ಮೈಸೂರು, ಏ.4(ಪಿಎಂ)- ದೀಪ ಹಚ್ಚುವುದರ ಹಿಂದೆ ವೈಜ್ಞಾನಿಕ ಕಾರಣ ವಿದ್ದು, ದೀಪ ಹಚ್ಚಿದರೆ ವೈರಸ್ಗಳು ಆ ದೀಪದ ಬಳಿ ಬಂದು ಶಾಖ ತಡೆಯಲಾರದೆ ಸಾಯುತ್ತವೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ. ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿ ಕಾರದ ಆವರಣ ಮತ್ತು ಲಲಿತಮಹಲ್ ಮೈದಾನದಲ್ಲಿ ಮೇಣದ ಬತ್ತಿ, ದೀಪ ಮತ್ತು ಮಾಸ್ಕ್ಗಳನ್ನು ವಿತರಿಸಿ ಅವರು ಮಾತನಾಡಿದರು. ಏ.5ರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮೊಂಬತ್ತಿ, ಹಣತೆ ಅಥವಾ ಮೊಬೈಲ್ ಟಾರ್ಚ್ ಬೆಳಗಿಸಿ ಇಡೀ ದೇಶ ಒಗ್ಗಟ್ಟು…
ತಂತಿ ಮೇಲಿನ ನಡಿಗೆ: ಸಿಎಂ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ: ಎಸ್.ಎ.ರಾಮದಾಸ್
October 1, 2019ಮೈಸೂರು, ಸೆ.30 (ಆರ್ಕೆಬಿ)- ನನ್ನದು ತಂತಿ ಮೇಲಿನ ನಡಿಗೆ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಪ್ರತಿಕ್ರಿಯಿಸಿದ್ದು, ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಮಾತನಾಡಲು ನಾನಿನ್ನು ಚಿಕ್ಕವನು. ಅವರು ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಅವರಿಗೆ ಒತ್ತಡ ಇದ್ದೇ ಇರುತ್ತದೆ. ಅವರು ನಮ್ಮ ನಾಯಕರು. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ತಿಳಿಸಿದ್ದಾರೆ. ಅನರ್ಹರ ಕುರಿತ ಶಾಸಕ ಉಮೇಶ್ ಕತ್ತಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ದಂತೆ,…
ಬಡ ರೋಗಿಗಳು ಕೇಂದ್ರದ 5 ಲಕ್ಷ ರೂ.ಗಳ ವೈದ್ಯಕೀಯ ಸೇವೆಯಿಂದ ವಂಚಿತ: ರಾಮದಾಸ್
February 3, 2019ಮೈಸೂರು: ಕೇಂದ್ರ ಸರ್ಕಾರ ಜಾರಿಗೆ ತಂದಿ ರುವ `ಆಯುಷ್ಮಾನ್ ಭಾರತ್’ ಯೋಜನೆ ಯನ್ನು ರಾಜ್ಯ ಸರ್ಕಾರದ `ಆರೋಗ್ಯ ಕರ್ನಾ ಟಕ’ ಯೋಜನೆಯಲ್ಲಿ ವಿಲೀನಗೊಳಿಸಿದ್ದರ ಪರಿಣಾಮ ಗೊಂದಲಗಳು ಸೃಷ್ಟಿಯಾಗಿದ್ದು, ಇದರಿಂದ ಬಡ ರೋಗಿಗಳು ಕೇಂದ್ರದ ಯೋಜನೆಯ 5 ಲಕ್ಷ ರೂ.ವರೆಗಿನ ವೈದ್ಯಕೀಯ ಚಿಕಿತ್ಸಾ ಸೌಲಭ್ಯದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವರೂ ಆದ ಎಸ್.ಎ.ರಾಮದಾಸ್ ಹೇಳಿದರು. ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಡ ಕುಟುಂಬ ಗಳಿಗೆ…
ಮೂರು ವಾರ್ಡ್ಗಳಲ್ಲಿ 95 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರಾಮದಾಸ್ ಚಾಲನೆ
January 23, 2019ಮೈಸೂರು: ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಬುಧವಾರ ತಮ್ಮ ಕ್ಷೇತ್ರ ವ್ಯಾಪ್ತಿಯ ಮೂರು ವಾರ್ಡ್ಗಳಲ್ಲಿ ಒಟ್ಟು 95 ಲಕ್ಷ ರೂ. ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. 52ನೇ ವಾರ್ಡ್ನಲ್ಲಿ ಜೆ.ಸಿ.ನಗರದ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗದ ರಸ್ತೆಗಳಿಗೆ 45 ಲಕ್ಷ ರೂ. ವೆಚ್ಚದ ಡಾಂಬರೀಕರಣ ಕಾಮಗಾರಿ, 51ನೇ ವಾರ್ಡ್ ಎಂ.ಜಿ.ರಸ್ತೆಯಲ್ಲಿ 5.5 ಲಕ್ಷ ರೂ. ವೆಚ್ಚದಲ್ಲಿ ಜೆಎಸ್ಎಸ್ ಆಸ್ಪತ್ರೆ ಬಳಿ ಎಲೆತೋಟದ ಹತ್ತಿರ ಚರಂಡಿ ನಿರ್ಮಾಣ ಮತ್ತು 62ನೇ ವಾರ್ಡ್ನಲ್ಲಿ ಜೆ.ಪಿ.ನಗರ ಕಂದಾಯ ಕಾಲೋನಿಯಲ್ಲಿ…
ಪ್ರತಿ ತಿಂಗಳ ಮೊದಲ, 3ನೇ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ
January 4, 2019ಮೈಸೂರು: ಮೈಸೂರು ನಾಗರಿಕರ ಆರೋಗ್ಯ ಕಾಪಾ ಡುವ ನಿಟ್ಟಿನಲ್ಲಿ `ಆರೋಗ್ಯ ಮೈಸೂರು’ ಕಾರ್ಯಕ್ರಮದಡಿ ಪ್ರತಿ ತಿಂಗಳ ಮೊದಲ ಮತ್ತು 3ನೇ ಭಾನುವಾರಗಳಂದು ಮೈಸೂರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮೈಸೂರು ಕೃಷ್ಣರಾಜಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಮೈಸೂರಿನ ಅನೇಕರು ಮಕ್ಕಳಿಂದ ವೃದ್ಧ ರವರೆಗೆ ಅವರಿಗೇ ಅರಿವಿಲ್ಲದೆ ಕಾಡುತ್ತಿ ರುವ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಹಾಗೂ ನಾನಾ ರೋಗಗಳಿಂದ ಮೈಸೂರಿಗರನ್ನು…
ಅಟಲ್ ನೆನಪು, ಕ್ರಿಸ್ಮಸ್ ಪ್ರಯುಕ್ತ 25ರಂದು `ಆರೋಗ್ಯ ಮೈಸೂರು’
December 23, 2018ಮೈಸೂರು: ಕ್ರಿಸ್ ಮಸ್ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಡಿ.25ರಂದು ಬೆಳಿಗ್ಗೆ 7.30ರಿಂದ 4 ಗಂಟೆವರೆಗೆ ಮೈಸೂರಿನ ಜಯನಗರ ದಲ್ಲಿರುವ ಪೈ.ಬಸವಯ್ಯ ಸಮುದಾಯ ಭವನದಲ್ಲಿ `ಆರೋಗ್ಯ ಮೈಸೂರು’ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳ ಲಾಗಿದೆ ಎಂದು ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಹೊರತು ಪಡಿಸಿ, ಜನರ ಹಿತ ಕಾಪಾಡುವುದರೊಂ ದಿಗೆ ಆರೋಗ್ಯಪೂರ್ಣ ಸಮಾಜ…
ಶಾಸಕ ರಾಮದಾಸ್ರಿಂದ ಜಯನಗರದಲ್ಲಿ ಸ್ವಚ್ಛತಾ ಕಾರ್ಯ
December 10, 2018ಮೈಸೂರು: `ಸ್ವಚ್ಛ ಭಾನುವಾರ-ಹಸಿರು ಭಾನುವಾರ’ ಘೋಷಣೆ ವಾಕ್ಯದೊಂದಿಗೆ ಪ್ರತಿ ಭಾನುವಾರ ಸ್ವಚ್ಛತಾ ಅಭಿಯಾನ ಕೈಗೊಂಡಿರುವ ಶಾಸಕ ಎಸ್.ಎ.ರಾಮದಾಸ್ ಮೈಸೂರಿನ 48ನೇ ವಾರ್ಡ್ ವ್ಯಾಪ್ತಿಯ ಜಯನಗರದ ಇಸ್ಕಾನ್ ದೇವಸ್ಥಾನದ ಎದುರಿನ ಸಮುದಾಯ ಭವನ ಹಾಗೂ ಚಿನ್ನಗಿರಿಕೊಪ್ಪಲಿನ ಸುತ್ತ ಮುತ್ತ ಸ್ವಚ್ಛತಾ ಕಾರ್ಯ ನಡೆಸಿದರು. ಪೌರಕಾರ್ಮಿಕರು, ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಒಟ್ಟುಗೂಡಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಸ್ವಚ್ಛತೆಯ ಬಗ್ಗೆ ಆಯಾ ಪ್ರದೇಶದ ಜನ ರಲ್ಲಿ ಜಾಗೃತಿ ಮೂಡಿಸುವುದು ಈ ಅಭಿ ಯಾನದ ಉದ್ದೇಶವಾಗಿದೆ ಎಂದು ಈ ಸಂದರ್ಭದಲ್ಲಿ ಶಾಸಕರು…
ಶಾಸಕರಿಂದ ಸಾರ್ವಜನಿಕ ಶೌಚಾಲಯಕ್ಕೆ ಚಾಲನೆ
December 7, 2018ಮೈಸೂರು: ಮೈಸೂರಿನ 49ನೇ ವಾರ್ಡ್ನ ಲಕ್ಷ್ಮೀಪುರಂ ಪೊಲೀಸ್ ಠಾಣೆ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಆರ್ಟಿಓ ಕಚೇರಿ ಸೇರಿದಂತೆ ಹೆಚ್ಚು ಜನಸಂದಣಿ ಇರುವ ಈ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯದ ಅಗತ್ಯತೆ ಬಗ್ಗೆ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಈ ಶೌಚಾಲಯ ನಿರ್ಮಾಣಗೊಂಡಿದೆ. ಶೌಚಾಲಯಕ್ಕೆ ಅಗತ್ಯ ನೀರಿನ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿತ್ತು. ಈ ಭಾಗದ ಪಾಲಿಕೆ ಸದಸ್ಯೆ ಸೌಮ್ಯ ಉಮೇಶ್ ಅವರ ಆಸಕ್ತಿಯಿಂದ ಕಾಮಗಾರಿ ತ್ವರಿತವಾಗಿ ನಡೆದಿದೆ ಎಂದು…
ಜೆ.ಪಿ.ನಗರದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ರಾಮದಾಸ್ ಚಾಲನೆ
December 6, 2018ಮೈಸೂರು: ಮೈಸೂರಿನ ಜೆ.ಪಿ.ನಗರ `ಡಿ’ ಬ್ಲಾಕ್ನಲ್ಲಿ 40 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗಳಿಗೆ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಬುಧವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಜೆ.ಪಿ.ನಗರ `ಡಿ’ ಬ್ಲಾಕ್ನ 8 ರಸ್ತೆಗಳ ಡಾಂಬರೀಕರಣ ನಡೆಯಲಿದೆ. ಜೆ.ಪಿ.ನಗರವು ಸುಮಾರು 30 ವರ್ಷಗಳಷ್ಟು ಹಳೆಯ ಬಡಾವಣೆಯಾದರೂ, ಅಭಿವೃದ್ಧಿ ಕಾರ್ಯಗಳು ನಡೆಯದಿರುವುದು ಶೋಚನೀಯ ಎಂದು ತಿಳಿಸಿದರು. ಜೆ.ಪಿ.ನಗರದ ಎರಡೂ ವಾರ್ಡ್ಗಳಲ್ಲಿಯೂ ಮೊದಲ ಬಾರಿಗೆ ಬಿಜೆಪಿ ಕಾರ್ಪೊ ರೇಟರ್ಗಳು ಆಯ್ಕೆಯಾಗಿರುವುದು ಸಂತೋಷದ ವಿಷಯ. ಶಾರದಮ್ಮ ಈಶ್ವರ್ ಅವರು ಕಾರ್ಪೊರೇಟರ್…
ಶಾಸಕ ರಾಮದಾಸ್ರಿಂದ `ಸ್ವಚ್ಛ ಭಾನುವಾರ-ಹಸಿರು ಭಾನುವಾರ’
November 19, 2018ಮೈಸೂರು: ಸ್ವಚ್ಛ ಭಾನುವಾರ- ಹಸಿರು ಭಾನುವಾರ’ ಎಂಬ ಸಂದೇಶದೊಂದಿಗೆ ಸ್ವಚ್ಛತಾ ಭಾರತ ಅಭಿಯಾನದಡಿ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ಅವರು ಭಾನುವಾರ 53ನೇ ವಾರ್ಡ್ ವ್ಯಾಪ್ತಿಯ ಸಿದ್ದಾರ್ಥ ಲೇಔಟ್, ಸಿಐಟಿಬಿ ಕಲ್ಯಾಣ ಭನವ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಿದರು. ಪೌರ ಕಾರ್ಮಿಕರು, ಸಂಘ ಸಂಸ್ಥೆಗಳು, ಸಾರ್ವ ಜನಿಕರ ಜೊತೆಗೂಡಿ ಸ್ವಚ್ಛತಾ ಕಾರ್ಯ ಕೈಗೊಂಡ ಅವರು, ಇಡೀ ರಾಜ್ಯದಲ್ಲಿ ಮೊದಲಿಗೆ ಹಸಿರು ಭಾನು ವಾರವನ್ನು ಆರಂಭಿಸಿ, 157 ಭಾನುವಾರಗಳನ್ನು ಬೆಂಗ ಳೂರಿನಲ್ಲಿ ಯಶಸ್ವಿಯಾಗಿ ನಡೆಸಿದ ದಿವಂಗತ ಅನಂತ ಕುಮಾರ್…