ನಾಳೆ ಪೌರ ಕಾರ್ಮಿಕರಿಂದ ಗಣಪತಿ ಸಚ್ಚಿದಾನಂದ ಶ್ರೀಗಳ ಜನ್ಮ ದಿನಾಚರಣೆ
ಮೈಸೂರು

ನಾಳೆ ಪೌರ ಕಾರ್ಮಿಕರಿಂದ ಗಣಪತಿ ಸಚ್ಚಿದಾನಂದ ಶ್ರೀಗಳ ಜನ್ಮ ದಿನಾಚರಣೆ

June 1, 2019

ಮೈಸೂರು: ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ದಲ್ಲಿ ಜೂ.2ರಂದು ಬೆಳಿಗ್ಗೆ 10ಕ್ಕೆ ಪೌರಕಾರ್ಮಿಕ ಸಂಘ ಟನೆ ಗಳಿಂದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 77ನೇ ಜನ್ಮ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಮಾಜಿ ಮೇಯರ್ ನಾರಾಯಣ್ ತಿಳಿಸಿದ್ದಾರೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಇದುವರೆಗೂ ಪೌರಕಾರ್ಮಿಕರ ಕಾಲೋನಿಗಳಲ್ಲಿ 25ರಿಂದ 40 ಲಕ್ಷ ವೆಚ್ಚದಲ್ಲಿ 15 ದೇವಾಲಯಗಳನ್ನು ಕಟ್ಟಿಸಿದ್ದಾರೆ. ಅಲ್ಲದೇ ಪೌರಕಾರ್ಮಿಕ ಜನಾಂಗದ 580 ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಿಸಿದ್ದಾರೆ. ಜನಾಂಗದ ಕಾಲೋನಿಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವ ಮೂಲಕ ಅಪಾರ ಕಾಳಜಿ ಹಾಗೂ ಪ್ರೇಮವನ್ನು ಪೌರಕಾರ್ಮಿಕರ ಮೇಲೆ ಇಟ್ಟಿರುವ ಹಿನ್ನೆಲೆಯಲ್ಲಿ ಸ್ವಾಮೀಜಿ ಯವರ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ ಎಂದರು. ಜೂ.2ರಂದು ಬೆಳಿಗ್ಗೆ 9ಕ್ಕೆ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಆಯೋಜಿಸಿರುವ ಕಾರ್ಯ ಕ್ರಮದಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಅಂಗವಿಕಲ ರಿಗೆ ಟ್ರೈ ಸೂಟ್ಕರ್‍ಗಳನ್ನು ವಿತರಿಸಲಾಗುತ್ತದೆ. ಬಳಿಕ ಸ್ವಾಮೀಜಿ ಅವರನ್ನು ಗೌರವಿಸ ಲಾಗುವುದು. ಕಾರ್ಯಕ್ರಮದಲ್ಲಿ 10ನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿರುವ ಚಂದ್ರ ಶೇಖರ್, ಕಿಕ್ ಬಾಕ್ಸಿಂಗ್‍ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸುತ್ತಿರುವ ರಂಜನ್ ಅವರಿಗೆ ಅಗತ್ಯ ವಸ್ತುಗಳನ್ನು, 21 ಅಂಗವಿಕಲರಿಗೆ ವೀಲ್ಹ್‍ಚೇರ್, ಟ್ರೈ ಸ್ಕೂಟರ್ ಗಳನ್ನು ವಿತರಿಸಲಾಗುವುದು. ಅಲ್ಲದೇ ಕಾಲೋನಿಗಳ ರಾಮಮಂದಿರಗಳಲ್ಲಿ ಭಜನೆ ಮಾಡಲು ಪರಿಕರ ಹಾಗೂ ಅಗತ್ಯ ವಸ್ತುಗಳನ್ನು ನೀಡಲಾಗುವುದು ಎಂದರು. ಗೋಷ್ಠಿಯಲ್ಲಿ ಸಲಹಾ ಸಮಿತಿ ಅಧ್ಯಕ್ಷ ಆರ್.ನಾಗರಾಜು, ಉನ್ನತ ಸಮಿತಿ ಅಧ್ಯಕ್ಷ ಎನ್.ಮಾರ, ಆರ್ಮುಗಂ, ಶ್ರೀನಿವಾಸ್, ಆರ್.ಶಿವಣ್ಣ, ಶ್ರೀನಿವಾಸ್, ಆರ್.ಶಿವಣ್ಣ, ಆರ್.ಆರ್. ರಮೇಶ್, ಎಸ್.ಎಂ.ಪಳನಿಸ್ವಾಮಿ, ಎನ್.ಅರುಣ್ ಕುಮಾರ್, ಎಂ.ರಾಜೀವ್ ಇದ್ದರು.

Translate »