Tag: Mysore

ಬನ್ನಿಮಂಟಪದ ವೇಸ್ಟ್‍ಪೇಪರ್, ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ
ಮೈಸೂರು

ಬನ್ನಿಮಂಟಪದ ವೇಸ್ಟ್‍ಪೇಪರ್, ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ

February 10, 2020

ಮೈಸೂರು,ಫೆ.9(ಆರ್‍ಕೆ)- ಮೈಸೂರಿನ ಬನ್ನಿ ಮಂಟಪದ ಸಿವಿ ರಸ್ತೆಯಲ್ಲಿರುವ ವೇಸ್ಟ್ ಪೇಪರ್, ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ವಸ್ತು ಸುಟ್ಟು ಭಸ್ಮವಾಗಿರುವ ಘಟನೆ ಭಾನುವಾರ ಮುಂಜಾನೆ ಸಂಭವಿಸಿದೆ. ಮುಂಜಾನೆ ಸುಮಾರು 3.30 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದಾಗ ಗೋದಾಮು ಬೆಂಕಿ ಹೊತ್ತಿ ಉರಿ ಯುತ್ತಿದ್ದುದು ಕಂಡಿತು ಎಂದು ಮಾಲೀಕ ಲೋಹಿತ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಮಾಹಿತಿ ಬಂದ ತಕ್ಷಣ ಬನ್ನಿಮಂಟಪ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ವಾಹನಗಳೊಂದಿಗೆ ತೆರಳಿ…

ರಥಸಪ್ತಮಿ ಹಿನ್ನೆಲೆಯಲ್ಲಿ `ಸಾಮೂಹಿಕ ಸೂರ್ಯ ನಮಸ್ಕಾರ’
ಮೈಸೂರು

ರಥಸಪ್ತಮಿ ಹಿನ್ನೆಲೆಯಲ್ಲಿ `ಸಾಮೂಹಿಕ ಸೂರ್ಯ ನಮಸ್ಕಾರ’

February 10, 2020

ಮೈಸೂರು,ಫೆ.9(ಎಂಟಿವೈ)-ರಥ ಸಪ್ತಮಿ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಆವರಣದಲ್ಲಿ ಭಾನುವಾರ ಬೆಳಿಗ್ಗೆ `ಯೋಗ ಫೆಡರೇಷನ್ ಆಫ್ ಮೈಸೂರು’ ಸಂಸ್ಥೆ ಆಯೋಜಿಸಿದ್ದ `ಸಾಮೂಹಿಕ ಸೂರ್ಯ ನಮಸ್ಕಾರ’ದಲ್ಲಿ 1200ಕ್ಕೂ ಹೆಚ್ಚು ಯೋಗ ಪಟುಗಳು ಪಾಲ್ಗೊಂಡು ನೂರೆಂಟು ಸೂರ್ಯ ನಮಸ್ಕಾರ ಮಾಡಿ ಗಮನ ಸೆಳೆದರು. ಮೈಸೂರಿನ 5 ಯೋಗ ಸಂಸ್ಥೆಗಳು ಒಂದುಗೂಡಿ ರಚಿಸಲಾಗಿರುವ `ಯೋಗ ಫೆಡರೇಷನ್ ಆಫ್ ಮೈಸೂರು’ ವತಿಯಿಂದ ನಡೆದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಶಾಸಕ ಎಸ್.ಎ.ರಾಮ ದಾಸ್ ಉದ್ಘಾಟಿಸಿದರು. ಬಳಿಕ ಮಾತನಾ ಡಿದ ಅವರು, ಯೋಗಾಸನದಿಂದ ಮಾನ ಸಿಕ…

ಫೆ.13ಕ್ಕೆ ಪ್ರೊ.ಎಂಡಿಎನ್ 84ನೇ ಜನ್ಮದಿನ, ರೈತ ವಿರೋಧಿ ಕಾಯಿದೆ ವಿರುದ್ಧ ಜಾಗೃತಿ ಸಮಾವೇಶ
ಮೈಸೂರು

ಫೆ.13ಕ್ಕೆ ಪ್ರೊ.ಎಂಡಿಎನ್ 84ನೇ ಜನ್ಮದಿನ, ರೈತ ವಿರೋಧಿ ಕಾಯಿದೆ ವಿರುದ್ಧ ಜಾಗೃತಿ ಸಮಾವೇಶ

February 10, 2020

ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ಆಯೋಜನೆ ಮೈಸೂರು,ಫೆ.9(ಎಂಟಿವೈ)- ರಾಮನಗರ ಜಿಲ್ಲೆಯ ಚನ್ನಪಟ್ಟಣದ ಶತಮಾನೋ ತ್ಸವ ಭವನದಲ್ಲಿ ಫೆ.13ರ ಬೆಳಿಗ್ಗೆ 11.30ಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ `ರೈತ ಚೇತನ’ ದಿ. ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ 84ನೇ ಜನ್ಮದಿನ ಹಾಗೂ ರೈತ ವಿರೋಧಿ ಕಾಯಿದೆಗಳ ವಿರುದ್ಧ ಜಾಗೃತಿ ಸಮಾವೇಶ ಹಮ್ಮಿಕೊಳ್ಳ ಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧÀ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿ…

ಮೈಸೂರು ಬಳಿ ಪಿರಮಿಡ್ ಶೈಲಿಯ `ಶ್ರೀ ಶಿವದತ್ತ ಸಾಯಿ ಮಂದಿರ’
ಮೈಸೂರು

ಮೈಸೂರು ಬಳಿ ಪಿರಮಿಡ್ ಶೈಲಿಯ `ಶ್ರೀ ಶಿವದತ್ತ ಸಾಯಿ ಮಂದಿರ’

February 10, 2020

ಮೈಸೂರು,ಫೆ.9(ಎಸ್‍ಬಿಡಿ)- ಮೈಸೂರು ಸಮೀಪ ಪಿರಮಿಡ್ ಶೈಲಿಯಲ್ಲಿ ವಿನೂತನವಾಗಿ ನಿರ್ಮಿಸಿರುವ `ಶ್ರೀ ಶಿವದತ್ತ ಸಾಯಿ ಮಂದಿರ’ ಉದ್ಘಾಟನಾ ಸಮಾರಂಭ ವೈಭವದಿಂದ ನೆರವೇರಿತು. ಮಂಡ್ಯ ಜಿಲ್ಲೆ ವ್ಯಾಪ್ತಿಯ ಮೊಗರಹಳ್ಳಿ ಮಂಟಿಯಲ್ಲಿ ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ, ಉರಗ ರಕ್ಷಕ ಸ್ನೇಕ್ ಶ್ಯಾಮ್ (ಬಾಲಸುಬ್ರಹ್ಮಣ್ಯ) ನಿರ್ಮಿಸಿ ರುವ ಈ ಮಂದಿರವನ್ನು, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗುರುವಾರ ಉದ್ಘಾಟಿಸಿದರು. ಸಂಸ್ಥಾಪಕ ಸ್ನೇಕ್ ಶ್ಯಾಮ್ ಅವರ ಕುಟುಂಬ ಸದಸ್ಯರು ಸೇರಿದಂತೆ ಸಾವಿ ರಾರು ಭಕ್ತರು ಪಾಲ್ಗೊಂಡಿದ್ದರು. ಶಿವ, ಪಾರ್ವತಿ, ಅರ್ಧನಾರೀಶ್ವರ,…

ಮೈಸೂರಲ್ಲಿ ಹೆಚ್‍ಐವಿ/ಏಡ್ಸ್ ಕುರಿತ ವಾರ್ಷಿಕ ಸಮ್ಮೇಳನ ಆರಂಭ
ಮೈಸೂರು

ಮೈಸೂರಲ್ಲಿ ಹೆಚ್‍ಐವಿ/ಏಡ್ಸ್ ಕುರಿತ ವಾರ್ಷಿಕ ಸಮ್ಮೇಳನ ಆರಂಭ

February 9, 2020

ಮೈಸೂರು, ಫೆ. 8(ಆರ್‍ಕೆ)- ಹೆಚ್‍ಐವಿ/ಏಡ್ಸ್ ಅಪ್‍ಡೇಟ್-2020 ಕುರಿತ ಎರಡು ದಿನಗಳ ವಾರ್ಷಿಕ ಸಮ್ಮೇಳನ ಮೈಸೂ ರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹೋಟೆಲ್ ರಿಯೋ ಮೆರಿಡಿಯನ್ ಸಭಾಂಗಣದಲ್ಲಿ ಇಂದು ಆರಂಭವಾಯಿತು. ಮೈಸೂರಿನ ಆಶಾಕಿರಣ ಆಸ್ಪತ್ರೆ ವತಿಯಿಂದ ಕರ್ನಾಟಕ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ ಮತ್ತು ಏಡ್ಸ್ ಸೊಸೈಟಿ ಆಫ್ ಇಂಡಿಯಾ (ಂSI) ಸಹಯೋಗದಲ್ಲಿ ಆಯೋಜಿಸಿರುವ ‘ಹೆಚ್‍ಐವಿಇ ಮೈಸೂರು -2020’ 7ನೇ ವಾರ್ಷಿಕ ಸಮ್ಮೇಳನವನ್ನು ಮೈಸೂರಿನ ಸಿಐಐ ಅಧ್ಯಕ್ಷ ಭಾಸ್ಕರ್ ಕಳಲೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ…

ಕಾಂಗ್ರೆಸ್‍ನವರದ್ದು ತಿರುಕನ ಕನಸು: ಜಿ.ಪರಮೇಶ್ವರ್‍ಗೆ ಬಿಎಸ್‍ವೈ ಟಾಂಗ್
ಮೈಸೂರು

ಕಾಂಗ್ರೆಸ್‍ನವರದ್ದು ತಿರುಕನ ಕನಸು: ಜಿ.ಪರಮೇಶ್ವರ್‍ಗೆ ಬಿಎಸ್‍ವೈ ಟಾಂಗ್

February 9, 2020

ಕಾರವಾರ, ಫೆ.8- ಕಾಂಗ್ರೆಸ್‍ನವರದ್ದು ತಿರುಕನ ಕನಸಾಗಿದೆ. ಅವರ ಹೇಳಿಕೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಕದಂಬೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಸಚಿವರು ಪ್ರಮಾಣ ವಚನ ತೆಗೆದುಕೊಂಡಿದ್ದಾರೆ. ಶನಿವಾರ ಮತ್ತು ಭಾನುವಾರ ಎರಡು ದಿನಗಳು ರಜೆ ಇರುವುದರಿಂದ ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡುತ್ತೇವೆ ಎಂದು ತಿಳಿಸಿದರು. ಶೀಘ್ರದಲ್ಲಿ ಅಧಿವೇಶನ ಆರಂಭವಾಗಲಿದೆ. ಮಾರ್ಚ್ 5ರಂದು ಬಜೆಟ್ ಮಂಡನೆ ಆಗಲಿದ್ದು, ಇದು…

ಹೈವೋಲ್ಟೇಜ್ ಮೋದಿ ಯುವಕರಿಗೆ  ಉದ್ಯೋಗ ಕೊಡಲಿ: ಡಿಕೆಶಿ
ಮೈಸೂರು

ಹೈವೋಲ್ಟೇಜ್ ಮೋದಿ ಯುವಕರಿಗೆ  ಉದ್ಯೋಗ ಕೊಡಲಿ: ಡಿಕೆಶಿ

February 9, 2020

ಬೆಂಗಳೂರು, ಫೆ.8- ತಮ್ಮನ್ನು ಹೈವೋಲ್ಟೇಜ್ ಎಂದು ಕರೆಯಿಸಿಕೊಳ್ಳುವ ಪ್ರಧಾನಿ ಮೋದಿ, ದೇಶದ ಯುವಕರಿಗೆ ಬಲ್ಬ್ ಕೊಡಲಿ, ಉದ್ಯೋಗ ಕೊಡಲಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ರಾಹುಲ್ ಗಾಂಧಿ ಬಗ್ಗೆ ಮೋದಿ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿದ ಅವರು, ಯುವಕರಿಗೆ ಉದ್ಯೋಗ ನೀಡಲಿ.ದೇಶದ ಆರ್ಥಿಕತೆಯನ್ನ ಬೇರೆ ಪ್ರಪಂಚ ಬಂದು ಹೊಗಳಬೇಕು. ಅದರಂತೆ ಮೋದಿ ಮೊದಲು ಕೆಲಸ ಮಾಡಲಿ ಎಂದು ಕುಟುಕಿದರು. ಐಎಎಸ್ ಅಧಿಕಾರಿಗಳು ಸಹ ಕೇಂದ್ರದ ದಬ್ಬಾಳಿಕೆಗೆ ಹೆದರುತ್ತಿದ್ದಾರೆ. ಬಜೆಟ್‍ನಲ್ಲಿ ಏನೂ ನೀಡಿಲ್ಲ. ವಿದೇಶಗಳ ಬೆಂಬಲವೂ…

ಸದೃಢ ರಾಷ್ಟ್ರಕ್ಕೆ ಬಲಿಷ್ಠ, ಸ್ವತಂತ್ರ ನ್ಯಾಯಾಂಗ ಅವಶ್ಯ
ಮೈಸೂರು

ಸದೃಢ ರಾಷ್ಟ್ರಕ್ಕೆ ಬಲಿಷ್ಠ, ಸ್ವತಂತ್ರ ನ್ಯಾಯಾಂಗ ಅವಶ್ಯ

February 9, 2020

ಮೈಸೂರು, ಫೆ.8(ಎಸ್‍ಬಿಡಿ)- ಸದೃಢ ರಾಷ್ಟ್ರಕ್ಕೆ ಬಲಿಷ್ಠ ಹಾಗೂ ಸ್ವತಂತ್ರ ನ್ಯಾಯಾಂಗ ಅಗತ್ಯ ಎಂದು ರಾಜ್ಯ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರು ಅಭಿಪ್ರಾಯಿಸಿದರು. ಮೈಸೂರಿನ ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ 18ನೇ ಸುರಾನಾ ಮತ್ತು ಸುರಾನ ನ್ಯಾಷನಲ್ ಕಾರ್ಪೊರೇಟ್ ಮೂಟ್ ಕಾಂಪಿಟೇಷನ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾನೂನು ಇಲ್ಲದೆ ಯಾವುದೇ ದೇಶದಲ್ಲಿ ವ್ಯವಸ್ಥಿತ ಆಡಳಿತ ಕಾಣಲು ಸಾಧ್ಯವಿಲ್ಲ. ಹೀಗೆ ಕಾನೂನು ನಿಯಮವನ್ನು ಹೊಂದಬೇಕಾದರೆ ಬಲಿಷ್ಠ ಹಾಗೂ ಸ್ವತಂತ್ರ ನ್ಯಾಯಾಂಗ ಇರಬೇಕು ಎಂದರು. ನ್ಯಾಯ ಕ್ಷೇತ್ರದಲ್ಲಿ,…

ಸಂಗೀತ ವಿದ್ವಾನ್ ಡಾ. ರಾ.ಸತ್ಯನಾರಾಯಣರಿಗೆ ಮೈಸೂರಲ್ಲಿ ಭಾವಪೂರ್ಣ ಶ್ರದ್ಧಾಂಜಲಿ
ಮೈಸೂರು

ಸಂಗೀತ ವಿದ್ವಾನ್ ಡಾ. ರಾ.ಸತ್ಯನಾರಾಯಣರಿಗೆ ಮೈಸೂರಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

February 9, 2020

ಮೈಸೂರು, ಫೆ.8(ಎಂಕೆ)- ಸಂಗೀತ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ ವಿರಳಾತಿ ವಿರಳರಲ್ಲಿ ವಿದ್ವಾಂಸ ಡಾ.ರಾ. ಸತ್ಯನಾರಾಯಣ ಒಬ್ಬರಾಗಿದ್ದು, ಅದ್ಭುತ ಬರವಣಿಗೆ ಮೂಲಕ ಸಾಹಿತ್ಯ, ಸಂಗೀತ ಪ್ರಿಯರ ಮನದಲ್ಲಿ ಅಚ್ಚಳಿಯದೆ ಉಳಿದಿ ದ್ದಾರೆ ಎಂದು ಸಂಸ್ಕøತಿ ಚಿಂತಕ ಡಾ. ಹೆಚ್.ವಿ.ನಾಗರಾಜರಾವ್ ಹೇಳಿದರು. ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ರಾ.ಸ.ಶ್ರದ್ಧಾಂಜಲಿ ಸಮರ್ಪಣಾ ಒಕ್ಕೂಟ ಆಯೋಜಿಸಿದ್ದ ಪದ್ಮಶ್ರೀ ಪುರಸ್ಕøತ ಡಾ. ರಾ.ಸತ್ಯನಾರಾಯಣ ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ…

ಓದುಗರಿಗೆ ವರದಾನ ಕುವೆಂಪು ಸಂಚಾರಿ ಗ್ರಂಥಾಲಯ
ಮೈಸೂರು

ಓದುಗರಿಗೆ ವರದಾನ ಕುವೆಂಪು ಸಂಚಾರಿ ಗ್ರಂಥಾಲಯ

February 9, 2020

ಮೈಸೂರು,ಫೆ.8-ಎಲ್ಲರಿಗೂ ಗ್ರಂಥಾ ಲಯ ಸೌಲಭ್ಯ ಸಿಗಬೇಕೆಂಬುದು ಸರ್ಕಾ ರದ ಆಶಯ. ಈ ಕೊರತೆಯನ್ನು ನೀಗಿ ಸಲು ಮೈಸೂರಿನಲ್ಲಿ ಸಂಚಾರಿ ಗ್ರಂಥಾ ಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಬುಕ್‍ಮೊಬೈಲ್, ಮೊಬೈಲ್ ಲೈಬ್ರರಿ ಅಥವಾ ಸಂಚಾರಿ ಗ್ರಂಥಾಲಯ ಎನ್ನು ವುದು ಗ್ರಂಥಾಲಯವಾಗಿ ಬಳಸಲು ವಿನ್ಯಾಸಗೊಳಿಸಲಾದ ಒಂದು ವಿಶಿಷ್ಟ ವಾಹನ. ಗ್ರಂಥಾಲಯಗಳು ಇಲ್ಲದಿ ರುವ ಪ್ರದೇಶಗಳಲ್ಲಿ ಈ ಸಂಚಾರಿ ಗ್ರಂಥಾಲಯದ ಮೂಲಕ ಸಾಕ್ಷರತೆ ಜೊತೆಗೆ ಜ್ಞಾನ ಪ್ರಸಾರದ ಉದ್ದೇಶ. ಮೈಸೂರು ನಗರ ಗ್ರಂಥಾಲಯದ ಶತಮಾನೋತ್ಸವದ ಅಂಗವಾಗಿ 2016ರ ಜನವರಿ 8ರಂದು ಕುವೆಂಪು ಸಂಚಾರಿ…

1 44 45 46 47 48 330
Translate »