ಮೈಸೂರು: ಜೆಎಸ್ಎಸ್ ನಿರ್ವಹಣಾ ಅಧ್ಯಯನ ಕೇಂದ್ರ ದಿಂದ ಎಂಬಿಎ ಪಡೆದ ಮೈಸೂರಿನ ಎಂ.ಆರ್.ನಿರಂತ್ ಅವರು ಜ.30ರಂದು ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ಆರಂಭವಾಗಲಿರುವ ಏಷ್ಯ ವಿಶ್ವ ಮಾದರಿ `ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಕಡಿಮೆ ಆದಾಯವಿರುವ ರಾಷ್ಟ್ರಗಳಲ್ಲಿ ಹವಾಮಾನ ಬದಲಾವಣೆ-ಮಾಲ್ಡೀವ್ಸ್ ಗಣರಾಜ್ಯ’ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ. ನಿರಂತ್, ರಾಜ್ಯ ಜವಳಿ ಆಯುಕ್ತ ಹಾಗೂ ನಿರ್ದೇಶಕರೂ ಅಲ್ಲದೇ, `ಮೈಸೂರುಮಿತ್ರ’ ಅಂಕಣಕಾರರೂ ಆದ ಎಂ.ಆರ್.ರವಿ ಅವರ ಪುತ್ರ.
ಕೆಆರ್ಎಸ್ ಸುತ್ತಮುತ್ತ ಇಂದು ಟ್ರಯಲ್ ಬ್ಲಾಸ್ಟ್
January 28, 2019ಮಂಡ್ಯ: ವಿಶ್ವ ವಿಖ್ಯಾತ ಕೆಆರ್ಎಸ್ ಸುತ್ತಮುತ್ತ ಗಣಿಗಾರಿಕೆ ಯಿಂದ ಅಣೆಕಟ್ಟೆಗೆ ಧಕ್ಕೆಯಾಗಿದೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಗಣಿಗಾರಿಕೆ ನಡೆಸಿ ದರೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಅಧ್ಯಯನ ನಡೆಸಿ ತಾಂತ್ರಿಕ ವರದಿ ನೀಡುವ ಸಲುವಾಗಿ ಪುಣೆಯ ಸಿಡಬ್ಲ್ಯೂಪಿಆರ್ಎಸ್ ವಿಜ್ಞಾನಿಗಳ ತಂಡ ನಾಳೆ (ಜ.28) ಗಣಿಗಾರಿಕೆ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ (ಪರೀಕ್ಷಾರ್ಥ ಸ್ಫೋಟ) ನಡೆಸಲಿದೆ. ಆದರೆ ಈ ಟ್ರಯಲ್ ಬ್ಲಾಸ್ಟ್ಗೆ ರೈತರು ಮತ್ತು ಪ್ರಗತಿಪರರು ಹಾಗೂ ಕಾವೇರಿ ಹಿತರಕ್ಷಣಾ ಸಮಿತಿಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಸಂಘಟನೆಗಳು ನಾಳೆ ‘ಗೋ…
ದೆಹಲಿಯ ಗಣರಾಜ್ಯೋತ್ಸವದ ಪೆರೇಡ್ನಲ್ಲಿ ಪಾಲ್ಗೊಂಡು ಬೀಗಿದ ಮೈಸೂರಿನ ವಿದ್ಯಾರ್ಥಿಗಳು
January 28, 2019ಮೈಸೂರು: ಗಣರಾಜ್ಯೋತ್ಸವದ ದಿನದಂದು ದೆಹಲಿಯ ರಾಜಪತ್ನಲ್ಲಿ ನಡೆದ ಭವ್ಯ ಪೆರೇಡ್ನಲ್ಲಿ ಎನ್ಸಿಸಿಯ ಮೂರು ವಿಭಾಗಗಳಿಂದ ನಾಲ್ವರು ವಿದ್ಯಾರ್ಥಿನಿಯರು ಒಳಗೊಂಡಂತೆ ಮೈಸೂರಿನ 12 ವಿದ್ಯಾರ್ಥಿಗಳು ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಎನ್ಸಿಸಿ ಭೂದಳ, ವಾಯುದಳ, ನೌಕದಳದ ಕೆಡೆಟ್ಗಳು ದೆಹಲಿಯಲ್ಲಿ ನಡೆಯುವ ಆರ್ಡಿ ಪೆರೇಡ್ನಲ್ಲಿ ಭಾಗವಹಿಸುವ ಕನಸು ಕಾಣುವುದು ಸಹಜ. ಸತತ ಪರಿಶ್ರಮ, ಕವಾಯತ್ನಲ್ಲಿ ಉತ್ತಮ ಪ್ರದರ್ಶನ ನೀಡುವವರಿಗೆ ಮಾತ್ರ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪೆರೇಡ್ನಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ. ದೇಶದ ಎಲ್ಲಾ ರಾಜ್ಯಗಳ ಎನ್ಸಿಸಿ ಕೆಡೆಟ್ಗಳು ಹಾತೊರೆಯುವ ಈ ಪೆರೇಡ್ನಲ್ಲಿ…
ಚಿಂತಾಮಣಿ ಗಂಗಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಇಬ್ಬರು ಮಹಿಳೆಯರ ಸಾವು
January 28, 2019ಚಿಂತಾಮಣಿ: ಹನೂರು ತಾಲೂಕು ಸುಳವಾಡಿ ಕಿಚ್ಗುತ್ ಮಾರಮ್ಮನ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವನೆಯಿಂದ 17 ಮಂದಿ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಚಿಂತಾಮಣಿಯ ನಾರಸಿಂಹ ಪೇಟೆಯ ಗಂಗಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಶುಕ್ರವಾರ ನಡೆದ ವಿಶೇಷ ಪೂಜೆ ಕೈಂಕರ್ಯದಲ್ಲಿ ಹಲವಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದು, ಈ ವೇಳೆ ನೀಡಲಾದ ಸಿಹಿ ಪೊಂಗಲ್ ಪ್ರಸಾದ ಸೇವಿಸಿದ ಪರಿಣಾಮ ಕವಿತಾ ಎಂಬುವರು ಅಂದೇ ಮೃತಪಟ್ಟಿದ್ದರು. ದೇವಸ್ಥಾನಕ್ಕೆ ಹೋಗದಿದ್ದರೂ ಮಗಳ ಮನೆಗೆ ಹೋಗಿದ್ದಾಗ…
ರಾಜ್ಯದಲ್ಲಿ ಇಂದು ಮಳೆ ಸಾಧ್ಯತೆ..!
January 28, 2019ಬೆಂಗಳೂರು: ವಾತಾವರಣ ದಲ್ಲಿ ಉಂಟಾಗಿರುವ ಬದಲಾವಣೆ ಯಿಂದಾಗಿ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ನಾಳೆ (ಜ.28) ಕೆಲವೆಡೆ ಹಗುರ ಮಳೆ ಯಾಗುವ ಸಾಧ್ಯತೆಗಳಿವೆ. ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ತುಂತುರು ಮಳೆಯಾ ಗುವ ಮುನ್ಸೂಚನೆಗಳಿವೆ ಎಂದು ಕರ್ನಾ ಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿ ವಾಸ್ ರೆಡ್ಡಿ ತಿಳಿಸಿದ್ದಾರೆ. ವಾತಾ ವರಣದ ಗಾಳಿಯಲ್ಲಿ ಒತ್ತಡ (ಟ್ರಪ್) ಕಡಿಮೆಯಾಗಿರುವುದರಿಂದ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ನಾಳೆವರೆಗೂ ಇದೇ…
ಗಣರಾಜ್ಯೋತ್ಸವದಲ್ಲಿ ಐವರು ಸಾಧಕರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ
January 28, 2019ಮೈಸೂರು: ಮೈಸೂ ರಿನ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ಶನಿವಾರ ನಡೆದ 70ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮೈಸೂರು ಜಿಲ್ಲೆಯ ಐವರು ಸರ್ಕಾರಿ ಅಧಿಕಾರಿಗಳಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಸೂಪರಿಂಟೆಂಡಿಂಗ್ ಇಂಜಿನಿ ಯರ್ ಬಿಕೆ.ಸುರೇಶಬಾಬು, ಜಿಲ್ಲಾ ಸಂತಾ ನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿ ಕಾರಿ ಡಾ.ಎಲ್.ರವಿ, ಮೈಸೂರು, ಮಹಾ ನಗರಪಾಲಿಕೆಯ ಪರಿಸರ ಇಂಜಿನಿಯರ್ ಟಿ.ಎಂ.ಪೂರ್ಣಿಮಾ, ಜಿಲ್ಲಾ ಪಂಚಾಯ್ತಿ ಪ್ರಥಮ ದರ್ಜೆ ಸಹಾಯಕ ಬಿ.ಎಸ್. ಪದ್ಮಾಕ್ಷಿ ಮತ್ತು ಕೆ.ಆರ್.ನಗರ ತಾಲೂಕು ಕಛೇರಿ…
ರಾಮನ ಬಗ್ಗೆ ಮಾತನಾಡುವವರನ್ನು ಪ್ರಶ್ನಿಸುವವರು ಮೂಲ ರಾಮಾಯಣ ಓದಿಲ್ಲ
January 28, 2019ಮೈಸೂರು: ಮುಗ್ಧತೆ ಮತ್ತು ಮನುಷ್ಯತ್ವದಿಂದ ನೋಡಿದರೆ ರಾಮ ಇಷ್ಟ ಆಗುವುದಿಲ್ಲ. ರಾಮನ ಬಗ್ಗೆ ಮಾತನಾಡಿ ದರೆ ಪ್ರಶ್ನೆ ಮಾಡುವವರು, ದೂರು ದಾಖ ಲಿಸುವವರು ಮೂಲ ರಾಮಾಯಣ ಓದಿಲ್ಲ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ಮಟ್ಟು ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರದ ಆವರಣ ದಲ್ಲಿ ಚಾಮರಾಜನಗರದ ರಂಗವಾಹಿನಿ, ಗಾನಾಸುಮಾ ಮ್ಯೂಸಿಕಲ್ ಗ್ರೂಪ್ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಮಾರಂಭ ದಲ್ಲಿ ಗಾನಾಸುಮಾ ಪಟ ್ಟಸೋಮನಹಳ್ಳಿ ಅವರ `ಮಹಿಷ ಮಂಡಲ ಮಧ್ಯದೊಳಗೆ-ಸಂಶೋಧಿತ ಕವನ ಸಂಕಲನ’ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು. ನಾವು ನಿಜವಾದ…
ನೈರುತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಗಣರಾಜ್ಯೋತ್ಸವ
January 28, 2019ಮೈಸೂರು: ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ ಕೆಆರ್ಎಸ್ ರಸ್ತೆಯಲ್ಲಿರುವ ರೈಲ್ವೇ ಕ್ರೀಡಾ ಮೈದಾನ ದಲ್ಲಿ ಶನಿವಾರ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಪರ್ಣ ಗರ್ಗ್ ಅವರು ರಾಷ್ಟ್ರಧ್ವಜಾರೋಹಣ ಮಾಡಿದ ಬಳಿಕ ರೈಲ್ವೆ ಭದ್ರತಾ ಸಿಬ್ಬಂದಿಗಳಿಂದ ಪಥ ಸಂಚಲನ ಪರಿವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರಸಕ್ತ ಹಣಕಾಸು ವರ್ಷದ 9 ತಿಂಗಳಲ್ಲಿ ಮೈಸೂರು ರೈಲ್ವೆ ವಿಭಾಗವು ಗಣನೀಯ ಸಾಧನೆಗೈದಿದೆ ಎಂದರು. 71 ಕಿಮೀ ಉದ್ದದ ದ್ವಿಪಥ ಯೋಜನೆ, 87…
1473 ಮಂದಿಗೆ ಉಚಿತ ಆರೋಗ್ಯ ತಪಾಸಣೆ
January 28, 2019ಮೈಸೂರು: `ಆರೋಗ್ಯ ಮೈಸೂರು’ ಯೋಜನೆಯಡಿ ಕ್ಯಾನ್ಸರ್ ಜಾಗೃತಿ -ಚಿಕಿತ್ಸಾ ಅಭಿಯಾನ ಹಮ್ಮಿಕೊಂಡಿರುವ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಮೈಸೂರಿನ ನಟರಾಜ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 3ನೇ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕ್ಷೇತ್ರ ವ್ಯಾಪ್ತಿಯ 49, 50 ಮತ್ತು 51ನೇ ವಾರ್ಡ್ನ 1473 ಮಂದಿ ಆರೋಗ್ಯ ಸಂಬಂಧಿತ ತಪಾಸಣೆಗೆ ಒಳಗಾದರು. ಪ್ರತಿ ಭಾನುವಾರ ಒಂದೊಂದು ಕಡೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸ ಲಾಗುತ್ತಿದ್ದು, ಇಂದು ಬೆಳಿಗ್ಗೆ 7 ಗಂಟೆ ಯಿಂದ ಮಧ್ಯಾಹ್ನ 2 ಗಂಟೆವರೆಗೆ…
ಪ್ಯಾಂಥರ್ಸ್ ಕಮಾಂಡೋ ಪಡೆಯ ಆಕರ್ಷಕ ಅಣಕು ಪ್ರದರ್ಶನ
January 28, 2019ಮೈಸೂರು: ಗಣ್ಯ ಹಾಗೂ ಅತೀ ಗಣ್ಯ ವ್ಯಕ್ತಿಗಳ ಭದ್ರತೆ ಹಾಗೂ ಮನೆಯೊಳಗೆ ಅಡಗಿದ ಭಯೋತ್ಪಾದಕರ ವಿರುದ್ಧ ಹೋರಾಡುವ ಕಾರ್ಯಚರಣೆ ಬಗ್ಗೆ ಮೈಸೂರು ನಗರ ಪ್ಯಾಂಥರ್ಸ್ ಕಮಾಂಡೋ ಪಡೆಯ ಸಿಬ್ಬಂದಿಗಳು ಅತ್ಯಾಕರ್ಷಕ ಅಣಕು ಪ್ರದರ್ಶನ ನೀಡಿ ಗಣರಾಜ್ಯೋತ್ಸವದಲ್ಲಿ ಎಲ್ಲರ ಮನ ಸೆಳೆದರು. ಮೈಸೂರಿನ ಬನ್ನಿಮಂಟಪದ ಕವಾಯಿತು ಮೈದಾನದಲ್ಲಿ ಶನಿವಾರ ನಡೆದ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಥಸಂಚಲನ ಮಾಡಿದ ಸಿಟಿ ಪ್ಯಾಂಥರಸ್ ಕಮಾಂಡೋ ತಂಡದ ಸಿಬ್ಬಂದಿಗಳು, ನಂತರ ಗಣ್ಯರನ್ನು ಭಯೋತ್ಪಾದಕರಿಂದ ರಕ್ಷಿಸಿ ಸುರಕ್ಷಿತವಾಗಿ ಕರೆದೊಯ್ಯುವ ಕಾರ್ಯಾಚರಣೆಯನ್ನು ಅಣಕು ಪ್ರದರ್ಶನ…