ಹಾಸನ/ಶ್ರೀರಂಗಪಟ್ಟಣ: ಹಾಸನ ಮತ್ತು ಶ್ರೀರಂಗ ಪಟ್ಟಣದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪತ್ನಿಯರೇ ತಮ್ಮ ಪತಿಯರನ್ನು ಹತ್ಯೆ ಮಾಡಿದ್ದು, ಪೊಲೀಸರಿಂದ ಬಂಧನ ಕ್ಕೊಳಗಾಗಿದ್ದಾರೆ. ಗ್ರಾನೈಟ್ ಉದ್ಯಮಿಯಾಗಿದ್ದ ಪತಿ ಎರಡನೇ ಮದುವೆಯಾದಾಗ ಆತನ ಆಸ್ತಿಗಾಗಿ ಮೊದಲ ಪತ್ನಿ ಸುಪಾರಿ ಪತಿಯನ್ನು ಹತ್ಯೆ ಮಾಡಿದ್ದರೆ, ಶ್ರೀರಂಗ ಪಟ್ಟಣ ತಾಲೂಕು ಅರಕೆರೆ ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಯನ್ನು ಪ್ರಿಯಕರ ಮತ್ತಿತರರೊಡನೆ ಸೇರಿ ಪತ್ನಿಯೇ ಕೊಂದಿದ್ದಾಳೆ. ಶ್ರೀರಂಗಪಟ್ಟಣ ವರದಿ: ಯುವಕನೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಗೃಹಿಣಿ, ತನ್ನ ಈ…
`ರಂಗನತಿಟ್ಟು’ ಪಕ್ಷಿಧಾಮದ ಪುನಶ್ಚೇತನ ಕಾಮಗಾರಿ ಆರಂಭ
January 3, 2019ಮೈಸೂರು: ಕೇರಳದ ವೈನಾಡು ಹಾಗೂ ಕಾವೇರಿ ಕಣಿವೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕೆಆರ್ಎಸ್ಗೆ ಒಳಹರಿವು ಹೆಚ್ಚಿ ಆ.16ರಂದು ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್ಸ್ ನೀರು ನದಿಗೆ ಬಿಟ್ಟಿದ್ದ ಹಿನ್ನೆಲೆಯಲ್ಲಿ ಉಂಟಾಗಿದ್ದ ನೆರೆಯಿಂದಾಗಿ ಕೊಚ್ಚಿ ಹೋಗಿದ್ದ ರಂಗನ ತಿಟ್ಟು ಪಕ್ಷಿಧಾಮವನ್ನು ಪುನಶ್ಚೇತನಗೊಳಿ ಸುವುದಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಸಾವಿರಾರು ಮರಳು ಮೂಟೆಗಳನ್ನು ಬಳಸಿ ದ್ವೀಪಗಳಿಗೆ ಹೊಸ ರೂಪ ನೀಡಲಾಗುತ್ತಿದೆ. ಜೀವನದಿ ಕಾವೇರಿಯಲ್ಲಿ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಹರಿದ ಭಾರಿ ಪ್ರಮಾಣದ ನೀರು ರಂಗನ ತಿಟ್ಟು ಪಕ್ಷಿಧಾಮವನ್ನು ಬಹುತೇಕ…
ನಗುವನಹಳ್ಳಿ ದೇಗುಲಕ್ಕೆ ಬೀಗಮುದ್ರೆ: ಭಕ್ತರ ಆಕ್ರೋಶ
December 13, 2018ಶ್ರೀರಂಗಪಟ್ಟಣ: ತಾಲೂಕಿನ ನಗುವನಹಳ್ಳಿ ಗ್ರಾಮದ ಲಕ್ಷ್ಮಿನಾರಾಯಣ ಸ್ವಾಮಿ ದೇವಾಲಯ ಎರಡು ತಿಂಗಳಿಂದ ಬಂದ್ ಆಗಿದ್ದು, ಭಕ್ತರಲ್ಲಿ ನಿರಾಸೆ ಮೂಡಿಸಿದೆ. ಮ್ಯೆಸೂರು ಸಚ್ಚಿದಾನಂದ ಆಶ್ರಮದ ಸುಪರ್ದಿಯಲ್ಲಿರುವ ದೇವಾಲಯವನ್ನು ದಿಢೀರ್ ಮುಚ್ಚಲಾಗಿದೆ. ಇದರಿಂದ ದೇವಾ ಲಯದಲ್ಲಿ ಪೂಜಾ ಕೈಂಕರ್ಯ ಸ್ಥಗಿತ ಗೊಂಡಿದ್ದು, ಭಕ್ತರ ಆಕ್ರೋಶಕ್ಕೆ ಕಾರಣ ವಾಗಿದೆ. ದೇಗುಲ 1972ರಲ್ಲಿ ಮೇಲು ಕೋಟೆ ರಾಮದೇವರ ಮಠದ ನಾರಾಯಣ ಸ್ವಾಮಿ ಎಂಬುವರಿಂದ ಸ್ಥಾಪನೆಯಾಗಿದೆ. ದೇಗುಲ ನಿರ್ಮಾಣಕ್ಕೆ ಸ್ಥಳೀಯರಾದ ಬಸವರಾಜು ಮತ್ತು ಜಯಲಕ್ಷ್ಮಿ ದಂಪತಿ ಅಗತ್ಯ ಸಂಪನ್ಮೂಲ ಒದಗಿಸಿದ್ದು, 8 ಎಕರೆ ಜಮೀನನ್ನು…
ಅಂಬಿ ಅಭಿಮಾನಿಯ 70,000 ರೂ. ಪಿಕ್ಪಾಕೆಟ್
November 29, 2018ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಹರಿಯುವ ಕಾವೇರಿ ನದಿಯ ಪಶ್ಚಿಮ ವಾಹಿನಿಯಲ್ಲಿ ದಿವಂಗತ ನಟ ಅಂಬರೀಶ್ ಅವರ ಅಸ್ಥಿ ವಿಸ ರ್ಜನೆ ನೋಡಲು ಬಂದಿದ್ದ ಅಭಿಮಾನಿಯಿಂದ 70 ಸಾವಿರ ರೂ. ಹಣವನ್ನು ಖದೀಮರು ಬುಧವಾರ ಅಪಹರಿಸಿದ್ದಾರೆ. ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯಿಂದ ಮಹೇಂದ್ರ ಎಂಬುವವರು ಪಶ್ಚಿಮ ವಾಹಿನಿಗೆ ಬಂದಿದ್ದರು. ಮೊದಲೇ ಚಿಲ್ಲರೆ ವ್ಯಾಪಾರಿಯಾಗಿದ್ದ ಅವರ ಜೇಬಿನಲ್ಲಿ ಸುಮಾರು 70 ಸಾವಿರ ರೂ. ಹಣವಿತ್ತು. ಇದರ ಸುಳಿವು ಅರಿತ ಚಾಲಾಕಿ ಕಳ್ಳರು ಅಷ್ಟೂ ಹಣವನ್ನು ಮಹೇಂದ್ರ ಅವರ ಜೇಬಿನಿಂದ ಎಗರಿಸಿದ್ದಾರೆ. ಹಣ ಕಳೆದುಕೊಂಡ…
ಶ್ರೀರಂಗಪಟ್ಟಣ ಬಳಿ ಅಪಘಾತ; ಸುಂಟಿಕೊಪ್ಪ ವ್ಯಕ್ತಿಗೆ ಗಾಯ
November 16, 2018ಸುಂಟಿಕೊಪ್ಪ: ಶ್ರೀರಂಗಪಟ್ಟಣ ಸಮೀಪ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿಯಾಗಿ ಸುಂಟಿಕೊಪ್ಪದ ವ್ಯಕ್ತಿ ಯೋರ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಡವಾಗಿ ವರದಿಯಾಗಿದೆ. ಅದೃಷ್ಟ ವಶಾತ್ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾ ಯದಿಂದ ಪಾರಾಗಿದ್ದಾರೆ. ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ನಿವಾಸಿ, ಗ್ರಾಮ ಪಂಚಾ ಯಿತಿಯ ಸ್ವಚ್ಚತಾಗಾರರಾಗಿರುವ ಎನ್. ರಾಮ ಚಂದ್ರ ಅವರು ಪತ್ನಿ ಯಶೋದ ಅವರೊಂದಿಗೆ ಶ್ರೀರಂಗ ಪಟ್ಟಣದ ನಗುವನಳ್ಳಿಯಲ್ಲಿರುವ ನಾದಿನಿಯ ಮನೆಗೆ ಹೋಗಿದ್ದು, ನ. 13 ರಂದು ಸಂಜೆ 4…
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಕೋರ್ಟ್ ಅನುಮತಿ: ಹಿಂದೂಪರ ಸಂಘಟನೆಗಳ ಪ್ರತಿಭಟನೆ: ಮನವಿ
October 29, 2018ಹಿಂದೂಪರ ಸಂಘಟನೆಗಳ ಪ್ರತಿಭಟನೆ: ಮನವಿ ಶ್ರೀರಂಗಪಟ್ಟಣ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಖಂಡಿಸಿ ಪಟ್ಟಣದಲ್ಲಿ ಮೂಡಲ ಬಾಗಿಲು ಹನುಮ ಮಾಲೇ ಸಮಿತಿ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಪಟ್ಟಣದ ಅಯ್ಯಪ್ಪಸ್ವಾಮಿ ದೇವ ಸ್ಥಾನದ ಮುಂಭಾಗ ಸಮಾವೇಶಗೊಂಡ ಸಮಿತಿಯ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಅಲ್ಲಿಂದ ಪಾದಯಾತ್ರೆ ನಡೆಸಿದರು. ಬಳಿಕ, ತಹಶೀ ಲ್ದಾರ್ ಕಚೇರಿಗೆ ತೆರಳಿ ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷೇಧಿಸಬೇಕು. ಹಿಂದಿನ ಪದ್ಧತಿಯನ್ನು ಮುಂದುವರಿಸಬೇಕು…
ಅನುಮಾನಾಸ್ಪದವಾಗಿ ಯುವತಿ ಸಾವು
October 27, 2018ಶ್ರೀರಂಗಪಟ್ಟಣ: ಸಂಬಂ ಧಿಕರ ಮನೆಗೆ ಬಂದಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ದೊಡ್ಡಪಾಳ್ಯ ಗ್ರಾಮದಲ್ಲಿ ನಡೆದಿದೆ. ಮಂಡ್ಯ ತಾಲೂಕಿನ ಹನಿಯಂಬಾಡಿ ಗ್ರಾಮದ ಸೌಮ್ಯ(23) ಮೃತಪಟ್ಟ ಯುವತಿ. ಸೌಮ್ಯ ಮೈಸೂರಿನ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ದೊಡ್ಡಪಾಳ್ಯ ಗ್ರಾಮದ ತನ್ನ ದೊಡ್ಡಮ್ಮನ ಮನೆಗೆ ಬಂದಿದ್ದಳು. ಆದರೆ, ಗುರುವಾರ ರಾತ್ರಿ ಅಧಿಕ ರಕ್ತ ದೊತ್ತಡದಿಂದ ಬಳಲಿ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಸಂಬಂಧಿಕರು ತಿಳಿಸಿ ದ್ದಾರೆ. ಆದರೆ, ಆಕೆ ಗರ್ಭವತಿಯಾ ಗಿದ್ದು, ಇನ್ನೂ ವಿವಾಹವಾಗಿರಲಿಲ್ಲ. ಹಾಗಾಗಿ, ಸೌಮ್ಯಳ ಸಾವು…
ಶ್ರೀರಂಗಪಟ್ಟಣ ಪಾರಂಪರಿಕ ದಸರಾಕ್ಕೆ ಚಾಲನೆ
October 17, 2018ಶ್ರೀರಂಗಪಟ್ಟಣ: ಐತಿಹಾಸಿಕ ಪ್ರವಾಸಿ ತಾಣ ಶ್ರೀರಂಗಪಟ್ಟಣದಲ್ಲಿ ಇಂದಿನಿಂದ 3 ದಿನಗಳ ಕಾಲ ನಡೆಯುವ ಪಾರಂಪರಿಕ ದಸರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು. ತಾಲೂಕಿನ ಕಿರಂಗೂರು ಸಮೀಪದ ಬನ್ನಿಮಂಟಪದ ಬಳಿ ನಿರ್ಮಿಸಿದ್ದ ವೇದಿಕೆ ಏರಿ, ಚಾಮುಂಡೇಶ್ವರಿ ವಿಗ್ರಹ ಹೊತ್ತ ಆನೆ ಅಭಿಮನ್ಯುವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಉತ್ಸವಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದರು. ಬಳಿಕ ಶ್ರೀರಂಗಪಟ್ಟಣ ಪ್ರಮುಖ ಬೀದಿಯಲ್ಲಿ ಸಾಗಿದ ಮೆರವಣಿಗೆಯಲ್ಲಿ ಅಭಿಮನ್ಯುಗೆ, ವರಲಕ್ಷ್ಮೀ ಹಾಗೂ ಕಾವೇರಿ ಕುಮ್ಕಿ ಆನೆಗಳಾಗಿ ಸಾಥ್ ನೀಡಿದವು. ದಸರಾ ಉತ್ಸವಕ್ಕೆ ಚಾಲನೆ…
‘ಉತ್ತರ ಕಾಂಡ’ ಕಾದಂಬರಿ ವಿಚಾರ ಸಂಕಿರಣ
September 6, 2018ಶ್ರೀರಂಗಪಟ್ಟಣ: ಪಟ್ಟಣದ ಶಾರದಾ ವಿಲಾಸ ಕಾಲೇಜಿನಲ್ಲಿ ಸೆ. 30ರಂದು ಬೆಳಿಗ್ಗೆ 10ಗಂಟೆಗೆ ಕಾಲೇಜಿನ ಶತಮಾನೋತ್ಸವದ ಅಂಗವಾಗಿ ಪ್ರಿಯದರ್ಶನ ಸಾಂಸ್ಕøತಿಕ ವೇದಿಕೆಯಿಂದ ಕಾದಂಬರಿಕಾರ ಡಾ.ಎಸ್ಎಲ್.ಭೈರಪ್ಪ ಅವರ ‘ಉತ್ತರ ಕಾಂಡ’ ಕಾದಂಬರಿಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಖ್ಯಾತ ಅಂಕಣಕಾರ್ತಿ ಶ್ರೀಮತಿ ಸಹನಾ ವಿಜಯಕುಮಾರ್, ಖ್ಯಾತ ಚಿಂತಕ ಡಾ.ಗಿರೀಶ್ ಭಟ್, ಅಜಕ್ಕಳ, ವಿಮರ್ಶಕ ವಿದ್ವಾನ್ ಗ.ನಾ.ಭಟ್ಟ, ಕಾದಂಬರಿಕಾರ್ತಿ ಶ್ರೀಮತಿ ಆಶಾ ರಘು ಅವರು ಪ್ರಬಂಧ ಮಂಡಿಸಲಿದ್ದಾರೆ. ಕುವೆಂಪು ಭಾಷಾ ಭಾರತೀ ಮಾಜಿ ಚೇರ್ಮನ್ ಡಾ.ಪ್ರಧಾನ ಗುರುದತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಭೈರಪ್ಪ ಅವರು…
ಗೂಡ್ಸ್ ವಾಹನ ಅಡ್ಡಗಟ್ಟಿ 1.25ಲಕ್ಷ ದರೋಡೆ
September 6, 2018ಶ್ರೀರಂಗಪಟ್ಟಣ: ಬೇಕರಿಗಳಿಗೆ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದ ಗೂಡ್ಸ್ ವಾಹನವನ್ನು ಕಾರಿನಲ್ಲಿ ಅಡ್ಡಗಟ್ಟಿದ್ದ ಅಪರಿಚಿತ ಯುವಕರ ಗುಂಪು ಮಾರಕಾಸ್ತ್ರ ತೋರಿಸಿ 1.25 ಲಕ್ಷ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ತಾಲೂಕಿನ ಮರಳಗಾಲ ಗ್ರಾಮದ ಸಮೀಪ ಘಟನೆ ನಡೆದಿದ್ದು, ಬೇಕರಿಗಳಿಗೆ ಸಾಮಗ್ರಿ ಪೂರೈಸುತ್ತಿದ್ದ ಮೈಸೂರಿನ ವಿನೋದ್ ರಾಜ್ ಮತ್ತು ರವಿಕುಮಾರ್ ಎಂಬುವರಿಂದ ಅಪರಿಚಿತ ಯುವಕರ ಗುಂಪು ಹಣ ದೋಚಿದ್ದಾರೆ. ನಾಲ್ವರು ಖದೀಮರ ತಂಡ ಗೂಡ್ಸ್ ವಾಹನವನ್ನು ನಂಬರ್ ಪ್ಲೇಟ್ ಇಲ್ಲದ ಶ್ವಿಫ್ಟ್ ಕಾರಿನಲ್ಲಿ ಆಗಮಿಸಿ ಅಡ್ಡಗಟ್ಟಿದ್ದಾರೆ. ಬಳಿಕ ವಾಹನದ ಒಳಗಿದ್ದ ವಿನೋದ್…