ಮೈಸೂರು: ಸುಳವಾಡಿ ಕಿಚ್ಗುತ್ ಮಾರಮ್ಮ ದೇವಸ್ಥಾನದ ಪ್ರಸಾದ ದಲ್ಲಿ ವಿಷ ಮಿಶ್ರಣ ಮಾಡಿ 17 ಮಂದಿಯ ಸಾವಿಗೆ ಕಾರಣರಾದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಎಸ್ಐಟಿಯಂತಹ ವಿಶೇಷ ತನಿಖಾ ತಂಡ ರಚಿಸಿ ಆರೋಪಿಗಳಿಗೆ ಜಾಮೀನು ಸಿಗದಂತೆ ಕಾನೂನು ಕ್ರಮ ಜರುಗಿಸಬೇಕು. ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತರ ಕುಟುಂಬದ ಸದಸ್ಯರಿಗೆ ನೆರವು ನೀಡಬೇಕೆಂದು ಧರಣಿ ನಿರತರು ಒತ್ತಾಯಿಸಿದರು. ದೇವರ…
ಮೇಲ್ವರ್ಗದ ಶೇ.10 ಮೀಸಲಾತಿಗೆ ಕಾಂಗ್ರೆಸ್ ಸ್ವಾಗತ
January 10, 2019ಮೈಸೂರು: ಕಾಂಗ್ರೆಸ್ ಎಂದಿಗೂ ಸಾಮಾಜಿಕ ನ್ಯಾಯದ ಪರವಿದೆ. ಕೇಂದ್ರ ಸರ್ಕಾರ ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರಿಗಾಗಿ ಶೇ.10 ರಷ್ಟು ಮೀಸಲಾತಿ ತಂದಿರುವುದನ್ನು ಸ್ವಾಗತಿ ಸುತ್ತೇವೆ. ಆದರೆ ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದು ನಾಲ್ಕು ವರ್ಷ, ಎಂಟು ತಿಂಗಳ ನಂತರ ಮೇಲ್ವರ್ಗದ ಮೀಸಲಾತಿ ಪ್ರಸ್ತಾಪ ಮಾಡಿರುವುದು ಚುನಾವಣಾ ಸ್ಟಂಟ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದ ಬಳಿ ಬುಧವಾರ ಮಧ್ಯಾಹ್ನ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಎಂದಿಗೂ ಮೀಸಲಾತಿಯನ್ನು ವಿರೋಧಿಸುವುದಿಲ್ಲ. ನಾವು ಸದಾ…
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕ್ಯಾಲೆಂಡರ್, ಡೈರಿ ಬಿಡುಗಡೆ
January 10, 2019ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 2019ನೇ ಸಾಲಿನ ಡೈರಿ ಹಾಗೂ ಕ್ಯಾಲೆಂಡರ್ ಅನ್ನು ಬುಧವಾರ ಬಿಡುಗಡೆಗೊಳಿಸಲಾಯಿತು. ಮೈಸೂರಿನ ಅಗ್ರಹಾರದ ತ್ಯಾಗರಾಜ ರಸ್ತೆಯಲ್ಲಿರುವ ಸಂಘದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸಮಾರಂಭ ದಲ್ಲಿ ಸಿದ್ಧಾರ್ಥನಗರದ ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಯವರ ಸಾನಿಧ್ಯದಲ್ಲಿ ನೂತನ ವರ್ಷದ ದಿನಚರಿ ಪುಸ್ತಕವನ್ನು (ಡೈರಿ) ಉದ್ಯಮಿ ತರುಣ್ಗಿರಿ ಹಾಗೂ ಕ್ಯಾಲೆಂಡರ್ (ದಿನ ದರ್ಶಿಕೆ) ಅನ್ನು ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಹೆಚ್.ವಿ.ರಾಜೀವ್ ಬಿಡು ಗಡೆ ಮಾಡಿದರು. ಬಳಿಕ ಮಾತನಾಡಿದ ತರುಣ್ಗಿರಿ,…
ಕ್ರೀಡೆ ಮನುಷ್ಯನ ಆರೋಗ್ಯಕ್ಕೆ ಪೂರಕ :ಸಿ.ಬಸವರಾಜು
January 10, 2019ಮೈಸೂರು: ಶಾರದಾ ವಿಲಾಸ ಪದವಿ ಪೂರ್ವಕಾಲೇಜಿನ ವಾರ್ಷಿಕ ಕ್ರೀಡಾಕೂಟ ‘ಸಮಷ್ಟಿ’ 2018 ಸಂಸ್ಥೆಯ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ಜಿಲ್ಲಾ ಕಬಡ್ಡಿ ಅಸೋಸಿಯೇ ಷನ್ನ ಅಧ್ಯಕ್ಷ ಸಿ.ಬಸವರಾಜು ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ‘ಕ್ರೀಡೆ ಮನುಷ್ಯನ ಆರೋಗ್ಯಕ್ಕೆ ಪೂರಕ ವಾತಾವರಣವನ್ನು ನಿರ್ಮಿಸುತ್ತದೆ. ಕ್ರೀಡೆಗಳಾದ ಕಬಡ್ಡಿ, ಖೋಖೋ, ಕುಂಟೆಬಿಲ್ಲೆ, ಲಗೋರಿ, ಹಗ್ಗ ಜಿಗಿತ ಸ್ಪರ್ಧೆಗಳಲ್ಲಿ ಇಂದಿನ ಯುವ ಜನಾಂಗ ಹೆಚ್ಚು ಹೆಚ್ಚು ಭಾಗವಹಿಸದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಪಠ್ಯಪುಸ್ತಕದ ಜೊತೆಗೆ ಸಹ ಪಠ್ಯೇತರ ಚಟುವಟಿಕೆಯಾದ ಕ್ರೀಡೆಯೂ…
ವಿಜ್ಞಾನ ಬೆಳವಣಿಗೆಗೆ ಕರ್ನಾಟಕದಲ್ಲಿ ನಿರಾಶಾದಾಯಕ ಪ್ರತಿಕ್ರಿಯೆ
January 10, 2019ಮೈಸೂರು: ಜೀವ ವೈವಿಧ್ಯತೆ ಕುರಿತು ಸಂಪನ್ಮೂಲ ವ್ಯಕ್ತಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ, ಚರ್ಚೆಗಳ ನಡೆಸುವ ಮೂಲಕ ವಿಜ್ಞಾನ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆ ಹಾಗೂ ಸಂಶೋಧನೆಗೆ ದೇಶದ ಮೂರು ವಿಜ್ಞಾನ ಅಕಾಡೆಮಿಗಳು ಒತ್ತು ನೀಡಿ, ನಡೆಸುತ್ತಿ ರುವ ಕಾರ್ಯಕ್ರಮಗಳಿಗೆ ಕರ್ನಾಟಕದಲ್ಲಿ ನಿರಾಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗಿ ರುವುದಕ್ಕೆ ಹಿರಿಯ ವಿಜ್ಞಾನಿ ಡಾ.ಕೆ.ಆರ್. ಶಿವಣ್ಣ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು. ಬೆಂಗಳೂರಿನ ಇಂಡಿಯನ್ ಅಕಾ ಡೆಮಿ ಆಫ್ ಸೈನ್ಸಸ್, ನ್ಯೂಡೆಲ್ಲಿಯ ಇಂಡಿ ಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ, ಅಲಹಾಬಾದ್ನ ದಿ ನ್ಯಾಷನಲ್ ಅಕಾ…
ಡಾಕ್ಟರ್, ಇಂಜಿನಿಯರ್ ಆಗುವ ಮುನ್ನ ಒಳ್ಳೆಯ ಪ್ರಜೆಗಳಾಗಿ
January 10, 2019ಮೈಸೂರು: ವಿದ್ಯಾರ್ಥಿ ಗಳು ಡಾಕ್ಟರ್, ಇಂಜಿನಿಯರ್ ಆಗುವುದ ಕ್ಕಿಂತ ಹೆಚ್ಚಾಗಿ ಒಳ್ಳೆಯ ಪ್ರಜೆಗಳಾಗಿ, ಮಾನ ವೀಯತೆಯ ಮೌಲ್ಯಗಳನ್ನು ಬೆಳೆಸಿಕೊಳ್ಳ ಬೇಕು ಎಂದು ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲೆ ಡಾ. ಧರಣಿದೇವಿ ಮಾಲಗತ್ತಿ ಹೇಳಿದರು. ನಗರದ ಕಲಾಮಂದಿರದಲ್ಲಿ ಬುಧವಾರ ನಡೆದ ಮಾರ್ಥೋಮ ಎಜುಕೇಶನ್ ಸೊಸೈಟಿಯ ಸೈಂಟ್ ಥಾಮಸ್ ಶಿಕ್ಷಣ ಸಂಸ್ಥೆಗಳ 55ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾ ರ್ಥಿಯು ವಿಭಿನ್ನ ವ್ಯಕ್ತಿತ್ವ ಹೊಂದಿರುತ್ತಾರೆ. ಎಲ್ಲರನ್ನೂ ಒಂದೇ ಮಾದರಿಯಲ್ಲಿ ಅಳೆಯ ಬಾರದು. ಬೇರೆ ಮಕ್ಕಳೊಂದಿಗೆ ಹೋಲಿಸಿ ಮಾತನಾಡಬಾರದು. ಅದರಿಂದ…
ಹಲ್ಲೆಗೊಳಗಾಗಿದ್ದ ರಾಕೇಶ್ಗೆ ಅಪೋಲೋ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ
January 10, 2019ಮೈಸೂರು: ಸೋಮವಾರಪೇಟೆ ತಾಲೂಕಿನ ಬೆಟ್ಟದಗುಡಿ ಬೆಟ್ಟದಲ್ಲಿ ಹಲ್ಲೆಗೊಳಗಾಗಿ ತೀವ್ರ ಗಾಯಗಳಾಗಿರುವ ರಾಕೇಶ್ಗೆ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಇಂದು ಸಂಜೆ ಶಸ್ತ್ರ ಚಿಕಿತ್ಸೆ ನಡೆಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ. ತಲೆಗೆ ತೀವ್ರವಾಗಿ ಗಾಯಗಳಾಗಿರುವ ರಾಕೇಶ್ನನ್ನು ಆಸ್ಪತ್ರೆಯ ಐಸಿಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಂದು ಸಂಜೆ ಆಪರೇಷನ್ ಮಾಡಲಾಯಿತು ಎಂದು ಕುಟುಂಬದವರು ತಿಳಿಸಿದರು. ಮೈಸೂರಿನ ಟಿ.ಕೆ.ಲೇಔಟ್ನಲ್ಲಿ ಬಾಡಿಗೆ ಕೊಠಡಿ ಮಾಡಿ ಕೊಂಡು ವಾಸಿಸುತ್ತಿದ್ದ ರಾಕೇಶ್, ಸರಸ್ವತಿಪುರಂನಲ್ಲಿರುವ ಎಸ್ಬಿಐ ಲೈಫ್ನಲ್ಲಿ ವ್ಯವಸ್ಥಾಪಕ ನಾಗಿ ಕೆಲಸ ಮಾಡುತ್ತಿದ್ದ. ಸೋಮವಾರಪೇಟೆ ತಾಲೂಕಿಗೆ ಹೋಗಿದ್ದೇಕೆ, ಹಲ್ಲೆ…
ದೇಶದಲ್ಲಿರುವುದು ಶೇ.20 ರಷ್ಟು ಅರಣ್ಯ, ಅದರಲ್ಲಿ ರಕ್ಷಿಸಿರುವುದು ಶೇ.5 ಮಾತ್ರ
January 10, 2019ಮೈಸೂರು: ದೇಶದಲ್ಲಿ ಶೇ.20 ರಷ್ಟು ಅರಣ್ಯ ಪ್ರದೇಶವಿದ್ದು, ಶೇ.5 ರಷ್ಟು ಅರಣ್ಯ ವನ್ನು ಮಾತ್ರ ರಕ್ಷಣೆ ಮಾಡಲಾಗುತ್ತಿದೆ. ಇನ್ನುಳಿದ ಶೇ.15 ರಷ್ಟು ಅರಣ್ಯ ಪ್ರದೇಶವನ್ನು ರಕ್ಷಿಸಿದರೆ ಅರಣ್ಯದ ಪುನರ್ ಸ್ಥಾಪನೆಯಾದಂತಾಗುತ್ತದೆ ಎಂದು ಜಂಗಲ್ ಸ್ಕ್ಯೇಪ್ ಚಾರಿಟಬಲ್ ಟ್ರಸ್ಟ್ ಸಮಿತಿ ಸದಸ್ಯ ಸಿ.ಆರ್.ಹನುಮಂತು ಅಭಿಪ್ರಾಯಪಟ್ಟರು. ಮೈಸೂರಿನ ಜೆಎಲ್ಬಿ ರಸ್ತೆಯಲ್ಲಿರುವ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಅರಣ್ಯ ನಾಶ ಹಾಗೂ ಪರಿಸರ ಮಾಲಿನ್ಯ ದಿಂದಾಗಿ ವಾತಾವರಣದಲ್ಲಿ ಇಂಗಾಲ ಡೈ ಆಕ್ಸೈಡ್…
ರಂಗಭೂಮಿ ಸಮಾಜದಲ್ಲಿ ಬದಲಾವಣೆ ತರುತ್ತದೆ
January 10, 2019ಮೈಸೂರು: ರಂಗಭೂಮಿ ಸಮಾಜವನ್ನು ತಿದ್ದುವುದರ ಜೊತೆಗೆ ಬದಲಾವಣೆ ತರುತ್ತದೆ ಎಂದು ಸಂತ ಶಿಶುನಾಳ ಶರೀಫರ ಹಾಗೂ ಕಳಸದ ಗುರು ಗೋವಿಂದ ಭಟ್ಟರ ಪ್ರತಿಷ್ಠಾನ ಸಂಸ್ಥಾಪಕ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಅಭಿಪ್ರಾಯಪಟ್ಟರು. ಮೈಸೂರಿನ ರಾಮಕೃಷ್ಣನಗರದಲ್ಲಿರುವ ನೃಪತುಂಗ ಕನ್ನಡ ಶಾಲೆಯ ಬೇಂದ್ರೆ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ಅಪ್ರವರಂಭೆ ವತಿಯಿಂದ ಏರ್ಪಡಿಸಿದ್ದ ಬೇರು-ಚಿಗುರು ರಂಗಸಂಭ್ರಮ ನಾಟಕೋ ತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಂಗಕಲೆ ಮಕ್ಕಳಲ್ಲಿ ಸೃಜನಾತ್ಮಕ ಪ್ರತಿಭೆಯೊಂದಿಗೆ ಸಮಾಜ ದಲ್ಲಿ ಒಡನಾಟವನ್ನು ಪರಿಚಯಿಸಿ,…
ಸಂಗೀತ ಪ್ರಿಯರ ಆಕರ್ಷಿಸಿದ ‘ಸಾಂಸ್ಕøತಿಕ ಸೌರಭ’
January 10, 2019ಮೈಸೂರು: ಮಾಗಿ ಮಾಸದ ಸುಂದರ ಇಳಿ ಸಂಜೆಯಲಿ ಸಿಂಗಾರ ಗೊಂಡಿದ್ದ ವೇದಿಕೆಯಲ್ಲಿ ಜನಪ್ರಿಯ ತಾಳವಾದ್ಯ ಸಂಗೀತ, ಹಿಂದೂಸ್ತಾನಿ ಗಜಲ್ ಗಾಯನ, ಪೂಜಾ ಕುಣಿತ, ನಗಾರಿ ವಾದನ, ಹಳೆಯ ಸುಮಧುರ ಕನ್ನಡ ಚಿತ್ರಗೀತೆಗಳ ಝೇಂಕಾರ ಕಲಾರಸಿಕರ ಮನಗೆದ್ದಿತು. ಮೈಸೂರಿನ ಗಾಂಧಿನಗರದ ಬಸ್ ನಿಲ್ದಾಣ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಯೋಜಿಸಿದ್ದ ‘ಸಾಂಸ್ಕøತಿಕ ಸೌರಭ’ ಕಾರ್ಯಕ್ರಮದಲ್ಲಿ ಗಾಯನ, ಕುಣಿತ, ವಾದನ, ನೃತ್ಯಗಳ ಪ್ರದರ್ಶನ ಸಂಗೀತ ಪ್ರಿಯರ ಮನತಣಿಸಿತು. ಮೊದಲಿಗೆ ವೇದಿಕೆ ಹಂಚಿಕೊಂಡ ಕರ್ನಾಟಕ ಜಾನಪದ ಪರಿಷತ್ತಿನ ಪುಟ್ಟೆ ಗೌಡ…