Tag: Mysuru

ಮೈಸೂರಿನಲ್ಲಿ `ಭಾನುವಾರದ ಬಿಡುವಿನ ಸಂತೆ  ಆಹಾರ ಮೇಳ’ದಲ್ಲಿ ಅವರೆಕಾಯಿ ಘಮಲು
ಮೈಸೂರು

ಮೈಸೂರಿನಲ್ಲಿ `ಭಾನುವಾರದ ಬಿಡುವಿನ ಸಂತೆ ಆಹಾರ ಮೇಳ’ದಲ್ಲಿ ಅವರೆಕಾಯಿ ಘಮಲು

December 24, 2018

ಮೈಸೂರು:  ಮೈಸೂರಿನಲ್ಲಿ ಭಾನುವಾರ ಮಹಿಳೆಯರ ಸಂಭ್ರಮ. ಮೈಸೂರು ಲೇಡೀಸ್ ಅಸೋಸಿಯೇಷನ್ ಆಶ್ರಯದಲ್ಲಿ ವಿಜಯನಗರದ ಮೊದಲನೇ ಹಂತದಲ್ಲಿ ಸಪ್ತಪದಿ ಕಲ್ಯಾಣ ಮಂಟಪ ದಲ್ಲಿ ನಡೆದ `ಭಾನುವಾರದ ಬಿಡುವಿನ ಸಂತೆ’ ಹಾಗೂ `ಆಹಾರ ಮೇಳ’ದಲ್ಲಿ ನಂದಿನಿ ಉತ್ಪನ್ನಗಳನ್ನು ಬಳಸಿ ಸಿದ್ಧಪಡಿಸಿದ ಅವರೆ ಕಾಳಿನ ನಾನಾ ರೀತಿಯ ತಿನಿಸುಗಳು ಜನರ ನಾಲಿಗೆ ತಣಿಸಿದವು. ಜನರು ರುಚಿ ಮತ್ತು ಗರಿ ಗರಿಯಾದ ತಿಂಡಿಗಳನ್ನು ಸವಿದರು. ಆಹಾರ ಮೇಳಕ್ಕೆ ಕಾಲಿಡುತ್ತಿದ್ದಂತೆ 40ಕ್ಕೂ ಹೆಚ್ಚು ಮಳಿಗೆಗಳು ಆಕರ್ಷಿಸಿದವು. ಒಂದೆಡೆ ನಂದಿನಿ ತುಪ್ಪ ಬಳಸಿ ಮಾಡಿದ್ದ ಹಾಗೂ…

ಡಿ.26, 27 ಸರ್ಕಾರಿ ನೌಕರರ ಕ್ರೀಡಾಕೂಟ
ಮೈಸೂರು

ಡಿ.26, 27 ಸರ್ಕಾರಿ ನೌಕರರ ಕ್ರೀಡಾಕೂಟ

December 24, 2018

ಮೈಸೂರು: ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಡಿ.26 ಮತ್ತು 27ರಂದು ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಈ ಕ್ರೀಡಾಕೂಟ ನಡೆಯಲಿದ್ದು, ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ…

ಇನ್ವಿಟೇಷನ್ ಕಪ್ ಹಾಕಿ: ಕೊಡಗು ಚಾಂಪಿಯನ್
ಮೈಸೂರು

ಇನ್ವಿಟೇಷನ್ ಕಪ್ ಹಾಕಿ: ಕೊಡಗು ಚಾಂಪಿಯನ್

December 24, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಹಾಕಿ ಮೈದಾನದಲ್ಲಿ ಗುರುವಾರ ಆರಂಭಗೊಂಡು 4 ದಿನಗಳ ಕಾಲ ನಡೆದ ರಾಜ್ಯಮಟ್ಟದ ಇನ್ವಿಟೇಷನ್ ಕಪ್ ಹಾಕಿ ಪಂದ್ಯಾವಳಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ ಕೂರ್ಗ್ ತಂಡ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಹಾಕಿ ಮೈಸೂರು ಸಂಸ್ಥೆ ಆಯೋಜಿಸಿದ್ದ ಹಾಕಿ ಪಂದ್ಯಾವಳಿಯ ಫೈನಲ್‍ನಲ್ಲಿ ಮೈಸೂರು ತಂಡದ ವಿರುದ್ಧ ಕೂರ್ಗ್ ತಂಡ(1-0) ಗೋಲಿನಿಂದ ಗೆಲುವು ಸಾಧಿಸಿ, ಪ್ರಥಮ ಸ್ಥಾನ ಪಡೆಯಿತು. ಮೈಸೂರು ತಂಡ ರನ್ನರ್ ಅಪ್‍ಗೆ ತೃಪ್ತಿಪಟ್ಟುಕೊಂಡಿತು. ಎರಡೂ ತಂಡಗಳು ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದವು. ಆದರೆ, ಕೂರ್ಗ್ ತಂಡದ…

ಮೈಸೂರಿಗೆ ಹರಿದು ಬಂದ ಪ್ರವಾಸಿಗರ ದಂಡು
ಮೈಸೂರು

ಮೈಸೂರಿಗೆ ಹರಿದು ಬಂದ ಪ್ರವಾಸಿಗರ ದಂಡು

December 24, 2018

ಮೈಸೂರು: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದು, ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರದ್ದೇ ಕಾರುಬಾರು ಕಂಡು ಬಂದಿತು. ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ದೊರೆತ ರಜಾವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆಯುವ ನಿಟ್ಟಿನಲ್ಲಿ ವಿವಿಧ ರಾಜ್ಯ ಹಾಗೂ ವಿವಿಧ ದೇಶಗಳ ಸಾವಿರಾರು ಪ್ರವಾಸಿಗರು ಮೈಸೂರಿಗೆ ತಂಡೋಪತಂಡವಾಗಿ ಆಗಮಿಸಿದ್ದು, ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮೈಸೂರಿಗೆ ಬಂದ ಪ್ರವಾಸಿಗರು ಅರ ಮನೆ, ಮೃಗಾಲಯ, ಚಾಮುಂಡಿಬೆಟ್ಟ,…

ಬಸವ ಸಿದ್ಧಾಂತ ಒಪ್ಪುವವರಿಗೆ ಸಿಗದ ರಾಜಕೀಯ ಸ್ಥಾನಮಾನ
ಮೈಸೂರು

ಬಸವ ಸಿದ್ಧಾಂತ ಒಪ್ಪುವವರಿಗೆ ಸಿಗದ ರಾಜಕೀಯ ಸ್ಥಾನಮಾನ

December 24, 2018

ಮೈಸೂರು: ಪ್ರಸ್ತುತ ರಾಜಕೀಯದಲ್ಲಿ ಬಸವ ಸಿದ್ಧಾಂತ, ವೈಚಾರಿಕತೆ ಒಪ್ಪುವವರಿಗೆ ಸೂಕ್ತ ಸ್ಥಾನ ಮಾನ ದೊರಕುತ್ತಿಲ್ಲ. ಬದಲಾಗಿ ಗುಡಿ-ಗುಂಡಾರಗಳನ್ನು ಸುತ್ತುವವರು ಹಾಗೂ ಸಮಾಜಮುಖಿಯಾಗಿ ಮಾತನಾಡ ದವರು ಮಂತ್ರಿಗಳಾಗುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಬಸವರಾಜ ಸಬರದ ಬೇಸರ ವ್ಯಕ್ತಪಡಿಸಿದರು.ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವ ರಣದ ಶ್ರೀ ರಾಜೇಂದ್ರ ಭವನದಲ್ಲಿ ಶರಣ ಸಾಹಿತ್ಯ ಪರಿಷತ್ ನಗರ ಘಟಕದ ವತಿ ಯಿಂದ ಆಯೋಜಿಸಿದ್ದ ಆಂದೋಲನ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ `ಬಸವಣ್ಣ ಮತ್ತು ತಳ ಸಮುದಾಯದ ಶರಣರು’ ಕುರಿತು ಮಾತನಾಡಿದರು. ಬಸವ ಧರ್ಮಕ್ಕಾಗಿ…

ದೊಣ್ಣೆವರಸೆ ಸ್ಪರ್ಧೆಯಲ್ಲಿ ವಿಜಯನಗರದ ತೇಜಸ್ ವಿಜೇತ
ಮೈಸೂರು

ದೊಣ್ಣೆವರಸೆ ಸ್ಪರ್ಧೆಯಲ್ಲಿ ವಿಜಯನಗರದ ತೇಜಸ್ ವಿಜೇತ

December 24, 2018

ಮೈಸೂರು: ಮೈಸೂ ರಿನ ವಿನಾಯಕ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ‘ಕರ್ನಾಟಕ ಸ್ಪೋಟ್ರ್ಸ್ ಸಿಲಂಬಂ ಅಸೋಸಿಯೇಷನ್’ ವತಿಯಿಂದ ಆಯೋಜಿಸಿದ್ದ 4ನೇ ರಾಜ್ಯ ಮಟ್ಟದ ಸ್ಟಿಕ್ ಫೈಟಿಂಗ್ ಟೂರ್ನಿಯಲ್ಲಿ ಬೆಸ್ಟ್ ಸ್ಟಿಕ್ ಫೈಟರ್ ವಿಭಾಗದಲ್ಲಿ ವಿಜಯ ನಗರದ ಬಿ.ತೇಜಸ್ ವಿಜೇತರಾದರೆ, ಹೆಬ್ಬಾಳದ ಎಂ.ಡಿ. ಮುತ್ತಪ್ಪ ರನ್ನರ್ ಎನಿಸಿಕೊಂಡರು. ಪಂದ್ಯಾವಳಿ ಉದ್ಘಾಟಿಸಿದ ಎಂಸಿಡಿ ಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಮಾತನಾಡಿ, ಗ್ರಾಮೀಣ ಕಲೆಗಳನ್ನು ಉಳಿ ಸುವ ನಿಟ್ಟಿನಲ್ಲಿ ದೊಣ್ಣೆ ವರಸೆಯಂತಹ ಕ್ರೀಡೆಗಳು ನಿರಂತರವಾಗಿ ನಡೆಯುತ್ತಿರ ಬೇಕು. ಈ ನಿಟ್ಟಿನಲ್ಲಿ ಅಸೋಸಿಯೇಷನ್…

ಹೆಬ್ಬಾಳದಲ್ಲಿ ಕನಕದಾಸರ ಜಯಂತಿ
ಮೈಸೂರು

ಹೆಬ್ಬಾಳದಲ್ಲಿ ಕನಕದಾಸರ ಜಯಂತಿ

December 24, 2018

ಮೈಸೂರು: ನಾವು ಆರ್ಥಿಕ ವಾಗಿ, ಶೈಕ್ಷಣಿಕವಾಗಿ, ಸ್ವಾವಲಂಬಿಗಳಾಗಿ, ಅದರ ಪ್ರಯೋಜನ ಸಮಾಜಕ್ಕೆ ದೊರೆಯ ದಿದ್ದರೆ ದಾರ್ಶನಿಕರ ಹೆಸರಲ್ಲಿ ಮಾಡುವ ಕಾರ್ಯಕ್ರಮಗಳು ಅರ್ಥಪೂರ್ಣ ವಾಗುವುದಿಲ್ಲ ಎಂದು ಮಾಜಿ ಸಚಿವ ಸಿ.ಎಚ್.ವಿಜಯ್ ಶಂಕರ್ ಹೇಳಿದರು. ಮೈಸೂರಿನ ಹೆಬ್ಬಾಳದಲ್ಲಿರುವ ಶ್ರೀ ಕನಕ ದಾಸ ಹಿತರಕ್ಷಣಾ ಸಮಿತಿ ವತಿಯಿಂದ ಭಾನುವಾರ ಹೆಬ್ಬಾಳದಲ್ಲಿ ಆಯೋಜಿಸಿದ್ದ ಕನಕದಾಸರ 531ನೇ ಜಯಂತ್ಯೋತ್ಸವ ಹಾಗೂ ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದುಳಿದ ವರ್ಗಗಳ ಇಲಾಖೆ ಸೇರಿ ದಂತೆ ವಿವಿಧ…

ಬಿಎಐ ಮಹಿಳಾ ಘಟಕದ `ಸ್ಫೂರ್ತಿ ಉತ್ಸವ’ದಲ್ಲಿ ಮಹಿಳೆಯರು, ಮಕ್ಕಳ ಸಂಭ್ರಮ
ಮೈಸೂರು

ಬಿಎಐ ಮಹಿಳಾ ಘಟಕದ `ಸ್ಫೂರ್ತಿ ಉತ್ಸವ’ದಲ್ಲಿ ಮಹಿಳೆಯರು, ಮಕ್ಕಳ ಸಂಭ್ರಮ

December 24, 2018

ಮೈಸೂರು: ಮೈಸೂರಿನ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿಯೂ ಇಂದು `ಸ್ಫೂರ್ತಿ ಉತ್ಸವ’ ಆಹಾರ ಮೇಳದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡು ಸಂಭ್ರಮಿಸಿದರು. ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಬಿಐ)ದ ಅಂಗ ಸಂಸ್ಥೆಯಾದ ಸ್ಫೂರ್ತಿ ಮಹಿಳಾ ಘಟಕದಿಂದ ಆಯೋಜಿಸಿದ್ದ `ಸ್ಪೂರ್ತಿ ಉತ್ಸವ’ದಲ್ಲಿ ಮುಖ್ಯವಾಗಿ ಗಮನ ಸೆಳೆದದ್ದು ಸಾವಯವ ಕೃಷಿ ಕುರಿತ ಅರಿವು ಮೂಡಿಸುವ ಮಳಿಗೆಗಳು. ಇಲ್ಲಿ 40ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಸ್ತು ಪ್ರದರ್ಶನದ ಜೊತೆಗೆ ಮಹಿಳೆಯರೇ ತಯಾರಿಸಿದ ಬಗೆ ಬಗೆಯ ಆಹಾರ ಉತ್ಪನ್ನಗಳು, ಸಿಹಿ ಮತ್ತು ಖಾರದ ತಿಂಡಿಗಳು,…

ಮೈಸೂರಲ್ಲೀಗ `ಮಾಗಿ ಉತ್ಸವ’
ಮೈಸೂರು

ಮೈಸೂರಲ್ಲೀಗ `ಮಾಗಿ ಉತ್ಸವ’

December 23, 2018

ಮೈಸೂರು:  ವಿವಿಧ ಬಣ್ಣದ ಹೂವುಗಳಿಂದ ಸಿಂಗಾರಗೊಂಡಿರುವ ಲಲಿತ ಮಹಲ್ ಅರಮನೆ, ವಿರಾಜಮಾನರಾಗಿ ನಿಂತಿರುವ ರಾಜ ಶ್ರೀ ಜಯಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ, ಶಿವ ಲಿಂಗಕ್ಕೆ ನಮಸ್ಕರಿಸುತ್ತಿರುವ ಆನೆ ಮತ್ತು ನಂದಿ ಮಾದರಿಗಳು ಸೇರಿದಂತೆ ಮತ್ತಿತರೆ ದೃಶ್ಯಗಳು ಹೂವಿನಿಂದ ಮೈದಳೆದಿದ್ದು, ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಿದೆ. ಇದು ಕಂಡು ಬಂದಿದ್ದು ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಅಂಗವಾಗಿ ಮಾಗಿ ಉತ್ಸವ ಶೀರ್ಷಿಕೆಯಡಿ ಅರಮನೆ ಆವರಣ ದಲ್ಲಿ ಆಯೋಜಿರುವ ಫಲಪುಷ್ಪ ಪ್ರದರ್ಶನದಲ್ಲಿ. ಇಂದಿನಿಂದ ಡಿ.31ರವರೆಗೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ…

ಮೈಸೂರಲ್ಲಿ ಆಸ್ತಿಗಳ ಗೈಡೆನ್ಸ್ ವ್ಯಾಲ್ಯೂ ಶೇ.25ರವರೆಗೆ ಹೆಚ್ಚಳ
ಮೈಸೂರು

ಮೈಸೂರಲ್ಲಿ ಆಸ್ತಿಗಳ ಗೈಡೆನ್ಸ್ ವ್ಯಾಲ್ಯೂ ಶೇ.25ರವರೆಗೆ ಹೆಚ್ಚಳ

December 23, 2018

ಮೈಸೂರು: ನಿವೇ ಶನ, ಮನೆ, ಜಮೀನಿನಂತಹ ಸ್ಥಿರಾಸ್ತಿ ಖರೀದಿಸುವವರಿಗೆ ಇದು ಕಹಿ ಸುದ್ದಿ. ಸರ್ಕಾರವು ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಶೇ.5ರಿಂದ 25ರವರೆಗೆ ಆಸ್ತಿಗಳ ಗೈಡೆನ್ಸ್ ವ್ಯಾಲ್ಯೂ (ಮಾರ್ಗ ಸೂಚಿ ದರ) ಹೆಚ್ಚಿಸಲು ಮುಂದಾಗಿದೆ.ರಾಜ್ಯಾದ್ಯಂತ ಆಸ್ತಿಗಳ ಗೈಡೆನ್ಸ್ ವ್ಯಾಲ್ಯೂ ಹೆಚ್ಚಿಸಲು ನಿರ್ಧರಿಸಿರುವ ಸರ್ಕಾರ ಈ ಬಗ್ಗೆ 2019ರ ಜನವರಿ ಮಾಹೆಯಲ್ಲಿ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ಮೈಸೂರಿನ ಉಪ ನೋಂದ ಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ. ಮೈಸೂರು ಮತ್ತು ಮಂಗಳೂರು ನಗ ರದ ಆಸ್ತಿಗಳ…

1 158 159 160 161 162 194
Translate »