ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧ ಹೇಳಿಕೆಗೂ, ಎಕೆಬಿಎಂಎಸ್‍ಗೂ ಸಂಬಂಧವಿಲ್ಲ
ಮೈಸೂರು

ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧ ಹೇಳಿಕೆಗೂ, ಎಕೆಬಿಎಂಎಸ್‍ಗೂ ಸಂಬಂಧವಿಲ್ಲ

April 12, 2019

ಮೈಸೂರು: ಎಕೆಬಿಎಂಎಸ್ ಪದಾಧಿಕಾರಿಯೋರ್ವರು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧ ಹೇಳಿರುವ ಹೇಳಿಕೆಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಹಾ ಸಭಾದ ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ ಸ್ಪಷ್ಟಪಡಿಸಿ ದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದಾಧಿಕಾರಿಯೋರ್ವರ ಹೇಳಿಕೆ ವೈಯಕ್ತಿಕವಾಗಿದ್ದು, ಸಮುದಾಯದ ಹೆಸ ರಿನಲ್ಲಿ ಒಂದು ಪಕ್ಷದ ಪರ ಅಥವಾ ವಿರೋಧವಾಗಿ ಮಾತನಾಡುವುದು ಸರಿ ಯಲ್ಲಾ. ಅದು ಅವರ ಸ್ವಾರ್ಥತೆಯನ್ನು ತೋರಿಸುತ್ತದೆ ಎಂದು ಜರಿದಿದ್ದಾರೆ. ಬ್ರಾಹ್ಮ ಣರು ಪ್ರಬುದ್ಧರಿದ್ದಾರೆ. ವಿವೇಚನೆಯಿಂದ ಯಾರು ಅಭಿವೃದ್ಧಿಯ ಪರ ಹಾಗೂ ದೇಶದ ಏಳಿಗೆಗಾಗಿ ಶ್ರಮಿಸಿದ್ದಾರೋ ಅಂತಹ ಪಕ್ಷ ಅಥವಾ ಅಭ್ಯರ್ಥಿಗೆ ಮತ ಚಲಾಯಿಸು ತ್ತಾರೆ ಎಂದ ಪ್ರಕಾಶ, ಈ ರೀತಿಯ ವೈಯ ಕ್ತಿಕ ರಾಜಕೀಯ ಟೀಕೆ ಮಾಡುವಾಗ ಮಹಾ ಸಭೆಯಲ್ಲಿ ಚರ್ಚಿಸದೇ ಸಮುದಾಯದ ಹೆಸರನ್ನು ಬಳಸಿಕೊಂಡಿರುವುದು ತಪ್ಪು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಟಿ.ಪ್ರಕಾಶ ತಿಳಿಸಿದ್ದಾರೆ.

Translate »