ಅನಂತಪುರ, ಡಿ.5- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಗುರುವಾರ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದು, ಇದು ರಾಜಕೀಯ ವಲಯ ದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ. ದಕ್ಷಿಣ ಕೋರಿಯಾದ ಮೋಟಾರು ವಾಹನ ಸಂಸ್ಥೆ ಕಿಯಾ ಮೋಟಾರ್ಸ್ ಘಟಕದ ಪೂರ್ಣ ಪ್ರಮಾಣದ ಕಾರ್ಯಾರಂಭ ಕಾರ್ಯಕ್ರಮಕ್ಕೆ ಆಗಮಿಸಿದ ವಿಜಯೇಂದ್ರ, ಜಗನ್ ಮೋಹನ್…
ಮೈಸೂರಿನ `ಅಶೋಕಪುರಂ’ ಹಿರಿಮೆ ಅನಾವರಣಗೊಳಿಸುವ `ಮೈಸೂರು ಸಂಸ್ಥಾನದ ಆದಿ ಕರ್ನಾಟಕಪುರ’ ಕೃತಿ ಇಂದು ಬಿಡುಗಡೆ
December 6, 2019ಮೈಸೂರು, ಡಿ.5(ಪಿಎಂ)- ಮೈಸೂರಿನ ಅಶೋಕ ಪುರಂನ ಹುಟ್ಟು, ಬೆಳವಣಿಗೆ, ಹಿರಿಮೆಯೊಂದಿಗೆ ಅಲ್ಲಿನ ಜನಜೀವನ ಕುರಿತ ಮಹತ್ವದ ಸಂಗತಿಗಳನ್ನು ಅನಾ ವರಣಗೊಳಿಸುವ `ಮೈಸೂರು ಸಂಸ್ಥಾನದ ಆದಿ ಕರ್ನಾಟಕಪುರ’ ಕೃತಿ ಡಿ.6ರಂದು ಬಿಡುಗಡೆಗೊಳ್ಳಲಿದೆ. ಅಶೋಕಪುರಂ ನಿವಾಸಿ ಹಾಗೂ ಮಂಡ್ಯ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸಿದ್ದಸ್ವಾಮಿ `ಮೈಸೂರು ಸಂಸ್ಥಾನದ ಆದಿ ಕರ್ನಾಟಕಪುರ’ ಕೃತಿ ಕರ್ತೃ. ಅಂದು ಸಂಜೆ 4ಕ್ಕೆ ಮೈಸೂರಿನ ವಿದ್ಯಾರಣ್ಯಪುರಂ ಸ್ಮಶಾನ ದಲ್ಲಿ ಕೃತಿ ಬಿಡುಗಡೆ ಆಗಲಿರುವುದು ವಿಶೇಷ. `ವಿದ್ಯಾ ರಣ್ಯಪುರಂ ಸ್ಮಶಾನದಲ್ಲಿ ನಮ್ಮ ಪೂರ್ವಿಕರ ಅಂತ್ಯ ಸಂಸ್ಕಾರ…
ಹೈದರಾಬಾದ್: 150 ರೂ. ಗಡಿ ಮುಟ್ಟಿದ ಈರುಳ್ಳಿ ದರ
December 6, 2019ನವದೆಹಲಿ,ಡಿ.5- ಗಗನಕ್ಕೇರುತ್ತಿರುವ ಈರುಳ್ಳಿ ಬೆಲೆ ಬಗ್ಗೆ ಬುಧವಾರ ಲೋಕಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಹೈದರಾಬಾದ್ ಸೇರಿದಂತೆ ದೇಶದ ಹಲವೆಡೆ ಈರುಳ್ಳಿ ಬೆಲೆ ಕೆಜಿಗೆ 150 ರೂ.ಗೆ ಏರಿರುವುದನ್ನು ಪ್ರಸ್ತಾಪಿಸಿ ವಿರೋಧ ಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ಕಿಡಿಕಾರಿದರು. ಸಂಸದರೊಬ್ಬರು ಈರುಳ್ಳಿ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಉದ್ದೇ ಶಿಸಿ, `ನೀವು ಈರುಳ್ಳಿ ತಿನ್ನುತ್ತೀರಾ? ಬೆಲೆ ಭಾರೀ ಏರಿಕೆಯಾಗಿದೆ ಯಲ್ಲ, ಏನು ಮಾಡುತ್ತೀರಿ? ಎಂದು ಪ್ರಶ್ನಿಸಿದರು. ಅದಕ್ಕೆ ನಿರ್ಮಲಾ ಸೀತಾರಾಮನ್, `ನಮ್ಮ…
ಮಾಜಿ ಕಾರ್ಪೊರೇಟರ್ ಗಿರೀಶ್ ಪ್ರಸಾದ್ ವಿರುದ್ಧದ ಕೊಲೆ ಬೆದರಿಕೆ ಪ್ರಕರಣದ ಬಿ ರಿಪೋರ್ಟ್ ನ್ಯಾಯಾಲಯದಿಂದ ತಿರಸ್ಕøತ
December 6, 2019ಮೈಸೂರು,ಡಿ.5-ಮಾಜಿ ಕಾರ್ಪೊರೇಟರ್ ಗಿರೀಶ್ ಪ್ರಸಾದ್ ವಿರುದ್ಧ ದಾಖ ಲಾಗಿದ್ದ ಕೊಲೆ ಬೆದರಿಕೆ ಪ್ರಕರಣಕ್ಕೆ ವಿವಿ ಪುರಂ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಮೈಸೂರಿನ 4ನೇ ಹೆಚ್ಚುವರಿ ಒಂದನೇ ಜೆಎಂಎಫ್ಸಿ ನ್ಯಾಯಾಲಯ ತಿರಸ್ಕರಿಸಿದೆ. ವಿವರ: ಗೋಕುಲಂ 3ನೇ ಹಂತದ ನಿವಾಸಿ ಚಿಕ್ಕನರಸೇಗೌಡ ಅವರು, ತಾವು 2017ರ ಜುಲೈ 27ರಂದು ಸಂಜೆ ಗೋಕುಲಂ 3ನೇ ಹಂತದ ಮೈಸೂರು ಇನ್ ಬಳಿಯಿರುವ ಟೀ ಸ್ಟಾಲ್ ಬಳಿ ಕುಳಿತಿದ್ದಾಗ ಅಂದಿನ 31ನೇ ವಾರ್ಡ್ ಕಾರ್ಪೊ ರೇಟರ್ ಗಿರೀಶ್ಪ್ರಸಾದ್ ಮತ್ತು ಅವರ ಜೊತೆಯಲ್ಲಿದ್ದ…
ಶಬರಿಮಲೆ ವಿವಾದದಲ್ಲಿ ಸುಪ್ರೀಂ ನೀಡಿದ ತೀರ್ಪು ಅಂತಿಮವಲ್ಲ: ನ್ಯಾಯಮೂರ್ತಿ ಬೊಬ್ಡೆ
December 6, 2019ಹೊಸದಿಲ್ಲಿ, ಡಿ.5- ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡುವ ಸಂಬಂಧ ಕಳೆದ ವರ್ಷ ನೀಡಿದ್ದ ತೀರ್ಪು ಅಂತಿಮವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅರವಿಂದ್ ಬೊಬ್ಡೆ ಹೇಳಿದ್ದಾರೆ. ಬಿಂದು ಅಮ್ಮಿನಿ ಎಂಬುವವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುವ ವೇಳೆ ಸಿಜೆಐ ಈ ಅಭಿಪ್ರಾಯ ವ್ಯಕ್ತಪಡಿಸಿದರು. ದೇವಾಲಯ ಪ್ರವೇಶಕ್ಕೆ ರಕ್ಷಣೆ ಒದಗಿಸುವಂತೆ ಕೋರಿ ಅಮ್ಮಿನಿ ಅರ್ಜಿ ಸಲ್ಲಿಸಿದ್ದರು. ಕಳೆದ ತಿಂಗಳು ಮಂದಿರಕ್ಕೆ ಭೇಟಿ ನೀಡುವ ಪ್ರಯತ್ನ ಮಾಡಿದಾಗ ಅಮ್ಮಿನಿ ಮೇಲೆ ಪೆಪ್ಪರ್ ಸ್ಪ್ರೇ ದಾಳಿ…
ರಾಮಮೂರ್ತಿ ರಾಜ್ಯಸಭೆಗೆ ಅವಿರೋಧ ಆಯ್ಕೆ
December 6, 2019ಬೆಂಗಳೂರು: ಇತ್ತೀಚೆಗೆ ರಾಜ್ಯಸಭೆ ಸದಸ್ಯ ಸ್ಥಾನದೊಂದಿಗೆ ಕಾಂಗ್ರೆಸ್ ತೊರೆದಿದ್ದ ಕೆ.ಸಿ.ರಾಮಮೂರ್ತಿ ಈಗ ಬಿಜೆಪಿಯಿಂದ ರಾಜ್ಯ ಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಇದರೊಂದಿಗೆ ರಾಜ್ಯಸಭೆಯಲ್ಲಿ ಬಿಜೆಪಿ ಸಂಖ್ಯಾಬಲ ಹೆಚ್ಚಿದೆ. ಡಿ.12ರಂದು ರಾಜ್ಯಸಭೆ ಉಪ ಚುನಾವಣೆ ನಡೆಯ ಬೇಕಿತ್ತು. ಆದರೆ ರಾಮಮೂರ್ತಿ ಹೊರತು ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷ್ಮಿ ಘೋಷಿಸಿದರು. ರಾಮಮೂರ್ತಿ ಅವರನ್ನು ಯಡಿಯೂರಪ್ಪ ಅಭಿನಂದಿಸಿದ್ದಾರೆ.
ಇನ್ನು ಸಂಸದರಿಗಿಲ್ಲ ಕ್ಯಾಂಟೀನ್ ಸಬ್ಸಿಡಿ: ಖಜಾನೆಗೆ 17 ಕೋಟಿ ಉಳಿತಾಯ
December 6, 2019ನವದೆಹಲಿ,ಡಿ.5-ಸಂಸತ್ತಿನ ಕ್ಯಾಂಟೀನ್ನಲ್ಲಿ ಊಟ ಮತ್ತು ಉಪಾಹಾರದ ಸಬ್ಸಿಡಿ ಪಡೆಯದಿರಲು ಸಂಸದರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಸಲಹೆ ನಂತರ ಈ ನಿರ್ಧಾರ ತೆಗೆದು ಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. ಲೋಕಸಭೆಯ ಸಂಸದೀಯ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಎಲ್ಲ ಪಕ್ಷಗಳ ಸದಸ್ಯರು ಸಬ್ಸಿಡಿ ಬಿಟ್ಟುಕೊಡಲು ಒಪ್ಪಿಗೆ ನೀಡಿದ್ದಾರೆ. ಇದರಿಂದ ವರ್ಷಕ್ಕೆ 17 ಕೋಟಿ ಉಳಿತಾಯ ಆಗಲಿದೆ. ಇನ್ನು ಮುಂದೆ ಸಂಸತ್ ಕ್ಯಾಂಟೀನ್ನಲ್ಲಿ ಊಟ ಮತ್ತು ಉಪಾಹಾರವು ವಾಸ್ತವ ದರದಲ್ಲಿಯೇ…
ಡಿ.8ರಂದು ಧರ್ಮಸ್ಥಳಕ್ಕೆ ಸಿಎಂ ಬಿಎಸ್ವೈ
December 6, 2019ಬೆಂಗಳೂರು,ಡಿ.5-ಉಪ ಚುನಾವಣೆ ನಡೆಯುತ್ತಿರುವ 15 ವಿಧಾನ ಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆದಿದ್ದು, ಡಿ.9 ರಂದು ಫಲಿತಾಂಶ ಹೊರಬೀಳಲಿದೆ. ಬಿಜೆಪಿ ಸರ್ಕಾರವನ್ನು ಶತಾಯಗತಾಯ ಉಳಿಸಿಕೊಳ್ಳಲು ಹಠಕ್ಕೆ ಬಿದ್ದಿರುವ ಸಿಎಂ ಯಡಿಯೂರಪ್ಪ ಡಿ.8ರಂದು ಧರ್ಮಸ್ಥಳಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಉಪ ಚುನಾವಣೆಯ ಫಲಿತಾಂಶಕ್ಕೂ ಮೊದಲೇ ಸಿಎಂ ಧರ್ಮಸ್ಥಳದ ಮಂಜುನಾಥನ ಮೊರೆ ಹೋಗಲಿದ್ದು, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಉಪಚುನಾವಣೆ ಪೈಕಿ ಬಿಜೆಪಿ 5 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದ್ದು, ಉಳಿದಂತೆ ಪಕ್ಷೇತರ ಅಭ್ಯರ್ಥಿಗಳ ಬೆಂಬಲ ದೊರಕಿ…
ಮತಗಟ್ಟೆಗೆ ಎಣ್ಣೆ ಹೊಡೆದು ಬಂದ ಮತಗಟ್ಟೆ ಅಧಿಕಾರಿ ಅಮಾನತು!
December 6, 2019ಗೋಕಾಕ್, ಡಿ.5- ರಾಜ್ಯದ 15 ಕ್ಷೇತ್ರಗಳ ವಿಧಾನಸಭಾ ಉಪಚುನಾ ವಣೆಗೆ ಗುರುವಾರ ಮತದಾನ ನಡೆ ಯುತ್ತಿದ್ದು, ಮದ್ಯ ಸೇವಿಸಿ ಬಂದಿದ್ದ ಮತಗಟ್ಟೆ ಅಧಿಕಾರಿಯೊಬ್ಬನನ್ನು ಅಮಾ ನತು ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೂ ಮುನ್ನ ಬುಧವಾರ ಈ ಘಟನೆ ನಡೆದಿದೆ. ಗೋಕಾಕ್ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 231ಕ್ಕೆ ಮತಗಟ್ಟೆ ಅಧಿಕಾರಿಯಾಗಿ ನೇಮಕ ವಾಗಿದ್ದ ಶಿಕ್ಷಕ ಪ್ರಕಾಶ ನಾಸಿಪುಡಿ ಅಮಾ ನತಾಗಿದ್ದಾರೆ. ಮದ್ಯ ಸೇವಿಸಿ ಬಂದ ಶಿಕ್ಷಕನನ್ನು ವೈದ್ಯರು ತಪಾಸಣೆಗೆ ಕರೆ…
ಮೈಸೂರು ಜಿಲ್ಲೆಯಲ್ಲಿ ಡಿ.2ರಿಂದ 10ರವರೆಗೆ ಇಂದ್ರಧನುಷ್ ಅಭಿಯಾನ: 3 ದಿನಗಳಲ್ಲಿ 1,366 ಮಕ್ಕಳು, 392 ಗರ್ಭಿಣಿಯರಿಗೆ ರಕ್ಷಣಾ ಲಸಿಕೆ
December 6, 2019ಮೈಸೂರು, ಡಿ.5(ಪಿಎಂ)- ಮೈಸೂರು ಜಿಲ್ಲೆಯಲ್ಲಿ ಆರಂಭಗೊಂಡಿರುವ ಇಂದ್ರ ಧನುಷ್ ಅಭಿಯಾನದಡಿ ಮೂರು ದಿನಗಳಲ್ಲಿ 1,366 ಮಕ್ಕಳು ಹಾಗೂ 392 ಗರ್ಭಿಣಿಯರಿಗೆ ರಕ್ಷಣಾ ಚುಚ್ಚುಮದ್ದು ನೀಡಲಾಗಿದೆ. ರಕ್ಷಣಾ ಲಸಿಕೆಗಳಿಂದ ವಂಚಿತರಾಗುವ ಗರ್ಭಿಣಿ ಯರು ಹಾಗೂ ಮಕ್ಕಳನ್ನು ಗುರುತಿಸಿ ಲಸಿಕೆ ನೀಡುವ ಅಭಿಯಾನ ಇದಾಗಿದೆ. ಕೇಂದ್ರ ಸರ್ಕಾರದ ಮಿಷನ್ ಇಂದ್ರಧನುಷ್ ಅಭಿಯಾನ ಮೈಸೂರು ಜಿಲ್ಲೆಯಲ್ಲಿ ಇದೇ ಡಿಸೆಂಬರ್ನಿಂದ 2020ರ ಮಾರ್ಚ್ವರೆಗೆ ಪ್ರತಿ ತಿಂಗಳು 7 ದಿನಗಳು ನಡೆಯಲಿದೆ. ಈ ಪೈಕಿ ಡಿಸೆಂಬರ್ನ ಮೊದಲ ಸುತ್ತಿಗೆ ಡಿ.2ರಂದು ಚಾಲನೆ ನೀಡಲಾಗಿದೆ. ಮೊದಲ…










