 ಮಾರ್ಚ್‍ನಲ್ಲಿ ಯುವ ಭವನ ಕಟ್ಟಡವನ್ನು ಹಸ್ತಾಂತರಿಸಲು ತಯಾರಿ ನಡೆಸಿದ್ದರು. ಯುವ ಒಕ್ಕೂಟದ ಅಂದಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನೀಲಿ ನಕಾಶೆಗೆ ತಕ್ಕಂತೆ ಕಾಮಗಾರಿ ನಿರ್ವಹಿಸಿ ಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ್ದರು.

2013 ರಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರು ಯುವಭವನವನ್ನು 6 ತಿಂಗಳ ಮಟ್ಟಿಗೆ ಮಹಿಳಾ ಕಾಲೇಜ್‍ಗೆ ಬಿಟ್ಟುಕೊಡಬೇ ಕೆಂದು ಮನವಿ ಮಾಡಿದಲ್ಲದೆ ಉಳಿದಿ ರುವ ಕೆಲಸ, ಕಾರ್ಯಗಳನ್ನು ಶಾಸಕರ ನಿಧಿಯಿಂದ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಯುವ ಒಕ್ಕೂಟ ಮಹಿಳಾ ಕಾಲೇಜು ನಡೆಸಲು ಮೌಖಿಕ ಒಪ್ಪಿಗೆ ನೀಡಿತ್ತು. ಆದರೆ 6 ವರ್ಷ ಕಳೆದರೂ ಯುವ ಜನತೆಯ ಕಾರ್ಯ ಚಟುವಟಿಕೆಗೆ ಯುವ ಭವನ ಕಟ್ಟಡವನ್ನು ಬಿಟ್ಟುಕೊಡದೇ ಸತಾಯಿ ಸಲಾಗುತ್ತಿದೆ ಎಂದು ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ. ಸುಕುಮಾರ್ ಬೇಸರ ವ್ಯಕ್ತಪಡಿಸಿದರು.

ವಿವಿಧ ತರಬೇತಿ ಮತ್ತು ಶಿಬಿರಗಳನ್ನು ಆಯೋಜಿಸುವುದು, ಕಾರ್ಯಗಾರ ಯುವ ಸಮ್ಮೇಳನ ಮತ್ತು ತಾಲೂಕಿನ ಯುವ ಜನ ಮೇಳ, ಜಿಲ್ಲಾ ಯುವ ಜನೋತ್ಸವ, ಗ್ರಾಮೀಣ ಕ್ರೀಡಾಕೂಟಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ಯುವ ಜನರಿಗೆ ಸಂಬಂಧಪಟ್ಟ ವಿವಿಧ ಕಾರ್ಯ ಕ್ರಮಗಳನ್ನು ನಡೆಸಲು ಈ ಯುವ ಭವನ ಕಟ್ಟಡ ಹೆಚ್ಚು ಸಹಕಾರಿಯಾಗಿದೆ. ಒಂದೂವರೆ ವರ್ಷಗಳ ಹಿಂದೆಯೂ ಪ್ರತಿ ಭಟನೆ ನಡೆಸಿ, ಈ ಹಿಂದಿನ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿ ಭವನವನ್ನು ಹಸ್ತಾಂತರಿ ಸುವಂತೆ ಒತ್ತಾಯಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಭವನ ಯುವ ಒಕ್ಕೂಟದ ಅಧೀನಕ್ಕೆ ಬಂದಿಲ್ಲ. ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಯುವ ಭವನವನ್ನು ಯುವ ಒಕ್ಕೂಟಕ್ಕೆ ಬಿಟ್ಟುಕೊಡದಿದ್ದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಸುಕುಮಾರ್ ಇದೇ ಸಂದರ್ಭ ತಿಳಿಸಿದರು.

ಜಿಲ್ಲಾ ಉಪಾಧ್ಯಕ್ಷ ಎನ್.ಎಂ.ದಿವಾಕರ್, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ರಾದ ಚಂದ್ರಿಕಾ, ಸಹ ಕಾರ್ಯದರ್ಶಿ ಆದರ್ಶ್, ತಾಲ್ಲೂಕು ಪದಾಧಿಕಾರಿ ತನು ಕುಮಾರ್, ಸಲಹಾಗಾರ ಉದಯ್‍ಕುಮಾರ್, ಪ್ರಮುಖರಾದ ಹರೀಶ್ ಮತ್ತಿತರರು ಶಾಸಕರ ಭೇಟಿ ಸಂದರ್ಭ ಹಾಜರಿದ್ದರು.

Translate »