ಮೈಸೂರು: ಎಐಟಿ ಯುಸಿ, ಸಿಐಟಿಯು, ಐಎನ್ಟಿಯು, ಅಂಗನ ವಾಡಿ ನೌಕರರ ಫೆಡರೇಷನ್ ಸೇರಿ ದಂತೆ ವಿವಿಧ ಸಂಘಟನೆಗಳ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು. ಭಾರತ್ ಬಂದ್ ಹಿನ್ನೆಲೆಯಲ್ಲಿ ರಾಮ ಸ್ವಾಮಿ ವೃತ್ತದಲ್ಲಿ ಜಮಾಯಿಸಿದ ಪ್ರತಿ ಭಟನಾಕಾರರು, ಕೇಂದ್ರ ಸರ್ಕಾರದ ಆರ್ಥಿಕ ನೀತಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. 18,000 ರೂ. ಕನಿಷ್ಠ ವೇತನ ನೀಡಬೇಕು. ಸಾರ್ವ ಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು. ಕಾರ್ಮಿಕ ಹಕ್ಕುಗಳ ಮೇಲಿನ ದಾಳಿ ನಿಲ್ಲಬೇಕು. ಬೆಲೆ ಏರಿಕೆ ನಿಯಂತ್ರಿ ಸಬೇಕು. ಕಾರ್ಮಿಕರಿಗೆ ಭದ್ರತೆ…
ಅರಣ್ಯ, ವನ್ಯ ಜೀವಿ ಸಂರಕ್ಷಣೆಗೆ ತಂದಿರುವ ಕಾನೂನು ಅನುಷ್ಠಾನಕ್ಕೆ ಸಿಬ್ಬಂದಿಗೆ ತರಬೇತಿ ಅವಶ್ಯ
January 9, 2019ಮೈಸೂರು: ಅರಣ್ಯ ಭೂಮಿ ಒತ್ತುವರಿ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಟಿಬದ್ಧರಾಗಬೇಕು. ಇದನ್ನು ತಡೆಗಟ್ಟಲು ತಂದಿರುವ ಕಾನೂನುಗಳ ಅನುಷ್ಠಾನಕ್ಕೆ ಸಿಬ್ಬಂದಿಗಳು ಅಗತ್ಯ ತರಬೇತಿ ಪಡೆಯುವುದು ಅವಶ್ಯ ಎಂದು ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ವೆಂಕಟೇಶನ್ ಸಲಹೆ ನೀಡಿದರು. ಮೈಸೂರಿನ ಅಶೋಕಪುರಂ ಅರಣ್ಯಭವನದಲ್ಲಿ ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಮೋಜಣಿ ದಾರರ ಸಂಘ ಮೈಸೂರು ಘಟಕದ ವತಿಯಿಂದ ಆಯೋಜಿಸಿದ್ದ 2019ನೇ ಹೊಸ ವರ್ಷದ ದಿನಚರಿ ಮತ್ತು ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಸಂರಕ್ಷಿತ ಅರಣ್ಯ…
ಕೇಂದ್ರ ಸರ್ಕಾರದ ಆರ್ಥಿಕ ನೀತಿ ವಿರುದ್ಧ ಘೋಷಣೆ
January 9, 2019ಮೈಸೂರು-ಭಾರತ್ ಬಂದ್ ಹಿನ್ನೆಲೆಯಲ್ಲಿ ಮೈಸೂರಿನ ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿ ಆಶ್ರಯದಲ್ಲಿ ನೂರಾರು ಅಂಚೆ ನೌಕರರು ಮೈಸೂರಿನ ನೆಹರು ವೃತ್ತದಲ್ಲಿರುವ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಖಿಲ ಭಾರತ ಅಂಚೆ ನೌಕರರ ಸಂಘ (ಎನ್ಎಫ್ಪಿಇ), ರಾಷ್ಟ್ರೀಯ ಅಂಚೆ ನೌಕರರ ಸಂಘ (ಎಫ್ಎನ್ಪಿಓ) ಒಳಗೊಂಡಂತೆ ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿ ಕಾರ್ಯಕರ್ತರು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಯುವ ನೌಕರರಿಗೆ ಮರಣ ಶಾಸನವಾದ…
ಮೈಸೂರು ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕ್ಯಾಲೆಂಡರ್, ಡೈರಿ ಬಿಡುಗಡೆ
January 9, 2019ಮೈಸೂರು: ಅನು ಭವವೂ ಸಿಹಿಯಲ್ಲ, ಅನುಭವದ ನೆನಪು ಸಿಹಿ ಎಂಬಂತೆ ಪ್ರವಾಸ ಅನುಭವ ಸಂತೋಷ ನೀಡುವುದಿಲ್ಲ. ಆದರೆ, ಪ್ರವಾಸದ ಫೋಟೋಗಳನ್ನು ವೀಕ್ಷಿಸಿದರೆ ಮನಸ್ಸಿಗೆ ಆನಂದ, ಉಲ್ಲಾಸವನ್ನು ನೀಡುತ್ತವೆ ಎಂದು ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ಅಭಿಪ್ರಾಯಪಟ್ಟರು. ಕಲಾಮಂದಿರದಲ್ಲಿ ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಅಂಡ್ ವೀಡಿಯೋ ಗ್ರಾಫರ್ಸ್ ಅಸೋಸಿಯೇಷನ್ ಮಂಗಳ ವಾರ ಆಯೋಜಿಸಿದ್ದ ಸಂಘದ 18 ವಾರ್ಷಿಕೋತ್ಸವ ಹಾಗೂ ಛಾಯಾ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಫೋಟೋಗ್ರಫಿಯಿಂದ ಇಡೀ ಜಗತನ್ನೇ ವೀಕ್ಷಿಸಬಹುದು. ಹಾಗೆಯೇ 1 ಫೋಟೋ…
ವ್ಯಕ್ತಿ ಬ್ಯಾಂಕ್ ಖಾತೆಯಿಂದ 1.25 ಲಕ್ಷ ರೂ. ಹಣ ಎಗರಿಸಿದ್ದವನ ಸೆರೆ
January 9, 2019ಮೈಸೂರು: ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 1,25,000 ರೂ. ನಗದು ಡ್ರಾ ಮಾಡಿ ತಲೆ ಮರೆಸಿಕೊಂಡಿದ್ದ ನಯವಂಚಕನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ವೆಸ್ಟ್ ಜಾಮ್ಪರಸನ್ ಜಿಲ್ಲೆ, ಅಸಾನ್ ಸೋಲ್ ನಗರದ ಯೋಗೇಂದ್ರ ಸಾಹ್ ಮಗ ಬ್ರಜ್ ಕಿಶೋರ್ ಪ್ರಸಾದ್(31) ಬಂಧಿತ ಆರೋಪಿ ಯಾಗಿದ್ದು, ಆತನಿಂದ 1,25,000 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೂಲತಃ ವೆಸ್ಟ್ಜಾಮ್ಪರನ್ ಜಿಲ್ಲೆ, ಜಾನ್ಜಹರಿ ಗ್ರಾಮದವನಾದ ಬ್ರಜ್ ಕಿಶೋರ್ ಪ್ರಸಾದ್, 2018ರ ಅಕ್ಟೋಬರ್ 13ರಂದು ಮೈಸೂರಿನ ಎಂ.ಎಲ್. ಪರಶುರಾಮ್ ಎಂಬುವರ ಸ್ಟೇಟ್ ಬ್ಯಾಂಕ್…
ನಂಜನಗೂಡು ಪೂರ್ಣ ಬಂದ್
January 9, 2019ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನಾ ಮೆರವಣಿಗೆ ನಂಜನಗೂಡು: ಮೋಟಾರ್ ವಾಹನ ಕಾಯಿದೆ ತಿದ್ದುಪಡಿ ಮಸೂದೆ ವಿರೋಧಿಸಿ ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಾರತ್ ಬಂದ್ ಹಿನ್ನಲೆಯಲ್ಲಿ ಇಲ್ಲಿನ ಸಿಐಟಿಯು ಮತ್ತು ಎಐಟಿಯುಸಿ ಸಂಘಟನೆಗಳ ಆಶ್ರಯದಲ್ಲಿ ಕಾರ್ಮಿಕರು ಭಾರಿ ಪ್ರತಿಭಟನೆ ನಡೆಸಿದರು. ಮೊದಲಿಗೆ ಇಲ್ಲಿನ ಕಲ್ಲಹಳ್ಳಿ ಹಾಗೂ ತಾಂಡ್ಯ ಕೈಗಾರಿಕಾ ಪ್ರದೇಶಗಳಿಂದ ಹೊರಟ ಸಾವಿರಾರು ಕಾರ್ಮಿಕರು ನಗರದ ವಿಶ್ವೇಶ್ವರಯ್ಯ ವೃತ್ತದ ಬಳಿ ಜಮಾಯಿಸಿ ಮಾನವ ಸರಪಳಿ ರಚಿಸಿ ರಸ್ತೆ ತಡೆ…
ಇಂದು, ನಾಳೆ ಭಾರತ್ ಬಂದ್
January 8, 2019ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರವ್ಯಾಪಿ ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9ರಂದು ಹಮ್ಮಿಕೊಂಡಿರುವ ಭಾರತ್ ಬಂದ್ಗೆ ರಾಜ್ಯ ಸರ್ಕಾರ ತಟಸ್ಥ ಧೋರಣೆ ತಳೆದಿದೆ. ಈ ಹಿನ್ನೆಲೆಯಲ್ಲಿ ಮುಷ್ಕರದ ಎರಡು ದಿನಗಳ ಕಾಲ ರಾಜ್ಯ ಸಾರಿಗೆ ಸಂಸ್ಥೆ ಬಸ್ಗಳು ರಸ್ತೆಗಿಳಿಯುವುದು ಅನುಮಾನ. ಆದರೆ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಶಾಲಾ-ಕಾಲೇಜುಗಳಿಗೆ ಪರಿಸ್ಥಿತಿ ಆಧರಿಸಿ ರಜೆ ನೀಡುವ ನಿರ್ಧಾರವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ವಹಿಸಿದೆ. ಬಂದ್ ಸಂದರ್ಭದಲ್ಲಿ…
ಜನರಿಂದ ದೂರುಗಳ ಮಹಾಪೂರ
January 8, 2019ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಸೋಮವಾರ ತಮ್ಮ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಿದ ಸಂದರ್ಭದಲ್ಲಿ ಜನರಿಂದ ದೂರುಗಳ ಮಹಾಪೂರವೇ ಹರಿದು ಬಂದಿತು. ಚುನಾವಣೆ ಬಳಿಕ ಉನ್ನತ ಶಿಕ್ಷಣ ಸಚಿವ ರಾಗಿ ಕಾರ್ಯ ಒತ್ತಡ, ಜೊತೆಗೆ ಇಡೀ ರಾಜ್ಯದ ಕಾಲೇಜು, ವಿಶ್ವವಿದ್ಯಾನಿಲಯ ಗಳಿಗೆ ಭೇಟಿ ಹಿನ್ನೆಲೆಯಲ್ಲಿ ಕ್ಷೇತ್ರದ ಗ್ರಾಮ ಗಳಿಗೆ ಬರಲಾಗದ್ದಕ್ಕೆ ಜನರ ಕ್ಷಮೆ ಕೇಳಿದ ಸಚಿವ ಜಿ.ಟಿ.ದೇವೇಗೌಡರು, ಈ ಕಾರಣ…
ಸ್ವಚ್ಛ ಸರ್ವೇಕ್ಷಣೆಗೆ ಸಹಕರಿಸಿ
January 8, 2019ಮೈಸೂರು: ಸ್ವಚ್ಛ ಸರ್ವೇ ಕ್ಷಣೆಯಲ್ಲಿ ಪಾಲ್ಗೊಂಡು ಮತ್ತೆ ಮೈಸೂರು ಸ್ವಚ್ಛ ನಗರಿ ಎಂಬ ಬಿರುದು ಪಡೆಯಲು ಸಹಕರಿಸುವಂತೆ ರಾಜಮಾತೆ ಪ್ರಮೋ ದಾದೇವಿ ಒಡೆಯರ್, ಮೈಸೂರು ನಾಗರಿಕರಿಗೆ ಕರೆ ನೀಡಿದ್ದಾರೆ. ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ಅರಮನೆಗೆ ತೆರಳಿ ರಾಜಮಾತೆ ಪ್ರಮೋದಾದೇವಿ ಅವರನ್ನು ಭೇಟಿ ಮಾಡಿ ಸ್ವಚ್ಛ ನಗರ ಅಭಿಯಾನದ ಬ್ರಾಂಡ್ ಅಂಬಾಸಡರ್ ಆಗಿರುವವರನ್ನು ಸನ್ಮಾ ನಿಸಿ ಸ್ವಚ್ಛ ಸರ್ವೇಕ್ಷಣದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಪ್ರಮೋ ದಾದೇವಿ ಒಡೆಯರ್, ಈವರೆಗೂ ಸ್ವಚ್ಛತೆ ಕಾಪಾಡಿಕೊಂಡು ಬಂದಿರುವ…
ಸತತ ಪರಿಶ್ರಮದಿಂದ ಗೆಲುವು ಸಾಧ್ಯ
January 8, 2019ಮೈಸೂರು: ಸತತ ಪರಿಶ್ರಮ ಮತ್ತು ಇಚ್ಛಾಶಕ್ತಿ ಇದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲುವು ಸಾಧ್ಯ. ಜೊತೆಗೆ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ನನಸಾಗಲಿದೆ ಎಂದು ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ರಾದ ಜಿ.ಎಸ್.ರಘು ಅಭಿಪ್ರಾಯಪಟ್ಟರು. ನಗರದ ಜ್ಞಾನಬುತ್ತಿ ಸಂಸ್ಥೆಯ ವತಿಯಿಂದ ಪೊಲೀಸ್ ಮತ್ತು ಅಬ್ಕಾರಿ ಸಬ್ಇನ್ಸ್ ಪೆಕ್ಟರ್ ಹುದ್ದೆಗಳಿಗೆ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಶಿಬಿರವನ್ನು ಹಣತೆ ಹಚ್ಚುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ನಾನು ಕೂಡ 1998 ರಲ್ಲಿ ಜ್ಞಾನಬುತ್ತಿ ಸಂಸ್ಥೆ ನಡೆಸಿದ ಉಚಿತ ಪೊಲೀಸ್…