Tag: Mandya

ಮಹಿಳೆ ಆತ್ಮಹತ್ಯೆ; ಆಘಾತದಿಂದ ಪತಿ ಅಸ್ವಸ್ಥ
ಮಂಡ್ಯ

ಮಹಿಳೆ ಆತ್ಮಹತ್ಯೆ; ಆಘಾತದಿಂದ ಪತಿ ಅಸ್ವಸ್ಥ

February 28, 2020

ಮದ್ದೂರು, ಫೆ.27- ಅನಾರೋಗ್ಯದಿಂದ ಬೇಸತ್ತು ಮಹಿಳೆಯೊಬ್ಬಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಷಯ ತಿಳಿದ ಪತಿ ಅಸ್ವಸ್ಥಗೊಂಡಿರುವ ಘಟನೆ ಬುಧವಾರ ರಾತ್ರಿ ತಾಲೂಕಿನ ನಗರಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಂದಿನಿ (35) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದು, ಈ ವಿಷಯ ತಿಳಿದು ಪತಿ ಮಲ್ಲಿಕಾರ್ಜುನ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಂದಿನಿ ಅವರಿಗೆ ಆಗಿಂದಾಗ್ಗೆ ಆರೋಗ್ಯ ಸಮಸ್ಯೆ ಕಂಡು ಬರುತ್ತಿತ್ತು ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾ ರೆಂದು ತಿಳಿದು ಬಂದಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾದ್ಯಂತ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ
ಮಂಡ್ಯ

ಜಿಲ್ಲಾದ್ಯಂತ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ

January 13, 2020

ಯುವಸಮೂಹ ವಿಜ್ಞಾನದ ಜತೆಗೆ ಆಧ್ಯಾತ್ಮ ಕೊಂಡೊಯ್ಯಿರಿ: ಕೆ.ಯಾಲಕ್ಕಿಗೌಡ ಅಭಿಮತ ಸ್ಫೂರ್ತಿಯ ಸೆಲೆ ಸ್ವಾಮಿ ವಿವೇಕಾನಂದ: ಕೆ.ಟಿ.ಹನುಮಂತು ಮಂಡ್ಯ, ಜ.12(ನಾಗಯ್ಯ)- ಜಿಲ್ಲಾ ದ್ಯಂತ ಸ್ವಾಮಿ ವಿವೇಕಾನಂದ ಜಯಂತಿ ಯನ್ನು ಭಾನುವಾರ ವಿವಿಧ ಸಂಘ, ಸಂಸ್ಥೆಗಳ ವತಿಯಿಂದ ಆಚರಿಸಲಾಯಿತು. ಮಂಡ್ಯ, ಮದ್ದೂರು, ಮಳವಳ್ಳಿ, ಪಾಂಡವ ಪುರ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ ಸೇರಿದಂತೆ ವಿವಿಧೆಡೆ ವಿವೇಕಾ ನಂದ ಜಯಂತೋತ್ಸವ ಆಚರಿಸಿದ ಬಗ್ಗೆ ವರದಿಯಾಗಿದೆ. ಮಂಡ್ಯ: ಜಿಲ್ಲಾಡಳಿತ, ಜಿಪಂ, ನಗರ ಸಭೆ, ಕಾಲೇಜು ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ…

ಮೇಲುಕೋಟೆಯಲ್ಲಿ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಮಂಡ್ಯ

ಮೇಲುಕೋಟೆಯಲ್ಲಿ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

January 13, 2020

ಪಾಂಡವಪುರ, ಜ.12- ತಾಲೂಕಿನ ಮೇಲು ಕೋಟೆಯಲ್ಲಿ ಜ.31 ಹಾಗೂ ಫೆ.1ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು. ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇ ಳನದ ಅಂಗವಾಗಿ ಪರಿಷತ್‍ನ ಪದಾಧಿ ಕಾರಿಗಳು ಹಾಗೂ ಸಾಹಿತ್ಯಾಭಿಮಾನಿಗಳ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್ ಉದ್ಘಾಟಿಸ ಲಿದ್ದಾರೆ. 2 ದಿನಗಳ ಕಾರ್ಯಕ್ರಮದಲ್ಲಿ ಒಂದು ದಿನ ಆದಿಚುಂಚನಗಿರಿ ಮಠದ…

ಕ್ಯಾಂಟರ್ ಪಲ್ಟಿ: 20ಕ್ಕೂ ಹೆಚ್ಚು ಮಂದಿಗೆ ಗಾಯ
ಮಂಡ್ಯ

ಕ್ಯಾಂಟರ್ ಪಲ್ಟಿ: 20ಕ್ಕೂ ಹೆಚ್ಚು ಮಂದಿಗೆ ಗಾಯ

January 13, 2020

ಮಂಡ್ಯ, ಜ.12(ನಾಗಯ್ಯ)- ಕ್ಯಾಂಟರ್ ಪಲ್ಟಿಯಾದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿ ರುವ ಘಟನೆ ಮಳವಳ್ಳಿ ತಾಲೂಕಿನ ಮುತ್ತತ್ತಿ ಬಳಿ ಭಾನುವಾರ ಮಧ್ಯಾಹ್ನ ನಡೆದಿದೆ. ದರ್ಶನ್, ಕೊಮ್ರೇಶ್, ತಿಮ್ಮೇಗೌಡ, ರಾಜಮ್ಮ, ಸರೋಜ, ರತ್ನಮ್ಮ, ರವಿ, ಮಾದೇಗೌಡ, ಸುರೇಶ್, ವಸಂತ್, ಸುಶೀಲಮ್ಮ, ಕಾಳಮ್ಮ ಅವರನ್ನೊಳಗೊಂಡಂತೆ 30 ಮಂದಿ ಗಾಯಗೊಂಡಿದ್ದು ಇವರೆಲ್ಲರೂ ಮಂಡ್ಯ ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದವರೆಂದು ತಿಳಿದು ಬಂದಿದೆ. ಇಂದು ಬೆಳಿಗ್ಗೆ ಮಂಡ್ಯ ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದ ಸುಮಾರು 50 ಮಂದಿ ಕ್ಯಾಂಟರ್(ಕೆಎ-51 ಡಿ-0035)ನಲ್ಲಿ ಮುತ್ತತ್ತಿಯ ಅಂಜನೇಯಸ್ವಾಮಿ ಪೂಜೆಗೆ…

ಪರಿಸರ ಸಂರಕ್ಷಣೆಗಾಗಿ 2 ಲಕ್ಷ ಗಿಡ ನೆಟ್ಟಿದ್ದೇವೆ
ಮಂಡ್ಯ

ಪರಿಸರ ಸಂರಕ್ಷಣೆಗಾಗಿ 2 ಲಕ್ಷ ಗಿಡ ನೆಟ್ಟಿದ್ದೇವೆ

January 13, 2020

ಬೆಂಗಳೂರು ಲಾಲ್‍ಬಾಗ್ ಜಂಟಿ ನಿರ್ದೇಶಕ ಡಾ.ಕೆ.ಬೆಳ್ಳೂರು ಕೃಷ್ಣ ಭಾರತೀನಗರ, ಜ.12(ಅ.ಸತೀಶ್)- ಪರಿಸರ ಸಂರಕ್ಷಣೆ ದೃಷ್ಠಿಯಿಂದ 2 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡಿಸಿದ್ದೇನೆ. ಪ್ರತಿಯೊಬ್ಬರಲ್ಲೂ ಪರಿಸರದ ಕಾಳಜಿ ಇರಬೇಕೆಂದು ಬೆಂಗಳೂರಿನ ಲಾಲ್‍ಬಾಗ್ ಜಂಟಿ ನಿರ್ದೇಶಕ ಡಾ.ಕೆ.ಬೆಳ್ಳೂರು ಕೃಷ್ಣ ತಿಳಿಸಿದರು. ಇಲ್ಲಿನ ಕೊಕ್ಕರೆ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ವೇದಿಕೆ ವತಿಯಿಂದ ನಡೆದ “ಪರಿಸರ ಉಳಿಸಿ” ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ಪೂರ್ವಿಕರು ಈ ಹಿಂದೆ ಉತ್ತಮ ಪರಿಸರ ನಿರ್ಮಿಸಿದ್ದರು. ಅದರೆ ಇದೀಗ ಅದೆಲ್ಲಾ…

ಜಿಲ್ಲೆಯಲ್ಲಿ ಎಲ್ಲೂ ಕಾಣದ ‘ಬಂದ್’ ಛಾಯೆ
ಮಂಡ್ಯ

ಜಿಲ್ಲೆಯಲ್ಲಿ ಎಲ್ಲೂ ಕಾಣದ ‘ಬಂದ್’ ಛಾಯೆ

January 9, 2020

ಎಲ್ಲೆಡೆ ಕಾರ್ಮಿಕರಿಂದ ಪ್ರತಿಭಟನೆಕಾರ್ಯನಿರ್ವಹಿಸಿದ ಶಾಲಾ-ಕಾಲೇಜು, ಬ್ಯಾಂಕ್‍ಗಳು ಎಂದಿನಂತೆ ಸಂಚರಿಸಿದ ಆಟೋ, ಬಸ್‍ಗಳು ಜನ ಜೀವನ ಸಹಜ ಸ್ಥಿತಿ- ಎಲ್ಲೆಡೆ ಭಾರತ್ ಬಂದ್ ನೀರಸ ಮಂಡ್ಯ, ಜ.8(ನಾಗಯ್ಯ)- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ಕೈ ಬಿಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಬುಧ ವಾರ ಕರೆ ನೀಡಿದ್ದ ಭಾರತ್ ಬಂದ್ ಜಿಲ್ಲೆ ಯಲ್ಲ್ಲಿ ವಿಫಲವಾಗಿದೆ. ಸಿಐಟಿಯು, ಜೆಸಿಟಿಯು, ದಲಿತ, ಅಲ್ಪ ಸಂಖ್ಯಾತ, ರೈತ, ಕಾರ್ಮಿಕ, ಕೃಷಿ, ಕೂಲಿಕಾ ರರು,…

ಆರೋಗ್ಯವಂತ ಸಮಾಜದಿಂದ ದೇಶದ ಪ್ರಗತಿ ಸಾಧ್ಯ
ಮಂಡ್ಯ

ಆರೋಗ್ಯವಂತ ಸಮಾಜದಿಂದ ದೇಶದ ಪ್ರಗತಿ ಸಾಧ್ಯ

January 9, 2020

ಭಾರತೀನಗರ, ಜ.8(ಅ.ಸತೀಶ್)- ಆರೋಗ್ಯವಂತ ಸಮಾಜದಿಂದ ಮಾತ್ರ ದೇಶದ ಪ್ರಗತಿ ಸಾಧ್ಯವಾಗಿದೆ. ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಾಲಕ್ಕಿಗೌಡ ಸಲಹೆ ನೀಡಿದರು. ಸಮೀಪದ ಅಣ್ಣೂರು ಗ್ರಾಮದಲ್ಲಿ ಬುಧವಾರ ನಡೆದ ವಿಶೇಷ ಮಹಿಳಾ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಆರೋಗ್ಯವಾಗಿದ್ದರೆ ಕುಟುಂಬವೇ ಆರೋಗ್ಯವಾಗಿರುತ್ತದೆ. ಹಾಗೆಯೇ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ಅದು ಎಂದಿಗೂ ವ್ಯರ್ಥ ವಾಗುವುದಿಲ್ಲ ಎಂದರು. ಪ್ರತಿಯೊಬ್ಬರೂ ಆರೋಗ್ಯವಂತರಾಗಿರಬೇಕಾದರೆ ಸೊಪ್ಪು, ತರಕಾರಿ ಸೇವಿಸಬೇಕು. ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಯ…

‘ಆಚಾರ್ಯತ್ರಯ ಕಪ್’ ಟೂರ್ನಿಯ ಭಿತ್ತಿಪತ್ರ ಬಿಡುಗಡೆ
ಮಂಡ್ಯ

‘ಆಚಾರ್ಯತ್ರಯ ಕಪ್’ ಟೂರ್ನಿಯ ಭಿತ್ತಿಪತ್ರ ಬಿಡುಗಡೆ

January 9, 2020

ಬೆಂಗಳೂರು, ಜ.8- ಕರ್ನಾಟಕ ವಿಪ್ರ ವೇದಿಕೆಯಿಂದ ಬೆಂಗಳೂರಿನ ಬಸವನ ಗುಡಿಯ ಕೆಂಪೇಗೌಡ ಆಟದ ಮೈದಾನ ದಲ್ಲಿ ಜ. 31ರಿಂದ ಮೂರು ದಿನಗಳ ಕಾಲ ಆಯೋಜಿಸಿರುವ ‘ಆಚಾರ್ಯತ್ರಯ ಕಪ್’ ರಾಜ್ಯಮಟ್ಟದ ಬ್ರಾಹ್ಮಣ ಯುವಕರ ಕ್ರಿಕೆಟ್ ಟೂರ್ನಿಯ ಭಿತ್ತಿಪತ್ರವನ್ನು ಕರ್ನಾಟಕ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಮೂರ್ತಿ ಅವರು ಬೆಂಗಳೂರಿನ ಕುಮಾರ ಕೃಪದಲ್ಲಿ ಬಿಡು ಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಇಂದಿನ ತಾಂತ್ರಿಕ, ಸ್ಪರ್ಧಾತ್ಮಕ ಯುಗದಲ್ಲಿ ಬ್ರಾಹ್ಮಣ ಸಮುದಾಯ ತಳಮಟ್ಟದಿಂದ ಸಂಘಟಿತ ರಾದರೆ ಮಾತ್ರ ಯುವಪೀಳಿಗೆ ಮುಖ್ಯವಾಹಿ ನಿಗೆ…

ಶ್ರೀರಂಗಪಟ್ಟಣದಲ್ಲಿ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಹಬ್ಬ
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಹಬ್ಬ

January 8, 2020

ಪ್ರಶ್ನೆ ಕೇಳದ ಹೊರತು ಶೋಧನೆ, ಸಂಶೋಧನೆ ಸಾಧ್ಯವಿಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶ್ರೀರಂಗಪಟ್ಟಣ, ಜ.7(ವಿನಯ್ ಕಾರೇಕುರ)- ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರಶ್ನೆ ಕೇಳದ ಹೊರತು ಶೋಧನೆ ಮತ್ತು ಸಂಶೋಧನೆ ಸಾಧ್ಯವಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು. ಸಮಗ್ರ ಶಿಕ್ಷಣ ಕರ್ನಾಟಕ, ಸಾರ್ವ ಜನಿಕ ಶಿಕ್ಷಣ ಇಲಾಖೆ ಹಾಗೂ ಸಮಗ್ರ ಶಿಕ್ಷಣ-ಕರ್ನಾಟಕ ಬೆಂಗಳೂರು, ಜಿಲ್ಲಾ ಡಳಿತ, ಜಿಪಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಮಂಡ್ಯ ಹಾಗೂ ಭಾರತ…

7ನೇ ತರಗತಿಗೆ ಪಬ್ಲಿಕ್ ಬದಲು ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ
ಮಂಡ್ಯ

7ನೇ ತರಗತಿಗೆ ಪಬ್ಲಿಕ್ ಬದಲು ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ

January 8, 2020

ಮಂಡ್ಯ, ಜ.7(ನಾಗಯ್ಯ)- ಪ್ರಸಕ್ತ ಸಾಲಿನ ಶೈಕ್ಷಣಿಕ ಸಾಲಿನಲ್ಲಿ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಬದಲಿಗೆ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಎಸ್‍ಎಸ್‍ಎಲ್‍ಸಿ ಫಲಿತಾಂಶವೃದ್ಧಿ ಹಾಗೂ ಪರೀಕ್ಷೆ ಎದುರಿ ಸುವುದು ಹೇಗೆ ಎಂಬ ವಿಷಯದ ಬಗ್ಗೆ ನಡೆದ ವಿದ್ಯಾರ್ಥಿ ಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲಾಗುವುದು ಎಂದು ಬಿಂಬಿಸಿರುವುದರಿಂದ ವಿದ್ಯಾರ್ಥಿ…

1 5 6 7 8 9 56
Translate »