ದೇವರ ಹುಂಡಿ ಕಳವಿಗೆ ಯತ್ನ; ಆರೋಪಿ ಬಂಧನ
ಕೊಡಗು

ದೇವರ ಹುಂಡಿ ಕಳವಿಗೆ ಯತ್ನ; ಆರೋಪಿ ಬಂಧನ

December 1, 2018

ಸುಂಟಿಕೊಪ್ಪ: ದೇವರ ಹುಂಡಿಗೆ ಕನ್ನ ಹಾಕಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೋರ್ವ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ. ನ.29 ರಂದು ರಾತ್ರಿ 10 ಗಂಟೆಗೆ ಸುಂಟಿಕೊಪ್ಪ ಪಟ್ಟಣದಲ್ಲಿ ಪುನೀತ್ ಕುಮಾರ್ ಹಾಗೂ ಪ್ರಮೋದ್ ಅವರು ಗಸ್ತು ತಿರುಗುತ್ತಿದ್ದ ವೇಳೆ ಮಾದಾಪುರ ರಸ್ತೆಯ ವೃಕ್ಷೋದ್ಬವ ದೇವಾಲಯದ ಬಳಿ ವ್ಯಕ್ತಿಯೋರ್ವ ದೇವಾಲಯದ ಗೇಟಿನ ಬಳಿ ಸುಳಿದಾಡುತ್ತಿರುವುದು ಗೋಚರಿಸಿತು. ನಂತರ ಆತ ದೇವಾಲಯದ ಹುಂಡಿಯನ್ನು ಕತ್ತಿಯಿಂದ ಹೊಡೆಯುತ್ತಿರುವುದನ್ನು ಗಮನಿಸಿ ಪೊಲೀಸರಿಬ್ಬರು ಆತನನ್ನು ಹಿಡಿದು ಠಾಣೆಗೆ ಕರೆತಂದಿದ್ದಾರೆ. ಮಧುರಮ್ಮ ಬಡಾವಣೆ ನಿವಾಸಿ ಪ್ರಕಾಶ್ ಎಂಬಾತ ಈ ಕೃತ್ಯ ಎಸಗಿದ್ದು, ಈತನ ವಿರುದ್ಧಮೊಕದ್ದಮೆ ದಾಖಲಿಸಿದರು. ಆರೋಪಿ ವಿರುದ್ಧ ಕೇಸು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Translate »