ಮೈಸೂರು,ಜು.13-‘ಪರಿಸರ ಉಳಿದರೆ ಮಾತ್ರ ಜೀವಸಂಕುಲ ಉಳಿಯಲು ಸಾಧ್ಯ’, ‘ಸ್ವಚ್ಛ ಸಮಾಜ ನಾಗರಿಕ ಸಮಾಜದ ಮುಖವಾಣಿ’. ಇದರ ಕುರಿತು ಜಾಗೃತಿ ಮೂಡಿಸುವುದೇ ನಮ್ಮ ಕಾರ್ಯಕ್ರಮದ ಉದ್ದೇಶ. ಅದಕ್ಕಾಗಿ ‘ನಾಗರಿಕ ನಡೆ ಜಾಗೃ ತಿಯ ಕಡೆ’ ಎಂಬ ಕಾರ್ಯಕ್ರಮದಡಿ ‘ಸ್ವಚ್ಛ ಸಮಾಜ, ಸ್ವಾಸ್ಥ್ಯ ಸಮಾಜ’ ಎಂಬ ಘೋಷಣೆಯೊಂದಿಗೆ ಶನಿವಾರ ಚಾಮುಂಡಿ ಬೆಟ್ಟದ ಮಡಿಲಲ್ಲಿ ಕೌಟಿಲ್ಯ ವಿದ್ಯಾಲಯದಿಂದ ಸ್ವಚ್ಛತಾ ಕಾರ್ಯಕ್ರಮ ಮತ್ತು ಸ್ವಚ್ಛತೆಯ ಬಗ್ಗೆ ಸಮೀಕ್ಷೆ ಹಾಗೂ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಮಕ್ಕಳಲ್ಲಿ ಪರಿಸರ ಕಾಳಜಿಯನ್ನು ಬೆಳೆಸುವುದು ಹಾಗೂ ನಾಗರಿಕ ನಡವಳಿ…
ವಿಶೇಷಚೇತನ ಶಾಲೆ ಮಕ್ಕಳಿಗೆ ಸಮವಸ್ತ್ರ ವಿತರಣೆ
July 14, 2019ಮೈಸೂರು, ಜು.13- ನಗರದ ಸರಸ್ವತಿಪುರಂ ನಲ್ಲಿರುವ ಸ್ವರ ಧಾರಾ ಸಂಗೀತ ಮತ್ತು ಸಾಂಸ್ಕøತಿಕ ಟ್ರಸ್ಟ್ ವತಿಯಿಂದ ಇಂದು ಚಾಮುಂಡಿ ಪುರಂನಲ್ಲಿ ರುವ ಅರುಣೋದಯ ಶಾಲೆಯ ವಿಶೇಷ ಮಕ್ಕಳಿಗೆ ಸಮವಸ್ತ್ರ (ಟೀಶರ್ಟ್) ವಿತರಿಸಲಾಯಿತು. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿ ಸಿದ್ದ ಕನ್ನಡ ಹೋರಾಟಗಾರ ಎಂ.ರಾಮೇಗೌಡರು ಜ್ಯೋತಿ ಬೆಳಗಿಸಿ ಮಾತನಾಡುತ್ತಾ, ವಿಶೇಷ ಮಕ್ಕಳ ಸರ್ವಾಂಗೀಣ ಪ್ರಗತಿಗಾಗಿ ಇಂತಹ ಸಂಸ್ಥೆಗಳು ವೈಯಕ್ತಿಕವಾಗಿ ಪಣತೊಟ್ಟು ಮುಂದೆ ಬರುವುದು ನಿಜಕ್ಕೂ ಶ್ಲಾಘನೀಯವಾದ ಕಾರ್ಯ ಎಂದು ಅಭಿಪ್ರಾಯಪಟ್ಟರು. ಸ್ವರ ಧಾರಾ ಸಂಗೀತ ಮತ್ತು ಸಾಂಸ್ಕøತಿಕ ಟ್ರಸ್ಟ್ನ…
ಕಲಾಕ್ಷೇತ್ರದ ಸಾಧನೆಗೆ ಕಠಿಣ ಪರಿಶ್ರಮ ಮುಖ್ಯ
July 14, 2019ಮೈಸೂರು, ಜು.13(ಎಸ್ಪಿಎನ್)-ಕಲಾ ಕ್ಷೇತ್ರದ ಸಾಧನೆಗೆ ಕಠಿಣ ಪರಿಶ್ರಮ ಮುಖ್ಯ. ಇಲ್ಲದಿದ್ದರೆ, ನೂರಾರು ಸಭಿಕರ ಮುಂದೆ ನೃತ್ಯ, ಸಂಗೀತ ಪ್ರದರ್ಶನ ಅಸಾಧ್ಯ ಎಂದು ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಅಭಿಪ್ರಾಯಪಟ್ಟರು. ಮೈಸೂರು ಜೆಎಲ್ಬಿ ರಸ್ತೆಯ ನಾದ ಬ್ರಹ್ಮ ಸಭಾಂಗಣದಲ್ಲಿ ಕಲಾಸಂದೇಶ ಪ್ರತಿ ಷ್ಠಾನ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ ಮೂರು ದಿನಗಳ ನೃತ್ಯೋಪಾಸನ-2019 ರಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಲೆ ಸಾಧಕರ ಸ್ವತ್ತೇ ಹೊರತು ಎಂದಿಗೂ ಸಾಧಕರಲ್ಲದವರ ಸ್ವತ್ತಲ್ಲ. ಈ ವಿಷಯದಲ್ಲಿ ಖ್ಯಾತ ಗಾಯಕಿ…
ಲೋಕ ಅದಾಲತ್ನಲ್ಲಿ 3 ಸಾವಿರಕ್ಕೂ ಅಧಿಕ ಪ್ರಕರಣ ಇತ್ಯರ್ಥ
July 14, 2019ಮೈಸೂರು, ಜು.13(ಎಸ್ಪಿಎನ್)-ಮೈಸೂರು ನಗರ ಸೇರಿದಂತೆ ತಾಲೂಕು ವ್ಯಾಪ್ತಿಯ ನ್ಯಾಯಾಲಯಗಳಲ್ಲಿ ವಿಚಾ ರಣೆ ನಡೆಯುತ್ತಿದ್ದ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾ ಲತ್ ಮೂಲಕ ವಾದಿ-ಪ್ರತಿವಾದಿಗಳ ಸಮ್ಮುಖದಲ್ಲಿ ಇತ್ಯರ್ಥಪಡಿಸಲಾಯಿತು. ಮೈಸೂರು ಹಳೇ ನ್ಯಾಯಾಲಯದ ಆವ ರಣದಲ್ಲಿ ಶನಿವಾರ ನಡೆದ ಅದಾಲತ್ ನಲ್ಲಿ ಬೆಳಗ್ಗಿನಿಂದಲೇ 50 ಬೆಂಚ್ಗಳಲ್ಲಿ ಆರಂಭಗೊಂಡ ಅದಾಲತ್ ಸಂಜೆಯವ ರೆಗೂ ನಡೆಯಿತು. ಅದಾಲತ್ಗೆ ದಾಖ ಲಾದ 11,186 ಪ್ರಕರಣಗಳಲ್ಲಿ 3322 ಪ್ರಕ ರಣಗಳು ಇತ್ಯರ್ಥಗೊಂಡು ಒಟ್ಟು 20,84, 30,551 ರೂ.ಗಳ ಪರಿಹಾರ ನೀಡಲಾಗಿದೆ. ಕಳೆದ…
ಡೆಂಗ್ಯೂ, ಚಿಕೂನ್ ಗುನ್ಯಾ ನಿಯಂತ್ರಣದ ಬಗ್ಗೆ ಜನ ಜಾಗೃತಿ
July 14, 2019ಮೈಸೂರು,ಜು.13-ಜಲಪುರಿ ಪೆÇಲೀಸ್ ಕ್ವಾರ್ಟರ್ಸ್ನ ಸುತ್ತಮುತ್ತ ಪರಿಸರ ಸ್ನೇಹಿ ತಂಡದ ವತಿಯಿಂದ ಶನಿವಾರ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ನಿಯಂತ್ರಣದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಮನೆ ಮನೆಗೆ ತೆರಳಿ ಕರಪತ್ರ ನೀಡಿ ಅರಿವು ಮೂಡಿಸ ಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಲಪುರಿ ಸರ್ಕಾರಿ ಆಸ್ಪತ್ರೆ ವೈದ್ಯೆ ಪುಷ್ಪಲತಾ ಮಾತನಾಡಿ, ಸೊಳ್ಳೆಗಳ ನಿಯಂತ್ರಣ ಮಾಡು ವಲ್ಲಿ ಸಾರ್ವಜನಿಕರ ಪಾತ್ರ ಅತೀ ಮುಖ್ಯ ವಾಗಿದೆ. ಸಾರ್ವಜನಿಕರು ಸೊಳ್ಳೆಗಳ ನಿಯಂ ತ್ರಣದಲ್ಲಿ ಮುತುವರ್ಜಿ ವಹಿಸದಿದ್ದರೆ ಸೊಳ್ಳೆ ಗಳ ನಿಯಂತ್ರಣ ಅಸಾಧ್ಯ. ಈ ಹಿನ್ನೆಲೆಯಲ್ಲಿ…
ವಿಶ್ವಾಸ ಮತಯಾಚನೆಗೆ ಸಿದ್ಧ
July 13, 2019ಬೆಂಗಳೂರು,ಜು.12(ಕೆಎಂಶಿ)-ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥವಾಗದೇ ಉಳಿದಿರುವ ಬೆನ್ನಲ್ಲೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಸ್ವಯಂ ಪ್ರೇರಿತರಗಿ ವಿಶ್ವಾಸ ಮತಯಾಚನೆ ಮಾಡುವುದಾಗಿ ಪ್ರಕಟಿಸಿ, ಪ್ರತಿಪಕ್ಷ ಬಿಜೆಪಿಯ ಸವಾಲಿಗೆ ಪ್ರತಿ ಸವಾಲು ಎಸೆದಿದ್ದಾರೆ. ಮಳೆಗಾಲದ ವಿಧಾನಸಭಾ ಅಧಿವೇಶನ ಆರಂಭದ ದಿನವೇ ಸಭಾಧ್ಯಕ್ಷ ರಮೇಶ್ ಕುಮಾರ್ ಅಗಲಿದ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಇದನ್ನು ಬೆಂಬಲಿಸಿ, ಮಾತನಾಡುವಂತೆ ನೀಡಿದ ಸಮಯವನ್ನು ಮುಖ್ಯ ಮಂತ್ರಿಯವರು ಸಮರ್ಥವಾಗಿ ಬಳಕೆ ಮಾಡಿಕೊಂಡು ವಿಶ್ವಾಸ ಮತಯಾಚನೆ ಮಾಡುವ ಮೂಲಕ ಇಡೀ ಸದನವನ್ನೇ ಹುಬ್ಬೇರಿಸುವಂತೆ ಮಾಡಿದರು. ಸಭಾಧ್ಯಕ್ಷರ ಅನುಮತಿ…
ಯಥಾಸ್ಥಿತಿ ಮುಂದುವರಿಕೆಗೆ `ಸುಪ್ರೀಂ’ ಸೂಚನೆ
July 13, 2019ಬೆಂಗಳೂರು, ಜು.12- ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರಕ್ಕೆ ಕುತ್ತು ತಂದಿದ್ದ ಅತೃಪ್ತ ಶಾಸಕರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ ನೀಡಿ, ಮಂಗಳ ವಾರಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅವರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಆರಂಭವಾಗಿದೆ. ನಿನ್ನೆ ನಡೆದ ವಿಚಾರಣೆಯಲ್ಲಿ ಸ್ಪೀಕರ್ ನಿನ್ನೆಯೇ ರಾಜೀನಾಮೆ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಬೇಕು ಮತ್ತು ಆ ಬಗ್ಗೆ ನ್ಯಾಯಾಲಯಕ್ಕೆ…
ಮೈಸೂರಿನಲ್ಲಿ ಉಪ ರಾಷ್ಟ್ರಪತಿ ದಂಪತಿ
July 13, 2019ಮೈಸೂರು, ಜು. 12(ಆರ್ಕೆ)- ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪತ್ನಿಯೊಂದಿಗೆ ಇಂದು ಸಂಜೆ ಮೈಸೂರಿಗೆ ಆಗ ಮಿಸಿದರು. ಭಾರತೀಯ ವಾಯು ಪಡೆಯ ವಿಶೇಷ ವಿಮಾನದಲ್ಲಿ ಸಂಜೆ 6.45 ಗಂಟೆಗೆ ಆಗಮಿಸಿದ ಉಪ ರಾಷ್ಟ್ರಪತಿ ದಂಪತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಮೇಯರ್ ಪುಷ್ಪಲತಾ ಜಗನ್ನಾಥ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪುಷ್ಪಗುಚ್ಛ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ಎಸ್ಪಿ ರಿಶ್ಯಂತ್,…
ನಾವೆಲ್ಲಾ ಚರ್ಚಿಸಿಯೇ ನಿರ್ಧರಿಸಿದ್ದೇವೆ: ಸಿದ್ದು
July 13, 2019ಬೆಂಗಳೂರು, ಜು.12- 16 ಶಾಸಕರ ರಾಜೀನಾಮೆ ಪ್ರಹಸನದ ಹಿನ್ನೆಲೆಯಲ್ಲಿ ವಿಶ್ವಾಸಮತ ಯಾಚನೆ ಮಾಡುವ ಮುಖ್ಯ ಮಂತ್ರಿ ಕುಮಾರಸ್ವಾಮಿ ನಿರ್ಧಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, “ನಾವೆಲ್ಲಾ ಚರ್ಚಿಸಿಯೇ ವಿಶ್ವಾಸ ಮತಯಾಚನೆಗೆ ನಿರ್ಧರಿಸಿದ್ದೇವೆ. ಬಹುಮತ ಇಲ್ಲದೇ ಸಿಎಂ ವಿಶ್ವಾಸಮತಯಾಚನೆಗೆ ಮುಂದಾಗುತ್ತಾರಾ?’’ಎಂದು ಮಾಧ್ಯಮಗಳಿಗೆ ಪ್ರತಿ ಪ್ರಶ್ನೆ ಹಾಕಿದ್ದಾರೆ. ಮುಂದುವರೆದು “ಸಿಎಂ ಯಾವ ರೀತಿ ವಿಶ್ವಾಸಮತ ಸಾಬೀತುಪಡಿಸುತ್ತಾರೆಂಬುದನ್ನು ಹೇಳುವುದಕ್ಕೆ ಆಗುತ್ತಾ?’’ ಎಂದು ಮತ್ತೆ ಕೇಳಿದ್ದಾರೆ. ಶಾಸಕರ ರಾಜೀನಾಮೆ ಕುರಿತು ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕರ ರಾಜೀನಾಮೆ ಹಾಗೂ…
ಮುಖ್ಯಮಂತ್ರಿ ಕುಮಾರಸ್ವಾಮಿಗೆ ಚಾಮುಂಡೇಶ್ವರಿ ಅನುಗ್ರಹವಿದೆ, ಸರ್ಕಾರಕ್ಕೆ ಯಾವ ತೊಂದರೆಯೂ ಇಲ್ಲ
July 13, 2019ಮೈಸೂರು,ಜು.12(ಎಂಟಿವೈ)- ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಮೇಲೆ ತಾಯಿ ಚಾಮುಂಡೇಶ್ವರಿ ದೇವಿಯ ಅನುಗ್ರಹವಿದೆ. ಈ ಹಿನ್ನೆಲೆ ಯಲ್ಲಿ ಸರ್ಕಾರಕ್ಕೆ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದು ಲೋಕೋಪ ಯೋಗಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ. ಆಷಾಢ ಮಾಸದ ಎರಡನೇ ಶುಕ್ರ ವಾರದಂದು ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆಷಾಢ ಮಾಸದ ಹಿನ್ನೆಲೆಯಲ್ಲಿ ನಾಡ ದೇವಿ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಬಂದಿದ್ದೇನೆ. ಮುಖ್ಯ ಮಂತ್ರಿ ಕುಮಾರಸ್ವಾಮಿ ಹೆಸರಿನಲ್ಲಿ…










