ಮೈಸೂರು: ಉದ್ದೇಶಿತ ಕೆಆರ್ಎಸ್ ಡಿಸ್ನಿಲ್ಯಾಂಡ್ ಮಾದರಿಯ ಉದ್ಯಾನ ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರದಡಿ ಬರುವ 5 ರಾಷ್ಟ್ರೀಯ ಸಂಸ್ಥೆಗಳಿಂದ ನಿರಾಕ್ಷೇಪಣಾ ಪತ್ರ (ಎನ್ಓಸಿ) ಪಡೆಯಲು ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಸವರಾಜೇಗೌಡ ತಿಳಿಸಿದ್ದಾರೆ. ಉದ್ದೇಶಿತ ಕೆಆರ್ಎಸ್ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯ ಎಂದು ಕೇಂದ್ರ ಪರಿಸರ ಸಚಿವಾಲಯವು ಗೆಜೆಟ್ ನೋಟಿಫಿಕೇಷನ್ ಹೊರಡಿಸಿರುವ ಹಿನ್ನೆಲೆಯಲ್ಲಿ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿರುವ ಅವರು, ಡಿಸ್ನಿಲ್ಯಾಂಡ್ ಯೋಜನೆಗೆ ಸರ್ಕಾರ ನಿರ್ಧಾರ ಮಾಡಿದಾಗಲೇ…
ಇಂದು ಭೀಮಾ ಕೋರೆಗಾಂವ್ ಯುದ್ಧದ ವಿಜಯ ಸ್ತಂಭದ ಪ್ರಥಮ ವಾರ್ಷಿಕೋತ್ಸವ
January 1, 2019ಮೈಸೂರು, ಡಿ.31(ಪಿಎಂ)- ಜೈ ಭೀಮ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಭೀಮಾ ಕೋರೆಗಾಂವ್ ಯುದ್ಧದ 201ನೇ ಸಂಭ್ರಮಾಚರಣೆ ಹಾಗೂ ಮೈಸೂರಿನಲ್ಲಿ ಸ್ಥಾಪಿ ಸಿರುವ ಭೀಮಾ ಕೋರೆಗಾಂವ್ ಯುದ್ಧದ ವಿಜಯ ಸ್ತಂಭದ ಮಾದರಿಯ ಪ್ರಥಮ ವಾರ್ಷಿಕೋತ್ಸವವನ್ನು 2019ರ ಜನವರಿ 1ರಂದು ಏರ್ಪಡಿಸಲಾಗಿದೆ ಎಂದು ಕ್ಲಬ್ನ ಅಧ್ಯಕ್ಷ ಜಯರಾಜ್ ಹೆಗ್ಡೆ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1818ರ ಜನವರಿ 1ರಂದು ಪುಣೆ ಸಮೀಪದ ಭೀಮಾ ಕೋರೆಗಾಂವ್ನಲ್ಲಿ ನಡೆದ ಯುದ್ಧ ದೇಶದ ದಲಿತ ಸಮುದಾಯದ…
ಮೈಸೂರಲ್ಲಿ ಸ್ವರ ಧಾರಾ ಸಂಗೀತ, ಸಾಂಸ್ಕøತಿಕ ಅಕಾಡೆಮಿ ಉದ್ಘಾಟನೆ
January 1, 2019ಮೈಸೂರು,ಡಿ.31(ಎಸ್ಪಿಎನ್)- ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ, ಮೈಸೂರು ಜಿಲ್ಲೆಯ ಕಲಾವಿದರು ಮತ್ತು ಸಂಘ-ಸಂಸ್ಥೆಗಳು ಸರ್ಕಾರದ ಅನುದಾನವನ್ನು ಬಳಸಿಕೊಳ್ಳು ವವರಲ್ಲಿ ಬೆರಳೆಣಿಕೆ ಮಂದಿ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇ ಶಕ ಹನೂರು ಚನ್ನಪ್ಪ ಅಭಿಪ್ರಾಯಪಟ್ಟರು. ಜೆಎಲ್ಬಿ ರಸ್ತೆಯ ರೋಟರಿ ಐಡಿ ಯಲ್ ಜಾವಾ ಸಭಾಂಗಣದಲ್ಲಿ ಸ್ವರ ಧಾರಾ ಸಂಗೀತ ಮತ್ತು ಸಾಂಸ್ಕøತಿಕ ಅಕಾ ಡೆಮಿಯ ಉದ್ಘಾಟನಾ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದರು. ಮೈಸೂರು ಜಿಲ್ಲೆಯ ಕಲಾವಿದರು ದಸರಾ ಮಹೋತ್ಸವಕ್ಕೆ ಮಾತ್ರ ಸೀಮಿತ ರಾಗಿದ್ದಾರೆ. ಆದರೆ, ಕನ್ನಡ…
ಧಾರ್ಮಿಕ ಭಾವನೆಗೆ ಧಕ್ಕೆ: ಭಗವಾನ್ ವಿರುದ್ಧ ಎಫ್ಐಆರ್
January 1, 2019ಮೈಸೂರು: ‘ರಾಮಮಂದಿರ ಏಕೆ ಬೇಡ?’ ಪುಸ್ತಕದ ಮೂಲಕ ಮತ್ತೆ ವಿವಾದ ಸೃಷ್ಟಿಸಿರುವ ವಿವಾದಿತ ಲೇಖಕ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಭಗವಾನ್ ಬರೆದಿರುವ ಪುಸ್ತಕದಲ್ಲಿ, `ರಾಮ ಮದ್ಯಪಾನ ಮಾಡುತ್ತಿದ್ದ, ಮಾಂಸ ತಿನ್ನುತ್ತಿದ್ದ’ ಎಂದು ದಾಖಲಿಸುವ ಮೂಲಕ ಹಿಂದೂಗಳ ಧಾಮಿಕ ಭಾವನೆಗಳಗೆ ಧಕ್ಕೆ ತಂದಿದ್ದಾರೆ ಎಂದು ಹಿಂದೂ ಜಾಗರಣಾ ವೇದಿಕೆಯ ಜಗದೀಶ್ ಹೆಬ್ಬಾಳ್ ಅವರು ಕುವೆಂಪುನಗರ ಠಾಣೆಗೆ ದೂರು ನೀಡಿದ್ದರು. ಬಂಧನ ಸಾಧ್ಯತೆ?:ದೂರು ಸ್ವೀಕರಿಸಿರುವ ಪೆÇಲೀಸರು ಭಗವಾನ್ ವಿರುದ್ಧ ಐಪಿಸಿ ಸೆಕ್ಷನ್ 295(ಎ) ಅಡಿ ಪ್ರಕರಣ ದಾಖಲಿಸಿದ್ದಾರೆ. ಈ…
ಸಂಚಾರ ನಿಯಮ ಪಾಲಿಸಿದವರಿಗೆ ಲಡ್ಡು, ಗ್ರೀಟಿಂಗ್ ಕಾರ್ಡ್
January 1, 2019ಮೈಸೂರು: ಹೊಸ ವರ್ಷವನ್ನು ವಿನೂತನವಾಗಿ ಆಚರಿಸಲು ಮುಂದಾಗಿರುವ ಮೈಸೂರು ಸಂಚಾರ ಪೊಲೀಸರು, ಸಂಚಾರ ನಿಯಮವನ್ನು ಸಂಪೂರ್ಣವಾಗಿ ಪಾಲಿಸಿದವರಿಗೆ ಲಡ್ಡು, ಗ್ರೀಟಿಂಗ್ ಕಾರ್ಡ್ ನೀಡಿ ಶುಭ ಕೋರುವರು. ಮೈಸೂರಿನ ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿ ನಗರ ಪೊಲೀಸ್ ಕಮೀಷ್ನರ್ ಡಾ. ಎ.ಸುಬ್ರ ಹ್ಮಣ್ಯೇಶ್ವರರಾವ್ ಅವರು ಹೆಲ್ಮೆಟ್ ಧರಿಸಿ, ಡಿಎಲ್, ವಾಹನದ ಆರ್ಸಿ, ಇನ್ಶೂರೆನ್ಸ್ ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳನ್ನು ಹೊಂದಿದ್ದು, ವಾಹನವನ್ನೂ ಸುಸ್ಥಿತಿಯಲ್ಲಿರಿ ಸಿಕೊಂಡವರಿಗೆ ಸಿಹಿ, ಗ್ರೀಟಿಂಗ್ಸ್ ಕಾರ್ಡ್ ನೀಡಿ ನಾಳೆ (2019ರ…
ತಮಿಳುನಾಡು ಫೋಟೋಗ್ರಾಫರ್ಗೆ ಹನಿಟ್ರ್ಯಾಪ್
January 1, 2019ಅರಸೀಕೆರೆ,ಡಿ.31-ತಮಿಳುನಾಡು ವ್ಯಕ್ತಿಯೋರ್ವನನ್ನು ಹನಿಟ್ರ್ಯಾಪ್ ಮೂಲಕ ಅಪಹರಿಸಿ, 1.07 ಲಕ್ಷ ಸುಲಿಗೆ ಮಾಡಿದ ಘಟನೆ ತಡವಾಗಿ ವರದಿಯಾಗಿದೆ. ತಮಿಳುನಾಡಿನ ಹೊಸೂರು ತಾಲೂಕು ನಾವಡಿ ಗ್ರಾಮದ ನವೀನ್ ಕುಮಾರ್ ಹನಿಟ್ರ್ಯಾಪ್ಗೆ ಸಿಲುಕಿ ಹಣ ಕಳೆದು ಕೊಂಡವರಾಗಿದ್ದು, ಇವರು ತಮಿಳುನಾಡಿನವರಾದರೂ ಬೆಂಗಳೂರಿನಲ್ಲಿ ಫೋಟೋಗ್ರಾಫರ್ ಕೆಲಸ ಮಾಡುತ್ತಿದ್ದಾರೆ. ಇವರನ್ನು ಯುವತಿಯೋರ್ವಳು ಬೆಂಗಳೂರಿನಿಂದ ಹಾಸನಕ್ಕೆ ಕರೆತಂದು ವಾಪಸ್ ಹೋಗುವಾಗ ಅವಳದೇ ತಂಡದ ಮೂವರು ಈ ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿ, ಹಣ ಸುಲಿಗೆ ಮಾಡಿದ್ದಾರೆ. ವಿವರ: ಬೆಂಗಳೂರಿನಲ್ಲಿ ಫೋಟೋಗ್ರಾಫರ್ ಆಗಿದ್ದ ನವೀನ್ಕುಮಾರ್ಗೆ ಮೊಬೈಲ್ ಸಂಪರ್ಕದ ಮೂಲಕ…
ಲಿಂಗಾಂಬುಧಿ ಕೆರೆಗೆ ನೂರಾರು ಪರಿಸರ ಪ್ರಿಯರ ಭೇಟಿ; ಚಿಟ್ಟೆ, ಕೀಟ, ಪಕ್ಷಿಗಳ ವೀಕ್ಷಣೆ
December 31, 2018ಮೈಸೂರು: `ವೈಲ್ಡ್ ಮೈಸೂರು’ ಭಾನುವಾರ ಮೈಸೂರಿನ ಲಿಂಗಾಂಬುಧಿ ಕೆರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಎ.ಶಿವ ಪ್ರಕಾಶ್ ಅವರು, ಕೆರೆ ಮತ್ತು ಸುತ್ತಲಿನ ಜೀವ ವೈವಿಧ್ಯತೆ ಕುರಿತು ಪರಿಸರ ಪ್ರಿಯರಿಗೆ ಪರಿಚಯ ಮಾಡಿಕೊಟ್ಟರು. ಪರಿಸರ, ಪ್ರಾಣಿ, ಪಕ್ಷಿ ಪ್ರಿಯರು, ಎಂಎಸ್ಸಿ, ಬಿಎಸ್ಸಿ ಮತ್ತು ಜೀವಶಾಸ್ತ್ರ ವಿದ್ಯಾರ್ಥಿಗಳು ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಇದರಲ್ಲಿ ಪಾಲ್ಗೊಂಡಿದ್ದರು. ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಬೈನಾಕ್ಯುಲರ್ನೊಂದಿಗೆ ಪಾಲ್ಗೊಂಡು ಪರಿಸರ, ಪಕ್ಷಿ, ಚಿಟ್ಟೆಗಳನ್ನು ವೀಕ್ಷಿಸಿ ಆನಂ ದಿಸಿದರು. ಲಿಂಗಾಂಬುಧಿ ಉದ್ಯಾನ ಮತ್ತು…
ಮೈಸೂರಿಗರ ಮನ ಸೆಳೆದ ಹಸಿರು ಸಂತೆ-ಚಿತ್ರ ಸಂತೆ
December 31, 2018ಮೈಸೂರು: ಹೊಸ ವರ್ಷದ ಸಂಭ್ರಮಾಚರಣೆ ಹಾಗೂ ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಭಾನುವಾರ ಮೈಸೂರಿನ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ನಡೆದ ಹಸಿರು ಹಾಗೂ ಚಿತ್ರ ಸಂತೆ ನೂರಾರು ಗ್ರಾಹಕರ ಮನ ಸೆಳೆಯಿತು. ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಇದೇ ಮೊದಲ ಬಾರಿಗೆ ಓಪನ್ ಸ್ಟ್ರೀಟ್ ಫೆಸ್ಟಿ ವಲ್ ಮಾದರಿಯಲ್ಲಿ ಆಯೋಜಿಸಿದ್ದ ಹಸಿರು ಸಂತೆ ಹಾಗೂ ಚಿತ್ರ ಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇಂದು ಬೆಳಗ್ಗೆ 9.30ಕ್ಕೆ ಆರಂಭ ವಾದ ಸಂತೆ ಸಂಜೆ 5 ಗಂಟೆವರೆಗೂ ನಡೆಯಿತು. ಕೃಷ್ಣರಾಜ ಬುಲೆವಾರ್ಡ್…
ರೈತರ ಸಾಲ ಮನ್ನಾ: ಪ್ರಧಾನಿ ಮೋದಿ ಹೇಳಿಕೆ ದುರದೃಷ್ಟಕರ
December 31, 2018ಬೆಂಗಳೂರು: ರಾಜ್ಯದ ರೈತರ ಸಾಲ ಮನ್ನಾ ಯೋಜನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆ ಸರಿ ಇಲ್ಲ. ಅದು ಸೂಕ್ಷ್ಮ ವಲ್ಲದ ಮತ್ತು ದುರದೃಷ್ಟಕರ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಇಂದು ಟ್ವೀಟ್ ಮಾಡಿ ರುವ ಸಿಎಂ, ಸಾಲ ಮನ್ನಾ ಕುರಿತು ಪ್ರಧಾನಿ ನರೇಂದ್ರ ಮೋದಿ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಯು ಸಂಪೂರ್ಣ ತಪ್ಪಾದ,ಸೂಕ್ಷ್ಮವಲ್ಲದ ಮತ್ತು ದುರದೃಷ್ಟಕರ ಎಂದಿದ್ದಾರೆ. ಸಾಲಮನ್ನಾ ಯೋಜನೆಯ ಬಗ್ಗೆ ಸಂಪೂರ್ಣ…
ನಾನೂ ಕೂಡ `ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’: ಹೆಚ್ಡಿಡಿ
December 31, 2018ನವದೆಹಲಿ: ನಾನೂ ಕೂಡ ಆಕ್ಸಿ ಡೆಂಟಲ್ ಪ್ರೈಮ್ ಮಿನಿಸ್ಟರ್ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ. ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರದ ಟ್ರೈಲರ್ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ನಿಜ ಹೇಳಬೇಕೆಂದರೆ 3-4 ತಿಂಗಳ ಹಿಂದೆಯೇ ಈ ವಿವಾದ ಆರಂಭವಾಗಿತ್ತು. ಚಿತ್ರಕ್ಕೇಕೆ ಅನುಮತಿ ನೀಡಿದರು ಎಂಬುದು ನನಗೂ ಗೊತ್ತಿಲ್ಲ. ನಾನೂ ಕೂಡ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್. ಆದರೆ, ನಾನೆಂದೂ ಇಂತಹ ಪರಿಸ್ಥಿತಿಗಳನ್ನು ಎದುರಿಸಿಲ್ಲ ಎಂದು ಹೇಳಿದ್ದಾರೆ. ಸ್ಥಳೀಯ ಪಕ್ಷಗಳು ಹಾಗೂ ಕಾಂಗ್ರೆಸ್ ಬೆಂಬಲದಿಂದ 1996ರ…