ಬೆಂಗಳೂರು, ಜ.23(ಕೆಎಂಶಿ)-ರಾಜ್ಯ ವಿಧಾನಸಭೆಗೆ ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾಗಬಹುದು. ಅದನ್ನು ಎದುರಿಸಲು ಸಜ್ಜಾಗಿ ಎಂದು ಪಕ್ಷದ ಕಾರ್ಯಕರ್ತರಿಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಕರೆ ನೀಡಿದ್ದಾರೆ. ಕಳೆದ ಲೋಕಸಭೆ ಹಾಗೂ ವಿಧಾನ ಸಭೆಗೆ ನಡೆದ ಉಪ ಚುನಾವಣೆಯಲ್ಲಿ ಪಕ್ಷದ ಜೊತೆಗೆ ನಾನು ಸೋತಿದ್ದೇನೆ. ಹಾಗೆಂದು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸಂಘ ಟನೆ ಮಾಡಿ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮುಂದಾಗಬೇಕು ಎಂದರು. ಸದ್ಯದ ಪರಿಸ್ಥಿತಿಯನ್ನು ಅವಲೋಕನ ಮಾಡಿದರೆ, ರಾಜಕೀಯವಾಗಿ ಏನು ಬೇಕಾ ದರೂ ಆಗಬಹುದು. ನಾವಾಗಿಯೇ ಸರ್ಕಾರವನ್ನು ಕೆಡವುವ…
ಇಂದು ಗಣರಾಜ್ಯೋತ್ಸವ ಪಥ ಸಂಚಲನ ತಾಲೀಮು
January 24, 2020ಮೈಸೂರು, ಜ.23(ಆರ್ಕೆ)-ಜನವರಿ 26 ರಂದು ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಅಂದು ಬೆಳಿಗ್ಗೆ 8 ಗಂಟೆಗೆ ನಡೆ ಯುವ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಪಾಲ್ಗೊಂಡು ಪಥ ಸಂಚ ಲನ ವೀಕ್ಷಿಸಿ, ಧ್ವಜ ವಂದನೆ ಸಲ್ಲಿಸುವರು. ಮೇಯರ್ ತಸ್ನೀಂ, ಉಪ ಮೇಯರ್ ಸಿ.ಶ್ರೀಧರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ತನ್ವೀರ್ ಸೇಟ್, ಜಿ.ಟಿ.ದೇವೇಗೌಡ ಸೇರಿದಂತೆ ಜನ ಪ್ರತಿನಿಧಿಗಳು ಭಾಗವಹಿಸುವರು. ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್,…
ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದರೆ ವಾರ್ಡ್ ಇಂಜಿನಿಯರ್ಗೆ ಲಕ್ಷ ರೂ. ದಂಡ ಪಾಲಿಕೆ ಉಪ ಆಯುಕ್ತ ಶಿವಾನಂದಮೂರ್ತಿ ಎಚ್ಚರಿಕೆ
January 24, 2020ಮೈಸೂರು,ಜ.23(ವೈಡಿಎಸ್)- ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣ ಮಾಡುವು ದನ್ನು ತಡೆಯುವುದು ಅಧಿಕಾರಿಗಳ ಕೆಲಸ. ತಡೆಯದಿದ್ದರೆ ಸಂಬಂಧಪಟ್ಟ ವಾರ್ಡ್ ಇಂಜಿನಿಯರ್ಗೆ 1 ಲಕ್ಷ ರೂ.ವರೆಗೂ ದಂಡ ವಿಧಿಸಬಹುದಾಗಿದೆ ಎಂದು ನಗರಪಾಲಿಕೆ ಉಪ ಆಯುಕ್ತ ಶಿವಾನಂದಮೂರ್ತಿ ತಿಳಿಸಿದರು. ನಗರದ ಖಾಸಗಿ ಹೋಟೆಲ್ ಸಭಾಂಗಣ ದಲ್ಲಿ ನರೆಡ್ಕೋ ಮೈಸೂರು ಬುಧವಾರ ಆಯೋ ಜಿಸಿದ್ದ ರೇರಾ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಿಸಿದರೆ ನೆಲಸಮಗೊಳಿಸಲಾಗು ವುದು ಹಾಗಾಗಿ ನಕ್ಷೆಯಲ್ಲಿರುವಂತೆಯೇ ಕಟ್ಟಡ ನಿರ್ಮಿಸಬೇಕು ಎಂದು ಹೇಳಿದರು. ಆದರೆ, ಮನೆಗಳ ಮಧ್ಯೆ…
ಅಹಂಕಾರ, ಸೋಮಾರಿತನ ತ್ಯಜಿಸಿದರೆ ಸಾಧನೆ ಸುಲಭ
January 24, 2020`ಸಾಧಕರೊಂದಿಗೆ ಸಂವಾದ’ದಲ್ಲಿ ವಿದ್ಯಾರ್ಥಿಗಳಿಗೆ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಮಾರ್ಗದರ್ಶನ ಮೈಸೂರು,ಜ.23(ಎಂಟಿವೈ)- ಅಹಂ ಕಾರ ಹಾಗೂ ಸೋಮಾರಿತನಕ್ಕೆ ಆಸ್ಪದ ನೀಡದೆ ಸಾಧನೆ ಮಾಡುವತ್ತ ಗಮನ ಕೇಂದ್ರೀಕರಿಸುವಂತೆ ವಿದ್ಯಾರ್ಥಿಗಳಿಗೆ ಹಿರಿಯ ವಿದ್ವಾಂಸ ಡಾ.ಟಿ.ವಿ.ವೆಂಕಟಾ ಚಲ ಶಾಸ್ತ್ರಿ ಸಲಹೆ ನೀಡಿದ್ದಾರೆ. ಮೈಸೂರಿನ ಜಯಲಕ್ಷ್ಮೀಪುರಂನಲ್ಲಿ ರುವ ಮಹಾಜನ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಗುರುವಾರ ಆಯೋಜಿಸಿದ್ದ `ಸಾಧಕ ರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಓದಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಅಹಂಕಾರ ಹಾಗೂ ಸೋಮಾ…
ಸಂಭ್ರಮದ ಸುತ್ತೂರು ರಥೋತ್ಸವ
January 24, 2020ಸುತ್ತೂರು(ನಂಜನಗೂಡು), ಜ.23- ಆದಿ ಜಗದ್ಗುರುಗಳಿಗೆ ಜೈ… ಶಿವರಾತ್ರೀಶ್ವರ ಮಹಾರಾಜಕೀ ಜೈ… ರಾಜೇಂದ್ರ ಮಹಾ ಸ್ವಾಮಿಗಳಿಗೆ ಉಘೇ ಎನ್ನಿ… ಹೀಗೆ ಜಯ ಘೋಷಗಳೊಂದಿಗೆ ನಂಜನಗೂಡು ತಾಲೂ ಕಿನ ಸುತ್ತೂರಲ್ಲಿ ಶಿವರಾತ್ರೀಶ್ವರ ಶಿವಯೋಗಿ ಗಳ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಶ್ರದ್ಧಾಭಕ್ತಿ ಯೊಂದಿಗೆ ನೆರವೇರಿತು. ಕಪಿಲಾ ನದಿ ತೀರದಲ್ಲಿ ಕಳೆದ 3 ದಿನ ಗಳಿಂದ ನಡೆಯುತ್ತಿರುವ ಸುತ್ತೂರು ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆ ಯಾದ ಸುತ್ತೂರು ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಆದಿಜಗದ್ಗುರು ಶಿವ ರಾತ್ರೀಶ್ವರ ಶಿವಯೋಗಿಗಳ ರಥೋತ್ಸವಕ್ಕೆ…
ರಸ್ತೆ ಮಧ್ಯೆ ರಾಶಿ ರಾಶಿ ಪ್ಲಾಸ್ಟಿಕ್ ಬಾಟಲ್: ಕೆಲಕಾಲ ಸಂಚಾರಕ್ಕೆ ಅಡ್ಡಿ
January 24, 2020ಮೈಸೂರು, ಜ.23(ಎಂಕೆ)- ಮೈಸೂರಿನ ಆರ್ಎಂಸಿ ವೃತ್ತದ ಬಳಿ ರಸ್ತೆ ಮಧ್ಯದಲ್ಲಿಯೇ ರಾಶಿ ರಾಶಿ ಪ್ಲಾಸ್ಟಿಕ್ ಬಾಟಲ್ ಕಂಡು ವಾಹನ ಸವಾರರು ಕಕ್ಕಾಬಿಕ್ಕಿಯಾದ ಘಟನೆ ನಡೆದಿದೆ. ಆರ್ಎಂಸಿ ವೃತ್ತದ ಸಮೀಪದ ಶೇಷಾದ್ರಿ ಅಯ್ಯರ್ ರಸ್ತೆ ಮಧ್ಯದಲ್ಲಿ ಗುರುವಾರ ಸಂಜೆ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲ್ಗಳ ರಾಶಿ ಕೆಲಕಾಲ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿ ಸಂಚಾರಕ್ಕೆ ಅಡ್ಡಿಯಾಯಿತು. ಸಂಜೆ 7 ಗಂಟೆ ಸಮಯದಲ್ಲಿ ಖಾಲಿ ಬಾಟಲ್ಗಳನ್ನು ತುಂಬಿದ್ದ ಗೂಡ್ಸ್ ಆಟೋದಿಂದ ರಾಶಿ ಬಾಟಲ್ ಗಳು ರಸ್ತೆಗೆ ಬಿದ್ದವು. ಆದರೆ, ಗೂಡ್ಸ್ ಆಟೋ…
ಶತಮಾನೋತ್ಸವ ಹಿನ್ನೆಲೆ: ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಎಂಎಂಸಿ-ಆರ್ಐ 2024ರೊಳಗೆ ನವೀಕರಣ
January 24, 2020ಮೈಸೂರು, ಜ.23(ಆರ್ಕೆಬಿ)- ಮೈಸೂ ರಿನ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ ಮತ್ತು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು 2024 ರಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳಲಿ ರುವ ಹಿನ್ನೆಲೆಯಲ್ಲಿ ಅದಕ್ಕೆ ಅಗತ್ಯ ಪೂರ್ವ ತಯಾರಿ ಕೈಗೊಳ್ಳಬೇಕಿರುವುದರಿಂದ ಮೂಲ ಸೌಕರ್ಯ, ಗುಣಮಟ್ಟ ಅಭಿವೃದ್ಧಿ, ಕಟ್ಟಡದ ನವೀಕರಣ ಮತ್ತು ನಿರ್ವಹಣೆಗೆ ಆದ್ಯತೆ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಸಚಿ ವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ. ಎನ್.ಅಶ್ವಥ್ನಾರಾಯಣ ತಿಳಿಸಿದರು. ಮೈಸೂರಿನ ವಿನೋಬಾ ರಸ್ತೆಯ ನಂಜ ರಾಜ ಬಹುದ್ದೂರ್…
ಸುಭಾಷ್ಚಂದ್ರ ಬೋಸ್ ಹೋರಾಟ ಕೇವಲ ಸ್ವಾತಂತ್ರ್ಯಕ್ಕೆ ಸೀಮಿತವಲ್ಲ
January 24, 2020ಮೈಸೂರು, ಜ.23 (ಪಿಎಂ)- ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೋರಾಟ ಕೇವಲ ದೇಶದ ಸ್ವಾತಂತ್ರ್ಯಕ್ಕಾಗಿ ಸೀಮಿತ ಎಂದು ಪರಿ ಭಾವಿಸಬಾರದು. ಅವರ ಹೋರಾಟ ಹಾಗೂ ಚಿಂತನೆಗಳು ಒಂದು ಪೀಳಿಗೆಗೆ ಮಾತ್ರ ಸೀಮಿತಗೊಂಡಿಲ್ಲ. ಹೀಗಾಗಿ ಇಂದಿಗೂ ಅವರ ಚಿಂತನೆ ಹಾಗೂ ಹೋರಾಟದ ಆದರ್ಶ ಪ್ರಸ್ತುತ ಎಂದು ಮೈಸೂರು ವಿವಿ ಕುಲಸಚಿವ ಪ್ರೊ.ಆರ್. ಶಿವಪ್ಪ ಅಭಿಪ್ರಾಯಪಟ್ಟರು. ಮೈಸೂರು ವಿವಿಯ ಗ್ರಂಥಾಲಯದಲ್ಲಿ ನೇತಾಜಿ ಜನ್ಮ ಶತಮಾನೋತ್ಸವ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 123ನೇ…
ಸ್ವಾತಂತ್ರ್ಯಕ್ಕಾಗಿ ಸಾಹಸ ಮೆರೆದ ಸಾಕಾರಮೂರ್ತಿ ನೇತಾಜಿಯವರ ಸಂದೇಶಗಳ ಅನಾವರಣ
January 24, 2020ಮೈಸೂರು, ಜ.23(ಪಿಎಂ)- `ಭಾರತೀಯರ ವಿಮುಕ್ತಿಗಾಗಿ ನನ್ನ ಜೀವನವನ್ನೇ ಕೊಡುತ್ತೇನೆ…’ ಇದು ದೇಶದ ಸ್ವಾತಂತ್ರ್ಯಕ್ಕಾಗಿ ಸಾಹಸ ಮೆರೆದ ಸಾಕಾರಮೂರ್ತಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ವೀರವಾಣಿ. ಸುಭಾಷ್ ಚಂದ್ರ ಬೋಸ್ ಅವರ ಇಂತಹ ಹತ್ತು ಹಲವು ಘೋಷ ವಾಕ್ಯಗಳು ಅಲ್ಲಿ ರಾರಾಜಿಸುವ ಮೂಲಕ ಅವರ ವಿಚಾರಗಳನ್ನು ಪಸರಿಸಿದವು. ಮೈಸೂರಿನ ಲ್ಯಾನ್ಸ್ಡೌನ್ ಬಿಲ್ಡಿಂಗ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 123ನೇ ಜನ್ಮ ದಿನಾಚರಣೆಯ ಅಂಗವಾಗಿ ಗುರುವಾರ ಹಮ್ಮಿ ಕೊಂಡಿದ್ದ ಅವರ ಛಾಯಾಚಿತ್ರ ಸಹಿತ ಘೋಷ ವಾಕ್ಯಗಳ…
ಬಡಗಲಪುರ ಆರೋಗ್ಯ ಕೇಂದ್ರಕ್ಕೆ ಭೂಮಿ ನೀಡಿದ ದಾನಿಯ ಆಸೆಗೆ ಆಳುವವರಿಂದ ತಣ್ಣೀರು!
January 24, 2020ಮೈಸೂರು, ಜ.23(ಎಸ್ಪಿಎನ್)-ತಮ್ಮದೇ ಸರ್ಕಾರ ಬಂದು 6 ತಿಂಗಳು ಕಳೆದರೂ ಬಿಜೆಪಿ ಕಾರ್ಯಕರ್ತ ರೊಬ್ಬರ ಆಸೆ ಈಡೇರಿಲ್ಲ. ಅದು ಸರ್ಕಾರಿ ನೌಕರಿಯೂ ಅಲ್ಲ, ಇಲ್ಲವೇ ಗುತ್ತಿಗೆ ವ್ಯವಹಾರವೂ ಅಲ್ಲ. ಬದಲಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಟ್ಟಲು ತಮ್ಮ ಸ್ವಂತ ಜಮೀನು ಬಿಟ್ಟುಕೊಟ್ಟು, ಈ ಜಾಗದಲ್ಲಿ ನಿರ್ಮಾಣ ವಾಗಿರುವ ಕಟ್ಟಡಕ್ಕೆ ನಮ್ಮ ಪೂರ್ವಜರ ಹೆಸರಿಡಿ ಎಂಬುದೇ ಇವರ ಸರಳ ಬೇಡಿಕೆ…!. ಹೌದು, ಸರಗೂರು ತಾಲೂಕಿನ ಬಡಗಲಪುರ ಗ್ರಾಮ ದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಗ್ರಾಪಂ ಸದಸ್ಯೆ…










