ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ವೈರಸ್, ಹಕ್ಕಿಜ್ವರದ ಭೀತಿ
ಮಂಡ್ಯ

ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ವೈರಸ್, ಹಕ್ಕಿಜ್ವರದ ಭೀತಿ

March 20, 2020
  • ಮಂಡ್ಯ ದೇವಸ್ಥಾನಗಳಲ್ಲಿ ಹೆಚ್ಚಿನ ಭಕ್ತರ ಪ್ರವೇಶಕ್ಕೆ ನಿಷೇಧ
  •  ಇಂದಿನಿಂದ ಜಿಲ್ಲಾದ್ಯಂತ ಕೋಳಿ ಮಾರಾಟ ನಿಷೇಧ
  • ಹೊರ ರಾಜ್ಯಗಳ ಖಾಸಗಿ ಬಸ್ ಸಂಚಾರ ಸ್ಥಗಿತಕ್ಕೂ ಚಿಂತನೆ: ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್

ಮಂಡ್ಯ, ಮಾ.19(ನಾಗಯ್ಯ)- ಎಲ್ಲಾ ಕಡೆಗಳಲ್ಲಿಯೂ ದಿನೇ ದಿನೇ ಕೊರೊನಾ ವೈರಸ್ ಮತ್ತು ಹಕ್ಕಿ ಜ್ವರದ ಭೀತಿ ಹೆಚ್ಚಾಗು ತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ದ್ಯಂತ ದೇವಸ್ಥಾನಗಳಿಗೆ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಭೇಟಿ ನೀಡುವುದು ಮತ್ತು ಕೆಲವು ದೇವಸ್ಥಾನಗಳಲ್ಲಿ ನಡೆಯುವ ಹರಕೆ ರೂಪದ ಔತಣವನ್ನೂ ಸಹ ಮಾರ್ಚ್ 31ರ ವರೆಗೆ ಸಂಪೂರ್ಣ ವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೊರೊನಾ ವೈರಸ್ ಎರಡನೇ ಹಂತದಿಂದ ಮೂರನೇ ಹಂತಕ್ಕೆ ಕಾಲಿಡುತ್ತಿದೆ.ಈ ಸಂದರ್ಭ ದಲ್ಲಿ ಅತಿ ಹೆಚ್ಚು ಜನರಿಗೆ ಕಾಯಿಲೆ ಹರಡುವ ಸಾದ್ಯತೆ ಇದೆ.ಹೆಚ್ಚು ಜನಸಂದಣಿ ಇರುವ ಸ್ಥಳಕ್ಕೆ ಯಾರೂ ಭೇಟಿ ನೀಡಬಾರದು ಎಂದು ಆದೇಶಿಸುವ ಮೂಲಕ ಕೊರೋನಾ ವೈರಸ್ ಬಗ್ಗೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ವಹಿಸಿದೆ ಎಂದರು.

ಜನರ ಗುಂಪು ಸೇರುವ ಜಾತ್ರೆ, ಮದುವೆಗಳು, ಸಾರ್ವಜನಿಕ ಸಮಾ ರಂಭಗಳು ಮತ್ತು ಮನೆಯ ಸಮಾ ರಂಭಗಳಲ್ಲಿಯೂ ಕೂಡ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬಾರದು ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವುದೇ ಕೊರೊನಾ ಪ್ರಕರಣ ದಾಖಲಾಗಿಲ್ಲ. ಆದರೂ ಮುಂದಿನ ಎರಡು ವಾರ ಬಹಳ ಜಾಗೃತಿ ವಹಿಸಲಾಗುವುದು. ವೈರಸ್ ಹರಡುವಿಕೆ ಬಗ್ಗೆ ಗ್ರಾಮಾಂತರ ಪ್ರದೇಶ ಗಳಲ್ಲಿ ಜಾಗೃತಿ ಮೂಡಿಸಲಾ ಗುತ್ತಿದೆ. ಹೊರ ದೇಶದಿಂದ ಬಂದಿರುವ ಸುಮಾರು 45 ಜನರನ್ನು ಹೋಂ ಕ್ವಾರಂಟೈನ್‍ನಲ್ಲಿಡ ಲಾಗಿದೆ. ಅವರ ಮೇಲೆ ಸಂಪೂರ್ಣವಾಗಿ ನಿಗಾವಹಿಸಲಾಗಿದೆ ಎಂದರು.

ಜಿಲ್ಲಾದ್ಯಂತ ಕೋಳಿ ಮಾರಾಟ ನಿಷೇಧ: ಮೈಸೂರಿನ ಕುಂಬಾರ ದೊಡ್ಡಿ ಯಲ್ಲಿ (ಕುಂಬಾರ ಕೊಪ್ಪಲು) ಹಕ್ಕಿ ಜ್ವರ ಪತ್ತೆಯಾಗಿದೆ. ಕೇರಳದ ಬಂದಂತಹ ಕೋಳಿಯಿಂದ ಹಕ್ಕಿ ಜ್ವರ ಪತ್ತೆಯಾಗಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹರಡಿದೆ. ಮುಂಜಾ ಗ್ರತಾ ಕ್ರಮವಾಗಿ ಮೂರು ದಿನಗಳಿಂದ ಶ್ರೀರಂಗಪಟ್ಟಣದಲ್ಲಿ ಕೋಳಿಗಳ ಸಾಗಣೆಗೆ ನಿಬರ್ಂಧ ಹೇರಲಾಗಿತ್ತು ಇಂದಿನಿಂದ ಜಿಲ್ಲಾದ್ಯಂತ ಕಟ್ಟು ನಿಟ್ಟಿನ ನಿಬರ್ಂಧ ಹೇರಲಾಗಿದೆ ಎಂದು ಅವರು ಹೇಳಿದರು.

ಮುಂಜಾಗೃತಾ ಕ್ರಮವಾಗಿ ಕೋಳಿ ಮಾರಾಟ, ಸಾಗಾಟ, ಆಹಾರ ತಯಾರಿ ಸುವುದನ್ನು ಸಾರ್ವಜನಿಕ ಸ್ಥಳಗಳ ಅಂಗಡಿ, ಹೊಟೆಲ್, ರೆಸ್ಟೋರೆಂಟ್ ಸೇರಿ ದಂತೆ ದೇವಸ್ಥಾನಗಳಲ್ಲಿಯೂ ಕೋಳಿ ಮಾಂಸಾಹಾರ ಸೇವನೆಯನ್ನು ನಿಷೇಧಿ ಸುವ ಕ್ರಮಕೈಗೊಳ್ಳಲಾಗಿದೆ ಎಂದರು.

ರಸ್ತೆ ಬದಿಗಳಲ್ಲಿನ ಕೈಗಾಡಿ, ಫಾಸ್ಟ್‍ಫುಡ್ ಅಂಗಡಿಗಳಲ್ಲಿಯೂ ಚಿಕನ್, ಮಟನ್, ಮೀನು, ಮಾಂಸದ ಖಾದ್ಯ ಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.

ಕೊಕ್ಕರೆ ಬೆಳ್ಳೂರಿಗೆ ತಾವೇ ಖುದ್ದಾಗಿ ಭೇಟಿ ನೀಡಿದ್ದು ಅಲ್ಲಿರುವ ಪಕ್ಷಿಗಳಲ್ಲಿ ಹಕ್ಕಿ ಜ್ವರದ ಬಗ್ಗೆ ಪಶುಸಂಗೋಪನೆ ಅಧಿಕಾರಿಯೊಂದಿಗೆ ಚರ್ಚಿಸಲಾಗಿದೆ. ಪಕ್ಷಿಧಾಮಗಳಲ್ಲಿ ಹಕ್ಕಿ ಜ್ವರದ ಲಕ್ಷಣ ಕಂಡುಬಂದಿಲ್ಲ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಮತ್ತು ಸುತ್ತಮುತ್ತಲಿನ ಕೋಳಿಗಳ ಮೇಲೆ ನಿಗಾವಹಿಸಲು ಕ್ರಮ ವಹಿಸಲಾಗಿದೆ ಎಂದರು.

ಮಂಡ್ಯದಲ್ಲಿ ಹಕ್ಕಿ ಜ್ವರದ ಭೀತಿ ಇಲ್ಲ ಆದರೂ ಮುಂದಿನ ಎರಡು ವಾರ ಬಹಳ ಜಾಗುರುಕತೆಯಿಂದ ಇರಬೇಕು. ಎಲ್ಲರೂ ಸಹಕರಿಸಿ ಮಂಡ್ಯವನ್ನು ಸಂರಕ್ಷಿಸಿ ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕೆ.ಆರ್.ಪೇಟೆ ಯಿಂದ ಹೊರ ರಾಜ್ಯಕ್ಕೆ ಖಾಸಗಿ ಬಸ್ ಸಂಚರಿಸುತ್ತಿರುವ ಕುರಿತಂತೆ ಪ್ರತಿಕ್ರಿಯಿ ಸಿದ ಅವರು, ಹೊರ ರಾಜ್ಯಗಳಿಂದ ಬರುತ್ತಿರುವ ಬಸ್‍ಗಳನ್ನು ತಪಾಸಣೆ ಮಾಡುವಂತೆ ಸೂಚಿಸಲಾಗಿದೆ.ಜ್ವರ ಮತ್ತು ಇತರೆ ಲಕ್ಷಣಗಳು ಕಂಡು ಬಂದಲ್ಲಿ ಅಂತವರನ್ನ ಹೋಂ ಕ್ವಾರಂಟಿನಲ್ಲಿ ಡಲಿಕೆ ಸೂಚಿಸಲಾಗಿದೆ ಎಂದರು.

ವಾಹನ ಮಾಲೀಕರೊಂದಿಗೆ ಮಾತ ನಾಡಿ, ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಬಸ್ಸುಗಳನ್ನು ಚಾಲನೆ ಮಾಡುವಂತೆ ಇಲ್ಲದಿದ್ದರೆ ಸ್ವಲ್ಪ ದಿನಗಳ ಕಾಲ ಸ್ಥಗಿತಗೊಳಿಸುವಂತೆಯೂ ನಿರ್ದೇಶಿಸ ಲಾಗುವುದು ಎಂದು ಅವರು ತಿಳಿಸಿದರು.

Translate »