ಮೈಸೂರು: ರೈತ ಕಾರ್ಮಿಕರ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಗಳನ್ನು ವಿರೋಧಿಸಿ, ರೈತ ಕಾರ್ಮಿಕರ ಪರವಾದ ನೀತಿಗಳ ಜಾರಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ಮತ್ತು ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಮೈಸೂರು ಜಿಲ್ಲಾ ಸಮಿತಿ ಕಾರ್ಯಕರ್ತರು ಶನಿವಾರ ಮೈಸೂರು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಸಾಲ ಬಾಧಿತ ರೈತರ ಸಾಲ ಮನ್ನಾ ಮಾಡಬೇಕು. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ರೈತರ ಬೆಳೆಗೆ ವೈಜ್ಞಾನಿಕವಾಗಿ ಲೆಕ್ಕಿಸಲಾದ ಒಟ್ಟು ವೆಚ್ಚಕ್ಕೆ…
ಮುಂದುವರೆದ ವರ್ಗಾವಣೆ ಪರ್ವ:12 ಮಂದಿ ಐಎಎಸ್ ಅಧಿಕಾರಿಗಳ ವರ್ಗ
January 20, 2019ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ವರ್ಗಾವಣೆ ಪರ್ವ ಮುಂದುವರೆದಿದ್ದು, ಮತ್ತೆ 12 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾ ವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಎಂ.ಕೆ.ಅಯ್ಯಪ್ಪ, ಕಾರ್ಯ ದರ್ಶಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ ಅಭಿವೃದ್ಧಿ ಇಲಾಖೆ. (ಆರ್ಡಿಪಿಆರ್ಡಿ). ಜಿ.ಎನ್. ಶಿವಮೂರ್ತಿ, ಆಯುಕ್ತರು, ಉದ್ಯಮ ಮತ್ತು ಲೈವ್ಲಿ ಹುಡ್ ಬೆಂಗಳೂರು. ಕೆ.ಜಿ.ಶಾಂತಾರಾಂ, ಆಯುಕ್ತರು, ಕರ್ನಾ ಟಕ ಗೃಹ ಮಂಡಳಿ. ಆರ್.ರಾಮ ಚಂದ್ರನ್, ಹೆಚ್ಚುವರಿ ಆಯುಕ್ತರು, ಬಾಗಲಕೋಟೆ. ಡಾ.ಕೆ.ವಿ. ರಾಜೇಂದ್ರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಬೆಳಗಾವಿ. ವೆಂಕಟ್…
ಚಿಕ್ಕಬಳ್ಳಾಪುರದಲ್ಲಿ ವಿಷ ಹಾಕಿದ್ದ ಕಾಫಿ ಸೇವಿಸಿ ತಾಯಿ-ಮಗಳು ದುರ್ಮರಣ
January 20, 2019ಚಿಕ್ಕಬಳ್ಳಾಪುರ: ಸುಳ್ವಾಡಿ ವಿಷ ಪ್ರಸಾದ, ಯಾದಗಿರಿಯ ವಿಷದ ನೀರಿನ ದುರಂತ ಮಾಸುವ ಮುನ್ನವೇ ರಾಜ್ಯದಲ್ಲಿ ಇನ್ನೊಂದು ಅಂತಹುದೇ ಘಟನೆ ನಡೆದಿದೆ. ವಿಷ ಬೆರೆತ ಕಾಫಿ ಸೇವನೆ ಮಾಡಿ ತಾಯಿ, ಮಗಳು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇ ಪಲ್ಲಿಯಲ್ಲಿ ನಡೆದಿದೆ. ಬಾಗೇಪಲ್ಲಿ ತಾಲೂಕಿನ ಬತ್ತಲಹಳ್ಳಿ ಗ್ರಾಮದ ಅಕ್ಕಲಮ್ಮ (80) ಮತ್ತು ನರಸಮ್ಮ(60) ಕಾಫಿ ಕುಡಿದು ಸಾವನ್ನಪ್ಪಿದ ದುರ್ದೈವಿಗಳು .ಇದೇ ವೇಳೆ ಕಾಫಿ ಸೇವನೆ ಮಾಡಿದ್ದ ಮ್ಮೊಮ್ಮಕ್ಕಳಾದ ಅರ್ಜುನ್ (7), ಆರತಿ (4) ಅಪಾಯದಿಂದ ಪಾರಾಗಿದ್ದಾರೆ. ಚಿಂತಾಮಣಿ ಆಸ್ಪತ್ರೆಯಲ್ಲಿ…
ಡಾ.ಎಸ್.ಎಲ್.ಭೈರಪ್ಪರ ಜನಪ್ರಿಯತೆ ಸಹಿಸದೇ ವಿಚ್ಛಿದ್ರಕಾರಕ ಶಕ್ತಿಗಳು `ಆವರಣ’ ವಿರೋಧಿಸಿದವು
January 19, 2019ಮೈಸೂರು: ಡಾ.ಎಸ್.ಎಲ್. ಭೈರಪ್ಪನವರ ಜನಪ್ರಿಯತೆ ಸಹಿಸದೇ ಅವರ `ಆವರಣ’ ಕಾದಂಬರಿ ಬಗ್ಗೆ ವಿಚ್ಛಿದ್ರಶಕ್ತಿ ಗಳು ಕರ್ನಾಟಕದಲ್ಲಿ ವಿರೋಧ ವ್ಯಕ್ತಪಡಿ ಸಿದವು. ಅಲ್ಲದೆ, ಕರ್ನಾಟಕದ ಬುದ್ಧಿಜೀವಿ ಗಳು ಇಲ್ಲಿಯವರೆಗೆ ಮಲೆಯಾಳಂ ಭಾಷೆಗೆ ಭೈರಪ್ಪ ಅವರ ಸಾಹಿತ್ಯ ಅನುವಾದ ಆಗ ದಂತೆ ನೋಡಿಕೊಂಡಿದ್ದರು ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಭಾಷಾ ತಜ್ಞ ಡಾ.ಪ್ರಧಾನ ಗುರುದತ್ ವಿಷಾದ ವ್ಯಕ್ತಪಡಿಸಿದರು. ಮೈಸೂರಿನ ಕಲಾಮಂದಿದಲ್ಲಿ ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವದ…
ಖ್ಯಾತ ಸಂಗೀತಗಾರ ಡಾ.ರಾ.ಸತ್ಯನಾರಾಯಣರಿಗೆ ‘ಕಲಾ ಶಾಸ್ತ್ರೋತ್ತುಂಗ’ ಪ್ರಶಸ್ತಿ ಪ್ರದಾನ
January 19, 2019ಮೈಸೂರು: ಮೈಸೂರಿನ ಜಗನ್ಮೋಹನ ಅರ ಮನೆಯಲ್ಲಿ ಕಲಾಸಂದೇಶ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ‘ಕಲಾಭಿವರ್ಧನ-2019’ ಸಂಗೀತ ಕಾರ್ಯಕ್ರಮದಲ್ಲಿ ಪ್ರಖ್ಯಾತ ಸಂಗೀತ ಹಾಗೂ ನೃತ್ಯ ಶಾಸ್ತ್ರಜ್ಞ ಪದ್ಮಶ್ರೀ ಪುರಸ್ಕøತ ಡಾ.ರಾ.ಸತ್ಯನಾರಾ ಯಣ ಅವರಿಗೆ ‘ಕಲಾ ಶಾಸ್ತ್ರೋತ್ತುಂಗ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಾರಾಣಾಸಿಯ ಇಂದಿರಾಗಾಂಧಿ ರಾಷ್ಟ್ರೀಯ ಸಾಂಸ್ಕøತಿಕ ಸಂಸ್ಥೆ ನಿರ್ದೇಶಕ ಡಾ.ವಿಜಯ ಶಂಕರ್ ಶುಕ್ಲ ಮಾತನಾಡಿ, ಕಳೆದ 21 ವರ್ಷಗಳಿಂದ ಡಾ.ರಾ.ಸತ್ಯನಾರಾಯಣ ಅವರ ಶಿಷ್ಯನಾಗಿದ್ದೇನೆ. ಇಡೀ ಭಾರತವನ್ನೆ ಸುತ್ತಿದ್ದೇನೆ. ಆದರೆ, ಭರತನಾಟ್ಯ ಶಾಸ್ತ್ರವನ್ನು ಬರೆದ ಭರತ, ದತ್ತಿಲಾ ಹಾಗೂ…
ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಗೆ ನಾಲ್ವರು ಶಾಸಕರು ಚಕ್ಕರ್
January 19, 2019ಬೆಂಗಳೂರು: ಆಪರೇಷನ್ ಕಮಲದ ಸುಳಿಯಿಂದ ಪಾರಾಗಲು ಮತ್ತು ಪರ್ಯಾಯ ತಂತ್ರ ರೂಪಿಸುವ ಸಲುವಾಗಿ ಇಂದು ಕರೆಯಲಾಗಿದ್ದ ಮಹತ್ವದ ಕಾಂಗ್ರೆಸ್ ಶಾಸಕಾಂಗ ಸಭೆಗೆ ರಮೇಶ್ ಜಾರಕಿಹೊಳಿ ಸೇರಿದಂತೆ ನಾಲ್ವರು ಅತೃಪ್ತ ಶಾಸಕರು ಗೈರು ಹಾಜರಾಗುವುದರ ಮೂಲಕ ಪಕ್ಷಕ್ಕೆ ಸೆಡ್ಡು ಹೊಡೆದಿದ್ದಾರೆ. ರಮೇಶ್ ಜಾರಕಿಹೊಳಿ ಅಲ್ಲದೆ, ಬಿ.ನಾಗೇಂದ್ರ (ಬಳ್ಳಾರಿ ಗ್ರಾಮಾಂತರ), ಉಮೇಶ್ ಜಾಧವ್ (ಚಿಂಚೋಳಿ), ಮಹೇಶ್ ಕಮಟಹಳ್ಳಿ (ಅಥಣಿ) ಗೈರು ಹಾಜರಾಗಿದ್ದರು. ಅತೃಪ್ತರ ಗೈರು ಹಾಜರಾತಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಾಕ್ ನೀಡಿರುವುದಲ್ಲದೆ, ಆ ಮೂಲಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ…
ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಆಮಿಷ: ಸಿದ್ದರಾಮಯ್ಯ ಕಿಡಿ
January 19, 2019ಬೆಂಗಳೂರು: ತಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕರ ರಕ್ಷಣೆಗಾಗಿ ತಾವೂ ಕೂಡ ರೆಸಾರ್ಟ್ಗೆ ಹೋಗುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಆಪರೇಷನ್ ಕಮಲ ನಡೆಸಿ ಎರಡು-ಮೂರು ಬಾರಿ ಮುಖಭಂಗ ಅನುಭವಿಸಿದ್ದರೂ, ಬಿಜೆಪಿಯವರು ಪ್ರಜಾಪ್ರಭುತ್ವದ ಹಾದಿಗೆ ವಿರುದ್ಧವಾಗಿ ನಡೆಯುವುದನ್ನು ಬಿಟ್ಟಿಲ್ಲ. ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ…
ಚಾಮುಂಡಿಬೆಟ್ಟ ಮೀಸಲು ಅರಣ್ಯ ಸಂರಕ್ಷಣೆಗಾಗಿ ಬೇಲಿ
January 19, 2019ಮೈಸೂರು: ಚಾಮುಂಡಿಬೆಟ್ಟದ ಮೀಸಲು ಅರಣ್ಯ ಸಂರಕ್ಷಣೆಗೆ ಮುಂದಾಗಿರುವ ಅರಣ್ಯ ಇಲಾಖೆ, ಬೆಟ್ಟದ ಮೇಲೆ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಳ್ಳುವುದನ್ನು ತಡೆಗಟ್ಟಲು ಬೇಲಿ ನಿರ್ಮಾಣ ಮಾಡಿ ಅರಣ್ಯದ ಸರಹದ್ದು ಭದ್ರಪಡಿಸಿಕೊಳ್ಳಲು ಮುಂದಾಗಿದೆ. ಬೆಟ್ಟದ ಮೇಲೆ ಅರಣ್ಯ ಪ್ರದೇಶಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಗ್ರಾಮಸ್ಥರು ಮನೆ ನಿರ್ಮಿಸಿ ಕೊಳ್ಳಲು ಮುಂದಾಗುತ್ತಿರುವುದನ್ನು ಗಮನಿಸಿದ ಅರಣ್ಯ ಇಲಾಖೆ ಮೀಸಲು ಅರಣ್ಯ ಒತ್ತುವರಿಯಾಗು ವುದನ್ನು ತಡೆಗಟ್ಟಲು ಹಾಗೂ ಬೆಟ್ಟದಲ್ಲಿರುವ ಕಾಡುಹಂದಿ, ಮುಳ್ಳುಹಂದಿ, ಚಿರತೆಗಳು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದ್ದ ಹಿನ್ನೆಲೆಯಲ್ಲಿ ಇದೀಗ…
ಕಾಂಗ್ರೆಸ್ ಶಾಸಕರಿಗೂ ರೆಸಾರ್ಟ್ ಭಾಗ್ಯ
January 19, 2019ಬೆಂಗಳೂರು: ಬಿಜೆಪಿ ಶಾಸಕರ ರೆಸಾರ್ಟ್ ವಾಸ್ತವ್ಯದ ಬಗ್ಗೆ ಟೀಕಾ ಪ್ರಹಾರ ನಡೆಸಿದ್ದ ಕಾಂಗ್ರೆಸ್ ಮುಖಂಡರು ಇಂದು ತಮ್ಮ ಪಕ್ಷದ ಶಾಸಕರಿಗೂ ರೆಸಾರ್ಟ್ ವಾಸ್ತವ್ಯದ ಭಾಗ್ಯ ಕಲ್ಪಿಸಿದ್ದಾರೆ. ಕಾಂಗ್ರೆಸ್ ಶಾಸ ಕಾಂಗ ಪಕ್ಷದ ಸಭೆ ಮುಗಿಯುತ್ತಿ ದ್ದಂತೆಯೇ ಕಾಂಗ್ರೆಸ್ನ ಎಲ್ಲಾ ಶಾಸಕ ರನ್ನೂ 2 ವಿಶೇಷ ಬಸ್ಗಳಲ್ಲಿ ರೆಸಾರ್ಟ್ಗೆ ಕರೆದೊಯ್ಯಲಾಯಿತು. ಕೆಲ ಶಾಸಕರು ಬಸ್ನಲ್ಲಿ ತೆರಳದೇ ತಮ್ಮ ಕಾರುಗಳಲ್ಲೇ ರೆಸಾರ್ಟ್ಗೆ ತೆರಳಿದರು. ಶಾಸಕರ ವಾಸ್ತವ್ಯಕ್ಕಾಗಿ ಬಿಡದಿಯಲ್ಲಿರುವ ಈಗಲ್ಟನ್ ಮತ್ತು ವಂಡರ್ಲಾಗಳಲ್ಲಿ ತಲಾ 30 ಕೊಠಡಿಗಳನ್ನು ಕಾಯ್ದಿರಿಸ ಲಾಗಿದೆ ಎಂದು…
ಅವರವರ ಶಾಸಕರ ಕಾಪಾಡಿಕೊಳ್ಳುವುದು ಅವರ ಕರ್ತವ್ಯ
January 19, 2019ಬೆಂಗಳೂರು: ಕಾಂಗ್ರೆಸ್ ಸಭೆಗೂ, ನಮಗೂ ಯಾವುದೇ ರೀತಿಯ ಸಂಬಂಧ ವಿಲ್ಲ. ಯಾವ ಶಾಸಕರು ಎಲ್ಲಿ ಹೋಗಿದ್ದಾರೋ ಅವರನ್ನು ಕರೆತರುವುದು ಅವರವರ ಪಕ್ಷದ ಜವಾಬ್ದಾರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು 104 ಶಾಸಕರು ಒಗ್ಗಟ್ಟಾ ಗಿದ್ದೇವೆ. ಗುರುಗ್ರಾಮ್ನಲ್ಲಿ ವಾಸ್ತವ್ಯ ಹೂಡಿರುವ ನಮ್ಮ ಸದಸ್ಯರು ಲೋಕಸಭೆ ಚುನಾವಣೆಯನ್ನು ಎದುರಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದರು. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಎಲ್ಲಿಗೆ ಹೋಗಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಬೇರೆ ಪಕ್ಷಗಳ ಆಂತರಿಕ ಚಟುವಟಿಕೆಗಳ ಬಗ್ಗೆ…