ಸೂಯೆಜ್ ಫಾರಂನಿಂದ ಮಾನಂದವಾಡಿ ರಸ್ತೆ ಅಭಿವೃದ್ಧಿಗೆ ಶಾಸಕ ರಾಮದಾಸ್ ಗುದ್ದಲಿಪೂಜೆ
ಮೈಸೂರು

ಸೂಯೆಜ್ ಫಾರಂನಿಂದ ಮಾನಂದವಾಡಿ ರಸ್ತೆ ಅಭಿವೃದ್ಧಿಗೆ ಶಾಸಕ ರಾಮದಾಸ್ ಗುದ್ದಲಿಪೂಜೆ

June 22, 2019

ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ವಿದ್ಯಾರಣ್ಯಪುರಂ 4ನೇ ಮುಖ್ಯ ರಸ್ತೆ, 16ನೇ ಕ್ರಾಸ್ ಕನಕಗಿರಿ ಸೂಯೆಜ್ ಫಾರಂನಿಂದ ಮಾನಂದವಾಡಿ ರಸ್ತೆವರೆಗಿನ ರಸ್ತೆ ಅಭಿ ವೃದ್ಧಿ, ಮಳೆ ನೀರು ಚರಂಡಿ, ಪಾದಚಾರಿ ಮಾರ್ಗದ 3 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗೆ ಶಾಸಕ ಎಸ್.ಎ.ರಾಮ ದಾಸ್ ಚಾಮುಂಡಿ ವನದ ಬಳಿ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿದರು.

ಈ ವ್ಯಾಪ್ತಿಯ ನಿವಾಸಿಗಳು ಚುನಾ ವಣೆ ಸಂದರ್ಭದಲ್ಲಿ ರಸ್ತೆ ಅಭಿವೃದ್ಧಿ ಮಾಡಿಕೊಡುವಂತೆ ಕೋರಿದ್ದರು. ಅದ ರಂತೆ ಇಂದು ಈ ಕಾಮಗಾರಿ ಕೈಗೆತ್ತಿಕೊಳ್ಳ ಲಾಗಿದ್ದು, ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಈ ಸಂದರ್ಭದಲ್ಲಿ ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಶಾಂತಮ್ಮ ವಡಿವೇಲು, ಈಶ್ವರ್, ಭುವ ನೇಶ್ವರಿ ಪ್ರಭುಮೂರ್ತಿ, ಶಾಸಕರ ಆಪ್ತ ಸಹಾಯಕ ಮುದ್ದುಕೃಷ್ಣ, ಪಿಡಬ್ಲ್ಯೂಡಿ ಎಇಇ ರಾಜು, ಗುತ್ತಿಗೆದಾರ ಸಿದ್ದು, ಬಿಜೆಪಿ ಮುಖಂಡರಾದ ನಾಗೇಂದ್ರ, ದೇವರಾಜ ಗೌಡ, ಸುರೇಶ್, ವಾರ್ಡ್ ಅಧ್ಯಕ್ಷರಾದ ಸುರೇಶ್, ಮಧು, ಕಲಿಯಮೂರ್ತಿ, ಪ್ರಧಾನ ಕಾರ್ಯದರ್ಶಿ ಜಿ.ಮುರುಗೇಶ್, ರಾಜಣ್ಣ, ಚಂದ್ರಶೇಖರ್, ಕೇಶವಮೂರ್ತಿ, ರಘು, ಜಗದೀಶ್, ರಾಜು, ನಜೀರ್, ರುದ್ರೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »