ಮೈಸೂರು: ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ತಡೆ ಸೇರಿದಂತೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮಕ್ಕಳ ಸಹಾಯವಾಣಿ-1098 ನಡೆಸುತ್ತಿರುವ `ಮೈತ್ರಿ ಸಪ್ತಾಹ’ಕ್ಕೆ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇ ಶಕಿ ಕೆ.ರಾಧ ಚಾಲನೆ ನೀಡಿದರು. ಮೈಸೂರಿನ ಕುಪ್ಪಣ್ಣ ಪಾರ್ಕ್ನಲ್ಲಿ ಇಂದು ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಬ್ಯಾನರ್ ಮೇಲೆ ಸಹಿ ಮಾಡುವ ಮೂಲಕ `ಮೈತ್ರಿ ಸಪ್ತಾಹ’ವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮೈಸೂರು ಜಿಲ್ಲೆ ಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ…
ಡಿ.15, 16ರಂದು ಮೈಸೂರು ಜಿಲ್ಲಾ ಬ್ರಾಹ್ಮಣ ಬೃಹತ್ ಸಮಾವೇಶ
November 15, 2018ಮೈಸೂರು: ನಾವು ಬ್ರಾಹ್ಮಣರು ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿ ನಲ್ಲಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಡಿ.15 ಮತ್ತು 16ರಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಬೃಹತ್ ಸಮಾವೇಶ ಆಯೋಜಿಸಿರುವು ದಾಗಿ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಇಂದಿಲ್ಲಿ ತಿಳಿಸಿದರು. ಮೈಸೂರಿನ ಚಾಮುಂಡಿಪುರಂ 3ನೇ ಅಡ್ಡರಸ್ತೆಯಲ್ಲಿರುವ ಸಮಾವೇಶ ಕಚೇರಿ ಯಲ್ಲಿ ಸುದ್ದಿಗೋಷ್ಠಿಯಲ್ಲಿ ಸಮಾವೇಶ ಕುರಿತ ಮಾಹಿತಿಗಳನ್ನು ಅವರು ನೀಡಿದರು. ಸಮಾ ವೇಶದಲ್ಲಿ ವಿವಿಧ ಮಠಗಳ ಮುಖ್ಯಸ್ಥರು, ತ್ರಿಮತಸ್ಥ ಯತಿವರ್ಯರು ಭಾಗವಹಿಸಲಿ ದ್ದಾರೆ. 25,000ಕ್ಕೂ ಹೆಚ್ಚು…
ಸಹಕಾರಿ ಕ್ಷೇತ್ರದಲ್ಲಿ ಹೊಸ ಚಿಂತನೆಗಳಿಗೆ ಆದ್ಯತೆ
November 15, 2018ಮೈಸೂರು: ಇಂದು ಗ್ರಾಹಕರು ಎಚ್ಚೆತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ವಂತ ಪೈಪೋಟಿಗೆ ವ್ಯಾಪಾರಿಗಳು ಮುಂದಾ ಗಿದ್ದು, ಗುಣಾತ್ಮಕ ಆಹಾರ ಪದಾರ್ಥ ಗಳನ್ನು ನೀಡುತ್ತಿದ್ದಾರೆ. ಅದೇ ರೀತಿ ಮೀನು ಗಾರಿಕೆ ವ್ಯಾಪಾರವು ಇನ್ನಷ್ಟು ಅಭಿವೃದ್ಧಿ ಕಾಣಬೇಕಾಗಿದೆ ಎಂದು ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ. ರಾಜೀವ್ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ಸಹಕಾರ ಭವನದ ಆವ ರಣದಲ್ಲಿ 65ನೇ ಅಖಿಲ ಭಾರತ ಸಹ ಕಾರ ಸಪ್ತಾಹದ ಉದ್ಘಾಟನಾ ಸಮಾ ರಂಭದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಸಹಕಾರಿ ಮಾರಾಟ,…
ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಆರಂಭ
November 15, 2018ಮೈಸೂರು: ಶಾಲೆಯಿಂದ ಹೊರಗುಳಿದ ಮಕ್ಕಳ ವಿಸ್ತøತ ಸಮೀಕ್ಷಾ ಕಾರ್ಯ ಇಂದಿನಿಂದ ರಾಜ್ಯಾದ್ಯಂತ ಆರಂಭ ವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕಿ ಮಮತಾ ತಿಳಿಸಿದ್ದಾರೆ. ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳ ನಿಖರ ಸಂಖ್ಯೆ, ಕಾರಣವನ್ನು ತಿಳಿಯಲೆಂದು ಪರಿ ಣಾಮಕಾರಿಯಾಗಿ ಸಮೀಕ್ಷೆ ನಡೆಸಲು ಮಕ್ಕಳ ಗ್ರಾಮಸಭೆ, ವಾರ್ಡ್ ಸಭೆಗಳನ್ನು ನಡೆಸುವುದಲ್ಲದೆ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ಅವರು ತಿಳಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ,…
ಡಿಸೆಂಬರ್ನಲ್ಲಿ ವಿಶೇಷ ಪ್ಯಾಕೇಜ್ ಪ್ರವಾಸ
November 13, 2018ಮೈಸೂರು: ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೋರೇಶನ್ ವತಿ ಯಿಂದ ಡಿಸೆಂಬರ್ನಲ್ಲಿ `ಸ್ಪ್ಲೆಂಡೋರ್ಸ್ ಆಫ್ ಡೆಕ್ಕನ್’ ಶೀರ್ಷಿಕೆಯಡಿ ಹೈದರಾಬಾದ್, ಔರಂಗಾಬಾದ್, ಅಜಂತಾ, ಎಲ್ಲೋರಾ, ಮುಂಬೈ ಹಾಗೂ ಗೋವಾಕ್ಕೆ ರೈಲಿನಲ್ಲಿ ಪ್ಯಾಕೇಜ್ ಪ್ರವಾಸ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಕಾರ್ಪೋರೇಶನ್ನ ಮೈಸೂರು ವಿಭಾಗದ ವ್ಯವಸ್ಥಾಪಕ ಶಿವಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಪ್ಯಾಕೇಜ್ ಪ್ರವಾಸಿ ಕಾರ್ಯಕ್ರಮವಾಗಿದ್ದು, ತಲಾ 10,100 ರೂ. ಪ್ರಯಾಣ ದರ ನಿಗದಿ ಮಾಡಲಾಗಿದೆ. ಐದು ವರ್ಷ ಮೇಲ್ಟಟ್ಟ…
ಕಾನೂನಿನ ಪೂರ್ಣ ಅರಿವಿಲ್ಲದಿದ್ದರೆ ಗೊಂದಲ ಸಹಜ
November 11, 2018ಮೈಸೂರು: ಕಾನೂ ನಿನ ಪೂರ್ಣ ಅರಿವಿಲ್ಲದಿದ್ದಾಗ ಗೊಂದಲ ಗಳು ಉಂಟಾಗುವುದು ಸಹಜ. ಇದೇ ರೀತಿ ಜಿಎಸ್ಟಿ-ಟಿಡಿಎಸ್ ಕುರಿತಂತೆಯೂ ಜನರು ಗೊಂದಲಕ್ಕೊಳಗಾಗಿದ್ದಾರೆ ಎಂದು ಬೆಂಗಳೂರು ವಾಣಿಜ್ಯ ತೆರಿಗೆ ಅಪರ ಆಯುಕ್ತ ಬಿ.ವಿ.ರವಿ ತಿಳಿಸಿದರು. ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಶನಿವಾರ ಮೈಸೂರು ಮಹಾನಗರಪಾಲಿಕೆ ಗುತ್ತಿಗೆದಾರರ ಸಂಘ, ಮೈಸೂರು ವೃತ್ತ ಡಾಂಬರ್ ಮಿಶ್ರಣ ಘಟಕ ಮಾಲೀಕರ ಸಂಘ, ಮತ್ತು ಮುಡಾ ಗುತ್ತಿಗೆದಾರರ ಸಂಘ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೈಸೂರು ನಗರ ಮತ್ತು ತಾಲೂಕು…
ಸಾವಯವ ಕೃಷಿ ಉತ್ಪನ್ನಗಳ ‘ರೈತ ಸಂತೆ’ಗೆ ಉತ್ತಮ ಪ್ರತಿಕ್ರಿಯೆ
November 11, 2018ಮೈಸೂರು: ಸಾವಯವ ಕೃಷಿಗೆ ಪ್ರತ್ಯೇಕ ಮಾರುಕಟ್ಟೆ ಒದಗಿಸುವ ಸಲುವಾಗಿ ನಿಸರ್ಗ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ರೈತ ಸಂತೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮೈಸೂರಿನ ಕಾಮಾಕ್ಷಿ ಆಸ್ಪತ್ರೆ ರಸ್ತೆಯ ಹ್ಯಾಪಿಮ್ಯಾನ್ ಉದ್ಯಾನವನದ ಬಳಿ ಟ್ರಸ್ಟ್ನ ಮಾರಾಟ ಕೇಂದ್ರದ ಎದುರು ಏರ್ಪಡಿಸಿದ್ದ ರೈತ ಸಂತೆಯಲ್ಲಿ ಗ್ರಾಹಕರು ನೇರವಾಗಿ ರೈತರಿಂದ ಧಾನ್ಯ ಹಾಗೂ ತರಕಾರಿ ಸೇರಿದಂತೆ ಸಿರಿಧಾನ್ಯಗಳಿಂದ ತಯಾರಾದ ತಿಂಡಿ ತಿನಿಸುಗಳನ್ನು ಖರೀದಿಸಿದರು. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ `ನೈಸರ್ಗಿಕ ಸಾವಯವ ರೈತ ಗ್ರಾಹಕ ಒಕ್ಕೂಟ’ದ `ನಿಸರ್ಗ…
ಡಿ.29, 30ರಂದು ಮೈಸೂರಲ್ಲಿ 5ನೇ ರಾಷ್ಟ್ರೀಯ ಕಳರಿ ಪಯಟ್ಟು ಚಾಂಪಿಯನ್ಶಿಪ್
November 11, 2018ಮೈಸೂರು: ಶತಮಾನಗಳಿಂದ ಕೇರಳದಲ್ಲಿ ನೆಲೆಸಿರುವ ಒಂದು ಪ್ರತ್ಯೇಕ ಶಾರೀರಿಕ ಸಾಧನೆಯ ಕೊಡುಗೆಯೇ ಕಳರಿ ಪಯಟ್ಟು ಎಂಬ ಯುದ್ಧ ಕಲೆ. ನಶಿಸುತ್ತಿರುವ ಈ ದೇಹಾಭ್ಯಾಸ ವಿಧಾನ, ಆರ್ಯ ದ್ರಾವಿಡ ಜನಾಂಗದಷ್ಟೆ ಪುರಾತನವಾದದ್ದು. ಇಂತಹ ಕಲೆಗೆ ಸಂಬಂಧಿಸಿದಂತೆ ಡಿ.29 ಮತ್ತು 30ರಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ 5ನೇ ರಾಷ್ಟ್ರೀಯ ಕಳರಿ ಪಯಟ್ಟು ಚಾಂಪಿಯನ್ಶಿಪ್ ನಡೆಯಲಿದೆ. ಭಾರತೀಯ ಕಳರಿ ಪಯಟ್ಟು ಫೆಡರೇಷನ್ ಸಹಾಯಕ ಕಾರ್ಯ ದರ್ಶಿ ಡಾ.ಶಾಜಿ ಎಸ್.ಕೊಟ್ಯಾನ್ ಶನಿವಾರ ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ…
ಪರಂಪರೆ ಬಿಂಬಿಸಿದ ಕಂಡಾಯ, ನೀಲಗಾರರ ಮೆರವಣಿಗೆ
November 11, 2018ಮೈಸೂರು: ಮಂಟೇಸ್ವಾಮಿ ಪರಂಪರೆಯನ್ನು ಬಿಂಬಿಸುವ ಕಂಡಾಯಗಳ ಹಾಗೂ ನೀಲಗಾರರ ಮೆರ ವಣಿಗೆ ಶನಿವಾರ ವಿಜೃಂಭಣೆಯಿಂದ ನಡೆಯಿತು. ತೋಟಗಾರಿಕಾ ಇಲಾಖೆ ಕರ್ಜನ್ಪಾರ್ಕ್ ಆವರಣ ದಲ್ಲಿ ಚಾಮರಾಜನಗರ, ಮಂಡ್ಯ, ಮೈಸೂರು ಸೇರಿ ದಂತೆ ಮತ್ತಿತರೆ ಕಡೆಗಳಿಂದ ಆಗಮಿಸಿದ್ದ ಮಂಟೇಸ್ವಾಮಿ ಪರಂ ಪರೆಯ ಸಿದ್ದಪ್ಪಾಜಿ, ರಾಚಪ್ಪಾಜಿ, ಚೆನ್ನಾಜಮ್ಮ, ದೊಡ್ಡಮ್ಮ ತಾಯಿ ಹೀಗೆ 40ಕ್ಕೂ ಹೆಚ್ಚು ಕಂಡಾಯಗಳನ್ನು ಹೂವಿ ನಿಂದ ಅಲಂಕರಿಸಿ, ಪೂಜೆ ನೆರವೇರಿಸಲಾಯಿತು. ನಂತರ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಕೊಂಬು ಕಂಸಾಳೆ, ಡೊಳ್ಳು ಕುಣಿತ, ನಗಾರಿ-ತಮಟೆ ಯೊಂದಿಗೆ ಹೊರಟ ಕಂಡಾಯ ಹಾಗೂ…
ಸಾರ್ವಜನಿಕರೇ ಎಚ್ಚರ…! ಕಿಟಕಿ ಬಳಿ ಏನೂ ಇಡಬೇಡಿ!!
November 10, 2018ಮೈಸೂರು: ಸಾರ್ವಜನಿಕರೇ ಎಚ್ಚರ, ಮನೆಯ ಕಿಟಕಿ ಪಕ್ಕ ಬೆಲೆ ಬಾಳುವ ವಸ್ತುಗಳನ್ನು ಇಡಬೇಡಿ. ತೆರೆದ ಕಿಟಕಿಗಳಲ್ಲಿ ಕೊಂಡಿ ಬಳಸಿ ನಗದು, ಚಿನ್ನಾಭರಣಗಳನ್ನು ಕಳವು ಮಾಡುವ ತಂಡ ಮೈಸೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಬಾಗಿಲು ತೆರೆದಿದ್ದ ಕಿಟಕಿ ಮೂಲಕ ಕೊಂಡಿ ಅಳ ವಡಿಸಿದ ಪ್ಲಾಸ್ಟಿಕ್ ಪೈಪ್ ತೂರಿಸಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ಮೈಸೂರಿನ ಬನ್ನಿಮಂಟಪ `ಸಿ’ ಲೇಔಟ್ನಲ್ಲಿ ನ. 6ರ ರಾತ್ರಿ ನಡೆದಿದೆ. ಬನ್ನಿಮಂಟಪ `ಸಿ’ ಲೇಔಟ್, 4ನೇ ಮೇನ್,…