ಮೈಸೂರು: ಎಕೆಬಿಎಂಎಸ್ ಪದಾಧಿಕಾರಿಯೋರ್ವರು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧ ಹೇಳಿರುವ ಹೇಳಿಕೆಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಹಾ ಸಭಾದ ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ ಸ್ಪಷ್ಟಪಡಿಸಿ ದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದಾಧಿಕಾರಿಯೋರ್ವರ ಹೇಳಿಕೆ ವೈಯಕ್ತಿಕವಾಗಿದ್ದು, ಸಮುದಾಯದ ಹೆಸ ರಿನಲ್ಲಿ ಒಂದು ಪಕ್ಷದ ಪರ ಅಥವಾ ವಿರೋಧವಾಗಿ ಮಾತನಾಡುವುದು ಸರಿ ಯಲ್ಲಾ. ಅದು ಅವರ ಸ್ವಾರ್ಥತೆಯನ್ನು ತೋರಿಸುತ್ತದೆ ಎಂದು ಜರಿದಿದ್ದಾರೆ. ಬ್ರಾಹ್ಮ ಣರು ಪ್ರಬುದ್ಧರಿದ್ದಾರೆ. ವಿವೇಚನೆಯಿಂದ ಯಾರು ಅಭಿವೃದ್ಧಿಯ ಪರ ಹಾಗೂ ದೇಶದ…
ಪಾಂಡವಪುರದ ಹಲವೆಡೆ ಸುಮಲತಾ ಮತ ಯಾಚನೆ
April 11, 2019ಪಾಂಡವಪುರ: ಪಾಂಡವಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಬುಧ ವಾರ ರೈತ ಸಂಘದ ಮುಖಂಡ ದರ್ಶನ್ ಪುಟ್ಟಣ್ಣಯ್ಯನವರೊಂದಿಗೆ ರೋಡ್ ಶೋ ಮೂಲಕ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬಿರುಸಿನ ಪ್ರಚಾರ ನಡೆಸಿದರು. ಎಣ್ಣೆಹೊಳೆಕೊಪ್ಪಲು ಗ್ರಾಮದಿಂದ ಪ್ರಚಾರ ಆರಂಭಿಸಿದ ಸುಮಲತಾ, ಚಲುವರಸನ ಕೊಪ್ಪಲು, ಹರವು, ಶ್ಯಾದನಹಳ್ಳಿ, ಜಾಗಟೆ ಮಲ್ಲೇನಹಳ್ಳಿ, ಹಾಗನಹಳ್ಳಿ, ಅಲ್ಪಳಿ, ಬೇಬಿ, ಶಿಂಡ ಬೋಗನಹಳ್ಳಿ, ಹೊನಗಾನಹಳ್ಳಿ, ಚಿನ ಕುರಳಿ, ಕಾಳೇಗೌಡನಕೊಪ್ಪಲು, ಗುಮ್ಮನ ಹಳ್ಳಿ, ರಾಗಿಮುದ್ದನಹಳ್ಳಿ, ಡಿಂಕ, ಬನ್ನಂಗಾಡಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಈ…
ನನ್ನಷ್ಟು ಕಷ್ಟ ಅನುಭವಿಸಿದ ಮುಖ್ಯಮಂತ್ರಿ ಯಾರಿಲ್ಲ: ಎಸ್.ಎಂ.ಕೃಷ್ಣ
April 11, 2019ಮೈಸೂರು: ನನ್ನಷ್ಟು ಕಷ್ಟವನ್ನು ಯಾವೊಬ್ಬ ಮುಖ್ಯ ಮಂತ್ರಿಯೂ ಅನುಭವಿಸಿಲ್ಲ. ಆದರೂ ದೇವರು ನನ್ನನ್ನು ಪರೀಕ್ಷಿಸಲೆಂದೇ ಕಷ್ಟ-ಕಾರ್ಪಣ್ಯ ಕೊಟ್ಟಿದ್ದಾನೆಂದು ಭಾವಿಸಿ, ಎಲ್ಲವನ್ನು ಸ್ವೀಕರಿಸಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಮ್ಮ ಆಡಳಿತಾವಧಿ ಯಲ್ಲಿನ ಕಹಿ ನೆನಪನ್ನು ಮೆಲುಕು ಹಾಕಿದರು. ಮೈಸೂರು ನಜರ್ಬಾದ್ನ ಗೋಪಾಲ ಗೌಡ ಶಾಂತವೇರಿ ಸ್ಮಾರಕ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ `ನ್ಯೂರೋ eóÉೂೀನ್’ ಘಟಕದ ಉದ್ಘಾ ಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಹಲವು ಸಂಕಷ್ಟಕ್ಕೆ ಗುರಿಯಾಗಿದ್ದೆ. ಬರಗಾಲ, ಕಾವೇರಿ…
ಬಿಜೆಪಿಯಲ್ಲಿ ದೊರೆತ ಎಲ್ಲಾ ಅಧಿಕಾರದಿಂದ ಸಾಕಷ್ಟು ಸ್ವಂತ ಆಸ್ತಿ ಮಾಡಿಕೊಂಡಿದ್ದೇ ವಿಜಯಶಂಕರ್ ಸಾಧನೆ
April 11, 2019ಮೈಸೂರು: ರಾಜಕೀಯದ ಅರಿವಿಲ್ಲದ ವ್ಯಕ್ತಿಯನ್ನು ಆರಿಸಿದ್ದೇ ಕೊಡಗಿನ ಅಭಿವೃದ್ಧಿ ಹಿನ್ನಡೆಗೆ ಕಾರಣ ಎಂಬ ಸಿ.ಹೆಚ್.ವಿಜಯಶಂಕರ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಎರಡು ಬಾರಿ ಸಂಸದರಾಗಿ, ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಕೊನೆಗೆ ಸಚಿವರಾಗಿ ಸ್ವಂತ ಆಸ್ತಿ ಮಾಡಿಕೊಂಡಿದ್ದನ್ನು ಬಿಟ್ಟು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಏನೆಂಬುದನ್ನು ವಿಜಯಶಂಕರ್ ಜನತೆ ಮುಂದೆ ತಿಳಿಸುವಂತೆ ಸವಾಲೆಸೆದಿದ್ದಾರೆ. ಒಮ್ಮೆ ಶಾಸಕ, ಎರಡು ಬಾರಿ ಸಂಸದ, ಸೋತು ಕುಳಿತಿದ್ದಾಗ ವಿಧಾನ ಪರಿಷತ್ಗೆ ಆಯ್ಕೆ ಮಾಡಿ ಸಚಿವ ಸ್ಥಾನ ಕಲ್ಪಿಸಿದ ಬಿಜೆಪಿ ಬಗ್ಗೆ…
ಎಲ್ಲಾ ಪಕ್ಷಗಳ ಸಮಾವೇಶಗಳಿಗೂ ಕೆ.ಎಂ. ಶರೀಫ್ ಪೆಂಡಾಲ್ ಆಶ್ರಯ
April 11, 2019ಮೈಸೂರು: ಚುನಾವಣಾ ಸಮಯವಾಗಿರುವುದರಿಂದ ರಾಜಕೀಯ ಪಕ್ಷಗಳು ಹಾಗೂ ನಾಯಕರು ಮತದಾರರನ್ನು ಸೆಳೆಯಲು ನಾನಾ ಕಸರತ್ತು ಮಾಡುವುದುಂಟು. ಈ ಹಿಂದೆ ಇಂದಿರಾಗಾಂಧಿ, ಮೊರಾರ್ಜಿ ದೇಸಾಯಿ ಅವರು ಫ್ಲೈಟ್ಗಳಲ್ಲಿ ಬಂದು ಬಿಸಿಲನ್ನೂ ಲೆಕ್ಕಿಸದೇ ಕಾದಿರುತ್ತಿದ್ದ ಜನ ಸ್ತೋಮವನ್ನುದ್ದೇಶಿಸಿ ಭಾಷಣ ಮಾಡಲು ಸಮಾವೇಶದ ಎತ್ತರದ ವೇದಿಕೆ ಏರುತ್ತಿದ್ದ ಪ್ರಸಂಗಗಳೀಗ ಇತಿಹಾಸ. ಪರಿಸ್ಥಿತಿ ಬದಲಾಗಿದ್ದು, ಚುನಾವಣಾ ಪ್ರಚಾರದ ಬಹಿರಂಗ ಸಭೆಗಳಲ್ಲಿ ಜನರಿ ಗಾಗಿ ಬೃಹತ್ ಪೆಂಡಾಲ್, ಫ್ಯಾನ್, ಬ್ಯಾರಿ ಕೇಡ್, ಕುಡಿಯುವ ನೀರು, ಆಸನಗಳ ವ್ಯವಸ್ಥೆ ಸೇರಿದಂತೆ ಬರುವವರಿಗೆ ಹಲವು ಅನುಕೂಲಗಳನ್ನು ರಾಜಕೀಯ…
ಮನಸ್ಸಿನ ಕೊಳೆಯನ್ನು ತೊಳೆಯುವ ವಚನ ಸಾಹಿತ್ಯ
April 11, 2019ಮೈಸೂರು: ವಚನ ಸಾಹಿತ್ಯ ಓದುವುದರಿಂದ ನಮ್ಮ ಬುದ್ಧಿ ಮತ್ತೆ ಯಲ್ಲಿನ ಕಶ್ಮಲ ತೊಳೆದು ಮನಸ್ಸು ಶುದ್ಧ ಗೊಳಿಸುತ್ತದೆ. ಹೀಗಾಗಿ ವಚನ ಸಾಹಿತ್ಯ ಓದುವುದನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಮೈಸೂರು ಜಿಪಂ ಸಿಇಓ ಕೆ.ಜ್ಯೋತಿ ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರ ಮನೆಯಂಗಳ ದಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಯೋಜಿಸಿದ್ದ ವಚನಕಾರ ದೇವರ ದಾಸಿಮಯ್ಯ ಜಯಂತಿ ಕಾರ್ಯ ಕ್ರಮದಲ್ಲಿ ದಾಸಿಮಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನಲಾಗುತ್ತದೆ. ಅದನ್ನು ವೇದ ಸುಳ್ಳಾ ದರೂ…
ರಫೆಲ್ ರಹಸ್ಯ ದಾಖಲೆಗಳ ಪರಿಶೀಲನೆಗೆ ಸುಪ್ರೀಂಕೋರ್ಟ್ ಅಸ್ತು
April 11, 2019ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಾಳೆ ನಡೆಯಲಿದ್ದು, ಈ ಹೊತ್ತಿನಲ್ಲಿ ಆಡಳಿತಾರೂಢ ಎನ್ಡಿಎ ಸರ್ಕಾರಕ್ಕೆ ಭಾರೀ ಹಿನ್ನಡೆ ಯಂತೆ ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ. ರಫೆಲ್ ಯುದ್ಧ ವಿಮಾನ ಒಪ್ಪಂದ ಬಗ್ಗೆ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮರು ಪರಿಶೀಲನೆ ಅರ್ಜಿ ಸಲ್ಲಿಕೆ ವೇಳೆ ಒದಗಿಸಲಾದ ಕೆಲವು ದಾಖಲೆಗಳು ಅಕ್ರಮವಾಗಿದ್ದು, ಪರಿಶೀಲನೆ ನಡೆಸಬಾರದೆಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಆಕ್ಷೇಪವನ್ನು ಸುಪ್ರೀಂಕೋರ್ಟ್ ಬುಧವಾರ ತಳ್ಳಿಹಾಕಿದೆ. ಇದರಿಂದ ಎನ್ಡಿಎ ಸರ್ಕಾರಕ್ಕೆ ಚುನಾವಣೆ ಹೊಸ್ತಿಲಿನಲ್ಲಿ ತೀವ್ರ ಮುಖ…
ಬಹುಕೋಟಿ ಮೇವು ಹಗರಣ: ಲಾಲುಪ್ರಸಾದ್ಗೆ ಜಾಮೀನು ನಿರಾಕರಿಸಿದ ಸುಪ್ರಿಂಕೋರ್ಟ್
April 11, 2019ನವದೆಹಲಿ: ಬಹುಕೋಟಿ ಮೇವು ಹಗರಣದ ರೂವಾರಿ ಲಾಲೂ ಪ್ರಸಾದ್ ಯಾದವ್ಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಮುಖ್ಯ ನ್ಯಾಯ ಮೂರ್ತಿ ರಂಜನ್ ಗಗೋಯ್ ಅವರನ್ನೊಳಗೊಂಡ ನ್ಯಾಯಾಪೀಠ ಲಾಲೂ ಗೆ ಜಾಮೀನು ನೀಡಲು ನಿರಾಕರಿಸಿದೆ. ಕಳೆದ 24 ತಿಂಗಳಿಂದ ಜೈಲಿನಲ್ಲೇ ಇದ್ದು, ಹೀಗಾಗಿ ಜಾಮೀನು ನೀಡಬೇಕೆಂದು ಲಾಲೂ ಮನವಿ ಮಾಡಿದ್ದರು, ನಿಮಗೆ ವರ್ಷ ಜೈಲು ಶಿಕ್ಷೆಯಾಗಿದೆ, ಅದರಲ್ಲಿ 24ತಿಂಗಳು ಏನೇನೂ ದೊಡ್ಡದಲ್ಲ ಎಂದು ಕೋರ್ಟ್ ತಿಳಿಸಿದೆ. ಯಾದವ್ ಪರ ವಾದ ಮಂಡಿಸಿದ ವಕೀಲ್ ಕಪಿಲ್ ಸಿಬಲ್ ಪ್ರಕರಣ ಸಂಬಂಧ…
ಮೈಸೂರಲ್ಲಿ ಇಂದು ಮೋದಿ ಹವಾ
April 9, 2019ಮಹಾರಾಜ ಕಾಲೇಜು ಮೈದಾನದಲ್ಲಿ ಸಂಜೆ 5 ಗಂಟೆಗೆ ಮೈಸೂರು, ಚಾ.ನಗರ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಭಾಷಣ ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ (ಏ. 9) ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಭಾರೀ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ. ಚಿತ್ರದುರ್ಗದಿಂದ ವಿಶೇಷ ವಿಮಾನದಲ್ಲಿ ಸಂಜೆ 4.40 ಗಂಟೆಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಮಂತ್ರಿಗಳು ರಸ್ತೆ ಮೂಲಕ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಿ, ಸಂಜೆ 5 ಗಂಟೆಗೆ ಮೈಸೂರು-ಕೊಡಗು ಮತ್ತು ಚಾಮರಾಜನಗರ…
ಮೈಸೂರಲ್ಲಿ ಭರ್ಜರಿ ಮೊದಲ ಮಳೆ
April 9, 2019ಮೈಸೂರು: ಮೈಸೂರಿನಲ್ಲಿ ಸೋಮವಾರ ರಾತ್ರಿ ಗಾಳಿ, ಗಡುಗು ಸಹಿತ ಭಾರೀ ಮಳೆ ಸುರಿಯಿತು. ಒಂದೂವರೆ ತಿಂಗಳಿಂದ ಬೇಸಿಗೆ ಬಿಸಿಲ ಬೇಗುದಿಯಲ್ಲಿ ಬೆಂದಿದ್ದ ಮೈಸೂರು, ಯುಗಾದಿ ನಂತರದ ಮೊದಲ ಮಳೆಯಿಂದ ಕೊಂಚ ತಂಪಾಯಿತು. ಇಂದು ಮಧ್ಯಾಹ್ನ ಮೋಡ ಕವಿದ ವಾತಾವರಣವಿತ್ತು. ರಾತ್ರಿ ಸುಮಾರು 8.30 ಗಂಟೆಗೆ ಗುಡುಗು ಸಹಿತ ಆರಂಭವಾಗಿ ಗಂಟೆಗೂ ಹೆಚ್ಚು ಕಾಲ ಬೋರ್ಗರೆದ ಪರಿಣಾಮ ಹಲವೆಡೆ ಮರಗಳು ಧರೆಗುರುಳಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿರುವುದಲ್ಲದೆ, ವಿದ್ಯುತ್ ವ್ಯತ್ಯಯ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. ರಸ್ತೆ…