Tag: Mysuru

ಮೈಸೂರು ಜಿಲ್ಲಾ ಬ್ರಾಹ್ಮಣ  ಸಂಘದಿಂದ ಸ್ವಚ್ಛ ನಗರ ಅಭಿಯಾನ
ಮೈಸೂರು

ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದಿಂದ ಸ್ವಚ್ಛ ನಗರ ಅಭಿಯಾನ

January 21, 2019

ಮೈಸೂರು: ಮೈಸೂರನ್ನು ಸ್ವಚ್ಛ ನಗರ ನಂ.1 ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಚಾಮುಂಡಿ ಪುರಂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ಕೈಗೊಳ್ಳ ಲಾಯಿತು. ಮನೆ ಮನೆಗೂ ತೆರಳಿ ಮೈಸೂರು ನಗರವನ್ನು ನಂ.1 ಸ್ಥಚ್ಛ ನಗರವಾಗಿ ಸಲು ಕಸ ವಿಲೇವಾರಿ ಕುರಿತು ಕರಪತ್ರಗಳನ್ನು ವಿತರಿಸಿ ಜನಜಾಗೃತಿ ಮೂಡಿಸಲಾಯಿತು. ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಸ್ವಚ್ಛ ಸರ್ವೇಕ್ಷಣಾ ತಂಡವು ಈಗಾಗಲೇ ಸರ್ವೇಕ್ಷಣೆ ನಡೆಸುತ್ತಿದ್ದು, ಇದಕ್ಕಾಗಿ ಮೈಸೂರನ್ನು ಸಂಪೂರ್ಣ…

ಮೈಸೂರಲ್ಲಿ ಯೋಧರ ಚಿತ್ರಕಲಾ ಪ್ರದರ್ಶನ
ಮೈಸೂರು

ಮೈಸೂರಲ್ಲಿ ಯೋಧರ ಚಿತ್ರಕಲಾ ಪ್ರದರ್ಶನ

January 21, 2019

ಮೈಸೂರು: ಸೈನಿಕ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿ ಯಲ್ಲಿ ಶಿಕ್ಷಕ, ಕಲಾವಿದ ಯು.ಜಿ.ಮೋಹನ್ ಕುಮಾರ್ ಆರಾಧ್ಯ ರಚಿಸಿರುವ `ಯೋಧರ ಚಿತ್ರ ಕಲಾ ಪ್ರದರ್ಶನ’ ಗಮನ ಸೆಳೆಯಿತು. ಕಾರ್ಗಿಲ್ ಯುದ್ಧ, ಹುರಿ ದಾಳಿ ಸೇರಿ ದಂತೆ ವಿವಿಧ ಸಂಧರ್ಭದಲ್ಲಿ ಉಗ್ರರ ದಾಳಿಗೆ ಒಳಗಾಗಿ ವೀರಮರಣವನ್ನಪ್ಪಿ ಪರಮ ವೀರ ಚಕ್ರ’ ಹಾಗೂಮಹಾವೀರ ಚಕ್ರ’ ಬಿರುದು ಪಡೆದಿರುವ 55 ವೀರ ಯೋಧರ ಚಿತ್ರವನ್ನು ಪ್ರದರ್ಶಿಸಲಾಗಿದೆ. ಒಂದು ದಿನದ ಈ ಪ್ರದರ್ಶನವನ್ನು ಇಂದು ಬೆಳಿಗ್ಗೆ ನಿವೃತ್ತ ಸುಬೇದಾರ್ ಮೇಜರ್…

ಹೃದಯಾಘಾತದಿಂದ ಪೇದೆ ಸಾವು
ಮೈಸೂರು

ಹೃದಯಾಘಾತದಿಂದ ಪೇದೆ ಸಾವು

January 21, 2019

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಕಾರ್ಯಕ್ರಮದ ಬಂದೋಬಸ್ತ್‍ಗೆ ನಿಯೋ ಜನೆಗೊಂಡಿದ್ದ ಪೇದೆ ಯೊಬ್ಬರು ಹೃದಯಾ ಘಾತಕ್ಕೀಡಾಗಿ ಮೃತಪಟ್ಟಿ ರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮೈಸೂರಿನ ವಿವಿ ಪುರಂ ಸಂಚಾರ ಠಾಣೆಯ ಪೇದೆ ಲಕ್ಷ್ಮೀಕಾಂತ ನಗರದ ನಿವಾಸಿ ಗಿರೀಶ್ (33) ಮೃತಪಟ್ಟ ಪೇದೆ. ಮೈಸೂರಿನ ಬನ್ನಿಮಂಟಪ ಪಂಜಿನ ಕವಾಯತು ಮೈದಾನ ದಲ್ಲಿ ಶನಿವಾರ ಸಂಜೆ ನಡೆದ ನಿಖಿಲ್ ಕುಮಾರಸ್ವಾಮಿ ಅಭಿನಯದ `ಸೀತಾರಾಮ ಕಲ್ಯಾಣ’ ಚಲನ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ…

ಸರ್ಕಾರಿ ಫಲಕ ಕಿತ್ತೆಸೆದವರ ವಿರುದ್ಧ ಎಫ್‍ಐಆರ್ ದಾಖಲು
ಮೈಸೂರು

ಸರ್ಕಾರಿ ಫಲಕ ಕಿತ್ತೆಸೆದವರ ವಿರುದ್ಧ ಎಫ್‍ಐಆರ್ ದಾಖಲು

January 21, 2019

ಮೈಸೂರು: ಮೈಸೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿ ದೊಡ್ಡಕೆರೆ ಮೈದಾನಕ್ಕೆ ಸೇರಿದ ಸರ್ಕಾರಿ ಆಸ್ತಿಯಲ್ಲಿ ಜಿಲ್ಲಾಡಳಿತ ಅಳವಡಿಸಿದ್ದ ಫಲಕವನ್ನು ದುಷ್ಕರ್ಮಿಗಳು ಕಿತ್ತೆಸೆದಿದ್ದು, ಈ ಸಂಬಂಧ ತಹಶೀಲ್ದಾರ್ ಟಿ.ರಮೇಶ್ ಬಾಬು ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೈಸೂರು ಸರ್ವೆ ನಂ.1ರಲ್ಲಿ 150 ಕೋಟಿ ರೂ. ಮೌಲ್ಯದ 11.38 ಎಕರೆ ಭೂಮಿಯನ್ನು ಟ್ಯಾಂಕ್‍ಬಂಡ್ ನಿವೇಶನಗಳ ಮಾಲೀಕರ ಸಂಘ ತನ್ನದೆಂದು ನಾಮಫಲಕ ಹಾಕಿತ್ತು. ಈ ಹಿನ್ನೆಲೆಯಲ್ಲಿ ಜ.10ರಂದು ತಹಶೀಲ್ದಾರ್ ಟಿ.ರಮೇಶ್ ಬಾಬು ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಿತ್ತು. ಅಲ್ಲದೇ 3…

ಶ್ರೀ ಸತ್ಯನಾರಾಯಣಸ್ವಾಮಿಗೆ ಬೆಳ್ಳಿ ಕವಚ ಸಮರ್ಪಣೆ
ಮೈಸೂರು

ಶ್ರೀ ಸತ್ಯನಾರಾಯಣಸ್ವಾಮಿಗೆ ಬೆಳ್ಳಿ ಕವಚ ಸಮರ್ಪಣೆ

January 21, 2019

ಮೈಸೂರು: ಮೈಸೂರಿನ ಬಿ.ಎಂ.ಶ್ರೀನಗರದದ 2ನೇ ಮುಖ್ಯರಸ್ತೆಯಲ್ಲಿರುವ ಶ್ರೀ ಮಹಾ ಗಣಪತಿ ದೇವಾಲಯದಲ್ಲಿ ಶ್ರೀ ಸತ್ಯ ನಾರಾಯಣಸ್ವಾಮಿಗೆ ಬೆಳ್ಳಿ ಕವಚ ಸಮರ್ಪಣೆ ಸಮಾರಂಭ ನೆರವೇರಿತು. ಭಾನುವಾರ ಸಂಜೆ 6 ಗಂಟೆಗೆ ಶ್ರೀ ಸತ್ಯನಾರಾಯಣಸ್ವಾಮಿಗೆ ಪಂಚಾಮೃತ ಅಭಿಷೇಕ, ಸತ್ಯನಾರಾಯಣ ಪೂಜೆ ಇನ್ನಿತರ ಪೂಜಾ ಕೈಂಕರ್ಯಗಳ ಬಳಿಕ ದೇವರಿಗೆ ಬೆಳ್ಳಿ ಕವಚ ದಾರಣೆ ಮಾಡಲಾಯಿತು. ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ಸ್ಥಳೀಯ ಕಾರ್ಪೊರೇಟರ್ ವಿ.ರಮೇಶ್, ಮಾಜಿ ಕಾರ್ಪೊರೇಟರ್ ದೇವರಾಜು, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ರಾಜಪ್ಪ, ಉಪಾಧ್ಯಕ್ಷ…

ಬಿವಿಬಿ ಭವನೋತ್ಸವಕ್ಕೆ ಚಾಲನೆ
ಮೈಸೂರು

ಬಿವಿಬಿ ಭವನೋತ್ಸವಕ್ಕೆ ಚಾಲನೆ

January 20, 2019

ಮೈಸೂರು: ಮೈಸೂ ರಿನ ಭಾರತೀಯ ವಿದ್ಯಾಭವನದಲ್ಲಿ ಇಂದಿನಿಂದ 2 ದಿನಗಳ ಕಾಲ ಆಯೋ ಜಿಸಿರುವ ಭವನೋತ್ಸವ-2018ಕ್ಕೆ ಶನಿ ವಾರ ಚಾಲನೆ ನೀಡಲಾಯಿತು. ಭಾರತೀಯ ವಿದ್ಯಾಭವನ ಮೈಸೂರು ಕೇಂದ್ರದ ಕಲಾವಿಭಾಗ ಆಯೋಜಿಸಿರುವ `ಕುಲಪತಿ ಡಾ.ಕೆ.ಎಂ.ಮುನ್ಷಿ ಅವರ 131ನೇ ಜನ್ಮೋತ್ಸವ ಹಾಗೂ 18ನೇ ವರ್ಷದ ಭವ ನೋತ್ಸವ-2018ಕ್ಕೆ ಸುರಭಿ ಗಾನ ಕಲಾ ಮಂದಿರದ ನಿರ್ದೇಶಕಿ ಹಾಗೂ ಪ್ರಸಿದ್ದ ಕರ್ನಾಟಕ ಸಂಗೀತ ವಿದುಷಿ ಡಾ.ಸುಕನ್ಯಾ ಪ್ರಭಾಕರ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ವಿದುಷಿ ಡಾ.ಸುಕನ್ಯಾ ಪ್ರಭಾ ಕರ್…

ಮಹಾಯೋಗಿ ಶ್ರೀ ವೇಮನ ಸ್ಮರಣೆ
ಮೈಸೂರು

ಮಹಾಯೋಗಿ ಶ್ರೀ ವೇಮನ ಸ್ಮರಣೆ

January 20, 2019

ಮೈಸೂರು: ತೆಲುಗು ಕವಿ ವೇಮನ ಚಿಂತನೆಗಳು ಸಮಾಜಕ್ಕೆ ಇಂದು ಅನಿವಾರ್ಯ ಎಂದು ರಾಜ್ಯ ಮುಕ್ತ ವಿವಿ ಕನ್ನಡ ಪ್ರಾಧ್ಯಾಪಕಿ ಡಾ. ಜ್ಯೋತಿ ಶಂಕರ್ ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾ ಯೋಗಿ ಶ್ರೀ ವೇಮನ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ಏರ್ಪಡಿ ಸಿದ್ದ `ಮಹಾಯೋಗಿ ಶ್ರೀವೇಮನ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ಕವಿಗಳಾದ ಸರ್ವಜ್ಞ ಮತ್ತು ತಿರು ವಳ್ಳುವರ್ ಅವರ ಸಮಕಾಲೀನರಾಗಿದ್ದ ವೇಮನ ಕವಿಗಳು ತಮ್ಮ…

ಮೈಸೂರಿನಲ್ಲಿ ಜನಾಕರ್ಷಿಸುತ್ತಿದೆ  ಗೆಡ್ಡೆ-ಗೆಣಸು ಮೇಳ
ಮೈಸೂರು

ಮೈಸೂರಿನಲ್ಲಿ ಜನಾಕರ್ಷಿಸುತ್ತಿದೆ ಗೆಡ್ಡೆ-ಗೆಣಸು ಮೇಳ

January 20, 2019

ಮೈಸೂರು: ಮೈಸೂ ರಿನ ಕರ್ಜನ್ ಪಾರ್ಕ್‍ನಲ್ಲಿ ಎರಡು ದಿನದ ಗೆಡ್ಡೆ-ಗೆಣಸು ಮೇಳ ಶನಿವಾರ ಆರಂಭವಾಗಿದ್ದು, 200ಕ್ಕೂ ಹೆಚ್ಚು ಗೆಡ್ಡೆ ಗೆಣಸುಗಳನ್ನು ಪ್ರದರ್ಶನಕ್ಕಿಟ್ಟು ಅರಿವು ಮೂಡಿಸಲಾಗುತ್ತಿದೆ. ತೋಟಗಾರಿಕಾ ಇಲಾಖೆ, ಸಹಜ ಸಮೃದ್ಧ ಸಂಸ್ಥೆ, ಬಾಗಲಕೋಟೆ ತೋಟ ಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಇನ್ನಿತರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ಕೇರಳದಿಂದ ಸುಮಾರು 30ಕ್ಕೂ ಹೆಚ್ಚು ಗೆಡ್ಡೆ, ಗೆಣಸು ಬೆಳೆಗಾರರು ಹಾಗೂ ಸಂರಕ್ಷಕರು ಪಾಲ್ಗೊಂಡು, ಅವುಗಳ ಮಹತ್ವವನ್ನು ವಿವರಿಸುತ್ತಿದ್ದಾರೆ. 200ಕ್ಕೂ ಹೆಚ್ಚು ಬಗೆಯ ಗೆಡ್ಡೆ,…

ಫೆ.2ರ ಅಭಿನಂದನಾ ಸಮಾರಂಭಕ್ಕೂ ಬ್ರಾಹ್ಮಣ ಮಹಾಸಭಾಕ್ಕೂ ಸಂಬಂಧವಿಲ್ಲ ಮೈಸೂರು ಬ್ರಾಹ್ಮಣ ಸಭಾ ಅಧ್ಯಕ್ಷ ಡಿ.ಟಿ.ಪ್ರಕಾಶ್ ಸ್ಪಷ್ಟನೆ
ಮೈಸೂರು

ಫೆ.2ರ ಅಭಿನಂದನಾ ಸಮಾರಂಭಕ್ಕೂ ಬ್ರಾಹ್ಮಣ ಮಹಾಸಭಾಕ್ಕೂ ಸಂಬಂಧವಿಲ್ಲ ಮೈಸೂರು ಬ್ರಾಹ್ಮಣ ಸಭಾ ಅಧ್ಯಕ್ಷ ಡಿ.ಟಿ.ಪ್ರಕಾಶ್ ಸ್ಪಷ್ಟನೆ

January 20, 2019

ಮೈಸೂರು: ಮೇಲ್ಜಾತಿಯ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡಿರುವುದನ್ನು ಸ್ವಾಗತಿಸಿ ಫೆ.2ರಂದು ನಡೆಸಲು ಉದ್ದೇಶಿರುವ ಅಭಿನಂದನಾ ಸಮಾರಂಭಕ್ಕೂ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಗೂ ಯಾವುದೇ ಸಂಬಂಧವಿಲ್ಲ ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲÉೀ ಬಿ.ವಿ.ಮಂಜುನಾಥ್ ಅವರು ಪ್ರಸ್ತುತ ಅವಧಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾಗಿಲ್ಲ ಹಾಗೂ ಡಾ.ಬಿ.ಆರ್.ನಟರಾಜ ಜೋಯಿಸ್ ಅವರು ಮಹಾಸಭಾದ ವಲಯ ಉಪಾಧ್ಯಕ್ಷರಾಗಿರುವುದಿಲ್ಲ. ಅವರಿಗೂ, ಮಹಾಸಭಾಕ್ಕೂ ಯಾವುದೇ ಸಂಬಂಧ ವಿಲ್ಲ…

ಪ್ರಶ್ನೆ ಪತ್ರಿಕೆ ಸೋರಿಕೆ:  ವದಂತಿಗಳಿಗೆ ಕಿವಿಗೊಡಬೇಡಿ
ಮೈಸೂರು

ಪ್ರಶ್ನೆ ಪತ್ರಿಕೆ ಸೋರಿಕೆ: ವದಂತಿಗಳಿಗೆ ಕಿವಿಗೊಡಬೇಡಿ

January 20, 2019

ಮೈಸೂರು: ಕರ್ನಾಟಕ ಸ್ಟೇಟ್ ಪೊಲೀಸ್ ಇಲಾಖೆ ವತಿಯಿಂದ ಸಿವಿಲ್ ಪೊಲೀಸ್ ಸಬ್-ಇನ್ಸ್ ಪೆಕ್ಟರ್‍ನ 190 ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದ ಅರ್ಹ ಅಭ್ಯರ್ಥಿಗಳಿಗೆ ಜ.13ರಂದು ಬೆಂಗ ಳೂರು, ಮೈಸೂರು, ಬೆಳಗಾವಿ, ದಾವಣಗೆರೆ, ಕಲಬು ರಗಿ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಈ ಸಂಬಂಧ ಕೆಲವೊಂದು ಮಾಧ್ಯಮಗಳಲ್ಲಿ ಪ್ರಶ್ನೆ ಪತ್ರಿಕೆಯು ಸೋರಿಕೆಯಾಗಿರುವ ಬಗ್ಗೆ ಪ್ರಸಾರವಾದ ಕಾರಣ ಕೆಲವು ವದಂತಿಯಾಗಿದ್ದು, ಕೆಲವು ವಂಚನೆ ಕೋರರು ಅಭ್ಯರ್ಥಿಗಳಿಗೆ ಮೋಸ ಮಾಡುವ ಸಲುವಾಗಿ ಪಿಎಸ್‍ಐ ಹುದ್ದೆಯ ಪ್ರಶ್ನೆ ಪತ್ರಿಕೆ ನಮ್ಮಲ್ಲಿ ಅಭ್ಯವಿರುವು ದಾಗಿ…

1 120 121 122 123 124 194
Translate »