ಭಾರತೀನಗರ, ಜ.1(ಅ.ಸತೀಶ್)- ವಿದ್ಯಾರ್ಥಿಯ ಜೀವನವನ್ನು ರೂಪಿಸುವಲ್ಲಿ ಪುಸ್ತಕಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಮಂಡ್ಯದ ಶಂಕರೇಗೌಡ ಶಿಕ್ಷಣ ಮಹಾವಿದ್ಯಾಲಯ ಸಹ ಪ್ರಾಧ್ಯಾಪಕಿ ಡಾ.ವಿ.ಡಿ. ಸುವರ್ಣ ಹೇಳಿದರು. ಇಲ್ಲಿನ ಭಾರತೀಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರ, ಭಾರತೀ ಕಾಲೇಜಿನ ಓದುಬರಹ ಒಕ್ಕೂಟ, ಜಾಣ- ಜಾಣೆಯರ ಬಳಗದಿಂದ ನಡೆದ ‘ನನ್ನ ಮೆಚ್ಚಿನ ಪುಸ್ತಕ’ ಕಾರ್ಯಾ ಗಾರ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವುದರಿಂದ ಜ್ಞಾನದ ಜೊತೆಗೆ ವಿವೇಕ, ವಿನಯ, ಸಂಸ್ಕಾರವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಯ ಜೀವನದಲ್ಲಿ ಸ್ನೇಹಿತರು…
ಸ್ವಚ್ಛತೆಗೆ ಆದ್ಯತೆ ನೀಡಲು ಪೌರಾಯುಕ್ತ ಮನವಿ
January 2, 2020ಮಂಡ್ಯ, ಜ.1(ನಾಗಯ್ಯ)- ಕಸಮುಕ್ತ ಮಂಡ್ಯ ಮಾಡುವ ನಗರಸಭೆಯ ಕನಸಿಗೆ ಪೂರಕವಾಗಿ ನಾಗರಿಕರು ಸ್ವಚ್ಛತೆಗೆ ಹೆಚ್ಚು ಆದÀ್ಯತೆ ನೀಡಬೇಕು ಎಂದು ನಗರಸಭೆ ಪೌರಾ ಯುಕ್ತ ಲೋಕೇಶ್ ಮನವಿ ಮಾಡಿದರು. ನಗರದ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿ ಉದ್ಯಾನವನದಲ್ಲಿ ಬುಧವಾರ ನೂತನ ವರ್ಷದ ಸಂಭ್ರಮಾಚರಣೆ ಅಂಗವಾಗಿ ಪೌರಕಾರ್ಮಿಕರು ಆಯೋ ಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮಹಾತ್ಮಾ ಗಾಂಧೀಜಿ ಅವರು ಕಂಡ ಸ್ವಚ್ಛತೆಯ ಕನಸನ್ನು ನನಸಾಗಿಸಲು ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದೆ. ನಗರಸಭೆ ಪೌರ ಕಾರ್ಮಿಕರಷ್ಟೇ ನಾಗರಿಕರು ಸ್ವಚ್ಛತೆ…
ಕರವೇಯಿಂದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ
January 1, 2020ಕೆ.ಆರ್.ಪೇಟೆ, ಡಿ.31- ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಡಿ.ಎಸ್.ವೇಣು ನೇತೃತ್ವದಲ್ಲಿ ಅದ್ಧೂರಿಯಾಗಿ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಆಚರಿಸಲಾಯಿತು. ಉಪನ್ಯಾಸಕ ಸಿ.ಬಿ.ಚೇತನ್ಕುಮಾರ್ ಕುವೆಂಪು ಕುರಿತು ಉಪನ್ಯಾಸ ನೀಡಿ ಮಾತನಾಡಿ, ಕುವೆಂಪು ಅವರಿಗೆ ಕುವೆಂಪು ಅವರೇ ಸಾಟಿ, ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಅವರು ರಚಿಸದ ಸಾಹಿತ್ಯವಿಲ್ಲ. ಇಂತಹ ಶ್ರೇಷ್ಠ ಸಾಹಿತಿ ನಮ್ಮ ಕನ್ನಡದವರು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಇವರು ರಚಿಸಿರುವ ಜೈ ಭಾರತ ಜನನಿಯ ತನಜಾತೆ ಹಾಗೂ ರೈತ…
ಹೊಸ ವರ್ಷಕ್ಕೆ ಮಂಡ್ಯ ರೈತರಿಗೆ ಸಿಹಿ ಸುದ್ದಿ ಜುಲೈ ಒಳಗೆ ಮೈಷುಗರ್ ಕಾರ್ಖಾನೆ ಆರಂಭ
January 1, 2020ರೈತ ಮುಖಂಡರು, ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ನಿರ್ಣಯ ಮಂಡ್ಯ, ಡಿ.31(ನಾಗಯ್ಯ)- ರಾಜ್ಯ ಸರ್ಕಾರದಿಂದ ಹೊಸ ವರ್ಷಕ್ಕೆ ಮಂಡ್ಯ ರೈತರಿಗೆ ಸಿಹಿ ಸುದ್ದಿ ಹೊರ ಬಿದ್ದಿದ್ದು, ಜೂನ್ ಅಥವಾ ಜುಲೈನಲ್ಲಿ ಮೈಷುಗರ್ ಕಾರ್ಖಾನೆ ಆರಂಭಿಸಲು ನಿರ್ಧರಿಸಲಾಗಿದೆ. ಮೈಷುಗರ್ ಕಾರ್ಖಾನೆ ಆವರಣದಲ್ಲಿ ಮಂಗಳವಾರ ಸಕ್ಕರೆ ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ಮೈಷುಗರ್ ಹಾಗೂ ಪಾಂಡವಪುರ ಸಕ್ಕರೆ ಕಾರ್ಖಾನೆ ಪುನ ಶ್ಚೇತನ ಕುರಿತು ರೈತ ಮುಖಂಡರು ಮತ್ತು ಜನಪ್ರತಿನಿಧಿಗಳೊಂದಿಗೆ ನಡೆದ ಅಭಿ ಪ್ರಾಯ ಸಂಗ್ರಹ ಸಭೆಯಲ್ಲಿ ಜುಲೈ ಯೊಳಗೆ ಶತಾಯಗತಾಯ ಕಾರ್ಖಾನೆ…
ನಾಟಕಗಳ ದೃಶ್ಯಗಳು ಬದುಕು ರೂಪಿಸಿಕೊಳ್ಳುವಂತಿರಲಿ
January 1, 2020ಭಾರತೀನಗರ, ಡಿ.31(ಅ.ಸತೀಶ್)- ನಾಟಕಗಳಲ್ಲಿ ಬರುವ ದೃಶ್ಯಗಳನ್ನು ಅರ್ಥ ಮಾಡಿಕೊಂಡು ತಮ್ಮ ಜೀವನದಲ್ಲಿ ಅನು ಸರಿಸಬೇಕೆಂದು ತಾಲೂಕು ಜೆಡಿಎಸ್ ಅಧ್ಯಕ್ಷ ಚಿಕ್ಕತಿಮ್ಮೇಗೌಡ ತಿಳಿಸಿದರು. ಇಲ್ಲಿನ ವಿಶ್ವಮಾನವ ರಂಗಭೂಮಿ ಕಲಾ ವಿದರ ಸಂಘದ ವತಿಯಿಂದ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಆಯೋ ಜಿಸಿದ್ದ ಅಣ್ಣತಂಗಿ ಅಥವಾ ಸ್ನೇಹದ ಸಂಕೋಲೆ ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದರು. ಕುವೆಂಪುರವರು ಉತ್ತಮ ಸಾಹಿತ್ಯ ಗಳನ್ನು ಬರೆದಿದ್ದಾರೆ. ಅವರ ಆದರ್ಶ ಅನನ್ಯ. ಪ್ರತಿಯೊಬ್ಬರು ತಮ್ಮ ಗುರಿಗಳನ್ನು ಸಾಧಿಸಬೇಕಾದರೆ ಹಿರಿಯ ಮಾರ್ಗ ದರ್ಶನದಲ್ಲಿ ನಡೆಯಬೇಕು. ನಾಟಕಗಳಲ್ಲಿ…
ರೈತರಿಂದ ಗುಣಮಟ್ಟದ ಹಾಲು ಸರಬರಾಜು ಮಾಡಿಸಿಕೊಳ್ಳಿ ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಸಲಹೆ
January 1, 2020ಪಾಂಡವಪುರ, ಡಿ.31- ಹಾಲಿನ ಡೈರಿ ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿಗಳು ರೈತರಿಂದ ಗುಣಮಟ್ಟದ ಹಾಲು ಸರಬರಾಜು ಮಾಡಿಸಿಕೊಳ್ಳಬೇಕು ಎಂದು ಮನ್ಮುಲ್ ನಿರ್ದೇಶಕ ಕಾಡೇನ ಹಳ್ಳಿ ರಾಮಚಂದ್ರು ಸಲಹೆ ನೀಡಿದರು. ಪಟ್ಟಣದ ಮನ್ಮುಲ್ ಉಪ ಕಚೇರಿ ಯಲ್ಲಿ ಮಂಗಳವಾರ ನಡೆದ ಬಿಎಂಸಿ ಘಟಕ ಹೊಂದಿರುವ ಡೈರಿ ಕಾರ್ಯದರ್ಶಿ ಹಾಗೂ ಅಧ್ಯಕ್ಷರಿಗೆ ಗುಣಮಟ್ಟದ ಹಾಲು ಪೂರೈಕೆ ಸಂಬಂಧ ಅರಿವು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನ 28 ಹಾಲಿನ ಡೈರಿಗಳಲ್ಲಿ ಬಿಎಂಸಿ ಘಟಕವಿದ್ದು, ಎಲ್ಲಾ ಡೈರಿಗಳಿಗೆ ಗುಣಮಟ್ಟದ ಹಾಲು ಪೂರೈಸುವಂತೆ…
ಕಾವೇರಿ ತೀರದಲ್ಲಿ ಹೊಸ ವರ್ಷಾಚರಣೆ ಮೋಜು-ಮಸ್ತಿಗೆ ಬ್ರೇಕ್…!
December 31, 20192 ದಿನ 144 ಸೆಕ್ಷನ್ ಜಾರಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಚೂಡಹಳ್ಳಿ ಚೆಕ್ಪೋಸ್ಟ್ ಬಂದ್, ಎಡಮುರಿ-ಬಲಮುರಿ, ಮುತ್ತತ್ತಿ ಪ್ರವೇಶಕ್ಕೂ ನಿಷೇಧ ಮಂಡ್ಯ, ಡಿ.30(ನಾಗಯ್ಯ)- ಕಾವೇರಿ ತೀರದಲ್ಲಿ ಹೊಸ ವರ್ಷಾಚರಣೆಗೆ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತ ಬ್ರೇಕ್ ಹಾಕಿವೆ. ಹೊಸ ವರ್ಷ ಸಂಭ್ರಮಾಚರಣೆ ನೆಪದಲ್ಲಿ ನಡೆಯುವ ಅಕ್ರಮ, ಅಸಭ್ಯ ವರ್ತನೆ, ಅಹಿತಕರ ಘಟನೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಜಿಲ್ಲೆಯ ಕಾವೇರಿ ನದಿ ತೀರದ ಹಲವು ಪ್ರಮುಖ ಪ್ರವಾಸಿ ತಾಣಗಳಲ್ಲಿ 2 ದಿನಗಳ ಕಾಲ ನಿಷೇಧಾಜ್ಞೆ…
ಮತದಾನದ ಹಕ್ಕಿಗಾಗಿ ಸಂತೇಬಾಚಹಳ್ಳಿ ಡೈರಿ ಷೇರುದಾರರ ಪ್ರತಿಭಟನೆ
December 31, 2019ಕೆ.ಆರ್.ಪೇಟೆ, ಡಿ.30- ತಾಲೂಕಿನ ಸಂತೇಬಾಚಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 300ಕ್ಕೂ ಹೆಚ್ಚು ಷೇರುದಾರರಿದ್ದರೂ, ಕೇವಲ 47 ಮಂದಿಗೆ ಮಾತ್ರ ಮತದಾನದ ಹಕ್ಕು ನೀಡಿರುವುದನ್ನು ಖಂಡಿಸಿ ಹಾಗೂ ಎಲ್ಲಾ ಷೇರುದಾರರಿಗೂ ಮತದಾನದ ಹಕ್ಕು ನೀಡಬೇಕೆಂದು ಒತ್ತಾಯಿಸಿ ಸಂಘದ ಷೇರುದಾರರು ಹಾಗೂ ಹಾಲು ಉತ್ಪಾದಕರು ಸೋಮವಾರ ಪ್ರತಿಭಟನೆ ನಡೆಸಿದರು. ಸಂತೇಬಾಚಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಬಿಎಂಸಿ ಕೇಂದ್ರದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಹಾಲಿನ ಟ್ಯಾಂಕರ್ ತಡೆದು ಪ್ರತಿಭಟನೆ ನಡೆಸಿದರು. ಸಂಘದಲ್ಲಿ 324 ಷೇರುದಾರರಿದ್ದಾರೆ. ಆದರೆ ಕಾರ್ಯದರ್ಶಿಗಳು ವಾರ್ಷಿಕ…
ದುಷ್ಕರ್ಮಿಗಳಿಂದ ಕಾರು, ಬೈಕ್ಗಳಿಗೆ ಬೆಂಕಿ
December 31, 2019ಚಿನಕುರಳಿ, ಡಿ.30- ಮನೆ ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಬೈಕ್ಗಳಿಗೆ ದುಷ್ಕರ್ಮಿಗಳು ಬೆಂಕಿ ಹಾಕಿರುವ ಘಟನೆ ಚಿನಕುರಳಿ ಗ್ರಾಮದಿಂದ ವರದಿಯಾಗಿದೆ. ಗ್ರಾಮದ ಅಂಕೇಗೌಡರಿಗೆ ಸೇರಿದ ಹೀರೋ ಫ್ಯಾಷನ್ ಪ್ಲಸ್ ಹಾಗೂ ಸಿ.ಎಂ.ಸಂತೋಷ್ ಅವರಿಗೆ ಸೇರಿದ ಬಜಾಜ್ ಪಲ್ಸರ್ ಬೈಕ್ಗಳಿಗೆ ಹಾಗೂ ಮಹಮ್ಮದ್ ಎಂಬುವರಿಗೆ ಸೇರಿದ ಇಂಡಿಕಾ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆ ವಿವರ: ಶನಿವಾರ ರಾತ್ರಿ ಸಂತೋಷ್ ಅವರು ತಮ್ಮ ಮನೆ ಮುಂದೆ ಬೈಕ್ ನಿಲ್ಲಿಸಿ ಮಲಗಿದ್ದರು. ಈ ವೇಳೆ ದುಷ್ಕರ್ಮಿಗಳು ಬೈಕ್ಗೆ ಬೆಂಕಿ…
ಕುವೆಂಪು ಸಾಹಿತ್ಯದಲ್ಲಿ ವೈಜ್ಞಾನಿಕ ಪ್ರಜ್ಞೆ ಅಡಗಿದೆ: ಜಿಪಂ ಸಿಇಓ
December 31, 2019ಮಂಡ್ಯ,ಡಿ.30(ನಾಗಯ್ಯ)- ಕುವೆಂಪು ರಚಿಸಿರುವ ಪದ್ಯ, ಗದ್ಯ, ಕಾವ್ಯ, ನಾಟಕ ಗಳಲ್ಲಿ ವೈಜ್ಞಾನಿಕ ಪ್ರಜ್ಞೆ ಅಡಗಿದೆ ಎಂದು ಜಿಪಂ ಸಿಇಓ ಕೆ.ಯಾಲಕ್ಕಿಗೌಡ ತಿಳಿಸಿದರು. ನಗರದ ಕರ್ನಾಟಕ ಸಂಘದ ಆವರಣ ದಲ್ಲಿ ನಡೆದ ಕುವೆಂಪು ಜಯಂತೋತ್ಸವದಲ್ಲಿ ಡಾ. ರಾ.ಗೌ ರವರ ಕುವೆಂಪು ವಿಚಾರ ಜಾಗೃತಿ ಪುಸ್ತಕ ಬಿಡುಗಡೆಗೊಳಿಸಿ ಮಾತ ನಾಡಿದ ಅವರು, ಕುವೆಂಪು ವಿಶ್ವಮಾನವ ಸಂದೇಶವನ್ನು ಸಾರಿದಂತಹ ಸಾಂಸ್ಕøತಿಕ ರಾಯಭಾರಿಯಾಗಿದ್ದು ಅವರಲ್ಲಿದ್ದ ದೇಶ ಹಾಗೂ ನಾಡಿನ ಪ್ರೇಮ ಅನನ್ಯ ಎಂದರು. ರಾಷ್ಟಕವಿ ಕುವೆಂಪು ಸಾಹಿತ್ಯ ಲೋಕದ ದೈತ್ಯ ಪ್ರತಿಭೆ, ಕುವೆಂಪು…