ನಂಜನಗೂಡು, ಸೆ. 9(ರವಿ)- ತನ್ನ ಎರಡು ಮರಿಗಳೊಂದಿಗೆ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ತಾಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದ್ದು, ಈ ಚಿರತೆಗಳನ್ನು ದುಷ್ಕರ್ಮಿಗಳು ವಿಷವಿಕ್ಕಿ ಕೊಂದಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಹಲ್ಲರೆ ಗ್ರಾಮದ ಮಹಮದ್ ಪಾಷಾ ಮತ್ತು ಚೆನ್ನನಂಜಪ್ಪ ಅವರ ಜಮೀನು ಬಳಿ ನಾಲ್ಕು ವರ್ಷದ ಚಿರತೆ ಮತ್ತು ಅದರ 3ರಿಂದ 6 ತಿಂಗಳ ಎರಡು ಮರಿಗಳು ಸತ್ತು ಬಿದ್ದಿರುವುದು ಇಂದು ಬೆಳಿಗ್ಗೆ ಗ್ರಾಮಸ್ಥರಿಗೆ ಕಂಡುಬಂದಿದೆ. ಈ ಚಿರತೆಗಳು ಭಾನುವಾರ ತಡರಾತ್ರಿ ಆಹಾರ ಅರಸಿಕೊಂಡು ಗ್ರಾಮಕ್ಕೆ ಬಂದಾಗ ವಿಷಾಹಾರ…
ಬೆಂಗಳೂರಿಗೆ ಸೋಮವಾರ `ಐವರು ಪೊಲೀಸ್ ಆಯುಕ್ತರು’!
September 10, 2019ಬೆಂಗಳೂರು, ಸೆ. 9- ವಿವಿಧ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಐವರು ಚಿಣ್ಣರು ಒಂದು ದಿನದ ಮಟ್ಟಿಗೆ ಬೆಂಗಳೂರು ನಗರ ಪೊಆಯುಕ್ತರಾಗಿ ಸೋಮವಾರ ಅಧಿಕಾರ ಸ್ವೀಕರಿಸುವ ಮೂಲಕ ತಮ್ಮ ಜೀವಿತದ ಆಸೆಯ ಕನಸನ್ನು ನನಸು ಮಾಡಿಕೊಂಡರು. ರುತನ್ ಕುಮಾರ್ (8), ಮಹಮದ್ ಶಕೀಬ್ (10), ಅರ್ಷಾಥ್ ಪಾಷಾ (7), ಶ್ರಾವಣಿ ಬಂಟ್ಟಾಳ (8), ಸಯ್ಯದ್ ಇಮಾದ್ (5) ಸೇರಿ ಐವರು ಚಿಣ್ಣರನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕೈ ಕುಲುಕುವ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ,…
ಚಂದ್ರಯಾನ-2, ‘ಆರ್ಬಿಟರ್’ ಜೀವಿತಾವಧಿ 7 ವರ್ಷಗಳು
September 10, 2019ಬೆಂಗಳೂರು,ಸೆ.9-ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಚಂದ್ರಯಾನ-2 ಯೋಜನೆ ಕೊನೆ ಕ್ಷಣದಲ್ಲಿ ವಿಫಲ ವಾದ ನಂತರ ಇಸ್ರೋ ಸಂಸ್ಥೆಯ ಮುಂದಿನ ಯೋಜನೆಯೇನು ಎಂಬ ಬಗ್ಗೆ ಸಂಸ್ಥೆ ಅಧ್ಯಕ್ಷ ಕೆ. ಶಿವನ್ ಮಾತನಾಡಿದ್ದಾರೆ. ಕೊನೆ ಕ್ಷಣದಲ್ಲಿ ಆದ ತಪ್ಪೇನು?: ಚಂದ್ರಯಾನ-2ರ ನಾಲ್ಕು ಮೂಲ ಹಂತಗಳಲ್ಲಿ ಮೊದಲ ಮೂರು ಹಂತಗಳು ಯಶಸ್ವಿ ಯಾಗಿದ್ದವು. ಕೊನೆ ಹಂತದಲ್ಲಿ ಸಂಪರ್ಕ ಕಳೆದುಕೊಂಡು ಸಂವಹನವನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ. ಲ್ಯಾಂಡರ್ ಮತ್ತು ಆರ್ಬಿಟರ್ ಮಧ್ಯೆ ಸಂವಹನ ಕೊಂಡಿ ಇರಬೇಕಾಗುತ್ತದೆ. ಮುಂದಿನ 14 ದಿನಗಳ ಕಾಲ…
ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಹೆಚ್ಚುವರಿಯಾಗಿ ನೀಡಿದ್ದ 10 ಸಾವಿರ ಕೋಟಿ ಅನುದಾನ ಕಟ್
September 10, 2019ಬೆಂಗಳೂರು,ಸೆ.9(ಕೆಎಂಶಿ)- ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿ ಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಹೆಚ್ಚುವರಿಯಾಗಿ ನೀಡಿದ್ದ ಸುಮಾರು 10 ಸಾವಿರ ಕೋಟಿ ರೂ.ಗಳ ಅನುದಾನವನ್ನು ಹಿಂಪಡೆಯಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ, ಅದರಲ್ಲೂ ಕೆಲವು ಕ್ಷೇತ್ರಗಳ ಮೇಲೆ ತೋರಿದ್ದ ವಿಶೇಷ ಪ್ರೀತಿಗೆ ಕತ್ತರಿ ಹಾಕಲು ಯಡಿಯೂರಪ್ಪ ಮುಂದಾಗಿದ್ದಾರೆ. ಈ ಕುರಿತು ಈಗಾಗಲೇ ಉನ್ನತ ಮಟ್ಟದ ಸಭೆ ನಡೆಸಿರುವ ಸಿಎಂ ಯಡಿಯೂರಪ್ಪ, ಅಭಿವೃದ್ಧಿ ಕಾರ್ಯಗಳಿಗೆ…
ಖದೀಮನ ಸೆರೆ: 15 ಲಕ್ಷ ರೂ. ಮೌಲ್ಯದ 12 ದ್ವಿಚಕ್ರ ವಾಹನ ವಶ
September 10, 2019ಮೈಸೂರು,ಸೆ.9(ಆರ್ಕೆ)- ಖದೀಮ ನೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀ ಸರು, 15 ಲಕ್ಷ ರೂ. ಮೌಲ್ಯದ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್.ಡಿ.ಕೋಟೆ ತಾಲೂಕಿನ ಆಲನ ಹಳ್ಳಿ ಗದ್ದಿಗೆ ನಿವಾಸಿ ಲೇಟ್ ಸುಂದರ ಮೂರ್ತಿ ಅವರ ಮಗ ಕುಮಾರ್(24) ಬಂಧಿತ ಆರೋಪಿಯಾಗಿದ್ದು, ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ಮೈಸೂರಿನ ಹೂಟಗಳ್ಳಿ ಎಸ್ಆರ್ಎಸ್ ಕಾಲೋನಿಯ ಕೆಇಬಿ ಕಚೇರಿ ಎದುರು ಸೆಪ್ಟಂಬರ್ 5 ರಂದು ಖದೀಮ ಪೊಲೀ ಸರಿಗೆ ಸಿಕ್ಕಿಬಿದ್ದಿದ್ದಾನೆ. ಮೈಸೂರು ಜಿಲ್ಲೆ ಹಾಗೂ ಬೆಂಗಳೂರು ನಗರದ ವಿವಿಧೆಡೆ ದ್ವಿಚಕ್ರ ವಾಹನಗಳನ್ನು…
ಮೈಸೂರು ಪಾಲಿಕೆ ಕಚೇರಿಗೆ ರಾಮದಾಸ್ ದಿಢೀರ್ ಭೇಟಿ
September 10, 2019ಮೈಸೂರು,ಸೆ.9(ಎಸ್ಪಿಎನ್)- ಮೈಸೂರು ಮಹಾ ನಗರಪಾಲಿಕೆಯ ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣಾ ವಿಭಾಗಕ್ಕೆ ಸೋಮವಾರ ದಿಢೀರ್ ಭೇಟಿ ನೀಡಿದ ಶಾಸಕ ಎಸ್.ಎ.ರಾಮದಾಸ್, ಕಾರ್ಯಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅವರು, ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಸರ್ಕಾರದಿಂದ ಉಚಿತವಾಗಿ ಪ್ರಮಾಣ ಪತ್ರಗಳನ್ನು ನೀಡಬೇಕು ಎಂದಿದ್ದರೂ ಜನತೆಗೆ ಮಾತ್ರ ಉಚಿತವಾಗಿ ಲಭ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಉಚಿತವಾಗಿ ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಿಸುವಂತೆ…
ದೇಶದ ಭವಿಷ್ಯದಲ್ಲಿ ಬಹು ದೊಡ್ಡ ಪಾತ್ರ ವಹಿಸಲಿರುವ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ
September 10, 2019ಮೈಸೂರು, ಸೆ.9(ಆರ್ಕೆಬಿ)- ಪ್ರಧಾನ ಮಂತ್ರಿ ನರೇಂದ್ರ ಮೋದಿ ಪರಿಚಯಿಸಿ ರುವ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ ಶೀಲತೆ ನಮ್ಮ ದೇಶದ ಭವಿಷ್ಯದಲ್ಲಿ ಬಹು ದೊಡ್ಡ ಪಾತ್ರ ವಹಿಸಲಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ.ಮಹೇಂದ್ರನಾಥ್ ಪಾಂಡೆ ಇಂದಿಲ್ಲಿ ಅಭಿಪ್ರಾಯಪಟ್ಟರು. ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣಾ ಇಲಾಖೆ, ಆಡ ಳಿತ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವಾಲಯವು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಹೇಮಾವತಿ ಸಭಾಂ ಗಣದಲ್ಲಿ…
ಜೀವನವನ್ನು ಸಮಾಜಕ್ಕೆ ಮುಡಿಪಾಗಿಟ್ಟ ಎಂ.ವೆಂಕಟಕೃಷ್ಣಯ್ಯ
September 10, 2019ಮೈಸೂರು, ಸೆ.9- ವೃದ್ಧಪಿತಾಮಹ, ದಯಾಸಾಗರ, ಶಿಕ್ಷಣತಜ್ಞ ಎಂ.ವೆಂಕಟಕೃಷ್ಣಯ್ಯನವರ (ತಾತಯ್ಯ) ಜನ್ಮದಿನಾಚರಣೆಯನ್ನು ನಗರದ ಸಮರ್ಪಣಾ ಶೈಕ್ಷಣಿಕ ಮತ್ತು ದಾನದತ್ತಿ ಸಂಸ್ಥೆಯ ವತಿಯಿಂದ ತಾತಯ್ಯನವರ ಉದ್ಯಾನವನದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಮರಿದಂಡಯ್ಯ ಬುದ್ಧ, ತಾತಯ್ಯನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಗೌರವ ಸೂಚಿಸಿ ಮಾತನಾಡಿ, ಎಂ.ವೆಂಕಟ ಕೃಷ್ಣಯ್ಯನವರು ತಮ್ಮ ಜೀವನವನ್ನು ಸಮಾಜಕ್ಕೆ ತ್ಯಾಗ ಮಾಡಿದ ಮಹಾನ್ ಚೇತನ. ಶೈಕ್ಷಣಿಕ ಹಾಗೂ ಸಾಮಾ ಜಿಕವಾಗಿ ಅವರ ಕೊಡುಗೆ ಅಪಾರ ಎಂದರು. ಸಮಾಜದಲ್ಲಿ ತುಳಿತಕ್ಕೊಳಗಾದ…
ಶಿಕ್ಷಕರ ವರ್ಗಾವಣೆ: ಕೌನ್ಸಿಲಿಂಗ್
September 10, 2019ಮೈಸೂರು,ಸೆ.9-ಸರ್ಕಾರಿ ಪ್ರೌಢ ಶಾಲೆಯ 2018-19ನÉ ಸಾಲಿನ ಸಹ ಶಿಕ್ಷಕರ ತತ್ಸಮಾನ ವೃಂದದ ಶಿಕ್ಷಕರ ವರ್ಗಾವಣೆ ಸಂಬಂಧ ಮೈಸೂರು ವಿಭಾ ಗದ ಘಟಕದೊಳಗಿನ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹಾಗೂ ವಿಶೇಷ ಶಿಕ್ಷಕರ ಕಡ್ಡಾಯ ವರ್ಗಾ ವಣೆಗಳ ಅಂತಿಮ ಆದ್ಯತಾ ಪಟ್ಟಿಯನ್ನು ಇಲಾಖಾ ವೆಬ್ಸೈಟ್ನಲ್ಲಿ (www. schooleducation. kar.nic.in) ಪ್ರಕಟಿಸಲಾಗಿದೆ. ಸದರಿ ಪಟ್ಟಿಯಲ್ಲಿನ ಶಿಕ್ಷಕರಿಗೆ ಸ್ಥಳ ಆಯ್ಕೆಗಾಗಿ, ವಿಭಾ ಗೀಯ ಕಾರ್ಯದರ್ಶಿಗಳು ಹಾಗೂ ಪದನಿಮಿತ್ತ ಜಂಟಿನಿರ್ದೇಶಕರ ಕಚೇರಿ, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ಸಾರ್ವಜನಿಕ ಶಿಕ್ಷಣ…
ವಿವಾಹ ನಿರಾಕರಣೆ ಮಾಡಿದವರಲ್ಲ
September 10, 2019ಮೈಸೂರು,ಸೆ.9(ಆರ್ಕೆಬಿ)-ಅಕ್ಕಮಹಾದೇವಿ ದಾಂಪತ್ಯ ದೊಳಗಿರುವ ಅಧಿಕಾರ ಸಂಬಂಧದ ಬಗ್ಗೆ ಪ್ರಶ್ನೆ ಎತ್ತಿದ್ದರೆ ಹೊರತು ವಿವಾಹ ನಿರಾಕರಣೆ ಮಾಡಿದವರಲ್ಲ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ಸಬೀಹಾ ಭೂಮಿಗೌಡ ತಿಳಿಸಿದರು. ಮೈಸೂರು ಕರಾಮುವಿ ಅಧ್ಯಯನ ಮತ್ತು ಸಂಶೋ ಧನಾ ಪೀಠದ ವತಿಯಿಂದ ಕರಾಮುವಿ ಕಾವೇರಿ ಸಭಾಂ ಗಣದಲ್ಲಿ ಏರ್ಪಡಿಸಿದ್ದ `ವರ್ತಮಾನಕ್ಕೂ ಸಲ್ಲುವ ಅಕ್ಕನ ವಚನಗಳು’ ಕುರಿತ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಕ್ತಿ ಪಂಥದ ಮಾರ್ಗದಲ್ಲಿ ಸಾಗಿದ ಅಕ್ಕಮಹಾದೇವಿ ವಿವಾಹದ ನಿರಾಕರಣೆ ಮಾಡಿರ ಲಿಲ್ಲ….










