ಮೈಸೂರು:ಮೈಸೂರಿನ ಬಂಡಿಪಾಳ್ಯದಲ್ಲಿರುವ ದೇವರಾಜ ಅರಸ್ ಟ್ರಕ್ ಟರ್ಮಿನಲ್ಗೆ ಶನಿವಾರ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಲಾರಿ ಚಾಲಕರಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಸೂಚನೆ ನೀಡಿದರು.
ಲಾರಿಗಳ ನಿಲುಗಡೆಗಾಗಿ 2011ರಲ್ಲಿ ಬಂಡಿಪಾಳ್ಯದ ಬಳಿ 8 ಎಕರೆ ವಿಸ್ತೀರ್ಣದಲ್ಲಿ 12 ಕೋಟಿ ರೂ. ವೆಚ್ಚ ದಲ್ಲಿ ನಿರ್ಮಿಸಿರುವ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ನಲ್ಲಿ ನಿಲುಗಡೆ ಮಾಡುವ ಲಾರಿಗಳ ಚಾಲ ಕರು ಹಾಗೂ ಕ್ಲೀನರ್ಗಳಿಗೆ ಮೂಲ ಸೌಲಭ್ಯ ಕಲ್ಪಿಸು ವಂತೆ ಒತ್ತಾಯಿಸುವುದರೊಂದಿಗೆ, ಟರ್ಮಿನಲ್ನಲ್ಲಿ ರುವ ಅವ್ಯವಸ್ಥೆಗಳ ವಿರುದ್ಧ ಮೈಸೂರು ಲಾರಿ ಮಾಲೀ ಕರ ಸಂಘ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಮೈಸೂ ರಿಗೆ ಆಗಮಿಸಿದ್ದ ಸಾರಿಗೆ ಸಚಿವರು ಟ್ರಕ್ ಟರ್ಮಿ ನಲ್ಗೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಲಾರಿ ಮಾಲೀ ಕರ ಸಂಘಗಳ ಪದಾಧಿಕಾರಿಗಳೊಂದಿಗೆ ಚರ್ಚಿಸಿ ದರು. ಇದೇ ವೇಳೆ ಲಾರಿ ಚಾಲಕರು ಟರ್ಮಿನಲ್ನಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
ಸಮಸ್ಯೆ ಆಲಿಸಿದ ಬಳಿಕ ಮಾತನಾಡಿ ಸಚಿವ ಡಿ.ಸಿ.ತಮ್ಮಣ್ಣ, ಟರ್ಮಿನಲ್ನಲ್ಲಿರುವ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ತ್ವರಿತಗತಿಯಲ್ಲಿ ಬಗೆಹರಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಟರ್ಮಿನಲ್ ಅಭಿವೃದ್ಧಿಗೆ ಜೂ.13ರಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ಆಯೋಜಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಮೈಸೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಕೋದಂಡರಾಮು ಮಾತನಾಡಿ, 300 ಲಾರಿ ನಿಲ್ಲಿಸ ಬಹುದಾದ ಈ ಟ್ರಕ್ ಟರ್ಮಿನಲ್ನಲ್ಲಿ ದಿನಕ್ಕೆ 100 ಲಾರಿಗಳಷ್ಟೇ ನಿಲ್ಲುತ್ತಿವೆ. ಟ್ರಾಕ್ನಲ್ಲಿ ಹಾಗೂ ಟರ್ಮಿನಲ್ ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತಿವೆ. ಇದರಿಂದ ಹಾವು, ಚೇಳು ಸೇರಿದಂತೆ ಕ್ರಿಮಿಕೀಟಗಳು ಸೇರಿ ಕೊಂಡಿವೆ. ರಾತ್ರಿ ವೇಳೆ ಲಾರಿಯಿಂದ ಚಾಲಕರು ಕೆಳ ಗಿಳಿಯುವುದಕ್ಕೆ ಭಯ ಪಡುವಂತಾಗಿದೆ. ಟರ್ಮಿನಲ್ ಕಟ್ಟಡ ಕಳಪೆ ಗುಣಮಟ್ಟದಿಂದ ಕೂಡಿರುವುದರಿಂದ ಮಳೆ ನೀರಿನಿಂದ ಛಾವಣಿ ಸೋರುತ್ತಿದೆ, ಕುಡಿಯುವ ನೀರು, ವಿಶ್ರಾಂತ ಗೃಹ, ವೈದ್ಯಕೀಯ ತಪಾಸಣೆ ವ್ಯವಸ್ಥೆ ಕಲ್ಪಿಸಬೇಕು. ಒಂದು ಲಾರಿ ನಿಲುಗಡೆಗೆ 80 ರೂ. ಪಾವ ತಿಸುತ್ತಿದ್ದರೂ ಯಾವುದೇ ಸೌಲಭ್ಯ ನೀಡದಿರುವುದು ಖಂಡನೀಯ ಎಂದು ಅಸಮಾದಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೈಸೂರು ಲಾರಿ ಮಾಲೀಕರ ಸಂಘ ಕಾರ್ಯದರ್ಶಿ ಪ್ರಕಾಶ ಪೆರೆರಾ, ಟ್ರಕ್ಕರ್ಸ್ ಅಸೋಸಿ ಯೇಷನ್ ಕಾರ್ಯದರ್ಶಿ ವೆಂಕಟೇಶ್, ಬಂಡೀ ಪಾಳ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶೇಖರ್, ಪ್ರಕಾಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.