ಹಳ್ಳಕ್ಕೆ ಬೈಕ್ ಉರುಳಿ ಸವಾರ ಸಾವು
ಚಾಮರಾಜನಗರ

ಹಳ್ಳಕ್ಕೆ ಬೈಕ್ ಉರುಳಿ ಸವಾರ ಸಾವು

February 7, 2019

ಗುಂಡ್ಲುಪೇಟೆ: ನಿಯಂತ್ರಣ ತಪ್ಪಿದ ಬೈಕ್ ಹಳ್ಳಕ್ಕೆ ಉರುಳಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿ, ಹಿಂಬದಿ ಸವಾರ ಗಾಯ ಗೊಂಡ ಘಟನೆ ಇಂದು ಗುಂಡ್ಲುಪೇಟೆ-ಬೇಗೂರು ರಸ್ತೆಯ ಹಿರಿಕಾಟಿ ಗೇಟ್ ಬಳಿ ಸಂಭವಿಸಿದೆ.

ಚಾಮರಾಜನಗರದ ದಿನಸಿ ವ್ಯಾಪಾರಿ ಶ್ರೀನಿವಾಸ್ (54) ಅಪ ಘಾತದಲ್ಲಿ ಮೃತಪಟ್ಟಿದ್ದು, ಹಿಂಬದಿ ಸವಾರ ಆರೀಫ್ ಗಾಯ ಗೊಂಡಿದ್ದಾರೆ. ಶ್ರೀನಿವಾಸ್ ಅವರು ತಮ್ಮ ಸ್ನೇಹಿತ ಆರೀಫ್ ಅವ ರೊಂದಿಗೆ ಬೇಗೂರು ಕಡೆಯಿಂದ ಗುಂಡ್ಲುಪೇಟೆ ಕಡೆಗೆ ಬರುತ್ತಿದ್ದಾಗ ಅವರ ನಿಯಂತ್ರಣ ತಪ್ಪಿ ಬೈಕ್ ರಸ್ತೆ ಬದಿ ಹಳ್ಳಕ್ಕೆ ಉರುಳಿದೆ ಎಂದು ಹೇಳಲಾಗಿದೆ.

ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಬ್ ಇನ್ಸ್‍ಪೆಕ್ಟರ್ ಲೋಹಿತ್‍ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Translate »