ಮೈಸೂರು: ಪವಿತ್ರ ರಂಜಾನ್ ಹಬ್ಬದ ಒಂದು ತಿಂಗಳ ಉಪ ವಾಸದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುವುದರ ಜತೆಗೆ ಆರೋಗ್ಯ ವೃದ್ಧಿ ಯಾಗುತ್ತದೆ ಎಂದು ಮೈಸೂರು ವಿವಿ ಫುಡ್ ಸೈನ್ಸ್ ಅಂಡ್ ನ್ಯೂಟ್ರಿಷನ್ ಅಧ್ಯ ಯನ ವಿಭಾಗದ ನಿರ್ದೇಶಕಿ ಪ್ರೊ.ಅಸ್ನ ಉರೂಜ್ ಹೇಳಿದರು. ಮಾನಸಗಂಗೋತ್ರಿಯ ಫುಡ್ ಸೈನ್ಸ್ ಅಂಡ್ ನ್ಯೂಟ್ರಿಷನ್ ಅಧ್ಯಯನ ವಿಭಾ ಗದ ವತಿಯಿಂದ ಆಯೋಜಿಸಿದ್ದ ‘ರಂಜಾನ್ ಸಮಯದಲ್ಲಿ ಉಪವಾಸದ ಸಂಶೋ ಧನಾ ಅಧ್ಯಯನ’ ಕುರಿತ ಉಪನ್ಯಾಸದಲ್ಲಿ ಮಾತನಾಡಿದ ಅವರು, ದಿನದ 4 ರಿಂದ 14 ಗಂಟೆ…
ಬಡವರ ಕಣ್ಣೀರೊರೆಸುವುದೇ ವಕೀಲಿಕೆಯ ಮುಖ್ಯ ಗುರಿಯಾಗಬೇಕು
June 23, 2019ಮೈಸೂರು,ಜೂ.22(ವೈಡಿಎಸ್)-ಪುರಾತನ ಕಾಲ ಅಥವಾ ಸ್ವತಂತ್ರ ಭಾರತದಲ್ಲೇ ಗಮನಿಸಿದರೂ ವಕೀಲರ ಪಾತ್ರ ಮುಖ್ಯವಾಗಿದ್ದು, ತಮ್ಮ ಬಳಿ ಬರುವ ಬಡವರ ಕಣ್ಣೀರೊರೆಸುವುದೇ ವಕೀಲಿಕೆಯ ಮುಖ್ಯ ಗುರಿಯಾಗಬೇಕು ಎಂದು ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಂಕ್ರಯ್ಯ ಬಿ.ವಸ್ತ್ರದ್ಮಠ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕುವೆಂಪುನಗರದ ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 12ನೇ ಪದವೀಧರರ ದಿನಾಚರಣೆಯಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ವಕೀಲರಾದವರು ತಮ್ಮದೇಯಾದ ಇತಿ-ಮಿತಿಯಲ್ಲಿ ಕೆಲಸ ಮಾಡಬೇಕಾಗು ತ್ತದೆ. ವಕೀಲರೆಂದು ಏನನ್ನಾದರೂ ಮಾಡಲು ಹೋದರೆ ಸಮಾಜ ನಿಮ್ಮನ್ನು ಅನುಮಾನ ದಿಂದ…
ಪಕ್ಷವೊಂದರ ಮುಖಂಡನೆಂದು ಹೇಳಿಕೊಂಡು ಮಹಿಳೆಯ ಸುಲಿಗೆ ಮಾಡಿದ್ದವನ ಬಂಧನ
June 23, 2019ಮೈಸೂರು, ಜೂ.22(ಎಸ್ಬಿಡಿ)-ಪರಿ ಚಯಸ್ಥ ಮಹಿಳೆಯನ್ನು ಲಾಡ್ಜ್ಗೆ ಕರೆಸಿ ಕೊಂಡು ಚಿನ್ನಾಭರಣ ಕಿತ್ತುಕೊಂಡಿದ್ದ ಆರೋಪದಡಿ ಪೊಲೀಸರು ಬಂಧಿಸಿ ರುವ ಶಿರಸಿ ಮೂಲದ ಕೀರ್ತಿ ಹೆಗಡೆ ಪಕ್ಷ ವೊಂದರ ಮುಖಂಡನೆಂದು ಹೇಳಿಕೊಂಡು ವಂಚಿಸಿದ್ದಾನೆಂದು ಹೇಳಲಾಗುತ್ತಿದೆ. ರಾಜಕೀಯ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದ ಮಹಿಳೆಯೊಬ್ಬರನ್ನು ಮೈಸೂರಿನ ಕೆ.ಟಿ.ಸ್ಟ್ರೀಟ್ನಲ್ಲಿರುವ ಲಾಡ್ಜ್ಗೆ ಕರೆಸಿಕೊಂಡಿದ್ದ ಕೀರ್ತಿ ಹೆಗಡೆ, ಸುಮಾರು 1.30 ಲಕ್ಷ ಮೌಲ್ಯದ ಚಿನ್ನಾ ಭರಣವನ್ನು ಹೆದರಿಸಿ ಸುಲಿಗೆ ಮಾಡಿದ್ದ. ಈ ಸಂಬಂಧ ವಂಚನೆಗೊಳಗಾದ ಮಹಿಳೆ ದೂರು ನೀಡಿದ 24 ಗಂಟೆಯಲ್ಲೇ ಲಷ್ಕರ್ ಠಾಣೆ ಪೊಲೀಸರು…
ಲೋಕಸಭೆಯಲ್ಲಿ ಮತ್ತೆ ತ್ರಿವಳಿ ತಲಾಖ್ ಮಸೂದೆ ಮಂಡನೆ
June 22, 2019ನವದೆಹಲಿ: ನಿರೀಕ್ಷೆ ಯಂತೆಯೇ ಇಂದು ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಮಂಡಿಸಲಾಗಿದ್ದು, ಸರ್ಕಾರದ ತಿದ್ದು ಪಡಿ ಮಸೂದೆಗೆ ಮತ್ತೆ ವಿಪಕ್ಷಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಲೋಕಸಭೆಯಲ್ಲಿ ತ್ರಿವಳಿ ತಲಾಖ್ 2019 ಮಸೂದೆಯನ್ನು ಮಂಡಿಸಿದರು. ಈ ವೇಳೆ ಪ್ರಜೆಗಳು ತಮಗಾಗುತ್ತಿರುವ ಸಮಸ್ಯೆಗಳ ವಿರುದ್ಧ ಕಾನೂನು ರಚನೆ ಮಾಡಲು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಕಾನೂನು ರಚಿ ಸುವುದು ನಮ್ಮ ಕರ್ತವ್ಯ. ತ್ರಿವಳಿ ತಲಾಖ್ ಕಾನೂನು ಅದರ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುತ್ತದೆ ಎಂದರು….
ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರದ ಚಂಡರಕಿ ಸರ್ಕಾರಿ ಶಾಲೆಯಲ್ಲಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ
June 22, 2019ಯಾದಗಿರಿ: ಹೆಚ್.ಡಿ.ಕುಮಾರಸ್ವಾಮಿ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ಕ್ಷೇತ್ರದ ಚಂಡರಕಿ ಗ್ರಾಮದಲ್ಲಿ ವಾಸ್ತವ್ಯ ಹೂಡುವ ಮೂಲಕ ತಮ್ಮ ಗ್ರಾಮ ವಾಸ್ತವ್ಯವನ್ನು ಆರಂಭಿಸಿದರು. ಮುಖ್ಯಮಂತ್ರಿಗಳು ಈ ಬಾರಿ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದರು. ಮುಖ್ಯ ಮಂತ್ರಿಗಳ ವಾಸ್ತವ್ಯಕ್ಕಾಗಿ ಚಂಡರಕಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಣ್ಣ ಬಳಿದು ಸಿಂಗರಿಸಲಾಗಿತ್ತು. ಕಳೆದ 1 ವರ್ಷದ ವಿವಿಧ ಇಲಾಖೆಗಳ ಸಾಧನೆಗಳನ್ನು ಬಿಂಬಿಸುವ ಮಳಿಗೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸ್ಥಾಪಿಸಲಾಗಿತ್ತು. ಈ ಮಳಿಗೆಯನ್ನು…
ಮೈತ್ರಿ ಸರ್ಕಾರ ಹೆಚ್ಚು ಕಾಲ ಉಳಿಯಲ್ಲಹೊಸ ಆಯ್ಕೆಗಳು ತೆರೆದುಕೊಳ್ಳಲಿದೆ: ಮುರಳೀಧರ ರಾವ್
June 22, 2019ಬೆಂಗಳೂರು: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯಲ್ಲ, ಆದರೆ ಇದರಿಂದ ಮಧ್ಯಂತರ ಚುನಾ ವಣೆ ನಡೆಯುವ ಸಾಧ್ಯತೆ ಕಡಿಮೆ ಇದ್ದು ಬೇರೆ “ಕೆಲವು ಆಯ್ಕೆ ಗಳು” ತೆರೆದುಕೊಳ್ಳಲಿದೆ ಎಂದು ಭಾರತೀಯ ಜನತಾ ಪಕ್ಷ ಶುಕ್ರವಾರ ಹೇಳಿದೆ. ರಾಜ್ಯದ ಆಡಳಿತ ನಡೆಸುತ್ತಿರುವ ಸರ್ಕಾರ ಜನರ ಒಲವನ್ನು ಕಳೆದುಕೊಂಡಿದೆ ಎಂದು ಕರ್ನಾಟಕದ ಪಕ್ಷದ ವ್ಯವಹಾರಗಳ ಉಸ್ತುವಾರಿ ಹೊಂದಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ್ ರಾವ್ ಹೇಳಿದ್ದಾರೆ, ದಕ್ಷಿಣ ದಲ್ಲಿನ ರಾಜ್ಯದ ವಿವಿಧ ಪಕ್ಷಗಳಿಗೆ ಸೇರಿದ ಶಾಸಕರು ಮಧ್ಯಕಾಲೀನ…
ಗೌಡರ ಅನುಭವದ ಮಾತು: ವಿಶ್ವನಾಥ್ ಸಮರ್ಥನೆ
June 22, 2019ಮೈಸೂರು: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿರುವ ಮಾತು ಅವರಿಗಿರುವ ಅಪಾರ ಅನುಭವದಿಂದಲೇ. ಆದ್ದರಿಂದ ಅವರ ಮಾತನ್ನು ರಾಜ್ಯ ಮತದಾರರು ಗಂಭೀರ ವಾಗಿ ಪರಿಗಣಿಸುತ್ತಾರೆ ಎಂದು ಮಾಜಿ ಸಚಿವರೂ ಆದ ಶಾಸಕ ಎ.ಎಚ್.ವಿಶ್ವನಾಥ್ ಅಭಿಪ್ರಾಯ ಪಟ್ಟರು. ಕಲಾಮಂದಿ ರದ ಕಿರುರಂಗಮಂದಿರದಲ್ಲಿ `ಕನಸು’ ನೆನಪಿನೆಡೆಗೆ ಪಯಣ… ನಾಟಕ ಪ್ರದರ್ಶನಕ್ಕೆ ಚಾಲನೆ ನೀಡುವ ಮುನ್ನ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ದೇಶ ಮತ್ತು ರಾಜ್ಯ ರಾಜಕಾರಣದ ಎಲ್ಲಾ ಮರ್ಮವನ್ನು ಅರಿತೇ…
ಅಕ್ಕಿ, ತರಕಾರಿ ಆಯ್ತು ಈಗ ಗಗನಕ್ಕೇರಿದ ಸಮುದ್ರ ಮೀನು ಬೆಲೆ
June 22, 2019ಮೈಸೂರು: ಸಂತಾನೋತ್ಪತ್ತಿ ಸಮಯದ ಹಿನ್ನೆಲೆಯಲ್ಲಿ ಸಮುದ್ರ ಗಳಲ್ಲಿ ಮೀನುಗಾರಿಕೆ ತಡೆ ನೀಡಿರುವುದ ರಿಂದ ಮೈಸೂರಿನಲ್ಲಿ ಸಮುದ್ರ ಮೀನು ಗಳ ಬೆಲೆ ಗಗನ್ನಕ್ಕೇರಿದೆ. ಪ್ರತಿ ವರ್ಷ ಜೂ.1ರಿಂದ 61 ದಿನಗಳ ಕಾಲ ಕರ್ನಾಟಕ, ಕೇರಳ, ಆಂಧ್ರಪ್ರದೇಶ ಹಾಗೂ ತಮಿಳುನಾಡಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುವುದು ನಿಷೇಧಿಸ ಲಾಗುತ್ತದೆ. ಜೂನ್ ತಿಂಗಳಿಂದ ಸಮುದ್ರ ದಲ್ಲಿನ ಮೀನುಗಳು ಮೊಟ್ಟೆ ಇಡುವುದ ರಿಂದ ಅವುಗಳ ಸಂತಾನೋತ್ಪತ್ತಿ ಪ್ರಕ್ರಿ ಯೆಗೆ ಅಡಚಣೆಯಾಗುವುದನ್ನು ತಡೆಗಟ್ಟಲು ಮೀನುಗಾರಿಕೆ ನಿಷೇಧಿಸುವ ವಾಡಿಕೆ ಅನು ಸರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮುದ್ರ ಮೀನುಗಳ…
ಸೂಯೆಜ್ ಫಾರಂನಿಂದ ಮಾನಂದವಾಡಿ ರಸ್ತೆ ಅಭಿವೃದ್ಧಿಗೆ ಶಾಸಕ ರಾಮದಾಸ್ ಗುದ್ದಲಿಪೂಜೆ
June 22, 2019ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ವಿದ್ಯಾರಣ್ಯಪುರಂ 4ನೇ ಮುಖ್ಯ ರಸ್ತೆ, 16ನೇ ಕ್ರಾಸ್ ಕನಕಗಿರಿ ಸೂಯೆಜ್ ಫಾರಂನಿಂದ ಮಾನಂದವಾಡಿ ರಸ್ತೆವರೆಗಿನ ರಸ್ತೆ ಅಭಿ ವೃದ್ಧಿ, ಮಳೆ ನೀರು ಚರಂಡಿ, ಪಾದಚಾರಿ ಮಾರ್ಗದ 3 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗೆ ಶಾಸಕ ಎಸ್.ಎ.ರಾಮ ದಾಸ್ ಚಾಮುಂಡಿ ವನದ ಬಳಿ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿದರು. ಈ ವ್ಯಾಪ್ತಿಯ ನಿವಾಸಿಗಳು ಚುನಾ ವಣೆ ಸಂದರ್ಭದಲ್ಲಿ ರಸ್ತೆ ಅಭಿವೃದ್ಧಿ ಮಾಡಿಕೊಡುವಂತೆ ಕೋರಿದ್ದರು. ಅದ ರಂತೆ ಇಂದು ಈ ಕಾಮಗಾರಿ ಕೈಗೆತ್ತಿಕೊಳ್ಳ…
ಸಿಎಂ ಗ್ರಾಮ ವಾಸ್ತವ್ಯಕ್ಕೆ ಬಿಜೆಪಿ ಸರ್ಟಿಫಿಕೇಟ್ ಬೇಕಿಲ್ಲ ಸಚಿವ ಸಾ.ರಾ.ಮಹೇಶ್
June 22, 2019ಮೈಸೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯಕ್ಕೆ ಬಿಜೆಪಿಯವರ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೇಳಿದರು. ಮೈಸೂರಲ್ಲಿ ಅಂತಾರಾಷ್ಟ್ರೀಯ ಯೋಗ ದಿನೋತ್ಸವದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಯವರು ವಾಮ ಮಾರ್ಗದಿಂದ ರಾಜ್ಯದ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ. ಅವರು ಸರ್ಕಾರಕ್ಕೆ ಯಾವುದೇ ಸಲಹೆ, ಸೂಚನೆ ನೀಡುತ್ತಿಲ್ಲ. ಅಂತವ ರಿಂದ ಸಿಎಂ ಗ್ರಾಮ ವಾಸ್ತವ್ಯದ ಬಗ್ಗೆ ಒಳ್ಳೆಯ ಮಾತುಗಳನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರು. ಗ್ರಾಮ ವಾಸ್ತವ್ಯದಿಂದ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ…










