ವಿರಾಜಪೇಟೆ: ಚರಿತ್ರೆಯ ಮರು ಸೃಷ್ಟೀಕರಣದಿಂದ ಜಾತಿ ಧರ್ಮಗಳ ಬಗ್ಗೆ ವಿರೋಧಗಳು ಹುಟ್ಟಿಕೊಂಡು ಕೋಮು ಭಾವನೆಗಳಿಗೆ ಅವಕಾಶವಾಗುತ್ತದೆ. ಸಮಾಜ ದಲ್ಲಿ ಇಂದು ಚರಿತ್ರೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾ ಪಕ ಡಾ.ಪಿ.ಎಲ್. ಧರ್ಮ ಹೇಳಿದರು.
ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಹಳೆ ವಿದ್ಯಾರ್ಥಿ ಸಂಘ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಕಾಲೇ ಜಿನ ಸಭಾಂಗಣದಲ್ಲಿ ಆಯೋಜಿಸಲಾ ಗಿದ್ದ ರಾಜ್ಯಶಾಸ್ತ್ರದ ಬೆಳಕು ಭಿತ್ತಿಪತ್ರಿಕೆಯ 6ನೇ ವರ್ಷದ ವಾರ್ಷಿಕೋತ್ಸವ ಮತ್ತು ಮಂಗಳೂರು ‘ವಿಶ್ವವಿದ್ಯಾಲಯ ಮಟ್ಟದ ರಾಜ್ಯಶಾಸ್ತ್ರದ ಸಮಕಾಲಿಷ್ಟನ ಸಮಸ್ಯೆಗಳು ಹಾಗೂ ಸವಾಲುಗಳು’ ಕುರಿತ ಒಂದು ದಿನದ ವಿಚಾರ ಗೋಷ್ಟಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಚರಿತ್ರೆ ಯನ್ನು ತಮಗೆ ಬೇಕಾದಂತೆ ಬಳಸುವುದು ಹಾಗೂ ಮರು ಸೃಷ್ಟಿಮಾಡುವ ಯತ್ನಕ್ಕೆ ಹೋದಾಗ ಗಂಭೀರ ಸಮಸ್ಯೆಗಳು ಎದುರಾಗು ತ್ತದೆ. ಸಮಾಜದಲ್ಲಿ ಸಮಸ್ಯೆಗಳಿಗೆ ಕಾರಣ ವಾಗಿದೆ. ಇಂದಿನ ದಿನದಲ್ಲಿ ರಾಜ್ಯ ಶಾಸ್ತ್ರ ಕ್ಕಿಂತ ಕಾಮರ್ಸ್ ಪ್ರಮುಖವಾಗಿರುವುದು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಯಲ್ಲಿ ಉದ್ಯೋಗ ಒದಗಿಸುತ್ತದೆ ಆದರು ರಾಜ್ಯ ಶಾಸ್ತ್ರ ಎಲ್ಲರ ಮನದಲ್ಲಿ ಹೊಸ ಚಿಂತನೆಗ ಳನ್ನು ಮತ್ತು ಮೆದುಳಿಗೆ ಜ್ಞಾನ ಶಕ್ತಿಯನ್ನು ಮೂಡಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಶ್ರಮ ವನ್ನು ಎಂದಿಗೂ ವ್ಯರ್ಥ ಮಾಡಬಾರದು ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಕೆ. ಬೋಪಯ್ಯ ಮಾತ ನಾಡಿದರು. ವೇದಿಕೆಯಲ್ಲಿ ಪ್ರೊ.ಆರ್. ದಿವ್ಯ, ಸಹಾಯಕ ಪ್ರಾಧ್ಯಾಪಕರಾದ ಎಂ.ಬಿ. ದಿವ್ಯ, ವಿಚಾರ ಗೋಷ್ಟಿ ಅಯೋಜಕ ರಾಜ್ಯ ಶಾಸ್ತ್ರ ಉಪನ್ಯಾಸಕ ವನಿತ್ ಕುಮಾರ್, ರಾಜ್ಯ ಶಾಸ್ತ್ರ ವಿಭಾಗದ ಉಪಸಂಯೋ ಜಕ ವೇಣುಗೋಪಾಲ್ ಮತ್ತು ಜಗದೀಶ್ ಮುಂತಾದವರು ಉಪಸ್ಥಿತರಿದ್ದರು.