ಸ್ವಾಭಿಮಾನವಿದ್ದರೇ ರಾಜ್ಯ ಬಿಟ್ಟು ಯಾಕೆ ಹೋಗಬೇಕಿತ್ತು..?
ಮೈಸೂರು

ಸ್ವಾಭಿಮಾನವಿದ್ದರೇ ರಾಜ್ಯ ಬಿಟ್ಟು ಯಾಕೆ ಹೋಗಬೇಕಿತ್ತು..?

July 23, 2019

ಬೆಂಗಳೂರು: ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ 15 ಮಂದಿ ಅತೃಪ್ತ ಶಾಸಕರು ನಾವು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ. ಸ್ವಾಭಿಮಾನದಿಂದ ರಾಜೀ ನಾಮೆ ಕೊಟ್ಟಿದ್ದೇವೆ ಎಂದಿದ್ದಾರೆ. ಆಗಾದರೇ ಸ್ವಾಭಿಮಾನ ವಿದ್ದಿದ್ದರೇ ಅವರು ರಾಜ್ಯ ಬಿಟ್ಟು ಯಾಕೆ ಹೋಗಬೇಕಿತ್ತು ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಪ್ರಶ್ನಿಸಿದರು.

ವಿಧಾನಸಭೆ ಕಲಾಪದಲ್ಲಿ ವಿಶ್ವಾಸಮತ ಯಾಚನೆ ಪ್ರಸ್ತಾಪದ ಮೇಲಿನ ಚರ್ಚೆ ವೇಳೆ ಮಾತನಾಡಿದ ಶಾಸಕ ಎ.ಟಿ.ರಾಮಸ್ವಾಮಿ, ಈಗ ಎಲ್ಲಾ ಕಡೆ ಪ್ರಜಾಪ್ರಭುತ್ವ ಮೌಲ್ಯಗಳು ಇಲ್ಲ. ವಿರೋಧ ನೈತಿಕ ಮೌಲ್ಯ ಸಿದ್ಧಾಂತದ ಮೇಲೆ ನಿರ್ಣಯ ಆಗಲ್ಲ. ವಿಧಾನಸೌಧದ ನ್ಯಾಯ, ಧರ್ಮ, ಸಿದ್ಧಾಂತ ಕುಸಿಯುತ್ತಿವೆ. ಪ್ರಜಾಪ್ರಭುತ್ವದ ಮೌಲ್ಯ ಗಳು ಉಳಿದಿಲ್ಲ ಇಂದು ಮೂರು ಪಕ್ಷಗಳು ರೆಸಾರ್ಟ್‍ಗೆ ನಿಂತು ಬಿಟ್ಟಿವೆ ಸರ್ಕಾರದ ಅಳಿವು, ಉಳಿವು ಸಂಖ್ಯಾಬಲದ ಮೇಲಿದೆ ಎಂದರು. ಹಾಗೆಯೇ ರಾಜ್ಯದಲ್ಲಿ ಭೀಕರ ಬರ ಗಾಲವಿದೆ. 156 ತಾಲೂಕು ಗಳಲ್ಲಿ ಭೀಕರ ಬರವಿದೆ. ಅಂತ ರ್ಜಲ ಕುಸಿದಿದೆ. ನೀರಿಗೆ ಹಾಹಾಕಾರ ವಿದೆ. ಇಂತಹ ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆ ಯಾಗ ಬೇಕು. ಆದರೆ ನಮ್ಮ ಅಧಿಕಾರ ದಾಹಕ್ಕೆ ಪ್ರಯತ್ನ ನಡೆದಿದೆ. ಸರ್ಕಾರದ ಅಂಕುಡೊಂಕು ತಿದ್ದಬೇಕು. ಪ್ರತಿಪಕ್ಷ ಆ ಕೆಲಸ ಮಾಡುತ್ತಿಲ್ಲವೆಂಬ ನೋವಿದೆ ಎಂದು ಶಾಸಕ ರಾಮಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ 15 ಮಂದಿ ಅತೃಪ್ತ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಎ.ಟಿ. ರಾಮಸ್ವಾಮಿ, ನಮ್ಮ 15 ಶಾಸಕರು ರಾಜೀನಾಮೆ ಕೊಟ್ಟು ಮುಂಬೈಗೆ ಹೋಗಿ ದ್ದಾರೆ. ನಾವು ಮುಂದೆ ಸ್ಪರ್ಧಿಸುವುದಿಲ್ಲ ಅಂತಾರೆ. ನಾವು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ. ಸ್ವಾಭಿಮಾನ ದಿಂದ ರಾಜೀನಾಮೆ ಕೊಟ್ಟಿದ್ದೇವೆ ಎಂದಿದ್ದಾರೆ. ಸ್ವಾಭಿ ಮಾನವಿದ್ದರೆ ಯಾಕೆ ರಾಜ್ಯ ಬಿಟ್ಟು ಹೋಗಬೇಕು. ರಾಜ್ಯದ ಮಾನ ಮರ್ಯಾದೆಯನ್ನ ರಾಷ್ಟ್ರಪಟ್ಟದಲ್ಲಿ ಹರಾಜು ಹಾಕಿದ್ದಾರೆ. ನಿಮಗೆ ಇಲ್ಲಿ ರಕ್ಷಣೆ ಕೊಡುತ್ತಿರಲಿಲ್ಲವೇ. ಸೇವೆ ಮಾಡುವ ಉದ್ದೇಶವಿದ್ದರೇ ಅಲ್ಲಿಗೆ ಏಕೆ ಹೋಗ ಬೇಕಿತ್ತು. ಇಲ್ಲಿ ಅಷ್ಟು ಅರಾಜಕತೆ
ಸೃಷ್ಠಿಯಾಗುತ್ತದೆಯಾ..? ಎಂದು ಪ್ರಶ್ನಿಸಿದರು.

ಕಾಪಾಡುವ ದೇವರೇ ವಿಷ ಕೊಟ್ಟರೆ ಕಾಪಾಡುವವರು ಯಾರು?: ಇದೇ ವೇಳೆ ರಾಜ್ಯಪಾಲರ ನಡೆ ಪ್ರಶ್ನಿಸಿದ ಶಾಸಕ ಎ.ಟಿ ರಾಮಸ್ವಾಮಿ, ರಾಜ್ಯಪಾಲರು ಎರಡು ಬಾರಿ ನೋಟೀಸ್ ನೀಡಿದ್ದಾರೆ. ನೋಟೀಸ್ ಕೊಟ್ಟಿದ್ದು ಒತ್ತಡದ ತಂತ್ರವೇ? ನಾವು ರಾಜಕಾರಣಿಗಳು, ತಂತ್ರಗಾರಿಕೆ ಮಾಡಬಹುದು. ಆದರೆ ಕಾರ್ಯಾಂಗದ ಮುಖ್ಯಸ್ಥರು ತಂತ್ರಗಾರಿಕೆ ಮಾಡಬಹುದೇ. ಕಾಪಾಡುವ ದೇವರೇ ವಿಷ ಕೊಟ್ಟರೆ ಕಾಪಾಡುವವರು ಯಾರು? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷಾಂತರ ನಿಷೇಧ ಕಾಯ್ದೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವೂ ನಡೆದಿದೆ. ಹೀಗಾಗಿ ಒಂದು ಐತಿಹಾಸಿಕ ನಿರ್ಣಯ ನೀವು ಮಾಡಬೇಕು ಎಂದು ಸ್ಪೀಕರ್‍ಗೆ ಶಾಸಕ ಎ.ಟಿ.ರಾಮಸ್ವಾಮಿ ಮನವಿ ಮಾಡಿದರು.

Translate »