Tag: Madikeri

ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು: ನಕ್ಸಲ್ ಪರ ಘೋಷಣೆ
ಕೊಡಗು

ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು: ನಕ್ಸಲ್ ಪರ ಘೋಷಣೆ

October 30, 2018

ಮಡಿಕೇರಿ:  ದಕ್ಷಿಣ ಭಾರತದ ನಕ್ಸಲ್ ಮುಖಂಡ ಎಂಬ ಹಣೆಪಟ್ಟಿಯೊಂದಿಗೆ ನಿಷೇಧಿತ ಮಾವೋವಾದಿ ಸಂಘಟನೆಯಲ್ಲಿ ಗುರುತಿಸಿಕೊಂಡು ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಅಡಿಯಲ್ಲಿ ಬಂಧಿಸಲ್ಪಟ್ಟಿರುವ ನಕ್ಸಲ್‍ವಾದಿ ರೂಪೇಶ್‍ನನ್ನು ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸೋಮವಾರ ಹಾಜರು ಪಡಿಸಲಾಯಿತು. 2010ರಲ್ಲಿ ಭಾಗಮಂಡಲ ಸಮೀಪದ ಮುಂಡ್ರೋಟು ಮತ್ತು 2013ರಲ್ಲಿ ಕಾಲೂರಿನಲ್ಲಿ ನಕ್ಸಲ್ ರೂಪೇಶ್ ಪ್ರತ್ಯಕ್ಷ ಗೊಂಡಿದ್ದ. ಮಾತ್ರವಲ್ಲದೆ ಕಾಲೂರು ನಿವಾಸಿ ಗಣೇಶ್ ಎಂಬವರ ಮನೆಯಿಂದ ದಿನಸಿ ಸಾಮಗ್ರಿಗಳನ್ನು ಬಲವಂತವಾಗಿ ಪಡೆದು ಬೆದರಿಕೆ ಒಡ್ಡಿರುವ ಹಾಗೂ ಶಸ್ತ್ರಸಜ್ಜಿತ 5 ಮಂದಿಯ ತಂಡದೊಂದಿಗೆ…

ರಾಜಾಸೀಟ್‍ನಲ್ಲಿ ಜನವರಿಯಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಡಿಸಿ ಶ್ರೀವಿದ್ಯಾ ಸೂಚನೆ
ಕೊಡಗು

ರಾಜಾಸೀಟ್‍ನಲ್ಲಿ ಜನವರಿಯಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಡಿಸಿ ಶ್ರೀವಿದ್ಯಾ ಸೂಚನೆ

October 30, 2018

ಮಡಿಕೇರಿ: ಜನವರಿ ಮೊದಲ ವಾರದಲ್ಲಿ ರಾಜಸೀಟ್‍ನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸುವಂತೆ ತೋಟಗಾರಿಕೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆ ಯಲ್ಲಿ ಸೋಮವಾರದಲ್ಲಿ ರಾಜಸೀಟ್ ಮತ್ತು ಗದ್ದುಗೆ ಉದ್ಯಾನವನ ಅಭಿವೃದ್ಧಿ ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕೊಡಗು ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಫಲಪುಷ್ಟ ಪ್ರದರ್ಶನ ಏರ್ಪಡಿಸುವಂತೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. ರಾಜಸೀಟ್‍ನಲ್ಲಿ ಸಂಗೀತ ಕಾರಂಜಿ ಹಾಗೂ ಪುಟಾಣಿ…

ವಿವಿಗಳನ್ನು ಜಾತಿ ಆಧಾರದಲ್ಲಿ ಪರಿಗಣಿಸುತ್ತಿರುವುದು ಅಪಾಯಕಾರಿ ಮಾಜಿ ಸಚಿವ ಎಂ.ಸಿ. ನಾಣಯ್ಯ ವಿಷಾದ
ಕೊಡಗು

ವಿವಿಗಳನ್ನು ಜಾತಿ ಆಧಾರದಲ್ಲಿ ಪರಿಗಣಿಸುತ್ತಿರುವುದು ಅಪಾಯಕಾರಿ ಮಾಜಿ ಸಚಿವ ಎಂ.ಸಿ. ನಾಣಯ್ಯ ವಿಷಾದ

October 30, 2018

ಮಡಿಕೇರಿ: ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾನಿಲಯ ಗಳನ್ನು ಕೂಡ ಜಾತಿ ಆಧಾರದಲ್ಲಿ ಪರಿಗಣಿಸುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಮಾಜಿ ಕಾನೂನು ಸಚಿವ ಎಂ.ಸಿ.ನಾಣಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ. ನಗರದ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜ್‍ನ ಆವರಣದಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಸಹಕಾರದಿಂದ ನಿರ್ಮಾಣ ಗೊಂಡಿರುವ ನೂತನ ಕೊಠಡಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಶ್ವವಿದ್ಯಾನಿಲಯ ಗಳನ್ನು ಜಾತಿ ಆಧಾರದಲ್ಲಿ ಪರಿಗಣಿಸಿದರೆ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ ಶಿಕ್ಷಣ ಸಂಸ್ಥೆಗಳು ಜಾತಿ ರಹಿತವಾಗಿ ಕಾರ್ಯ ನಿರ್ವಹಿಸುವ…

ಶಂಕಿತ ನಕ್ಸಲ್ ರೂಪೇಶ್‍ನನ್ನು ಸರ್ಪಗಾವಲಲ್ಲಿ ಮಡಿಕೇರಿಗೆ ಕರೆತಂದ ಪೊಲೀಸರು: ಇಂದು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ
ಕೊಡಗು

ಶಂಕಿತ ನಕ್ಸಲ್ ರೂಪೇಶ್‍ನನ್ನು ಸರ್ಪಗಾವಲಲ್ಲಿ ಮಡಿಕೇರಿಗೆ ಕರೆತಂದ ಪೊಲೀಸರು: ಇಂದು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ

October 29, 2018

ಮಡಿಕೇರಿ: ದಕ್ಷಿಣ ಭಾರತದಲ್ಲಿ ನಿಷೇಧಿತ ನಕ್ಸಲ್ ಸಂಘಟನೆಯ ಚಟುವಟಿ ಕೆಯನ್ನು ಸಕ್ರಿಯಗೊಳಿಸುವ ಹೊಣೆ ಹೊತ್ತ ಆರೋಪ ಎದುರಿಸುತ್ತಿರುವ ಶಂಕಿತ ನಕ್ಸಲ್ ಮುಖಂಡ ರೂಪೇಶ್ ಎಂಬಾತನನ್ನು ವಿಚಾರಣೆಗಾಗಿ ಮಡಿಕೇರಿಗೆ ಕರೆತರಲಾಗಿದೆ. ಸೋಮವಾರ (ಇಂದು) ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ರೂಪೇಶ್‍ನ ವಿಚಾರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯಲ್ಲಿ ಭಾನುವಾರ ಸಂಜೆ 5.15ರ ಸಮಯದಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ರೂಪೇಶನನ್ನು ಬಂಧಿಸಿಡಲಾಯಿತು. ಕೇರಳ ರಾಜ್ಯದ ವೈವೂರು ಕೇಂದ್ರ ಕಾರಾ ಗೃಹದಲ್ಲಿದ್ದ ಶಂಕಿತ ನಕ್ಸಲ್ ರೂಪೇಶ್‍ನನ್ನು ಕೇರಳ ಪೊಲೀಸರು ವಿರಾಜಪೇಟೆಯ…

ಕಾಡುಕುರಿ ಬೇಟೆ; ಆರೋಪಿ ಬಂಧನ
ಕೊಡಗು

ಕಾಡುಕುರಿ ಬೇಟೆ; ಆರೋಪಿ ಬಂಧನ

October 29, 2018

ಮಡಿಕೇರಿ:  ಕಾಫೀ ತೋಟದಲ್ಲಿ ಉರುಳು ಬಳಸಿ ಕಾಡು ಕುರಿ ಯನ್ನು ಭೇಟಿಯಾಡಿದ್ದ ಆರೋಪಿಯನ್ನು ಮಡಿಕೇರಿ ಉಪವಲಯ ಅರಣ್ಯ ಸಿಬ್ಬಂದಿ ಮತ್ತು ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂರ್ನಾಡು ಸಮೀಪದ ಕುಂಬಳದಾಳು ನಿವಾಸಿ ಕೆ.ಹೇಮಂತ್ (36) ಬಂಧಿತ ಆರೋಪಿಯಾಗಿದ್ದಾನೆ. ಅ.26ರ ರಾತ್ರಿ ಕುಂಬಳದಾಳುವಿನ ಪಿ.ವಾಸು ಮತ್ತು ದಿನೇಶ್ ಎಂಬುವರಿಗೆ ಸೇರಿದ ಅಡಿಕೆ ಮತ್ತು ಕಾಫಿ ತೋಟದಲ್ಲಿ ಆರೋಪಿ ಹೇಮಂತ್ ಕಾಡು ಪ್ರಾಣಿಯ ಬೇಟೆಗೆಂದು ಉರುಳು ಹಾಕಿದ್ದ. ಈ ಉರುಳಿನಲ್ಲಿ ಕಾಡುಕುರಿ…

ನವೆಂಬರ್ 1ರಂದು ಅಪ್ಪಚ್ಚಕವಿ 150ನೇ ಜನ್ಮೋತ್ಸವ
ಕೊಡಗು

ನವೆಂಬರ್ 1ರಂದು ಅಪ್ಪಚ್ಚಕವಿ 150ನೇ ಜನ್ಮೋತ್ಸವ

October 28, 2018

ಮಡಿಕೇರಿ:  ಕೊಡಗಿನ ಆದಿಕವಿ, ವರಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ 150ನೇ ಜನ್ಮೋತ್ಸವವನ್ನು ಕಕ್ಕಬ್ಬೆಯಲ್ಲಿ ನ.1 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸುವ ಮೂಲಕ, ಕವಿಯ ಸಾಹಿತ್ಯ ಶ್ರೀಮಂತಿಕೆಯ ಕುರಿತು ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ‘ಹರದಾಸ ಅಪ್ಪಚ್ಚ ಕವಿಯ 150ನೇ ಜನ್ಮೋತ್ಸವ ಸಮಿತಿ’ಯ ಪ್ರಮುಖರಾದ ಯು.ಎಂ.ಪೂವಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಡಿಕೇರಿಯ ತಿರಿಬೊಳ್‍ಚ ಕೊಡವ ಸಂಘ, ಬಲ್ಲಮಾವಟಿಯ ಜನಮನ ಕಲಾಸಂಘ, ಕೊಡವ ಮಕ್ಕಡ ಕೂಟ, ಕಕ್ಕಬ್ಬೆ ಕೇಂದ್ರ ವಿದ್ಯಾಸಂಸ್ಥೆ ಮತ್ತು ಕಕ್ಕ…

ನಾಳೆ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು
ಕೊಡಗು

ನಾಳೆ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು

October 28, 2018

ಮಡಿಕೇರಿ: ನಕ್ಸಲ್ ಮುಖಂಡ ರೂಪೇಶ್‍ನನ್ನು ಕೇರಳಾ ಪೊಲೀಸರು ಅ.29ರಂದು ಮಡಿಕೇರಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ (ಅ.28) ಕೇರಳ ಕಾರಾಗೃಹ ದಿಂದ ಮಡಿಕೇರಿಗೆ ರೂಪೇಶ್‍ನನ್ನು ಅಲ್ಲಿನ ಪೊಲೀಸರು ಕರೆ ತರಲಿದ್ದು, ಮಡಿಕೇರಿ ಜೈಲಿನಲ್ಲಿ ಇರಿಸಲಿದ್ದಾರೆ. ಮಡಿಕೇರಿ ನ್ಯಾಯಾಲಯಕ್ಕೆ ಅ.29ರಂದು ಹಾಜರುಪಡಿ ಸಿದ ನಂತರ ಮತ್ತೇ ಆತನನ್ನು ಕೇರಳಾಗೆ ಕರೆದೊಯ್ಯಲಿದ್ದಾರೆ. 2010ರಲ್ಲಿ ಭಾಗಮಂಡಲ ಸಮೀಪದ ತೇರಂಗಾಲ ಗ್ರಾಮಕ್ಕೆ ಭೇಟಿ ನೀಡಿದ್ದ ನಕ್ಸಲ್ ಮುಖಂಡ ವಿಕ್ರಂ ಗೌಡ ನೇತೃತದ ತಂಡದಲ್ಲಿ ರೂಪೇಶ್ ಇದ್ದನೆಂದು ಹೇಳಲಾಗಿದ್ದು, ಆ ಸಂಬಂಧ…

ಮಡಿಕೇರಿಯಲ್ಲಿ ಬ್ರಿಟೀಷರು ನಿರ್ಮಿಸಿದ್ದ ಕಟ್ಟಡ ನೆಲಸಮ; ಪ್ರಕೃತಿ ವಿಕೋಪದಲ್ಲಿ ಕುಸಿದಿದ್ದ ಕಟ್ಟಡವಿದು
ಕೊಡಗು

ಮಡಿಕೇರಿಯಲ್ಲಿ ಬ್ರಿಟೀಷರು ನಿರ್ಮಿಸಿದ್ದ ಕಟ್ಟಡ ನೆಲಸಮ; ಪ್ರಕೃತಿ ವಿಕೋಪದಲ್ಲಿ ಕುಸಿದಿದ್ದ ಕಟ್ಟಡವಿದು

October 27, 2018

ಮಡಿಕೇರಿ: ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿ ಈ ಹಿಂದೆ ಖಾಸಗಿ ಬಸ್ ನಿಲಾಣವಾಗಿದ್ದ ನಗರಸಭೆಯ ಬಹುರೂಪಿ ಕಟ್ಟಡವನ್ನು ಕೆಡವಲಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಈ ಕಟ್ಟಡಕ್ಕೆ ತೀವ್ರ ಹಾನಿಯಾಗಿತ್ತು. 1936ರಲ್ಲಿ ಬ್ರಿಟಿಷರಿಂದ ನಿರ್ಮಿಸಲ್ಪಟ್ಟು, ಆ ಬಳಿಕ ಕೆಲ ವರ್ಷಗಳ ಕಾಲ ಮಡಿಕೇರಿ ಪುರಸಭೆಯ ಕಚೇರಿಯಾಗಿ, ತದನಂತರ ವಾಣಿಜ್ಯ ಮಳಿಗೆ ಮತ್ತು ಖಾಸಗಿ ಬಸ್ ನಿಲ್ದಾಣವಾಗಿಯೂ ಈ ಕಟ್ಟಡ ರೂಪಾಂತರವನ್ನೂ ಹೊಂದಿತ್ತು. ಮಾತ್ರವಲ್ಲದೆ ಕಳೆದ 15 ವರ್ಷಗಳ ಹಿಂದೆ ಮಡಿಕೇರಿ ದಸರಾ ಜನೋತ್ಸವದ ವೇದಿ ಕೆಯಾಗಿಯೂ ಮಾರ್ಪಡುವ…

ಸಂತ್ರಸ್ತರ ಮಕ್ಕಳಿಗಾಗಿ ‘ಅಕ್ಕ’ ಸಂಘಟನೆಯಿಂದ ನಿರ್ಮಾಣವಾಗಲಿರುವ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ
ಕೊಡಗು

ಸಂತ್ರಸ್ತರ ಮಕ್ಕಳಿಗಾಗಿ ‘ಅಕ್ಕ’ ಸಂಘಟನೆಯಿಂದ ನಿರ್ಮಾಣವಾಗಲಿರುವ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ

October 27, 2018

ಮಡಿಕೇರಿ : ಅಮೇರಿಕಾದಲ್ಲಿನ ಕನ್ನಡ ಕೂಟಗಳ ಅಗರ ಸಂಸ್ಥೆಯಾದ ಅಕ್ಕ ವತಿಯಿಂದ ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪ ಸಂತ್ರಸ್ತ ವಿದ್ಯಾರ್ಥಿಗಳಿಗಾಗಿ 40 ಲಕ್ಷ ರೂ. ವೆಚ್ಚದಲ್ಲಿ ಉದ್ದೇ ಶಿತ ಶಾಲಾ ಕಟ್ಟಡ ನಿರ್ಮಾಣ ಕಾಮ ಗಾರಿಗೆ ಕೊಡಗು ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಶಂಕುಸ್ಥಾಪನೆ ನೆರವೇರಿಸಿದರು. ಮಡಿಕೇರಿ ಬಳಿಯ ಮಕ್ಕಂದೂರು ಗ್ರಾಮ ದಲ್ಲಿ ಅಕ್ಕ ವತಿಯಿಂದ ನಿರ್ಮಿಸಲಾಗುವ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕೊಡಗಿನ ಸಂಕಷ್ಟಕ್ಕೆ ಮನಮಿಡಿದು ಜಗತ್ತಿನಾದ್ಯಂತಲ್ಲಿನ ಜನತೆ ವಿವಿಧ ರೀತಿಯಲ್ಲಿ ನೆರವಾಗಿದ್ದಾರೆ….

22 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಕೊಡಗು

22 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

October 27, 2018

ಮಡಿಕೇರಿ: ಬೀಟೆ ಮರ ಕಳವು ಪ್ರಕರಣವೊಂದರಲ್ಲಿ ಜೈಲು ಸೇರಿ ಜಾಮೀ ನಿನ ಮೇಲೆ ಹೊರ ಬಂದು ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 22 ವರ್ಷ ಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 1996ರಲ್ಲಿ ಮೂರ್ನಾಡುವಿನ ಹೊದ್ದೂರು ಸಮೀಪ ಬೀಟೆ ಮರ ಕಳವು ಪ್ರಕರಣ ನಡೆದಿತ್ತು. ಅಕ್ರಮ ಮರ ಸಾಗಾಟ ಪ್ರಕರಣದಲ್ಲಿ ಮೂರ್ನಾಡು ನಿವಾಸಿ ಇ.ಪಿ.ಇಬ್ರಾಹಿಂ ಅಲಿಯಾಸ್ ಉಂಬಾಯಿ ಎಂಬಾತ ಪ್ರಮುಖ ಆರೋಪಿಯಾಗಿ ಬಂಧಿಸಲ್ಪಟ್ಟಿದ್ದ. ಆ ಬಳಿಕ ನ್ಯಾಯಾಲಯದಿಂದ ಜಾಮೀನಿನ ಮೇಲೆ ಹೊರ…

1 6 7 8 9 10 32
Translate »