ಬೆಂಗಳೂರು,ಸೆ.14(ಕೆಎಂಶಿ)-ವಿಶ್ವವಿಖ್ಯಾತ ದಸರಾಗೆ ಕೇಂದ್ರದ ಪ್ರಮುಖ ಸಚಿವರನ್ನು ಆಹ್ವಾನಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸ್ಥಳೀಯ ಶಾಸಕರಿಗೆ ಇಂದಿಲ್ಲಿ ಸೂಚಿಸಿದ್ದಾರೆ. ಮೈಸೂರು ದಸರಾಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಉಸ್ತು ವಾರಿ ಸಚಿವ ಸೋಮಣ್ಣ, ಮಾಜಿ ಸಚಿವ ಜಿ.ಟಿ.ದೇವೇಗೌಡ ಮತ್ತು ಸ್ವಾಗತ ಸಮಿತಿಯ ಶಾಸಕರು, ಪದಾಧಿಕಾರಿಗಳು ಇಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಮೈಸೂರು ದಸರಾಕ್ಕೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ದಸರಾ ಸಿದ್ಧತೆ ಬಗ್ಗೆ ಸಮಿತಿ ಯಿಂದ ಮಾಹಿತಿ ಪಡೆದ ಮುಖ್ಯಮಂತ್ರಿಯವರು, ಕಾವೇರಿ ಜಲಾನಯನ ಭಾಗದ ಜಲಾಶಯಗಳು…
ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ
September 15, 2019ಬೆಂಗಳೂರು, ಸೆ.14(ಕೆಎಂಶಿ)- ಕನ್ನಡಿಗರ ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಬ್ಯಾಂಕಿಂಗ್ (ಐಬಿಪಿಎಸ್)ಪರೀಕ್ಷೆಯಲ್ಲಿ ಕನ್ನಡ ಸೇರಿ 19 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವ ಕಾಶ ಕಲ್ಪಿಸಿದೆ. ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಯನ್ನು ಕನ್ನಡ ಸೇರಿದಂತೆ 19 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಬೇಕೆಂದು ಕೇಂದ್ರ ಹಣ ಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕ್ ಅಧಿಕಾರಿಗಳಿಗೆ ಟ್ವೀಟ್ ಮೂಲಕ ಸೂಚನೆ ಕೊಟ್ಟಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಷ್ಟ್ರೀಕೃತ ಬ್ಯಾಂಕುಗಳ ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಪ್ರಾದೇ ಶಿಕ ಭಾಷೆಗಳಲ್ಲಿ…
ಡ್ರಂಕ್ ಅಂಡ್ ಡ್ರೈವ್ ದಂಡ ಕಡಿಮೆಯಾಗಲ್ಲ
September 15, 2019ನವದೆಹಲಿ,ಸೆ.14-ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದರೆ ವಿಧಿಸುವ ದಂಡದ ಮೊತ್ತವನ್ನು ಕಡಿಮೆ ಮಾಡದಂತೆ ಸಾರ್ವಜನಿಕರಿಂದ ಅಭಿಪ್ರಾಯ ಬಂದಿದೆ. ಈ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾ ಡಿದ ಅವರು, ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರು ಹಾಗೂ ಸವಾರರ ಮೇಲೆ ವಿಧಿಸುವ ದಂಡವನ್ನು ಕಡಿಮೆ ಮಾಡಲಾಗುವುದು. ಈ ವಿಚಾರವಾಗಿ ಪ್ರಕ್ರಿಯೆ ನಡೆದಿದ್ದು, 3 ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ. ಬಳಿಕ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದರು….
ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಸಜ್ಜು
September 15, 2019ಬೆಂಗಳೂರು, ಸೆ.14(ಕೆಎಂಶಿ)- ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆಯ ವಿಳಂ ಬಕ್ಕೆ ಬೇಸತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯನವರು ಶಾಸಕಾಂಗ ಸಭೆ ಕರೆಯುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಸಮಾಲೋಚನೆಗೆಂದು ಪಕ್ಷದ ವರಿಷ್ಠರು ದೆಹಲಿಗೆ ಆಹ್ವಾನ ನೀಡಿದ್ದರೂ, ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪ್ರತಿ ಪಕ್ಷದ ಸ್ಥಾನ ಪಡೆಯಲು ಸಿದ್ದರಾಮಯ್ಯ ವಿಧಾನ ಪರಿಷತ್ತಿನ ಕೆಲವು ಸದಸ್ಯರನ್ನು ಮುಂದಿಟ್ಟು ಕೊಂಡು ದೆಹಲಿಯಲ್ಲಿ ಸೋನಿಯಾಗಾಂಧಿ ಯವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಸೇರಿದಂತೆ ಕೆಲವು ಮುಖಂಡರನ್ನು ಭೇಟಿ ಮಾಡಿದ್ದರು….
ಡಿಕೆಶಿ ಆರೋಗ್ಯದಲ್ಲಿ ಮತ್ತೆ ಏರುಪೇರು: ಆಸ್ಪತ್ರೆಗೆ ದಾಖಲು
September 15, 2019ನವದೆಹಲಿ, ಸೆ.14-ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ವಶದಲ್ಲಿ ರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ಏರು ಪೇರಾಗಿದ್ದು, ಅವ ರನ್ನು ದೆಹಲಿಯ ಆರ್ಎಂಎಲ್ ಆಸ್ಪ ತ್ರೆಗೆ ದಾಖಲಿಸಲಾಗಿದೆ. ಶಿವಕುಮಾರ್ ಅವರ ಪತ್ನಿ ಉಷಾ, ಪುತ್ರಿಯರಾದ ಐಶ್ವರ್ಯಾ ಮತ್ತು ಆಭರಣ ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಶಿವಕುಮಾರ್ ಅವರ ಜೊತೆ ಕುಟುಂಬಸ್ಥರು 15 ನಿಮಿಷ ಮಾತುಕತೆ ನಡೆಸಿದರು. ಹೆಚ್ಚಿನ ರಕ್ತ ದೊತ್ತಡ ಮತ್ತು ಜ್ವರದಿಂದ ಬಳಲುತ್ತಿ ರುವ ಶಿವಕುಮಾರ್ ಅವರಿಗೆ…
ಕೆಟ್ಟಿರುವ ಮೈಸೂರು ಅರಮನೆಯ 18 ಸಾವಿರ ಬಲ್ಬ್ ಬದಲಾವಣೆ ಕಾರ್ಯ ಆರಂಭ
September 15, 2019ಮೈಸೂರು,ಸೆ.14(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಅಳವಡಿಸಿರುವ ವಿದ್ಯುತ್ ಬಲ್ಬ್ಗಳಲ್ಲಿ ಕೆಟ್ಟಿದ್ದ 18 ಸಾವಿರ ಬಲ್ಬ್ಗಳನ್ನು ಬದ ಲಿಸುವ ಕಾರ್ಯ ಭರದಿಂದ ಸಾಗಿದೆ. ಅರಮನೆ ಸಿಬ್ಬಂದಿಗಳು ಒಳಗೊಂಡಂತೆ ಎಲೆಕ್ಟ್ರಿಷಿ ಯನ್ಗಳು ಬಲ್ಬ್ ಬದಲಿಸುವ ಕಾರ್ಯದಲ್ಲಿ ತೊಡ ಗಿದ್ದು, ಮುಂದಿನ 10 ದಿನದೊಳಗೆ ಕೆಟ್ಟಿರುವ ಎಲ್ಲಾ ಬಲ್ಬ್ಗಳನ್ನು ಬದಲಿಸಲಾಗುತ್ತದೆ. ಅರಮನೆ ಮುಖ್ಯ ಕಟ್ಟಡ, ಪ್ರವೇಶ ದ್ವಾರ, ವಿವಿಧ ಗೋಡೆ ಮೇಲೆ ಅಳ ವಡಿಸಿರುವುದೂ ಸೇರಿದಂತೆ ಒಟ್ಟು ಒಂದು ಲಕ್ಷ ಬಲ್ಬ್ಗಳ ಬೆಳಕು ಝಗಮಗಿಸಿ ಅರಮನೆ…
ದಸರಾ ಅಂಗವಾಗಿ ‘ಫಿಟ್ ಇಂಡಿಯಾ’ ಪರಿಕಲ್ಪನೆಯಡಿ ಯೋಗಾಸನ
September 15, 2019ಮೈಸೂರು, ಸೆ.14(ಎಂಕೆ)- ದಸರಾ ಅಂಗವಾಗಿ ‘ಫಿಟ್ ಇಂಡಿಯಾ’ ಪರಿ ಕಲ್ಪನೆಯಲ್ಲಿ ಮೈಸೂರಿಗರನ್ನು ಫಿಟ್ ಆಗಿಸಲು ವಿವಿಧ ಯೋಗಾಸನ ಪ್ರಕಾರ ಗಳನ್ನು ಆಯೋಜಿಸಲಾಗಿದೆ. ಸಾಂಸ್ಕøತಿಕ, ಪಾರಂಪರಿಕ, ಸ್ವಚ್ಛ ಮೈಸೂರನ್ನು ಆರೋಗ್ಯ ಮೈಸೂರ ನ್ನಾಗಿಸುವ ನಿಟ್ಟಿನಲ್ಲಿ ದಸರಾ ಆಚರಣೆ ವೇಳೆ ಹಮ್ಮಿಕೊಳ್ಳುವ ಯೋಗ ದಸರಾ ಕಾರ್ಯಕ್ರಮದಲ್ಲಿ ಯೋಗ ನೃತ್ಯ ರೂಪಕ, ಯೋಗ ವಾಹಿನಿ, ಯೋಗ ಸಂಭ್ರಮ, ಯೋಗ ಸರಪಳಿ, ಸ್ವಚ್ಛ ಸರ್ವೇಕ್ಷಣಾ ಯೋಗದಂತಹ ಬಗೆ ಬಗೆಯ ಕಾರ್ಯ ಕ್ರಮಗಳನ್ನು ರೂಪಿಸಲಾಗಿದೆ. ಸೆ.30 ರಂದು ಯೋಗ ದಸರಾ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಕಳೆದ…
ದಸರಾ ಕಾಮಗಾರಿ ಆರಂಭ
September 15, 2019ಮೈಸೂರು,ಸೆ.14(ಎಸ್ಬಿಡಿ)-ದಸರಾ ಮಹೋತ್ಸವಕ್ಕೆ ಮೈಸೂ ರನ್ನು ಸಜ್ಜುಗೊಳಿಸುವ ಕಾರ್ಯ ಇದೀಗ ಗರಿಗೆದರಿದಂತೆ ಕಾಣು ತ್ತಿದೆ. `ಮೈಸೂರು ಮಿತ್ರ’ ಸೆ.14ರ ಸಂಚಿಕೆಯಲ್ಲಿ ಮೈಸೂರಿನ ರಸ್ತೆ, ಫುಟ್ಪಾತ್ಗಳ ಅವ್ಯವಸ್ಥೆಯ ಬಗ್ಗೆ `ದಸರಾ `ಅತಿಥಿ’ಗಳಿಗೆ ಹದಗೆಟ್ಟ ರಸ್ತೆ, ಫುಟ್ಪಾತ್ ಸ್ವಾಗತ’ ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟಿಸಲಾಗಿತ್ತು. ಇದರ ಬೆನ್ನಲ್ಲೇ ಪ್ರಮುಖ ವಾಣಿಜ್ಯ ಪ್ರದೇಶ ದೇವರಾಜ ಅರಸು ರಸ್ತೆಯಲ್ಲಿ ಫುಟ್ಪಾತ್ ದುರಸ್ತಿ ಕಾರ್ಯ ಆರಂ ಭಿಸಲಾಗಿದೆ. ಸಂತೆಪೇಟೆ ರಸ್ತೆ ಕೂಡುವ ಸ್ಥಳದಲ್ಲಿ ಅಧ್ವಾನವಾಗಿದ್ದ ಪಾದಚಾರಿ ಮಾರ್ಗವನ್ನು ದುರಸ್ತಿಗೊಳಿಸುವ ಕೆಲಸ ನಡೆಯುತ್ತಿದೆ. ಚಾಮುಂಡಿಪುರಂ, ಅಗ್ರಹಾರ, ನಜರ್ಬಾದ್…
ದಸರಾ ಗಜಪಡೆ ಮಾವುತರು, ಕಾವಾಡಿಗಳ ಮಕ್ಕಳಿಗೆ ಟೆಂಟ್ ಶಾಲೆ ಆರಂಭ
September 15, 2019ಮೈಸೂರು, ಸೆ.14(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವದ ಗಜಪಡೆಯೊಂದಿಗೆ ವಿವಿಧ ಆನೆ ಶಿಬಿರದಿಂದ ಆಗಮಿಸಿ ಅರಮನೆ ಆವರಣ ದಲ್ಲಿ ಬೀಡುಬಿಟ್ಟಿರುವ ದಸರಾ ಆನೆಗಳ ಮಾವು ತರು, ಕಾವಾಡಿಗಳ ಮಕ್ಕಳಿಗಾಗಿ ಶಿಕ್ಷಣ ಇಲಾಖೆ ತೆರೆದಿರುವ ಟೆಂಟ್ ಶಾಲೆಯನ್ನು ಶನಿವಾರ ಶಾಸಕ ಎಸ್.ಎ.ರಾಮದಾಸ್ ಉದ್ಘಾಟಿಸಿದರು. ಮಾವುತರು ಹಾಗೂ ಕಾವಾಡಿಗಳು ಕುಟುಂ ಬದ ಸದಸ್ಯರನ್ನು ಜತೆಗೇ ಕರೆತಂದಿದ್ದು, ಅರಮನೆ ಆವರಣದಲ್ಲಿ ಟೆಂಟ್ಗಳಲ್ಲಿ ವಾಸಿಸುತ್ತಿದ್ದಾರೆ. 50 ದಿನಗಳ ಕಾಲ ದಸರಾ ಗಜಪಡೆಯೊಂದಿಗೆ ಅರಮನೆ ಅಂಗಳದಲ್ಲೇ ಇರುವ ಮಕ್ಕಳು ಶಿಕ್ಷಣ ದಿಂದ ವಂಚಿತರಾಗುವುದನ್ನು ತಡೆಗಟ್ಟಲು ಕಳೆದ…
ದಸರಾ ಚಲನಚಿತ್ರ ಕಾರ್ಯಾಗಾರಕ್ಕೆ ನೋಂದಣಿ ಆರಂಭ
September 15, 2019ಮೈಸೂರು,ಸೆ.14- ಮೈಸೂರು ದಸರಾ ಚಲನಚಿತ್ರೋತ್ಸವ ಉಪಸಮಿತಿ ವತಿ ಯಿಂದ ಚಲನಚಿತ್ರ ತಯಾರಿಕೆಯಲ್ಲಿ ಕಥೆ ಮತ್ತು ಚಿತ್ರಕಥೆ ಬಗ್ಗೆ 3 ದಿನಗಳ ಕಾರ್ಯಾ ಗಾರವನ್ನು ಆಯೋಜಿಸಲಾಗಿದ್ದು, ಕಾರ್ಯಾಗಾರಕ್ಕೆ ಸೆ.15ರಿಂದ ನೋಂದಣಿ ಆರಂಭಿಸಲಾಗಿದೆ ಎಂದು ಚಲನಚಿತ್ರ ಉಪ ಸಮಿತಿ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಕಾರ್ಯಾಗಾರವು ಸೆ.20ರಿಂದ 22ರವರೆಗೆ 3 ದಿನಗಳ ಕಾಲ ಮೈಸೂರು ವಿವಿ ವಿಜ್ಞಾನ ಭವನದಲ್ಲಿ ನಡೆಯಲಿದೆ. ಕನ್ನಡದ ಹೆಸರಾಂತ ಚಲನಚಿತ್ರ ನಿರ್ದೇಶಕರಾದ ಪಿ.ಶೇಷಾದ್ರಿ, ಲಿಂಗದೇವರು, ಜೋಗಿಯವರು, ಬಿ.ಸುರೇಶ್ ಹಾಗೂ ಹೆಸರಾಂತ ಚಲನಚಿತ್ರ ತರಬೇತಿ ಸಂಸ್ಥೆಗಳ ಪರಿಣತ ಸಂಪನ್ಮೂಲ ವ್ಯಕ್ತಿಗಳು…










