ಮೈಸೂರು: ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡ ವಾಗಿರು… ಎಂದು ಕನ್ನಡಾಭಿಮಾನ ಮೆರೆದು, ವಿಶ್ವ ಮಾನವ ಸಂದೇಶ ಸಾರಿದ ಮಹಾ ಕವಿ ಕುವೆಂಪು ಅವರ ಜಯಂತಿ ಹಾಗೂ ವಿಶ್ವ ಮಾನವ ದಿನಾ ಚರಣೆಯನ್ನು ಮೈಸೂರು ನಗರದ ವಿವಿಧೆಡೆಗಳಲ್ಲಿ ಶನಿವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ಸಂಘ ಸಂಸ್ಥೆಗಳು, ಶಾಲಾ-ಕಾಲೇಜು ಗಳಲ್ಲಿ ಕುವೆಂಪು (ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ) ಅವರ 155ನೇ ಜನ್ಮದಿನ ಹಾಗೂ ವಿಶ್ವ ಮಾನವ ದಿನಾಚರಣೆ ಆಚರಿಸುವ ಮೂಲಕ ರಸಋಷಿಗೆ ಗೌರವ ಸಮರ್ಪಿಸಲಾಯಿತು. ಗನ್ಹೌಸ್…
ಕುವೆಂಪು ಕಲಾ ಕೇಂದ್ರ ಸ್ಥಾಪನೆಯಾಗಲಿ
December 30, 2018ಮೈಸೂರು ನಗರ ಪಾಲಿಕೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಶ್ವಮಾನವ ಉದ್ಯಾನದಲ್ಲಿ ಕುವೆಂಪು ಅವರು 115ನೇ ಜನ್ಮ ದಿನ ಆಚರಿಸಲಾಯಿತು. ಇದೇ ವೇಳೆ ನಿವೃತ್ತ ಪ್ರಾಧ್ಯಾಪಕ ಪೆÇ್ರ.ಮೊರಬದ ಮಲ್ಲಿ ಕಾರ್ಜುನ ಮಾತನಾಡಿ, ಕುವೆಂಪು ಅವರು ತಮ್ಮ ಸಾಹಿತ್ಯ ದಲ್ಲಿ `ವಿಶ್ವ ಮಾನವ’ ತತ್ವವನ್ನು ಪ್ರತಿಪಾದಿ ಸಿದ್ದಾರೆ. ಅವರ `ಶ್ರೀ ರಾಮಾಯಣ ದರ್ಶನಂ’ ಕಾವ್ಯ ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿ ಅರ್ಧ ಶತಮಾನ ಕಳೆದಿದೆ. ರವೀಂದ್ರನಾಥ್ ಟ್ಯಾಗೋರ್ ಅವರ ಕರ್ಮಭೂಮಿ ಪಶ್ಚಿಮ ಬಂಗಾಳದಲ್ಲಿ ಅವರ ಕಲಾ ಕೇಂದ್ರ…
ವಿಶ್ವ ಮಾನವ ಪ್ರಶಸ್ತಿ ಪ್ರದಾನ
December 30, 2018ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಮತ್ತು ದೇಜಗೌ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಕುವೆಂಪು ಜಯಂತಿ ಹಾಗೂ ವಿಶ್ವ ಮಾನವ ದಿನಾಚರಣೆಯಲ್ಲಿ ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ಶಾಸಕ ಎಲ್.ನಾಗೇಂದ್ರ ಪ್ರದಾನ ಮಾಡಿದರು. ಹಿರಿಯ ಸಾಹಿತಿ ಡಾ.ಕೆ.ವಿ. ನಾರಾಯಣ ಅವರಿಗೆ `ವಿಶ್ವ ಮಾನವ ಪ್ರಶಸ್ತಿ’, ಹಿರಿಯ ವಿದ್ವಾಂಸ ಡಾ.ಎಂ.ಚಿದಾನಂದ ಮೂರ್ತಿ ಅವರಿಗೆ `ಕರ್ನಾಟಕ ರತ್ನ ನಾಡೋಜ ಡಾ.ದೇಜಗೌ ಪ್ರಶಸ್ತಿ ಹಾಗೂ ಪತ್ರಕರ್ತ ಎಸ್.ನಾಗಣ್ಣ ಅವರಿಗೆ `ದಿವಂಗತ ಹೆಚ್.ಕೆ.ವೀರಣ್ಣಗೌಡ ಪತ್ರಿಕೋ ದ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುವೆಂಪು ವಿದ್ಯಾವರ್ಧಕ ಟ್ರಸ್ಟ್ನ ಅಧ್ಯಕ್ಷ…
ಕುವೆಂಪುರವರ 115ನೇ ಜನ್ಮ ದಿನಾಚರಣೆ: ಸಾಹಿತ್ಯ ಅವಲೋಕನ
December 30, 2018ಮೈಸೂರು: ಕುವೆಂಪುರವರ 115ನೇ ಜನ್ಮ ದಿನಾಚರಣೆ ಅಂಗವಾಗಿ ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕುವೆಂಪು ಸಾಹಿತ್ಯ ಅವಲೋಕನ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ನಟರಾಜ ಪ್ರತಿಷ್ಠಾನದ ಶೈಕ್ಷಣಿಕ ಸಂಯೋಜಕ ಪ್ರೊ.ಕೆ.ಸತ್ಯನಾರಾಯಣ, ಮಾತನಾಡಿ, “ಕನ್ನಡ ಸಾಹಿತ್ಯದ ಅನಘ್ರ್ಯ ರತ್ನರಾದ ಕುವೆಂಪುರವರ ಪ್ರಾರಂಭಿಕ ಅಕ್ಷರಾಭ್ಯಾಸವು ಮನೆಯಲ್ಲೇ ನಡೆದಿರುವುದು ವಿಶೇಷ. ಕುವೆಂಪುರವರ ಸಾಹಿತ್ಯವು ಸರಳವು ಹಾಗೂ ಅರ್ಥ ಮಾಧುರ್ಯತೆ ಯಿಂದಲೂ ಕೂಡಿದೆ. ಇವರು ಕೇವಲ ಕನ್ನಡದಲ್ಲಿ…
ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಪ್ಯಾರಾ ಮೋಟರಿಂಗ್ ಸ್ಥಗಿತ
December 30, 2018ಮೈಸೂರು: ಮೈಸೂ ರಿನ ಮಹಾರಾಜ ಕಾಲೇಜು ಮೈದಾನ ದಲ್ಲಿ ಮಾಗಿ ಉತ್ಸವದ ಅಂಗವಾಗಿ ಏರ್ಪ ಡಿಸಿದ್ದ ಪ್ಯಾರಾ ಮೋಟರಿಂಗ್ ಅನ್ನು ತಾಂತ್ರಿಕ ದೋಷದ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿದೆ ಎಂದು ಬೆಂಗಳೂರು ಮೂಲದ ಏವಿಯೇಷನ್ ಅಂಡ್ ಸ್ಪೋಟ್ರ್ಸ್ ಎಂಟರ್ ಪ್ರೈಸಸ್ (ಬೇಸ್) ಸ್ಪಷ್ಟಪಡಿಸಿದೆ. ಈ ಕುರಿತು ಬೇಸ್ ಮುಖ್ಯಸ್ಥ ಕುಮಾರ್ `ಮೈಸೂರು ಮಿತ್ರ’ನಿಗೆ ಪ್ರತಿ ಕ್ರಿಯಿಸಿ ಡಿ.26 ಸಂಜೆ 4.30ರ ವೇಳೆಯಲ್ಲಿ ಪ್ಯಾರಾ ಮೋಟರ್ ಲ್ಯಾಂಡಿಂಗ್ ವೇಳೆ ಮೈಸೂರು ವಿಶ್ವವಿದ್ಯಾನಿಲಯ ಮೈದಾ ನದ ಸಿಬ್ಬಂದಿ ಅಡ್ಡ ಬಂದಿದ್ದರು. ಇದನ್ನು ಗಮನಿಸದ…
ಮೈಸೂರಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ನ 2ನೇ ರಾಜ್ಯ ಮಟ್ಟದ ಸಮ್ಮೇಳನ ಆರಂಭ
December 30, 2018ಮೈಸೂರು: ಎರಡು ದಿನಗಳ ಅಖಿಲ ಭಾರತೀಯ ಸಾಹಿತ್ಯ ಪರಿಷದ್ನ ರಾಜ್ಯ ಮಟ್ಟದ 2ನೇ ಸಾಹಿತ್ಯ ಸಮ್ಮೇಳನವು ಇಂದು ಮೈಸೂರಿನಲ್ಲಿ ಮಾನಸ ಗಂಗೋತ್ರಿಯಲ್ಲಿರುವ ಸೆನೆಟ್ ಭವನದಲ್ಲಿ ಆರಂಭವಾಗಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ ಮತ್ತು ಅಖಿಲ ಭಾರ ತೀಯ ಸಾಹಿತ್ಯ ಪರಿಷದ್ ಮೈಸೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ `ಸಾಹಿತ್ಯದಲ್ಲಿ ಭಾರತೀಯತೆ’ ವಿಷಯ ಕುರಿತ ರಾಜ್ಯ ಸಮ್ಮೇಳನವನ್ನು ರಾಜಮಾತೆ ಪ್ರಮೋದಾದೇವಿ ಒಡೆಯರ್ ದೀಪ ಬೆಳಗಿ ಸುವ ಮೂಲಕ ಉದ್ಘಾಟಿಸಿದರು.ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ಧ, ಸಾಹಿತ್ಯಾಸಕ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ…
ಪರಿಶ್ರಮದಿಂದಷ್ಟೇ ಯಶಸ್ಸು ಸಾಧ್ಯ
December 30, 2018ಮೈಸೂರು: ನಿರಂತರ ಪ್ರಯತ್ನ, ಪರಿಶ್ರಮ ಮತ್ತು ಕಠಿಣಾಭ್ಯಾಸದಿಂದ ಯಶಸ್ಸು ಸಾಧ್ಯವೇ ಹೊರತು ಸೋಮಾರಿತನ ದಿಂದಲ್ಲ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಡಾ.ಎ.ಖಾದರ್ಪಾಷ ಅಭಿಪ್ರಾಯಪಟ್ಟರು.ಮುಕ್ತಗಂಗೋತ್ರಿಯ ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರ ಬೇತಿ ಕೇಂದ್ರದ ವತಿಯಿಂದ ನಡೆದ ಕೆ ಸೆಟ್ ಮತ್ತು ಯುಜಿಸಿ ನೆಟ್ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾ ರಂಭದಲ್ಲಿ ಮಾತನಾಡಿದರು. ಓದಿಗೆ ನಿರ್ದಿಷ್ಟ ಸಮಯ, ಸಂದರ್ಭ ವಿಲ್ಲ. ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಎಂಬ ಭೇದವಿಲ್ಲ. ಒಬ್ಬ ವ್ಯಕ್ತಿ…
ಪಿರಿಯಾಪಟ್ಟಣ ಶಾಸಕ ಮಹದೇವ್ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
December 30, 2018ಮೈಸೂರು: ಪಿರಿಯಾ ಪಟ್ಟಣ ಮಾಜಿ ಶಾಸಕ ಕೆ.ವೆಂಕಟೇಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ರುವ ಶಾಸಕ ಕೆ.ಮಹದೇವು ಅವರನ್ನು ಬಂಧಿ ಸುವಂತೆ ಒತ್ತಾಯಿಸಿ ಮೈಸೂರು ಗ್ರಾಮಾಂ ತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರಿನ ನ್ಯಾಯಾಲಯದ ಮುಂಭಾಗ ವಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿ ಭಟನೆ ಆರಂಭಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು, ಇತ್ತೀಚೆಗೆ ಶಾಸಕ ಕೆ.ಮಹದೇವು ಅಧಿಕಾರಿಯೊಬ್ಬರೊಂದಿಗೆ ದೂರವಾಣಿಯಲ್ಲಿ ಮಾತನಾಡುವಾಗ ಮಾಜಿ ಶಾಸಕ ವೆಂಕಟೇಶ್ ಹಾಗೂ ಕಾಂಗ್ರೆಸ್ ನವರನ್ನು ಅವಾಚ್ಯ ಶಬ್ದಗಳಿಂದ…
‘ಕನ್ನಡವೇ ಸತ್ಯ’ ಸಂಗೀತ ಸಂಜೆಯಲ್ಲಿ ಖ್ಯಾತ ಗಾಯಕರ ಗಾನ ಮಾಧುರ್ಯ
December 30, 2018ಮೈಸೂರು: ಸುಂದರ ಇಳಿ ಸಂಜೆಯಲಿ ಸಿಂಗಾರಗೊಂಡಿದ್ದ ವೇದಿಕೆಯಲ್ಲಿ ಗಾನಗಾರುಡಿಗ ಸಿ.ಅಶ್ವತ್ಥ್ ಅವರ ಭಾವಗೀತೆಗಳ ಗಾಯನ ಕಲಾ ರಸಿಕರ ಮನಗೆದ್ದಿತು. ಮೈಸೂರಿನ ಪುರ ಭವನದ ಆವರಣದಲ್ಲಿ ಭಾವರೂಪಕ ಪ್ರತಿ ಷ್ಠಾನ ಸಂಸ್ಥೆ ಡಾ.ಸಿ.ಅಶ್ವತ್ಥ್ ಅವರ 79ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ಕನ್ನಡವೇ ಸತ್ಯ’ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಸಂಗೀತ ಕಟ್ಟಿ, ರಮೇಶ್ ಚಂದ್ರ, ಪಂಚಮ್ ಹಳಿಬಂಡಿ, ಕೆ.ಎ.ಸುರೇಖ, ಶ್ವೇತಾ ಪ್ರಭು, ದೊಡ್ಡಪ್ಪ ಮಾದಾರ, ರಾಮಕೃಷ್ಣ ಪೂಜಾರ, ಮೈಸೂರು ಗುರುರಾಜ್, ಶಿವಕುಮಾರ್ ಮೌರ್ಯ, ಚಂದ್ರು ಮತ್ತಿತ ರರ…
ಯಾವ ದೇವರೂ ಪರಿಶಿಷ್ಟರನ್ನು ಸಂಕೋಲೆಯಿಂದ ಪಾರು ಮಾಡಲಿಲ್ಲ…
December 30, 2018ಮೈಸೂರು: ದಲಿತ ವರ್ಗದ ಬಲಗೈ, ಎಡಗೈ ಹಾಗೂ ಪೌರಕಾರ್ಮಿಕ ಸಮು ದಾಯದ ಇತರೆ ಉಪ ಪಂಗಡಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕøತಿಕ ಬದಲಾವಣೆ ಕಾಣದಿದ್ದರೆ, ಇನ್ನು ನೂರು ವರ್ಷವಾದರೂ ಜನ ಅಸ್ಪøಶ್ಯತೆ ಮನಸ್ಥಿತಿ ಯಿಂದ ಹೊರಬರುವುದಿಲ್ಲ. ಆದ್ದರಿಂದ ತಮ್ಮ ಮಕ್ಕಳನ್ನು ಪೌರಕಾರ್ಮಿಕ ವೃತ್ತಿಗೆ ದೂಡಬೇಡಿ ಎಂದು ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಪಿ.ಮಹೇಶ್ಚಂದ್ರಗುರು ಮನವಿ ಮಾಡಿದರು. ಮೈಸೂರು ಮಾನಂದವಾಡಿ ರಸ್ತೆಯ ಬುದ್ದನಗ ರದ ಶ್ರೀರಾಮಮಂದಿರ ಮುಂಭಾಗದಲ್ಲಿ ಪ್ರಗತಿ ಸೇವಾ ಟ್ರಸ್ಟ್ ಮತ್ತು ದಲಿತ ಅಭಿವೃದ್ಧಿ ಸಂಘ…