Tag: Mandya

ಮಂಡ್ಯದಲ್ಲಿ ಪೆಟ್ರೋಲ್ ಮಾರಾಟ ನಿರ್ಬಂಧ
ಮಂಡ್ಯ

ಮಂಡ್ಯದಲ್ಲಿ ಪೆಟ್ರೋಲ್ ಮಾರಾಟ ನಿರ್ಬಂಧ

March 30, 2020

ಮಂಡ್ಯ,ಮಾ,30(ನಾಗಯ್ಯ);ಕೊರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ರಸ್ತೆಗಿಳಿಯುವುದನ್ನು ತಡೆಯುವ ಉದ್ದೇಶದಿಂದ ಎಲ್ಲಾ ಖಾಸಗಿ ವಾಹನಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಕೊರೊನಾ ತಡೆಗಾಗಿ ಏಪ್ರಿಲ್ 14 ರವರೆಗೂ ಲಾಕ್ ಡೌನ್ ಆದೇಶ ಮಾಡಿದ್ದರೂ ಸಹ ಕೆಲವು ಯುವಕರು ಹಾಗೂ ಸಾರ್ವಜನಿಕರು ವಿನಾಕಾರಣ ಅಗತ್ಯವಸ್ತುಗಳ ಖರೀದಿ, ಸಂಬಂಧಿಕರ ಮನೆಗಳು,ಸಾವು,ತಿಥಿ ಕಾರ್ಯ,ಆಸ್ಪತ್ರೆ ಇತ್ಯಾದಿ ನೆಪ ಹೇಳಿ ದ್ವಿಚಕ್ರವಾಹನದಲ್ಲಿ ರಸ್ತೆಗಿಳಿದು ಲಾಕ್ ಡೌನ್ ಆದೇಶವನ್ನು ಉಲ್ಲಂಘಿ ಸುತ್ತಿದ್ದುದರಿಂದ ಈ ಆದೇಶ ಮಾಡಲಾಗಿದೆ. ತುರ್ತು…

ಕೊರೊನಾ ಲಾಕ್ ಡೌನ್ ಹಿನ್ನಲೆ:  ಸಾರ್ವಜನಿಕರು ಸರ್ಕಾರ ಸೂಚಿಸಿದ ನಿಯಮಗಳನ್ನು ಪಾಲಿಸಿ
ಮಂಡ್ಯ

ಕೊರೊನಾ ಲಾಕ್ ಡೌನ್ ಹಿನ್ನಲೆ: ಸಾರ್ವಜನಿಕರು ಸರ್ಕಾರ ಸೂಚಿಸಿದ ನಿಯಮಗಳನ್ನು ಪಾಲಿಸಿ

March 30, 2020

ಮಂಡ್ಯ: ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ‌ ಸಾರ್ವಜನಿಕರು ಸರ್ಕಾರ ಸೂಚಿಸಿದ ನಿಯಮಗಳನ್ನು ಪಾಲಿಸಿ ರೋಗ ಹರಡುವುದನ್ನು‌ ತಡೆಯಲು ಸಹಕರಿಸಿ ಎಂದು ಬೂದನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಟಿ.ಆಶಾ ಮನವಿ ಮಾಡಿದರು. ತಾಲ್ಲೂಕಿನ ಹಳೇ ಬೂದನೂರು ಗ್ರಾಪಂ‌ ಕಚೇರಿ ಸಭಾಂಗಣದಲ್ಲಿ ನಡೆದ ಕೊರೊನಾ ಕಾರ್ಯಪಡೆ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಗ್ರಾಪಂ ಅಲ್ಲದೆ ವ್ಯಾಪ್ತಿಯ ಗ್ರಾಮಗಳಲ್ಲಿ‌ ಪ್ರತ್ಯೇಕ ಕಾರ್ಯಪಡೆ ರಚಿಸಲಾಗಿದೆ ಎಂದರು. ಗ್ರಾಮದ ಅಂಗಡಿ ಮುಗ್ಗಟ್ಟುಗಳು ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ತೆರೆಯಬೇಕು.‌ ಸೂಚಿಸಿದ ಸಮಯ…

ಸರ್ಕಾರಿ ಆಸ್ಪತ್ರೆಗಳಲ್ಲೇ ಕೊರೊನಾ ಚಿಕಿತ್ಸಾ ಕೇಂದ್ರ ಓಪನ್  ತಂದ ಸಂಕಟ; ಕೊರೊನಾ  ಅಂಟುವ ಭೀತಿಯಿಂದ  ಸರ್ಕಾರಿ ಅಸ್ಪತ್ರೆಗೆ ಹೋಗೊಕು ಹಿಂದೇಟು ಹಾಕುತ್ತಿರುವ ಜನ
ಮಂಡ್ಯ

ಸರ್ಕಾರಿ ಆಸ್ಪತ್ರೆಗಳಲ್ಲೇ ಕೊರೊನಾ ಚಿಕಿತ್ಸಾ ಕೇಂದ್ರ ಓಪನ್ ತಂದ ಸಂಕಟ; ಕೊರೊನಾ ಅಂಟುವ ಭೀತಿಯಿಂದ ಸರ್ಕಾರಿ ಅಸ್ಪತ್ರೆಗೆ ಹೋಗೊಕು ಹಿಂದೇಟು ಹಾಕುತ್ತಿರುವ ಜನ

March 29, 2020

ಸರ್ಕಾರಿ ಆಸ್ಪತ್ರೆಯಿಂದ ದೂರ ಪ್ರತ್ಯೇಕವ್ಯವಸ್ತೆ ಮಾಡಲು ಆಗ್ರಹ ಕೊರೊನಾ ಭೀತಿಯಿಂದ ಕ್ಲಿನಿಕ್ ಗಳ ಭಾಗಿಲನ್ನೇ ತೆರೆಯದ ಖಾಸಗಿ ವೈದ್ಯರು ಮಂಡ್ಯ,ಮಾ.29 ; ಕರುಳಬಳ್ಳಿಯ ಸಂಬಂಧಕ್ಕೂ ಕೊಳ್ಳಿಯಿಟ್ಟು ತನ್ನ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಇದೀಗ ರೋಗಿಗಳ ಪಾಲಿನ ದೇವಸ್ಥಾನಗಳೆನಿಸಿ ಕೊಂಡಿರುವ ಆಸ್ಪತ್ರೆಗಳಿಗೂ ಕಂಠಕ ತಂದಿಟ್ಟಿದೆ. ಕೊರೊನಾ ಶಂಕಿತರಿಗೆ ಚಿಕಿತ್ಸಾ ಕೇಂದ್ರ ತೆರೆದಿರುವುದೇ ಸರ್ಕಾರಿ ಆಸ್ಪತ್ರೆಗಳಿಗೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೌದು,ಅಕ್ಷರಶಃ ಸತ್ಯ, ಇದೀಗ ಆಸ್ಪತ್ರೆಗಳಿಗೂ “ಕೊರೊನಾ’’ ದೊಡ್ಡ ತಲೆನೋವು ತಂದಿಟ್ಟಿದೆ, ಕೊರೊನಾ ಸೋಂಕಿತರಿಗೂ ಚಿಕಿತ್ಸೆಗಾಗಿ ಆಸ್ಪತ್ರೆಯೊಳಗೇ “…

ಮಹಾರಾಷ್ಟ್ರದಿಂದ ಬಂದು ಮನೆಯಲ್ಲಿದ್ದವರಿಗೆ ಚಿಕಿತ್ಸೆ.ಕೊಡಿಸಿದ ಗ್ರಾಮಸ್ಥರು !
ಮಂಡ್ಯ

ಮಹಾರಾಷ್ಟ್ರದಿಂದ ಬಂದು ಮನೆಯಲ್ಲಿದ್ದವರಿಗೆ ಚಿಕಿತ್ಸೆ.ಕೊಡಿಸಿದ ಗ್ರಾಮಸ್ಥರು !

March 29, 2020

ಮಂಡ್ಯ,ಮಾ.29 (ನಾಗಯ್ಯ); ಹಲವಾರು ವರ್ಷಗಳಿಂದ ಕಾರ್ಯನಿಮಿತ್ತ ಮಹಾರಾಷ್ಟ್ರದಲ್ಲಿದ್ದು ಇಂದು ಗ್ರಾಮಕ್ಕೆ ಬಂದ ಇಬ್ಬರಿಗೆ ಗ್ರಾಮಸ್ತರೇ ಕರೆದೊಯ್ದು ಚಿಕಿತ್ಸೆಗೆ ದಾಖಲು ಮಾಡಿಸಿದ ಘಟನೆ ಕೆ.ಎಂ.ದೊಡ್ಡಿ ಸಮೀಪದ ಬಿದರಹೊಸಹಳ್ಳಿಯಲ್ಲಿ ಜರುಗಿದೆ. ಸುಮಾರು 35 ವರ್ಷವಯಸ್ಸಿನವರಾದ ವ್ಯಕ್ತಿಗಳು ಮಹಾರಾಷ್ಟ್ರದಲ್ಲಿ ನೆಲೆಸಿದ್ದು ಗ್ರಾಮಕ್ಕೆ ಆಗಮಿಸಿ ಮನೆಯಲ್ಲಿದ್ದವರನ್ನ ಕರೆದೊಯ್ದು ಆಸ್ಪತ್ರಗೆ ದಾಖಲಿಸಿದ್ದಾರೆ ಎನ್ನಲಾಗಿದೆ. ಕೆ.ಎಂ.ದೊಡ್ಡಿ ಸಮೀಪದ ಬಿದರಹೊಹಳ್ಳಿ ಗ್ರಾಮದ ಇಬ್ಬರು ವ್ಯಕ್ತಿಗಳು ಮಹಾರಾಷ್ಟ್ರದಲ್ಲಿ ಕೆಲಸಮಾಡಿಕೊಂಡಿದ್ದರು ಎನ್ನಲಾಗಿದ್ದು ಅವರು ಕೊರೊನಾ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ಆಗಮಿಸಿದ್ದರು.ವಿಷಯ ತಿಳಿದ ಸ್ಥಳೀಯ ಗ್ರಾಮಪಂಚಾಯಿತಿಯವರು ಬೆಳಿಗ್ಗೆ ಕೆ.ಎಂ ದೊಡ್ಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ….

ಕೊರೋನಾ ಭೀತಿಯಿಂದ ಲಾಕ್ ಡೌನ್ : ಸಚಿವ ಶ್ರೀರಾಮುಲು
ಮಂಡ್ಯ, ಮೈಸೂರು

ಕೊರೋನಾ ಭೀತಿಯಿಂದ ಲಾಕ್ ಡೌನ್ : ಸಚಿವ ಶ್ರೀರಾಮುಲು

March 28, 2020

ಎಷ್ಟೇ ಹೇಳಿದ್ರು ಜನ ಬೀದಿಗೆ ಬರೋದನ್ನನಿಲ್ಲಿಸ್ತಿಲ್ಲ ಯಾಕಂತ ಅರ್ಥವಾಗ್ತಿಲ್ಲ.? ನಿಮ್ಮ ರಕ್ಷಣೆಗಾಗಿ ಕೆಲಸ ಮಾಡೋರ್ ಮೇಲೆ ದೌರ್ಜನ್ಯ ನಡೆಸೋದು ಸರಿಯೇ.: ಸಚಿವ ಶ್ರೀರಾಮುಲು ಪ್ರಶ್ನೆ. ಮಂಡ್ಯದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ 650 ಬೆಡ್ ಆಸ್ಪತ್ರೆ ಈವರೆಗೆ ರಾಜ್ಯದಲ್ಲಿ 74 ಕೊರೊನಾವೈರಸ್ ಪಾಸಿಟಿವ್ ಕೇಸುಗಳು ಪತ್ತೆ ಕೊರೊನಾ ಸೋಂಕು ಪೀಡಿತರ ತಪಾಸಣಾ ಕೇಂದ್ರಕ್ಕೆ ಭೇಟಿ,ಪರಿಶೀಲನೆ ಮಂಡ್ಯ,ಮಾ.28(ನಾಗಯ್ಯ);ಇಡೀ ದೇಶವನ್ನೇ ಆವರಿಸುತ್ತಿರುವ ಕೊರೋನಾ ಭೀತಿಯಿಂದ ಲಾಕ್ ಡೌನ್ ಆರ್ಡ್ ಮಾಡಲಾಗಿದೆ,ಆದರೆ ಎಷ್ಟೇ ಹೇಳಿದ್ರು ಜನ ಬೀದಿಗೆ ಬರೋದನ್ನ ನಿಲ್ಲಿಸ್ತಿಲ್ಲ,ಯಾಕೆ ಅಂತ ನನಗೂ…

ಲಾಕ್ ಡೌನ್ ಆರ್ಡರ್;ಎರಡನೇ ದಿನವೂ ಮಂಡ್ಯ ಶ್ತಬ್ಧ.!
ಮಂಡ್ಯ

ಲಾಕ್ ಡೌನ್ ಆರ್ಡರ್;ಎರಡನೇ ದಿನವೂ ಮಂಡ್ಯ ಶ್ತಬ್ಧ.!

March 26, 2020

ಅವಶ್ಯವಸ್ತು ಖರೀದಿ ಅಂಗಡಿಗಳ ಬಳಿ ಲಕ್ಷ್ಮಣ ರೇಖೆ ಎಳೆದ ಪೊಲೀಸರು ಮಂಡ್ಯ,ಮಾ.೨೬(ನಾಗಯ್ಯ): ದಿನೇ ದಿನೇ ಹೆಚ್ಚುತ್ತಿರುವ ಮಹಾಮಾರಿ ಕರೋನಾ ಹರಡುವುದನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಲಾಕ್‌ಡೌನ್ ಆದೇಶದ ೨ ನೇ ದಿನವಾದ ಇಂದು ಕೂಡ ಮಂಡ್ಯಜಿಲ್ಲೆ ಬಹುತೇಕ ಸ್ತಬ್ಧವಾಗಿತ್ತು. ಜಿಲ್ಲಾಕೇಂದ್ರ ಮಂಡ್ಯ,ಮದ್ದೂರು,ಮಳವಳ್ಳಿ,ಪಾAಡವಪುರ,ಶ್ರೀರAಗಪಟ್ಟಣ,ಕೆ.ಆರ್.ಪೇಟೆ,ನಾಗಮAಗಲ ತಾಲ್ಲೂಕು ಕೇಂದ್ರಗಳೂ ಸೇರಿದಂತೆ ಪ್ರಮುಖ ಗ್ರಾಮೀಣ ಭಾಗಗಳಲ್ಲೂ ಜನರು ಮನೆಯಿಂದ ಹೊರ ಬಂದು ಸ್ವೇಚ್ಚೆಯಾಗಿ ಓಡಾಡುವುದು ಸ್ಥಗಿತಗೊಂಡಿತ್ತು. ಎಂದಿನಂತೆ ಇಂದು ಕೂಡ ಜನರಿಂದ ತುಂಬಿ ತುಳುಕುತ್ತಿದ್ದ ಬೆಂಗಳೂರು-ಮೈಸೂರು ಹೆದ್ದಾರಿ…

ಪತ್ರಕರ್ತರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕೌಡ್ಲೆ ಚನ್ನಪ್ಪ, ಉಪಾಧ್ಯಕ್ಷರಾಗಿ ಚಲುವರಾಜು ಅವಿರೋಧ ಆಯ್ಕೆ
ಮಂಡ್ಯ

ಪತ್ರಕರ್ತರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕೌಡ್ಲೆ ಚನ್ನಪ್ಪ, ಉಪಾಧ್ಯಕ್ಷರಾಗಿ ಚಲುವರಾಜು ಅವಿರೋಧ ಆಯ್ಕೆ

March 26, 2020

ಮಂಡ್ಯ,ಮಾ.೨೬(ನಾಗಯ್ಯ): ಜಿಲ್ಲಾ ಪತ್ರಕರ್ತರ ಮತ್ತು ಮುದ್ರಣಕಾರರ ವಿವಿದೋದ್ದೇಶ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಕೌಡ್ಲೆ ಚನ್ನಪ್ಪ, ಉಪಾಧ್ಯಕ್ಷರಾಗಿ ಸಂಜೆ ಇಂಪು ಪತ್ರಿಕೆ ಸಂಪಾದಕ ಚಲುವರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಯಾರು ಸ್ಪರ್ಧಿಸದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಕೌಡ್ಲೆ ಚನ್ನಪ್ಪ, ಉಪಾಧ್ಯಕ್ಷರಾಗಿ ಚಲುವರಾಜು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರಿ ಇಲಾಖೆಯ ಸಿಡಿಪಿಓ ಪಾರ್ವತಮ್ಮ ಘೋಷಿಸಿದರು. ನಿರ್ದೇಶಕರಾಗಿ ಹಿರಿಯ ಪತ್ರಕರ್ತರಾದ ಕೆ.ಎನ್.ರವಿ,ನಾಗಯ್ಯ,ಎಂ.ಎಸ್.ಶಿವಪ್ರಕಾಶ್, ಎಚ್.ಎ.ರಮೇಶ್,…

ವಿದೇಶದಿಂದ ಬಂದ 16 ವಿದ್ಯಾರ್ಥಿಗಳಿಗೂ ಕೊರೊನಾ ವೈರಸ್ ಇಲ್ಲ
ಮಂಡ್ಯ

ವಿದೇಶದಿಂದ ಬಂದ 16 ವಿದ್ಯಾರ್ಥಿಗಳಿಗೂ ಕೊರೊನಾ ವೈರಸ್ ಇಲ್ಲ

March 24, 2020

ಕೆ.ಆರ್.ಪೇಟೆ,ಮಾ.23-ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿದ್ದ ಕೆ.ಆರ್.ಪೇಟೆ ತಾಲೂಕಿನ 16 ವಿದ್ಯಾರ್ಥಿ ಗಳು ವಾಪಸ್ ಬಂದಿದ್ದು ಇವರನ್ನು ಪರೀಕ್ಷಿಸಲಾಗಿದ್ದು ಯಾರಿಗೂ ಕೊರೊನಾ ಸೊಂಕು ತಗುಲಿರುವುದಿಲ್ಲ. ಎಲ್ಲರಿಗೂ ಅವರವರ ಮನೆಯಲ್ಲಿ ಪ್ರತ್ಯೇಕವಾಗಿ ಸುರಕ್ಷತೆ ಯಲ್ಲಿ (ಕ್ವಾರಂಟೈನ್) ಇರಿಸಲಾಗಿದೆ ಎಂದು ತಹಸೀಲ್ದಾರ್ ಎಂ.ಶಿವಮೂರ್ತಿ ತಿಳಿಸಿದರು. ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಕರೆಯಲಾಗಿದ್ದ ತುರ್ತು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಹೊರ ದೇಶಗ ಳಿಂದ ಹಾಗೂ ಸೊಂಕು ಪೀಡಿತ ರಾಜ್ಯ ಗಳಿಂದ ಬಂದವರ ಬಗ್ಗೆ ಸಾರ್ವಜನಿಕರು ತಾಲೂಕು ಆಡಳಿತಕ್ಕೆ ಮಾಹಿತಿ…

ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ವೈರಸ್, ಹಕ್ಕಿಜ್ವರದ ಭೀತಿ
ಮಂಡ್ಯ

ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ವೈರಸ್, ಹಕ್ಕಿಜ್ವರದ ಭೀತಿ

March 20, 2020

ಮಂಡ್ಯ ದೇವಸ್ಥಾನಗಳಲ್ಲಿ ಹೆಚ್ಚಿನ ಭಕ್ತರ ಪ್ರವೇಶಕ್ಕೆ ನಿಷೇಧ  ಇಂದಿನಿಂದ ಜಿಲ್ಲಾದ್ಯಂತ ಕೋಳಿ ಮಾರಾಟ ನಿಷೇಧ ಹೊರ ರಾಜ್ಯಗಳ ಖಾಸಗಿ ಬಸ್ ಸಂಚಾರ ಸ್ಥಗಿತಕ್ಕೂ ಚಿಂತನೆ: ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಂಡ್ಯ, ಮಾ.19(ನಾಗಯ್ಯ)- ಎಲ್ಲಾ ಕಡೆಗಳಲ್ಲಿಯೂ ದಿನೇ ದಿನೇ ಕೊರೊನಾ ವೈರಸ್ ಮತ್ತು ಹಕ್ಕಿ ಜ್ವರದ ಭೀತಿ ಹೆಚ್ಚಾಗು ತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ದ್ಯಂತ ದೇವಸ್ಥಾನಗಳಿಗೆ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಭೇಟಿ ನೀಡುವುದು ಮತ್ತು ಕೆಲವು ದೇವಸ್ಥಾನಗಳಲ್ಲಿ ನಡೆಯುವ ಹರಕೆ ರೂಪದ ಔತಣವನ್ನೂ ಸಹ ಮಾರ್ಚ್ 31ರ…

ಆದಿಚುಂಚನಗಿರಿ ದೇವಸ್ಥಾನ ಬಂದ್
ಮಂಡ್ಯ

ಆದಿಚುಂಚನಗಿರಿ ದೇವಸ್ಥಾನ ಬಂದ್

March 20, 2020

ಮಂಡ್ಯ, ಮಾ.19(ನಾಗಯ್ಯ)- ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿ ರುವ ಹಿನ್ನೆಲೆಯಲ್ಲಿ ಇಂದಿನಿಂದ ಆದಿ ಚುಂಚನಗಿರಿ ದೇವಸ್ಥಾನವನ್ನು ಬಂದ್ ಮಾಡಲಾಗಿದ್ದು ಭಕ್ತರು ಸದ್ಯಕ್ಕೆ ಕಾಲಭೈರವನ ದರ್ಶನಕ್ಕೆ ಬರುವುದು ಬೇಡ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀ ಮನವಿ ಮಾಡಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಶ್ರೀಗಳು,ಶ್ರೀ ಕಾಲಭೈರ ವೇಶ್ವರನ ದರ್ಶನಕ್ಕೆ ಶನಿವಾರ ಮತ್ತು ಭಾನುವಾರ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇತ್ತೀಚೆಗೆ ವಿಶ್ವದಾ ದ್ಯಂತ ಹರಡಿರುವ ಕೊರೊನಾ ಹಿನ್ನೆಲೆ ಯಲ್ಲಿ ಮುಂದಿನ 2 ವಾರಗಳ ಕಾಲ ಭಕ್ತರು…

1 2 3 4 5 56
Translate »