Tag: Mysuru

ಮೈಸೂರಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನ ಆಚರಣೆ
ಮೈಸೂರು

ಮೈಸೂರಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನ ಆಚರಣೆ

December 31, 2018

ಮೈಸೂರು, ಡಿ.30(ಆರ್‍ಕೆಬಿ)- ಮೈಸೂ ರಿನ ದಾಸಪ್ಪ ವೃತ್ತದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಸೇವಾದಳದ ಆಶ್ರಯದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ ಮಾತನಾಡಿ, 60 ವರ್ಷ ದೇಶದ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ವಿರೋಧ ಪಕ್ಷಗಳು ಪದೇ ಪದೆ ಬೊಬ್ಬೆ ಹೊಡೆ ಯುತ್ತಿರುತ್ತವೆ. 65 ವರ್ಷಗಳ ಹಿಂದೆ 32 ಕೋಟಿ ಇದ್ದ ದೇಶದ ಜನಸಂಖ್ಯೆ ಇಂದು 128 ಕೋಟಿಗೆ ತಲುಪಿದೆ….

ಮೈಸೂರು ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ   ಹಬ್ಬದಲ್ಲಿ 100ಕ್ಕೂ ಹೆಚ್ಚು ಮಕ್ಕಳು ಭಾಗಿ
ಮೈಸೂರು

ಮೈಸೂರು ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬದಲ್ಲಿ 100ಕ್ಕೂ ಹೆಚ್ಚು ಮಕ್ಕಳು ಭಾಗಿ

December 31, 2018

ಮೈಸೂರು, ಡಿ.30(ಆರ್‍ಕೆಬಿ)- ಮೈಸೂ ರಿನ ಸಿದ್ದಾರ್ಥನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಬಾಡಿಗಾರ್ಡ್ ಲೈನ್) ಯಲ್ಲಿ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ನಡೆಯಿತು. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಬಾಲ ಭವನ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ-ಸಮಗ್ರ ಶಿಕ್ಷಣ ಕರ್ನಾಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಭಾರತ ಜ್ಞಾನ ವಿಜ್ಞಾನ ಕರ್ನಾಟಕ ಜಂಟಿ ಆಶ್ರಯದಲ್ಲಿ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು. ಬಾಲಮಂದಿರ, ಭಾಲಭವನ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಾಕಿ ಕ್ವಾಟ್ರ್ರಸ್…

ಪಿಎಫ್‍ಐನಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದ್ಯಾರ್ಥಿವೇತನ ವಿತರಣೆ
ಮೈಸೂರು

ಪಿಎಫ್‍ಐನಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದ್ಯಾರ್ಥಿವೇತನ ವಿತರಣೆ

December 31, 2018

ಮೈಸೂರು: ಮೈಸೂರಿನ ಉದಯಗಿರಿಯಲ್ಲಿ ರುವ ಸಫಾ ಫಂಕ್ಷನ್ ಹಾಲ್‍ನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವತಿಯಿಂದ ಉನ್ನತ ವಿದ್ಯಾಭ್ಯಾಸ ಮಾಡು ತ್ತಿರುವ 40 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದ್ಯಾರ್ಥಿ ವೇತನ ನೀಡಲಾಯಿತು. ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಿ ಮಾತನಾಡಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ದೇಶದಲ್ಲಿ ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜನಪ್ರತಿನಿಧಿಗಳು ಬಡತನ, ನಿರುದ್ಯೋಗ, ಸಂಶೋಧನೆ ಕುರಿತು ಚರ್ಚೆಗಳನ್ನು ಮಾಡದೆ ದೇವರುಗಳ…

ಕಡೇಮನುಗನಹಳ್ಳಿಗೆ ಪಿಯು ಕಾಲೇಜು, ಹಾಸ್ಟೆಲ್ ಮಂಜೂರು
ಮೈಸೂರು

ಕಡೇಮನುಗನಹಳ್ಳಿಗೆ ಪಿಯು ಕಾಲೇಜು, ಹಾಸ್ಟೆಲ್ ಮಂಜೂರು

December 31, 2018

ಹುಣಸೂರು: ದೇಶ ದಲ್ಲಿನ ದುಡಿಯುವ ವರ್ಗ ಹಾಗೂ ರೈತರನ್ನು ಸಂಕಷ್ಟದಲ್ಲಿ ಜೀವನ ನಡೆಸುವಂತೆ ಮಾಡಿ ರುವ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಜ.8 ಮತ್ತು 9ರಂದು ಹಮ್ಮಿ ಕೊಂಡಿರುವ ಅಖಿಲ ಭಾರತ ಮುಷ್ಕರ ವನ್ನು ಬೆಂಬಲಿಸುವಂತೆ ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜು ಮನವಿ ಮಾಡಿದರು. 2019ರ ಜನವರಿ 8, 9 ರಂದು ನಡೆ ಯುವ ಅಖಿಲ ಭಾರತ ಮಷ್ಕರವನ್ನು ಬೆಂಬಲಿಸಿ ಪಟ್ಟಣದ ಹಳೆ ಬಸ್ ನಿಲ್ದಾಣದ ಮುಂಭಾಗ ಸಿಪಿಎಂ ಸೇರಿದಂತೆ ಎಡಪಕ್ಷ ಗಳು ಏರ್ಪಡಿಸಿದ್ದ…

ಫೆಬ್ರವರಿಯಲ್ಲಿ ರಾಷ್ಟ್ರಪತಿ ರಸ್ತೆ ಲೋಕಾರ್ಪಣೆ
ಮೈಸೂರು

ಫೆಬ್ರವರಿಯಲ್ಲಿ ರಾಷ್ಟ್ರಪತಿ ರಸ್ತೆ ಲೋಕಾರ್ಪಣೆ

December 31, 2018

ನಂಜನಗೂಡು: ಹಲವಾರು ಅಡ್ಡಿ ಅಂತಕಗಳಿಂದ ಆರಂಭಗೊಂಡ ನಗರದ ರಾಷ್ಟ್ರಪತಿ ರಸ್ತೆ ಕಾಂಕ್ರಿಟ್ ಕಾಮಗಾರಿ ಬಿರುಸಿನಿಂದ ನಡೆಯುತ್ತಿದ್ದು, ಫೆಬ್ರವರಿ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದ್ದಾರೆ. ಆರ್.ಪಿ ರಸ್ತೆಯ ಕಾಂಕ್ರಿಟ್ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು, ವರ್ತಕರು, ಸಂಘ ಸಂಸ್ಥೆಗಳು ಈ ರಸ್ತೆಯ ಕಾಂಕ್ರಿಟ್ ಕಾಮಗಾರಿ ವಿಳಂಬದ ಬಗ್ಗೆ ಮತ್ತು ಸಮಸ್ಯೆಗಳನ್ನು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಡಿ.31ರೊಳಗೆ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸ ಲಾಗಿತ್ತು. ಅದರಂತೆ ಸದ್ಯ ಶೇ.90 ಭಾಗ ಕಾಮಗಾರಿ ಪೂರ್ಣಗೊಂಡಿದೆ….

ಕೆ-ಸೆಟ್ ಪರೀಕ್ಷೆಗೆ ಸಾವಿರಾರು ವಿದ್ಯಾರ್ಥಿಗಳು ಹಾಜರು
ಮೈಸೂರು

ಕೆ-ಸೆಟ್ ಪರೀಕ್ಷೆಗೆ ಸಾವಿರಾರು ವಿದ್ಯಾರ್ಥಿಗಳು ಹಾಜರು

December 31, 2018

ಮೈಸೂರು: ವಿಶ್ವವಿದ್ಯಾನಿಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಾಗಿ ನಡೆದ ಕೆ-ಸೆಟ್ ಪರೀಕ್ಷೆಯನ್ನು ಮೈಸೂರಿನ 11 ಕೇಂದ್ರಗಳಲ್ಲಿ ಭಾನುವಾರ ಸಾವಿರಾರು ವಿದ್ಯಾರ್ಥಿಗಳು ಎದುರಿಸಿದರು. ಮೈಸೂರು ನಗರದ ಮಹಾರಾಜ, ಮಹಾರಾಣಿ, ಎಸ್‍ಡಿಎಂ, ನಟರಾಜ ಸೇರಿದಂತೆ 11 ಕಾಲೇಜುಗಳಲ್ಲಿ ಭಾನುವಾರ ನಡೆದ ಕೆ-ಸೆಟ್ ಪರೀಕ್ಷೆಯನ್ನು ಬರೆಯುವುದಕ್ಕೆ 95 ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಆದರೆ ಹಲವು ಅಭ್ಯರ್ಥಿಗಳು ಗೈರು ಹಾಜರಾಗಿರುವ ಮಾಹಿತಿ ಇದ್ದು, ಪರೀಕ್ಷೆಯಲ್ಲಿ ಪಾಲ್ಗೊಂಡ ವರ ನಿಖರ ಸಂಖ್ಯೆ ಸೋಮವಾರ ತಿಳಿಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪತ್ರಿಕೋದ್ಯಮ, ಇತಿಹಾಸ, ಸಮಾಜಶಾಸ್ತ್ರ ಸೇರಿದಂತೆ…

ಹಿರಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ  ಆಡಳಿತ ಮಂಡಳಿಗೆ 13 ಮಂದಿ ನಿರ್ದೇಶಕರ ಆಯ್ಕೆ
ಮೈಸೂರು

ಹಿರಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ 13 ಮಂದಿ ನಿರ್ದೇಶಕರ ಆಯ್ಕೆ

December 31, 2018

ತಿ.ನರಸೀಪುರ, ಡಿ.30-ತಾಲೂಕಿನ ಹಿರಿಯೂರು ಹಾಲು ಉತ್ಪಾದಕರ ಸಹ ಕಾರ ಸಂಘಕ್ಕೆ ನಡೆದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಗ್ರಾಪಂ ಹಾಲಿ ಅಧ್ಯಕ್ಷ ಚಂಡಿ ಪ್ರಕಾಶ್ ಬಣದ 13 ಮಂದಿ ಸದಸ್ಯರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಭಾನುವಾರ ಆಡಳಿತ ಮಂಡಳಿಯ ಮುಂದಿನ 5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ರ್ನಿದೇಶಕ ಸ್ಥಾನಕ್ಕೆ ಆಯ್ಕೆ ಬಯಸಿ 19ಮಂದಿ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ನಂಜುಂಡಶೆಟ್ಟಿ, ಸಿದ್ದಶೆಟ್ಟಿ, ಪುಟ್ಟ ನಂಜಮ್ಮ, ಸಿದ್ದಮ್ಮ ಅವಿರೋಧವಾಗಿ ಆಯ್ಕೆಗೊಂಡರು. ಆನಂತರ ಸಂಘದ ಸಭಾಂಗಣದಲ್ಲಿ ನಡೆದ…

ಭಾರತೀಯ ಸಂಸ್ಕೃತಿಗೆ ವೀರಶೈವ ಧರ್ಮದ ಕೊಡುಗೆ ಅನನ್ಯ
ಮೈಸೂರು

ಭಾರತೀಯ ಸಂಸ್ಕೃತಿಗೆ ವೀರಶೈವ ಧರ್ಮದ ಕೊಡುಗೆ ಅನನ್ಯ

December 31, 2018

ತಿ.ನರಸೀಪುರ. ಡಿ.30 (ಎಸ್‍ಕೆ)-ಭಾರತೀಯ ಸಂಸ್ಕೃತಿಗೆ ವೀರಶೈವ ಧರ್ಮ ಕೊಟ್ಟ ಧಾರ್ಮಿಕ ಸಂಪತ್ತು ಅನಘ್ರ್ಯ ಹಾಗೂ ಅನನ್ಯವಾಗಿದ್ದು, ಆದರ್ಶ ಮೌಲ್ಯ ಪ್ರತಿಪಾದನೆ ಮಾಡಿದ ಧರ್ಮ ಇಂದು ರಾಜಕೀಯ ಲಾಭಕ್ಕಾಗಿ ಬಳಕೆಯಾಗುತ್ತಿ ರುವುದು ವಿಷಾದನೀಯ ಎಂದು ಬಾಳೆ ಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶೀ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ಮುಡುಕುತೊರೆಯ ತೋಪಿನಮಠ ದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಪೂಜೆ ಮಹಾಲಿಂಗ ಶಿವಾಚಾರ್ಯ ಸ್ವಾಮಿ ಗಳ ಗುರುವಂದನಾ ಮಹೋತ್ಸವ ಮತ್ತು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ…

ರೌಡಿಶೀಟರ್‍ಗಳ ಮನೆಗಳಲ್ಲಿ ಪೊಲೀಸರ ಪರಿಶೀಲನೆ
ಮೈಸೂರು

ರೌಡಿಶೀಟರ್‍ಗಳ ಮನೆಗಳಲ್ಲಿ ಪೊಲೀಸರ ಪರಿಶೀಲನೆ

December 30, 2018

ಮೈಸೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಗುರುವಾರ ಮೈಸೂರು ನಗರದಾದ್ಯಂತ ಹೋಟೆಲ್, ಲಾಡ್ಜ್‍ಗಳ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಇಂದು ಬೆಳ್ಳಂಬೆಳಿಗ್ಗೆ ರೌಡಿಶೀಟರ್‍ಗಳ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಸಮಾಜಘಾತಕ ಚಟುವಟಿಕೆಗಳು ಹಾಗೂ ಕಾನೂನು-ಸುವ್ಯವಸ್ಥೆಗೆ ಭಂಗವಾಗುವುದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ದೇವರಾಜ, ಎನ್‍ಆರ್ ಹಾಗೂ ಕೆಆರ್ ಉಪ ವಿಭಾಗದ ಎಸಿಪಿಗಳ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್‍ಗಳು ಸಿಬ್ಬಂದಿಗಳೊಂದಿಗೆ ಬೆಳಿಗ್ಗೆ 6 ಗಂಟೆಯಿಂದಲೇ ಕಾರ್ಯಾಚರಣೆ ನಡೆಸಿ ರೌಡಿಶೀಟರ್‍ಗಳ ಚಟುವಟಿಕೆಗಳನ್ನು ಅವಲೋಕಿಸಿದರು. ಮೈಸೂರಿನ ಪಡುವಾರಹಳ್ಳಿಯ 1ರಿಂದ 6ನೇ ಮೇನ್‍ವರೆಗೆ ಕಾರ್ಯಾಚರಣೆ ನಡೆಸಿದ ಜಯಲಕ್ಷ್ಮೀಪುರಂ ಠಾಣೆ…

ಮೈಸೂರಿನ ಪ್ರಮುಖ ಸ್ಥಳಗಳಲ್ಲಿ ರಸಋಷಿ ಕುವೆಂಪು `ಸಾಹಿತ್ಯ ಸಾಲುಗಳ ಫಲಕ’
ಮೈಸೂರು

ಮೈಸೂರಿನ ಪ್ರಮುಖ ಸ್ಥಳಗಳಲ್ಲಿ ರಸಋಷಿ ಕುವೆಂಪು `ಸಾಹಿತ್ಯ ಸಾಲುಗಳ ಫಲಕ’

December 30, 2018

ಮೈಸೂರು:  ಕನ್ನಡ ನಾಡು-ನುಡಿ ಕಟ್ಟಲು ಅಪಾರ ಕೊಡುಗೆ ನೀಡಿದ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯದ ಸಾಲುಗಳುಳ್ಳ ಫಲಕಗಳನ್ನು ಮೈಸೂರು ನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸುವ ಯೋಜನೆ ಉದ್ದೇಶಿಸಲಾಗಿದೆ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ಪ್ರಕಟಿಸಿದರು. ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಕುವೆಂಪು ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ `ವಿಶ್ವ ಮಾನವ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು. ಕೊಲ್ಕತ್ತಾ ನಗರದಲ್ಲಿ ರವೀಂದ್ರನಾಥ್ ಟ್ಯಾಗೋರ್ ಅವರ…

1 151 152 153 154 155 194
Translate »