ಫೆ.21ರಿಂದಲೇ ರಾಮಮಂದಿರ ನಿರ್ಮಾಣ ಕಾರ್ಯ ಆರಂಭ ಧರ್ಮ ಸಂಸದ ಘೋಷಣೆ
ಮೈಸೂರು

ಫೆ.21ರಿಂದಲೇ ರಾಮಮಂದಿರ ನಿರ್ಮಾಣ ಕಾರ್ಯ ಆರಂಭ ಧರ್ಮ ಸಂಸದ ಘೋಷಣೆ

January 31, 2019

ನವದೆಹಲಿ/ವಾರಣಾಸಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಬರುವ ಫೆ.21ರಂದು ಆರಂಭ ಮಾಡಲಾಗುವುದು ಎಂದು ಧರ್ಮ ಸಂಸದ ಘೋಷಣೆ ಮಾಡಿದೆ. ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾವು ಸುಪ್ರೀಂಕೋರ್ಟ್ ಹಾಗೂ ಪ್ರಧಾನಿ ಮೋದಿ ಅವರಿಗೆ ಗೌರವ ನೀಡುತ್ತೇವೆ. ಆದರೆ, ಇದೀಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಕಾಲ ಸನ್ನಿಹಿತವಾಗಿದೆ ಎಂದು ತಿಳಿಸಿದ್ದಾರೆ. ಫೆ. 21ರಂದು ಮಂದಿರದ ಅಡಿಪಾಯಕ್ಕಾಗಿ ನಾಲ್ಕು ಕಲ್ಲು ತೆಗೆದುಕೊಂಡು ಹೋಗು ತ್ತೇವೆ ಎಂದಿರುವ ಧರ್ಮ ಸಂಸದ, ಈಗಾ ಗಲೇ ರಾಮಮಂದಿರ ಕಾರ್ಯ ಶುರು ವಾಗಬೇಕಾಗಿತ್ತು. ಆದರೆ ಅದು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ. ಇತ್ತ ಲೋಕ ಸಭೆ ಚುನಾವಣೆ ಮುಂದಿರುವ ಕಾರಣ ಕೇಂದ್ರ ಸರ್ಕಾರ ಕೂಡಾ ಕಳೆದೆರಡು ದಿನ ಗಳ ಹಿಂದೆ 67 ಎಕರೆ ಭೂಮಿಯನ್ನು ಮೂಲ ಮಾಲೀಕರಿಗೆ ಹಸ್ತಾಂತರಿಸುವಂತೆ ಸುಪ್ರೀಂಕೋರ್ಟ್‍ಗೆ ಮೊರೆ ಹೋಗಿದೆ.

Translate »