ಮೈಸೂರು,ಜು.10(ಪಿಎಂ)- ಮೈಸೂರು ಮಹಾರಾಜರ ಕಾಲದ ಪರಂಪರೆ ಬಿಂಬಿ ಸುವ ಆ `ಸ್ವಾಗತ ಕಮಾನು’ ಸೂಕ್ತ ನಿರ್ವಹಣೆ ಇಲ್ಲದೆ ದುಸ್ಥಿತಿಗೆ ತಲುಪಿದ್ದು, ಪಾರಂಪರಿಕ ಹಿನ್ನೆಲೆ ಹೊಂದಿದ ಅದರ ಮಹತ್ವ ಅದೇಕೊ ಸ್ಥಳೀಯ ಆಡಳಿತಕ್ಕೆ ಅರ್ಥವೇ ಆಗುತ್ತಿಲ್ಲ ಎಂಬುದನ್ನು ಅರ್ಥೈಸಿ ಕೊಳ್ಳಲು ಅದನ್ನೊಮ್ಮೆ ನೋಡಿದರೆ ಸಾಕು. ಹೌದು, ಮೈಸೂರಿನ ತಿ.ನರಸೀಪುರ ರಸ್ತೆಯ ತೂಗುದೀಪ ಶ್ರೀನಿವಾಸ ವೃತ್ತದ ಬಳಿಯಿರುವ `ಸ್ವಾಗತ ಕಮಾನು’ ನಿರ್ವ ಹಣೆ ಇಲ್ಲದೆ, ಅಳಿವಿನಂಚಿಗೆ ತಲುಪು ತ್ತಿದ್ದು, ಗಿಡ-ಗಂಟಿಗಳು ಕಮಾನಿಗೆ ಹಬ್ಬಿರುವುದು ಮಾತ್ರವಲ್ಲದೆ, ಕಮಾನಿನ ಗೋಡೆ ಯಲ್ಲೂ ಬೇರು…
ರಂಗಕರ್ಮಿ ಮುದ್ದುಕೃಷ್ಣ ದಂಪತಿ ಅಂತ್ಯಕ್ರಿಯೆ
July 11, 2019ಮೈಸೂರು,ಜು.10(ಎಂಟಿವೈ)- ಲಕ್ನೋದಲ್ಲಿ ಸಂಭವಿಸಿದ ರಸ್ತೆ ಅಪಘಾತ ದಲ್ಲಿ ಮೃತಪಟ್ಟಿದ್ದ ರಂಗಕರ್ಮಿ ಮುದ್ದು ಕೃಷ್ಣ ಹಾಗೂ ಅವರ ಪತ್ನಿ, ಸಿಎಫ್ ಟಿಆರ್ಐ ವಿಜ್ಞಾನಿ ಡಾ. ಇಂದ್ರಾಣಿ ಅವರ ಅಂತ್ಯಕ್ರಿಯೆ ಅಪಾರ ಸಂಖ್ಯೆಯ ಹಿತೈಷಿ ಗಳು ಹಾಗೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಚಾಮುಂಡಿಬೆಟ್ಟದ ತಪ್ಪಲಿ ನಲ್ಲಿರುವ ಅನಿಲ ಚಿತಾಗಾರದಲ್ಲಿ ಬುಧವಾರ ಮದ್ಯಾಹ್ನ ನೆರವೇರಿತು. ಮೈಸೂರಿನ ರಾಮಕೃಷ್ಣನಗರದಲ್ಲಿರುವ ಮುದ್ದುಕೃಷ್ಣ ಅವರ ಸ್ವಗೃಹದಿಂದ ದಂಪತಿಗಳ ಮೃತದೇಹವನ್ನು ಇಂದು ಬೆಳಿಗ್ಗೆ 9ಕ್ಕೆ ಕಲಾಮಂದಿರದ ಆವರಣ ದಲ್ಲಿರುವ ಕಿಂದರಜೋಗಿ ಪ್ರತಿಮೆ ಮುಂದೆ 11.30ರವರೆಗೂ ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು….
ಕೆಎಸ್ಆರ್ಟಿಸಿ ಅಕೌಂಟ್ಸ್ ಸೂಪರ್ವೈಸರ್ ಎಸಿಬಿ ಬಲೆಗೆ
July 11, 2019ಮೈಸೂರು,ಜು.10(ಆರ್ಕೆ)-ಬಾಕಿ ಹಣದ ಚೆಕ್ ನೀಡಲು ಬಸ್ ಚಾಲಕರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದಾಗ ಮೈಸೂರಿನ ಕೆಎಸ್ಆರ್ಟಿಸಿ ಗ್ರಾಮಾಂತರ ವಿಭಾಗದ ಡಿಪೋ ಅಕೌಂಟ್ಸ್ ಸೂಪರ್ವೈಸರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.ಮೈಸೂರಿನ ಬನ್ನಿಮಂಟಪದಲ್ಲಿರುವ ಕೆಎಸ್ಆರ್ಟಿಸಿ ಗ್ರಾಮಾಂತರ ವಿಭಾಗದ ಡಿಪೋ ಅಕೌಂಟ್ಸ್ ಸೂಪರ್ವೈಸರ್ ಮಂಜುನಾಥ್ ಎಸಿಬಿ ಬಲೆಗೆ ಬಿದ್ದವರು. ಕೆಎಸ್ಆರ್ಟಿಸಿ ಡ್ರೈವರ್ ಬಸವರಾಜು ಅವರಿಂದ 10,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ಇಂದು ಸಂಜೆ 6 ಗಂಟೆ ವೇಳೆಗೆ ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ರಶ್ಮಿ ನೇತೃತ್ವದ ಅಧಿಕಾರಿಗಳು ಮಂಜುನಾಥ್ ಅವರನ್ನು ಹಣದ ಸಮೇತ ಬಂಧಿಸಿದರು.ಬಸವರಾಜು ಅವರಿಗೆ…
ಡಾ.ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಪಂದ್ಯಾವಳಿಗೆ ಮೈಸೂರಲ್ಲಿ ಚಾಲನೆ
July 11, 2019ಮೈಸೂರು,ಜು.10(ಪಿಎಂ)- ಕರ್ನಾ ಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ವತಿಯಿಂದ ಹಮ್ಮಿಕೊಂಡಿ ರುವ ಡಾ.ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಪಂದ್ಯಾವಳಿ ಚಾಲನೆ ಪಡೆದುಕೊಂಡಿದ್ದು, ಮೈಸೂರಿನಲೂ ಪಂದ್ಯಗಳು ನಡೆಯಲಿವೆ. ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರಿಕೆಟ್ ಮೈದಾನ ಹಾಗೂ ಜೆಸಿ ಕಾಲೇಜು ಕ್ರಿಕೆಟ್ ಮೈದಾನ ದಲ್ಲಿ ಪಂದ್ಯಗಳು ಇಂದಿನಿಂದ ಆರಂಭ ಗೊಂಡಿವೆ. ಬಿಸಿಸಿಐ ಸಂಯೋಜಿತ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂ ಡಿದ್ದು, ಒಂದೊಂದು ವಲಯದಲ್ಲಿ ನಾಲ್ಕು ತಂಡಗಳು ಒಳಗೊಂಡಂತೆ ನಾಲ್ಕು ವಲಯಗಳಾಗಿ ವಿಂಗಡಿಸಿ ಪಂದ್ಯಾವಳಿ ನಡೆಸಲಾಗುತ್ತಿದೆ. ಕೆಎಸ್ಸಿಎ ಮೈಸೂರು ವಲಯದ…
ಮೈಸೂರು ಡಿಸಿ ಕಚೇರಿ ಬಳಿ ಅಂಗನವಾಡಿ ನೌಕರರ ಭಾರೀ ಪ್ರತಿಭಟನೆ
July 11, 2019ಮೈಸೂರು, ಜು.10(ಆರ್ಕೆಬಿ)- ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ-ಯುಕೆಜಿ ಪ್ರಾರಂಭಿಸಬೇಕು. ಬಾಕಿ ಗೌರವ ಧನ, ಕೋಳಿ ಮೊಟ್ಟೆ, ತರಕಾರಿ ಹಣ ಬಿಡುಗಡೆ, ಕೇಂದ್ರ ಸರ್ಕಾರದಿಂದ 2018ರ ಅಕ್ಟೋ ಬರ್ನಲ್ಲಿ ಹೆಚ್ಚಳವಾದ ಗೌರವ ಧನ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರ ಹಿಸಿ ನೂರಾರು ಅಂಗನವಾಡಿ ನೌಕರರು ಬುಧವಾರ ಮೈಸೂರು ಡಿಸಿ ಕಚೇರಿ ಬಳಿ ಧರಣಿ ನಡೆಸಿದರು. ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು)ದ ಮೈಸೂರು ಜಿಲ್ಲಾ ಸಮಿತಿ ಆಶ್ರಯ ದಲ್ಲಿ ನಡೆದ ಪ್ರತಿಭಟನೆ ವೇಳೆ ನೌಕರರು ತಮ್ಮ…
ಆಶಾ ಕಾರ್ಯಕರ್ತೆಯರ ಪ್ರತಿಭಟನಾ ಮೆರವಣಿಗೆ, ಧರಣಿ
July 11, 2019ಮೈಸೂರು, ಜು.10(ಆರ್ಕೆಬಿ)- ಆಶಾ ಕಾರ್ಯಕರ್ತೆಯರಿಗೆ ಮಾಸಿಕ ರೂ. 12,000 ನಿಗದಿಪಡಿಸಬೇಕು. ಆಶಾ ಸಾಫ್ಟ್ ಅಥವಾ ಆರ್ಸಿಎಚ್ ಪೋರ್ಟಲ್ಗೆ ಆಶಾ ವೇತನ ರದ್ದತಿ ಮತ್ತು 9 ತಿಂಗಳ ಬಾಕಿ ಎಂಸಿಟಿಎಸ್ ಪ್ರೋತ್ಸಾಹ ಧನವನ್ನು ಕೂಡಲೇ ವಿತರಿಸಬೇಕು, ಇನ್ನಿತರ ಬೇಡಿಕೆ ಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆ ಯರ ಸಂಘದ ಮೈಸೂರು ಜಿಲ್ಲಾ ಸಮಿತಿ ಆಶ್ರಯದಲ್ಲಿ ನೂರಾರು ಆಶಾ ಕಾರ್ಯ ಕರ್ತೆಯರು ಬುಧವಾರ ಮೈಸೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ…
ಬಿಜೆಪಿ ಕುತಂತ್ರ ಆರೋಪ: ಒಕ್ಕಲಿಗ ಸಂಘಟನೆಗಳ ಒಕ್ಕೂಟ ಪ್ರತಿಭಟನೆ
July 11, 2019ಸಿಎಂ ಹೆಚ್ಡಿಕೆ, ಸಚಿವ ಡಿಕೆಶಿ ಪರ ಘೋಷಣೆ ಮೈಸೂರು, ಜು.10(ಆರ್ಕೆಬಿ)- ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಇಳಿಸಲು ಕುತಂತ್ರ ನಡೆಸುತ್ತಿರುವ ಬಿಜೆಪಿ ವಿರುದ್ಧ ಒಕ್ಕಲಿಗ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಬುಧವಾರ ಮೈಸೂರು ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಪರ ಘೋಷಣೆ ಗಳನ್ನು ಕೂಗಿದ ಪ್ರತಿಭಟನಾಕಾರರು, ಬಿಜೆಪಿ ನಾಯಕರ ಒಕ್ಕಲಿಗ ವಿರೋಧಿ ಧೋರಣೆ ಯನ್ನು ಖಂಡಿಸಿದರು. ಆಪರೇಷನ್ ಹೆಸರಿನಲ್ಲಿ ಶಾಸಕರನ್ನು ಖರೀದಿಸುತ್ತಿರುವ ಬಿಜೆಪಿ ಆಪರೇಷನ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು….
ನಾಳೆ ಪಾಂಡುರಂಗ ವಿಠಲಸ್ವಾಮಿಗೆ ವಿಶೇಷ ಹೂವಿನ ಅಲಂಕಾರ
July 11, 2019ಮೈಸೂರು, ಜು.10(ಆರ್ಕೆಬಿ)- ಆಷಾಢದ ಪ್ರಥಮ ಏಕಾದಶಿ ಪ್ರಯುಕ್ತ ಮೈಸೂರಿನ ಕಬೀರ್ ರಸ್ತೆ ಪಾಂಡುರಂಗ ವಿಠಲ ಸ್ವಾಮಿ ದೇವಸ್ಥಾನದಲ್ಲಿ ಜು.12ರಂದು ವಿಶೇಷ ಹೂವಿನ ಅಲಂ ಕಾರ ಏರ್ಪಡಿಸಲಾಗಿದೆ. ಭಾವಸಾರ ಕ್ಷತ್ರಿಯ ಮಂಡಳಿ ಅಧ್ಯಕ್ಷ ಆರ್.ವಿ.ಶಿವಾಜಿರಾವ್ ರಂಪೂರೆ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಂದು ಮುಂಜಾನೆ 5 ಗಂಟೆಯಿಂದ ಪಾಂಡುರಂಗ ವಿಠಲ ಸ್ವಾಮಿಗೆ ಕಾಕಡಾರತಿ ಭಜನೆ, ವಿಶೇಷ ಹಾಲಿನ ಅಭಿಷೇಕ, ಫಲ ಪಂಚಾಮೃತ, ಅಷ್ಟೋತ್ತರ ಪೂಜೆ ಇತ್ಯಾದಿ ಪೂಜಾ ಕಾರ್ಯಗಳನ್ನು ಆಯೋಜಿಸಲಾಗಿದೆ. ಸಂಜೆ 4 ಗಂಟೆಗೆ ಭಾವಸಾರ ಕ್ಷತ್ರಿಯ ಮಹಿಳಾ ಮಂಡಳಿ…
ಸಂಸ್ಕøತ, ಸಂಸ್ಕಾರದಿಂದ ಭಾರತಕ್ಕೆ ವಿಶ್ವದಲ್ಲೇ ವಿಶೇಷ ಸ್ಥಾನ
July 11, 2019ಮೈಸೂರು, ಜು.10(ಎಂಕೆ)- ಸಂಸ್ಕøತಿ, ಸಂಸ್ಕಾರದಿಂದ ವಿಶ್ವದಲ್ಲಿಯೇ ಭಾರತ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ ಎಂದು ಕರ್ನಾಟಕ ಸಂಸ್ಕøತ ವಿವಿ ಹಂಗಾಮಿ ಕುಲಪತಿ ಪೆÇ್ರ.ವಿ.ಗಿರೀಶ್ಚಂದ್ರ ತಿಳಿಸಿದರು. ಮೈಸೂರಿನ ಕುವೆಂಪುನಗರದ ಬಂದಂತಮ್ಮ ಕಾಳಮ್ಮ ಸಮುದಾಯ ಭವನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಪತಂಜಲಿ ಯೋಗ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ‘ಯೋಗ ಜೀವನ ದರ್ಶನ-2019’ ಅಂತರರಾಷ್ಟ್ರ-ರಾಷ್ಟ್ರ-ರಾಜ್ಯ ಮಟ್ಟದ ಯೋಗ ಶಿಕ್ಷಕರ ಪ್ರಶಿಕ್ಷಣಾ ಶಿಬಿರಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಗ, ಆಯುರ್ವೇದ, ಸಂಸ್ಕøತ ನಮ್ಮ ಪರಂಪರೆಯಾಗಿದ್ದು, ದೈಹಿಕ, ಮಾನಸಿಕ ಆರೋಗ್ಯ ರಕ್ಷಣೆಗೆ…
ಅತೃಪ್ತರ ಆಟಕ್ಕೆ ಸದ್ಯಕ್ಕೆ ಸ್ಪೀಕರ್ ಬ್ರೇಕ್
July 10, 2019ಬೆಂಗಳೂರು,ಜು.9-ಜೆಡಿಎಸ್ನ ಹಿರಿಯ ನಾಯಕ ಮಾಜಿ ಸಚಿವ ಹೆಚ್.ವಿಶ್ವನಾಥ್ ಸೇರಿದಂತೆ ಎಂಟು ಶಾಸಕರು ಸಲ್ಲಿಸಿರುವ ರಾಜೀನಾಮೆ ಕ್ರಮಬದ್ಧವಿಲ್ಲ. ಕಾಂಗ್ರೆಸ್-ಜೆಡಿಎಸ್ನ 14 ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಇದನ್ನು ಅಂಗೀ ಕರಿಸುವಂತೆ ವಿಧಾನಸಭಾಧ್ಯಕ್ಷ ರಮೇಶ್ಕುಮಾರ್ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ರಾಜೀ ನಾಮೆ ಪತ್ರಗಳಿಗೆ ಸಂಬಂಧಿಸಿದಂತೆ ಸಭಾಧ್ಯಕ್ಷರು ನಿನ್ನೆ ಸಂಜೆ ವಿಧಾನಸಭೆಯ ಕಾರ್ಯಾಲಯದ ಅಧಿ ಕಾರಿಗಳು ಮತ್ತು ಕಾನೂನು ತಜ್ಞರೊಟ್ಟಿಗೆ ಸಮಾಲೋಚನೆ ನಡೆಸಿದರು. ಇಂದು ರಾಜೀನಾಮೆ ನೀಡಿದ ಪತ್ರಗಳನ್ನು ಕೂಲಂಕುಶವಾಗಿ ಪರಿಶೀಲನೆ ಮಾಡುವ ಸಂದರ್ಭದಲ್ಲೇ ಕೆಪಿಸಿಸಿ ರಾಜೀ ನಾಮೆ ನೀಡಿ…










