ಮೈಸೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಿಕಲಚೇತನರು ಹಾಗೂ ಅಶಕ್ತ ಹಿರಿಯ ನಾಗರಿಕರು ಸುಗಮವಾಗಿ ಮತದಾನ ಮಾಡಲು ಅವಕಾಶ ಕಲ್ಪಿಸಿರುವುದಕ್ಕಾಗಿ ಮೈಸೂರು ವಿಕಲವಿಕಾಸ ಟ್ರಸ್ಟ್ ಭಾರತ ಚುನಾವಣಾ ಆಯೋಗ ಮತ್ತು ಮೈಸೂರು ಜಿಲ್ಲಾಡಳಿತವನ್ನು ಅಭಿನಂದಿಸಿದೆ. ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಎಸ್.ವೈದ್ಯನಾಥ್ ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಕಲಚೇನತರು ಮತಗಟ್ಟೆ ಗಳಲ್ಲಿ ಸುಗಮ ಚಲನ, ವಲನಕ್ಕಾಗಿ ಕಡ್ಡಾಯ ವ್ಹೀಲ್ಚೇರ್ ಸೌಲಭ್ಯ, ಅಲ್ಪ ದೃಷ್ಟಿ ದೋಷ ವುಳ್ಳ ಮತದಾರರಿಗೆ ಮತದಾನ ಮಾಡಲು ಅನುವಾಗುವಂತೆ ಪ್ರತಿ ಮತಗಟ್ಟೆಯಲ್ಲಿ…
ಏ.15ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
April 13, 2019ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಏ.15ರಂದು ಸೋಮ ವಾರ ಪ್ರಕಟಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ಹೇಳಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ವನ್ನು ಬಹಿರಂಗಪಡಿಸಲಾಗುವುದು, ಮಂಗಳವಾರ ಎಲ್ಲಾ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಕೆಲ ಮಾಧ್ಯಮಗಳು ಏ.17ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ವರದಿ ಮಾಡಿದ್ದವು. ಆದರೆ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದದ್ದು ಎಂದು ಶಿಖಾ ಹೇಳಿದ್ದಾರೆ. ಮೌಲ್ಯಮಾಪನದ ಬಳಿಕ…
ವಿದ್ಯುತ್ ತಂತಿ ಕಡಿದು ಬಿದ್ದು ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ತಾಯಿ, ಮಗಳು ಸಾವು
April 13, 2019ಚಾಮರಾಜನಗರ: ವಿದ್ಯುತ್ ತಂತಿ ತುಂಡಾಗಿ ಬಿದ್ದು ಹೊಳೆಯಲ್ಲಿ ಸ್ನಾನ ಮಾಡು ತ್ತಿದ್ದ ತಾಯಿ ಮತ್ತು ಮಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೆಬ್ಬಸೂರು ಗ್ರಾಮದ ಬಳಿಯ ಸುವರ್ಣಾ ವತಿ ಹೊಳೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಮೂಲತಃ ಹೆಬ್ಬಸೂರು ಗ್ರಾಮದ ನಿವಾಸಿ ಹಾಗೂ ಹಾಲಿ ಚಾಮರಾಜನಗರ ಭ್ರಮರಾಂಬ ಬಡಾವಣೆ ಯಲ್ಲಿ ವಾಸವಿದ್ದ ಕಣ್ಣನ್ ಎಂಬುವವರ ಪತ್ನಿ ಮಂಜುಳಾ (40) ಹಾಗೂ ಮಗಳು ಯಶಶ್ರೀ(9) ಮೃತಪಟ್ಟವರು. ಘಟನೆಯಲ್ಲಿ ಇವರ ಮತ್ತೊಬ್ಬ ಮಗಳು ಶ್ರಾವ್ಯಶ್ರೀ(14) ಗಾಯಗೊಂಡಿದ್ದು, ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹೆಬ್ಬಸೂರು…
ಹಳೆಯ ಭರವಸೆಗಳನ್ನೇ ಎನ್ಡಿಎ ಪೂರೈಸಿಲ್ಲ: ಮೋದಿ ವಿರುದ್ಧ ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಆಕ್ರೋಶ
April 13, 2019ಮೈಸೂರು: ಹಿಂದಿನ ಪ್ರಣಾಳಿಕೆಯಲ್ಲಿನ ಭರವಸೆಗಳನ್ನೇ ಈಡೇರಿ ಸುವಲ್ಲಿ ವಿಫಲವಾದ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಇದೀಗ ಹೊಸ ಪ್ರಣಾಳಿಕೆಯೊಂದಿಗೆ ಮತ ಕೇಳಿದರೆ ಜನರು ನಂಬಲಿದ್ದಾರೆಯೇ? ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್ ಇಂದಿಲ್ಲಿ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದು ಕೊಂಡರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೀಗ ಜನರ ಗಮನ ಬೇರೆಡೆ ಸೆಳೆಯಲು ಭಯೋತ್ಪಾದನೆ ನಿಗ್ರಹ, ದೇಶದ ರಕ್ಷಣೆ ಎಂಬ ಭಾವನಾತ್ಮಕ ವಿಷಯದೊಂದಿಗೆ ಚುನಾವಣೆಗೆ ಬಂದಿದ್ದಾರೆ ಎಂದು ಟೀಕಿಸಿದರು. ಸರ್ಜಿಕಲ್…
ಸಿ.ಎಸ್.ಪುಟ್ಟರಾಜು ಪುತ್ರನ ಮೈಸೂರು ನಿವಾಸದ ಮೇಲೆ ಐಟಿ, ಚು.ಆಯೋಗದ ಅಧಿಕಾರಿಗಳ ದಾಳಿ
April 12, 2019ಮೈಸೂರು: ಮಂಡ್ಯ ಜಿಲ್ಲಾ ಉಸ್ತು ವಾರಿ ಸಚಿವ ಸಿ.ಎಸ್.ಪುಟ್ಟರಾಜು ಪುತ್ರ ಶಿವರಾಜ್ ಅವರ ಮೈಸೂರು ನಿವಾಸದ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೈಸೂರಿನ ಯಾದವಗಿರಿಯ ಐಡಿಯಲ್ ಜಾವಾ ರಸ್ತೆಯಲ್ಲಿರುವ ಸಂಕಲ್ಪ ಸೆಂಟ್ರಲ್ ಪಾರ್ಕ್ ಅಪಾರ್ಟ್ ಮೆಂಟ್ನಲ್ಲಿರುವ ಶಿವರಾಜ್ ಅವರ ಮನೆ ಮೇಲೆ ಗುರುವಾರ ಮಧ್ಯಾಹ್ನ ದಾಳಿ ನಡೆಸಿರುವ ಐಟಿ ಅಧಿಕಾರಿ ಗಳು, ಸುಮಾರು 2 ಗಂಟೆಗಳ ಕಾಲ ತಪಾಸಣೆ ನಡೆಸಿ, ವಾಪಸ್ಸಾಗಿದ್ದಾರೆ. ದಾಳಿ ಸಂದರ್ಭದಲ್ಲಿ ಅಡುಗೆ ಭಟ್ಟರನ್ನು ಹೊರತು ಪಡಿಸಿ ಬೇರ್ಯಾರು ಇರಲಿಲ್ಲ….
ಮತದಾರರ ದಿಕ್ಕು ತಪ್ಪಿಸುವ ಗುರುತಿನ ಚೀಟಿ ವಿತರಣೆ
April 12, 2019ಮೈಸೂರು: ಲೋಕಸಭಾ ಚುನಾವಣೆಗಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಭಾರತ ಚುನಾವಣಾ ಆಯೋಗ ವಿತರಿ ಸುತ್ತಿರುವ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಗಳು ಹಲವು ವ್ಯತ್ಯಾಸಗಳಿಂದ ಕೂಡಿದ್ದು, ಗೊಂದಲಕ್ಕೆ ಕಾರಣವಾಗುವಂತಿದೆ ಎಂದು ಎನ್.ಆರ್.ಕ್ಷೇತ್ರ ಶಾಸಕ ತನ್ವೀರ್ಸೇಠ್ ಇಂದಿಲ್ಲಿ ಚುನಾ ವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದರು. ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯಲ್ಲಿ ರಾಜ್ಯ, ಲೋಕಸಭಾ ಕ್ಷೇತ್ರ, ವಿಧಾನಸಭಾ ಕ್ಷೇತ್ರ, ಮತದಾರರ ಹೆಸರು, ಲಿಂಗ, ಗುರುತಿನ ಚೀಟಿಯ ಸಂಖ್ಯೆ, ತಂದೆಯ ಹೆಸರು, ಭಾಗದ ಸಂಖ್ಯೆ,…
ಸಿ.ಹೆಚ್.ವಿಜಯಶಂಕರ್ ಪರ ಮುಖ್ಯಮಂತ್ರಿ ಚಂದ್ರು ಪ್ರಚಾರ
April 12, 2019ಮೈಸೂರು: ರಾಮ ಮಂದಿರದ ಹೆಸರಿನಲ್ಲಿ ಬಿಜೆಪಿ ದೇಶದ ಜನತೆಗೆ ನಾಮ ಹಾಕಲು ಹೊರಟಿದ್ದು, ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ ವಿಸ್ತರಣೆ ಮಾಡಲು ಹವಣಿಸುತ್ತಿದೆ ಎಂದು ಹಿರಿಯ ನಟ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಖ್ಯಮಂತ್ರಿ ಚಂದ್ರು ವಾಗ್ದಾಳಿ ನಡೆಸಿದರು. ಮೈಸೂರಿನ ಪುರಭವನ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಗುರು ವಾರ ಪುಷ್ಪ ನಮನ ಸಲ್ಲಿಸುವ ಮೂಲಕ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಅಹಿಂದ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ…
ನಿಮ್ಮ ಮತ ನಿಮ್ಮ ಹಕ್ಕು: ಮೈಸೂರಲ್ಲಿ ವಿಶೇಷ ಜಾಗೃತಿ
April 12, 2019ಮೈಸೂರು: `ನಿಮ್ಮ ಮತ-ನಿಮ್ಮ ಹಕ್ಕು’, ಮತ ಚಲಾಯಿಸುವುದನ್ನು ಮರೆಯದಿರಿ ಎಂದು ಜನರಲ್ಲಿ ಮತ ಜಾಗೃತಿಗಾಗಿ ಸ್ವೀಪ್ ಮೈಸೂರು, ಮಹಾ ನಗರಪಾಲಿಕೆ ವತಿಯಿಂದ ಮೈಸೂರಿನಲ್ಲಿ ಗುರುವಾರ ಆಯೋಜಿಸಿದ್ದ ಸೈಕ್ಲೋಥಾನ್ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಅರಮನೆ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಬಳಿ ಖ್ಯಾತ ಕ್ರಿಕೆಟಿಗ ಜಾವ ಗಲ್ ಶ್ರೀನಾಥ್, ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ, ಗಾಯಕ, ಸ್ವೀಪ್ ಸಮಿತಿ ಐಕಾನ್ ಶ್ರೀಹರ್ಷ, ಚಲನಚಿತ್ರ ನಟ ಧನಂಜಯ, ಚುನಾವಣಾ ವೀಕ್ಷಕರಾದ ಸಂದೀಪ್ ಕುಮಾರ್ ಮಿಶ್ರ,…
ಗಿಡ ನೆಡಿ-ತಪ್ಪದೇ ಮತದಾನ ಮಾಡಿ
April 12, 2019ಮೈಸೂರು: ಮೈಸೂ ರಿನ ವಿಪ್ರ ಸಹಾಯವಾಣಿ ಕಾರ್ಯಕರ್ತರು ಕೃಷ್ಣಮೂರ್ತಿಪುರಂ ಹಾಗೂ ಸುತ್ತಮುತ್ತ ಲಿನ ಬಡಾವಣೆಗಳಲ್ಲಿ `ಗಿಡ ನೆಡಿ-ಮತ ದಾನ ಮಾಡಿ’ ಶೀರ್ಷಿಕೆಯಡಿ ಮನೆ ಮನೆಗೆ ತೆರಳಿ ಗಿಡ ಕೊಟ್ಟು ತಪ್ಪದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದರು. ಇಂದು ಬೆಳಿಗ್ಗೆ ಕೃಷ್ಣಮೂರ್ತಿಪುರಂ ರಾಮಮಂದಿರದಿಂದ ಜಾಗೃತಿ ಅಭಿಯಾನ ಆರಂಭಿಸಿದ ವಿಪ್ರ ಸಹಾಯವಾಣಿ ಕಾರ್ಯ ಕರ್ತರು ಮನೆ ಹಾಗೂ ಅಂಗಡಿಗಳಿಗೆ ತೆರಳಿ ಅಲ್ಲಿದ್ದವರಿಗೆ ಗಿಡವೊಂದನ್ನು ನೀಡಿ ಏ.18 ರಂದು ನಡೆಯುವ ಮತದಾನ ಪ್ರಕ್ರಿಯೆ ಯಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಅರ್ಹ ಅಭ್ಯರ್ಥಿಗೆ ಮತದಾನ…
ವಿಜಯಶಂಕರ್ ಪರ ಜೆಡಿಎಸ್, ಕಾಂಗ್ರೆಸ್ ಮುಖಂಡರ ರೋಡ್ ಶೋ
April 12, 2019ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಪರ ಮೈಸೂರಿನ ಜನತಾನಗರ, ಟಿಕೆ ಬಡಾವಣೆ ಹಾಗೂ ಶಾರದಾದೇವಿ ನಗರದಲ್ಲಿ ಗುರುವಾರ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ರೋಡ್ ಶೋ ನಡೆಸಿ ಮತ ಯಾಚಿಸಿ ದರು. ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ಎರಡೂ ಪಕ್ಷಗಳ ಮುಖಂಡರು, ಸಿ.ಹೆಚ್.ವಿಜಯ ಶಂಕರ್ ಬೆಂಬಲಿಸುವಂತೆ ಜನತೆಯಲ್ಲಿ ಮನವಿ ಮಾಡಿ ದರು. ಹಿರಿಯ ನಟ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಖ್ಯಮಂತ್ರಿ ಚಂದ್ರು, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಎಂಸಿ…










