ಆಟೋರಿಕ್ಷಾ-ಬೈಕ್ ಮುಖಾಮುಖಿ ಡಿಕ್ಕಿ: ಓರ್ವ ಸಾವು
ಮೈಸೂರು

ಆಟೋರಿಕ್ಷಾ-ಬೈಕ್ ಮುಖಾಮುಖಿ ಡಿಕ್ಕಿ: ಓರ್ವ ಸಾವು

December 1, 2018

ಕುಶಾಲನಗರ: ಸಂಬಂಧಿಕರ ಅಂತ್ಯಸಂಸ್ಕಾರಕ್ಕೆಂದು ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಗುರುವಾರ ರಾತ್ರಿ ಆನೆಕಾಡು ಬಳಿ ನಡೆದಿದೆ.

ಮಡಿಕೇರಿ ನಗರಸಭೆಯ ಟ್ರ್ಯಾಕ್ಟರ್ ಚಾಲಕ ಮೂಲತಃ ಕೇರಳಾಪುರ ಸಮೀಪದ ಹೊನ್ನೇನಳ್ಳಿಯ ನಿವಾಸಿಯಾಗಿದ್ದ ಚಂದ್ರು (50) ಸಾವ ನ್ನಪ್ಪಿರುವ ವ್ಯಕ್ತಿ. ಬೈಕ್ ಮತ್ತು ಆಟೋರಿಕ್ಷಾ ನಡುವೆ ನಡೆದ ಅಪ ಘಾತದಲ್ಲಿ ಕುಶಾಲನಗರ ಬಳಿಯ ಓಲ್ಡ್ ಹೌಸಿಂಗ್ ಬೋರ್ಡ್ ಸಮೀಪದ ನಿವಾಸಿ ಅಸ್ಕರ್ (27), ಆತನ ಪತ್ನಿ ಮುನ್ಸೀರಾ (24), ಆಸಿಕ್(22) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮೂವರು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸುಂಟಿಕೊಪ್ಪ ಕಡೆಯಿಂದ ಕುಶಾಲನಗರದತ್ತ ಬರುತ್ತಿದ್ದಾಗ ಆಸ್ಪತ್ರೆಯಲ್ಲಿ ರೋಗಿಯೊಬ್ಬರ ಆರೋಗ್ಯ ವಿಚಾರಿಸಿಕೊಂಡು ಹಿಂತಿರುಗುತ್ತಿದ್ದ ಆಟೋರಿಕ್ಷಾಕ್ಕೆ ಮುಖಾಮುಖಿಯಾಗಿ ಬೈಕ್ ಡಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ಆಟೋದಲ್ಲಿದ್ದ ಮಹಿಳೆಯೊ ಬ್ಬರ ಕಾಲು ಮುರಿದುಕೊಂಡು ಹಾಗೂ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರಾಗಿದ್ದ ಸಂಬಂಧಿಯೋರ್ವರ ಅಂತ್ಯ ಸಂಸ್ಕಾರಕ್ಕೆಂದು ಬೈಕ್‍ನಲ್ಲಿ ಕುಶಾಲನಗರಕ್ಕೆ ಬಂದು ಶವ ಸಂಸ್ಕಾರ ಮುಗಿಸಿಕೊಂಡು ಮಡಿಕೇರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಆಟೋ ರಿಕ್ಷಾದಲ್ಲಿದ್ದ ಅಸ್ಕರ್ ಅವರ ಒಂದು ವರ್ಷದ ಮಗು ಹಾಗೂ 4 ವರ್ಷದ ಇನ್ನೊಂದು ಮಗು ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಗ್ರಾಮಾಂತರ ಪೆÇಲೀಸ್ ಠಾಣಾಧಿಕಾರಿ ನವೀನ್ ಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »