ಮೈಸೂರು: ಪ್ರವಾದಿ ಮಹಮದ್ ಅವರ ಜನ್ಮದಿನ ಆಚರಣೆ ಹಿನ್ನೆಲೆಯಲ್ಲಿ ಮೈಸೂರಿನ ರಾಜೀವ್ನಗರ ದಲ್ಲಿ ನ.10ರಿಂದ 18ರವರೆಗೆ ಕ್ರಿಕೆಟ್, ನಾಡಕುಸ್ತಿ, ದೇಹದಾಢ್ರ್ಯ ಹಾಗೂ ಮೊಜಹರ್-ಇ-ನಾಥ್ ಪಂದ್ಯಾವಳಿ ಆಯೋಜಿಸ ಲಾಗಿದೆ ಎಂದು ಮಿಲದ್ ಸ್ಪೋಟ್ರ್ಸ್ ಮತ್ತು ವೆಲ್ಫೇರ್ ಕೌನ್ಸಿಲ್ ಸದಸ್ಯ, ವಕೀಲ ಮುದಾಸೀರ್ ಅಲಿಖಾನ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಿಲದ್ ಸ್ಪೋಟ್ರ್ಸ್ ಮತ್ತು ವೆಲ್ಫೇರ್ ಕೌನ್ಸಿಲ್ ವತಿಯಿಂದ ಕಳೆದ 19 ವರ್ಷಗಳಿಂದ ಪ್ರವಾದಿ ಮಹಮದ್ ಜನ್ಮದಿನ ಆಚರಣೆ ಹಿನ್ನೆಲೆಯಲ್ಲಿ ವಿವಿಧ…
ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ಷಿಪ್ ಸ್ಪರ್ಧೆ ವಿಜೇತರು
November 6, 2018ಮೈಸೂರು: ಕರಾಟೆ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಅಂತರ ರಾಷ್ಟ್ರೀಯ ಸೌತ್ ಏಷಿಯಾ ಕರಾಟೆ ಚಾಂಪಿಯನ್ಷಿಪ್ ಸ್ಪರ್ಧೆ ನಡೆಸಲಾಯಿತು. ಈ ಸ್ಪರ್ಧೆಯಲ್ಲಿ ಭಾರತದ ಪಟುಗಳು ಅಪ್ರತಿಮ ಸಾಧನೆಯನ್ನು ಮಾಡಿ 27 ಚಿನ್ನದ ಪದಕಗಳು, 30 ಬೆಳ್ಳಿ ಪದಕಗಳು ಹಾಗೂ 10 ಕಂಚಿನ ಪದಕಗಳನ್ನು ಪಡೆದಿದ್ದಾರೆ. ಧನಲಕ್ಷ್ಮಿ ಆರ್.ಪಗಡೆ, ಬಿ.ಆದಿತ್ಯ ಕುಮಾರ್, ಪಿ.ಸೌಜನ್ಯ, ಜಯಶ್ರೀ ಪದ್ಮರಾಜ್, ಮಹೇಶ್ ಪ್ರಸಾದ್, ರಕ್ಷಾ, ಮಿಣಾಲ್ ಪ್ರಸಾದ್, ರವೀಂದ್ರ, ವಿ. ಆಕೃತಿ, ಸತ್ಯನಾರಾಯಣ, ಹೇಮಂತ್ ಕುಮಾರ್ ಹಾಗೂ ಎಂ.ಆರ್.ರವಿಶಂಕರ್ ಚಿನ್ನದ ಪದಕವನ್ನು ಗೆದ್ದಿದ್ದಾರೆ….
ಜಾತಿವಾದದ ಕೆಟ್ಟ ಮನಸ್ಸುಗಳು ಶುಚಿಯಾದರಷ್ಟೇ ಸ್ವಚ್ಛ ಭಾರತ ಸಾರ್ಥಕ
November 5, 2018ಮೈಸೂರು: ಸ್ವಚ್ಛ ಭಾರತ ಎಂದು ಕೇವಲ ಪರಿಸರ ಶುಚಿಗೊಳಿಸಿ ದರೆ ದೇಶದ ಉದ್ಧಾರ ಸಾಧ್ಯವಿಲ್ಲ. ಜಾತೀ ಯತೆಯ ಕೆಟ್ಟ ಮನಸ್ಸುಗಳೂ ತೊಲಗ ಬೇಕು. ಮನುಷ್ಯನನ್ನು ಮನುಷ್ಯನಂತೆ ಕಾಣುವ ಮನೋಭಾವ ಮೂಡುವಂತಹ ಸ್ವಚ್ಛ ಮನಸ್ಸಿನ ಭಾರತ ನಿರ್ಮಾಣ ಆಗಬೇಕು ಎಂದು ಮಾಜಿ ಸಚಿವರೂ ಆದ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಅಭಿಪ್ರಾಯಪಟ್ಟರು. ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ವಿ.ಶ್ರೀನಿ ವಾಸ ಪ್ರಸಾದ್ ಅಭಿಮಾನಿ ಬಳಗದ ವತಿ ಯಿಂದ ಬಿ.ಬಸವಲಿಂಗಪ್ಪನವರ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ಮಲ್ಕುಂಡಿ ಮಹಾದೇವಸ್ವಾಮಿ…
ಭಾವಸಾರ ಕ್ಷತ್ರಿಯ ಮಹಾಸಭಾ ರಾಜ್ಯ ಪದಾಧಿಕಾರಿಗಳ ಪದಗ್ರಹಣ
November 5, 2018ಮೈಸೂರು: ಐಎಎಸ್, ಐಪಿಎಸ್ ನಂತಹ ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಳ್ಳ ಬಯಸುವ ಭಾವಸಾರ ಕ್ಷತ್ರಿಯ ಸಮುದಾಯದ ಯುವಕರಿಗೆ ಊಟ, ವಸತಿ ಸೌಲಭ್ಯದ ಜೊತೆಗೆ ವ್ಯಾಸಂಗದ ಖರ್ಚುಗಳನ್ನು ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ(ಎಬಿಬಿಕೆ) ಭರಿಸಲಿದೆ ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸಮಾಜ ಭೂಷಣ ಮಹದೇವ ಪತಂಗೆ ಇಂದಿಲ್ಲಿ ತಿಳಿಸಿದರು. ಮೈಸೂರಿನ ಕಬೀರ್ ರಸ್ತೆ ಪಾಂಡುರಂಗ ದೇವ ಸ್ಥಾನದ ಸಭಾಂಗಣದಲ್ಲಿ ಎಬಿಬಿಕೆ ರಾಜ್ಯಾಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಮತ್ತು ಗುರು ವಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪತಂಗೆ ಮಾತನಾಡಿದರು….
ಕಾರಿನ ಗಾಜು ಒಡೆದು 2.9 ಲಕ್ಷ ರೂ. ಹಣ ಕಳವು
November 1, 2018ಮೈಸೂರು: ಕಾರಿನ ಗಾಜು ಒಡೆದು ಉದ್ಯಮಿಯೊಬ್ಬರ 2.9 ಲಕ್ಷ ರೂ. ನಗದು ಕಳವು ಮಾಡಿ ಪರಾರಿಯಾಗಿರುವ ಘಟನೆ ಮೈಸೂರಿನ ವಿವಿ ಮೊಹಲ್ಲಾದ ಹೆಚ್ಡಿಎಫ್ಸಿ ಬ್ಯಾಂಕ್ ಎದುರು ಇಂದು ಮಧ್ಯಾಹ್ನ ಸಂಭವಿಸಿದೆ. ಮೈಸೂರಿನ ಗೋಕುಲಂ 3ನೇ ಹಂತದ ನಿವಾಸಿ ನಾರಾಯಣ ಅವರ ಮಗ ಶೇಖರ್ ಹಣ ಕಳೆದುಕೊಂಡವರು. ಕೆ.ಆರ್. ನಗರದಲ್ಲಿ ಪೆಟ್ರೋಲ್ ಬಂಕ್ ನಡೆಸುತ್ತಿರುವ ಅವರು, ಇಂದು ಮಧ್ಯಾಹ್ನ 1.30 ಗಂಟೆ ವೇಳೆಗೆ ಗೋಕುಲಂನ ವಿಜಯಾ ಬ್ಯಾಂಕ್ ಶಾಖೆಯಲ್ಲಿ 4 ಲಕ್ಷ ರೂ. ಹಣ ಡ್ರಾ ಮಾಡಿ ಮಾರುತಿ…
ಮೈಸೂರಲ್ಲಿ ಉದ್ಯಮಿ ದೋಚಿದ್ದ ನಾಲ್ವರ ಬಂಧನ
October 31, 2018ಮೈಸೂರು: ಮೈಸೂರು ಉದ್ಯಮಿಯಿಂದ 6 ಲಕ್ಷ ರೂ. ವಿದೇಶಿ ಕರೆನ್ಸಿ ಸೇರಿ 25 ಲಕ್ಷ ರೂ. ದೋಚಿ ತಲೆಮರೆಸಿಕೊಂಡಿದ್ದ ನಾಲ್ವರು ದುಷ್ಕರ್ಮಿಗಳನ್ನು 40 ದಿನಗಳ ನಂತರ ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಮೈಸೂರು ವಿಜಯನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು, ಮಿರ್ಲೆ ನಿವಾಸಿ ಸುರೇಶ್ ಮಗ ಶ್ರೀಧರ್ (28), ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ರಮೇಶ್ ಮಗ ಪ್ರಸಾದ್(24), ಅಮೃತ ಹಳ್ಳಿ ನಿವಾಸಿ ಶ್ರೀನಿವಾಸ್ ಮಗ ಭರತ್ ಕುಮಾರ್(20) ಹಾಗೂ ಮೈಸೂರು ತಾಲೂಕು ಕೂರ್ಗಳ್ಳಿ ನಿವಾಸಿ…
ಅಂಗಡಿ-ಮುಂಗಟ್ಟು, ಸಂಘ-ಸಂಸ್ಥೆಗಳ ನಾಮಫಲಕ ಕನ್ನಡ ಕಡ್ಡಾಯ
October 31, 2018ಮೈಸೂರು: ರಾಜ್ಯದ ಎಲ್ಲಾ ಅಂಗಡಿ-ಮುಂಗಟ್ಟು, ಸಂಘ-ಸಂಸ್ಥೆಗಳ ನಾಮಫಲಕಗಳಲ್ಲಿ ಕಡ್ಡಾಯ ವಾಗಿ ಕನ್ನಡ ಭಾಷೆ ಬಳಕೆಗೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಜಿಲ್ಲಾ ನ್ಯಾಯಾಲಯದ ಎದುರಿನ ಗಾಂಧೀ ಪುತ್ಥಳಿ ಬಳಿ ಜಮಾ ಯಿಸಿದ ಪ್ರತಿಭಟನಾಕಾರರು, `ಕನ್ನಡ ನಾಮ ಫಲಕ ಇದ್ದರೆ ಶಾಂತಿ, ಇಲ್ಲದಿದ್ದರೆ ಕ್ರಾಂತಿ’ ಎಂಬಿತ್ಯಾದಿ ಕನ್ನಡ ಪರ ಘೋಷಣೆ ಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಯಾವ ಭಾಗಕ್ಕೆ ಹೋದರೂ…
ಪುರಾಂತಕ ಅವರ ಅಂಕಣಗಳ ಗುಚ್ಛ `ಬದುಕೊಂದು ಯಾತ್ರೆ’ ಪುಸ್ತಕ ಬಿಡುಗಡೆ
October 29, 2018ಎಡಪಂಥ, ಬಲಪಂಥಗಳು ಸಮಾಜಘಾತುಕ ಸಿದ್ಧಾಂತಗಳು ಹಿರಿಯ ಸಾಹಿತಿ ಮಲೆಯೂರು ಗುರುಸ್ವಾಮಿ ಕಿಡಿನುಡಿ ಮೈಸೂರು: ಎಡ- ಬಲ ಪಂಥೀಯ ಲೇಪವಿಲ್ಲದೆ ಬದುಕನ್ನು ಯಾತ್ರೆಯಾಗಿ ನೋಡಿರುವ ತ್ರಿಪುರಾಂತಕ ಅವರ ಅಂಕಣಗಳು ಓದುಗರ ಮನಸ್ಸಿಗೆ ನಾಟುತ್ತವೆ ಎಂದು ಹಿರಿಯ ಸಾಹಿತಿ ಮಲೆ ಯೂರು ಗುರುಸ್ವಾಮಿ ಅವರು ಬಣ್ಣಿಸಿದರು. ಮೈಸೂರಿನ ಸರಸ್ವತಿಪುರಂ ಜೆಎಸ್ಎಸ್ ಶಾಲೆ ಸಭಾಂಗಣದಲ್ಲಿ ಅನನ್ಯ ಪುಸ್ತಕಗಳು ಪ್ರಕಾಶನದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ, `ಮೈಸೂರು ಮಿತ್ರ’ದಲ್ಲಿ ಪ್ರಕಟವಾಗಿರುವ ಜಿ.ಎಲ್.ತ್ರಿಪುರಾಂತಕ ಅವರ ಅಂಕಣಗಳ ಗುಚ್ಛ `ಬದುಕೊಂದು ಯಾತ್ರೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ…
ಉದ್ಯಮಿಗಳ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರಕ್ಕೆ ರೈತರು ಕಾಣಿಸುತ್ತಿಲ್ಲವೇ?
October 29, 2018ಗಾಂಧಿ ವಿಚಾರ ಪರಿಷತ್ನ ‘ಹಳ್ಳಿಗೆ ಹೋಗೋಣ ಬನ್ನಿ’ ಕಾರ್ಯಾಗಾರದಲ್ಲಿ ಹೆಚ್.ಎಸ್.ದೊರೆಸ್ವಾಮಿ ವಾಗ್ದಾಳಿ ಮೈಸೂರು: ದೊಡ್ಡ ಉದ್ಯಮಿಗಳ ಸಾವಿರಾರು ಕೋಟಿ ರೂ. ಮೊತ್ತದ ಸಾಲ ಮನ್ನಾ ಮಾಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ರೈತರ ಸಾಲ ಮನ್ನಾ ದೊಡ್ಡ ವಿಚಾರವೇ? ಎಂದು ಪ್ರಶ್ನಿಸಿದ ಸ್ವಾತಂತ್ರ್ಯ ಹೋರಾಟಗಾರ ಹೆಚ್. ಎಸ್.ದೊರೆಸ್ವಾಮಿ, ಹೀಗೆ ರೈತ ವಿರೋಧಿ ನೀತಿ ಅನುಸರಿಸುವವರನ್ನು ಸುಮ್ಮನೆ ಬಿಡ ಬೇಕೆ? ಎಂದು ವಾಗ್ದಾಳಿ ನಡೆಸಿದರು. ಮೈಸೂರಿನ ಶ್ರೀರಾಂಪುರದಲ್ಲಿರುವ ಗಾಂಧಿ ವಿಚಾರ ಪರಿಷತ್ ಆವರಣದಲ್ಲಿ ಭಾನುವಾರ `ಹಳ್ಳಿಗೆ ಹೋಗೋಣ…
ರಿಯಾಲಿಟಿ ಶೋ ಭರಾಟೆಯಿಂದ ಶಾಸ್ತ್ರೀಯ ಕಲೆಗಳಿಗೆ ಕುಗ್ಗಿದ ಬೇಡಿಕೆ
October 29, 2018ಖ್ಯಾತ ನೃತ್ಯಗಾರ್ತಿ ಡಾ.ವಸುಂಧರ ದೊರೆಸ್ವಾಮಿ ಬೇಸರ ಮೈಸೂರು: ರಿಯಾ ಲಿಟಿ ಶೋ ಗಳಿಂದಾಗಿ ಶಾಸ್ತ್ರೀಯ ಕಲೆ ಗಳಿಗೆ ಬೇಡಿಕೆÉ ಕಡಿಮೆಯಾಗುತ್ತಿದೆ ಎಂದು ಶಾಂತಲಾ ಪ್ರಶಸ್ತಿ ಪುರಸ್ಕøತೆ ಡಾ.ವಸುಂಧರ ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಕುವೆಂಪುನಗರದಲ್ಲಿರುವ ಗಾನಭಾರತಿ ಸಭಾಂಗಣದಲ್ಲಿ ಭಾರತೀಯ ನೃತ್ಯ ಕಲಾ ಪರಿಷತ್ ವತಿಯಿಂದ ನಡೆದ ‘ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆ-2018’ರ ಬಹುಮಾನ ವಿತರಣಾ ಸಮಾ ರಂಭದಲ್ಲಿ ಮಾತನಾಡಿದ ಅವರು, ಬೇರೆ ದೇಶಗಳಲ್ಲಿ ನಮ್ಮ ನಾಡಿನ ಕಲೆ, ಸಂಸ್ಕøತಿ ಯನ್ನು ಬಹಳ ಭಕ್ತಿ ಮತ್ತು ಶ್ರದ್ಧೆಯಿಂದ ಕಲಿಯುತ್ತಿದ್ದಾರೆ….