ಹೊಳೆನರಸೀಪುರ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದು ಹೊಳೆನರಸೀಪುರದಲ್ಲಿ ಸಾರ್ವಜನಿಕರಿಂದ 190ಕ್ಕೂ ಅಧಿಕ ಕುಂದು-ಕೊರತೆಗಳ ಅರ್ಜಿ ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಿದರು. ಶಿಕ್ಷಕರ ಭವನದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಭೂಮಿಗೆ ಸಂಬಂಧಿಸಿದಂತೆ, ಹೆಚ್ಚು ಮನವಿಗಳನ್ನು ಸ್ವೀಕರಿಸಿದ ಅವರು ಹಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದರು. ಎಲ್ಲಾ ತಾಲೂಕುಗಳಂತೆ ಹೊಳೆನರಸೀಪುರದಲ್ಲಿ ಭೂಮಿಗೆ ಸಂಬಂಧಿ ಸಿದ ಮನವಿಗಳೇ ಹೆಚ್ಚಾಗಿ ಬಂದವು ಪೋಡಿ, ಸರ್ವೆ, ಹದ್ದುಬಸ್ತು, ಜಮೀನು ಮಂಜೂರಾತಿ, ಅಕ್ರಮ ಸಕ್ರಮ, ಕೆರೆ ಜಾಗ, ದಾಖಲಾತಿ ಸರಿಪಡಿಸುವುದು ಹೀಗೆ ಹತ್ತಾರು ಮನವಿಗಳು ಬಂದವು. ಹೇಮಾವತಿ ಯೋಜನಾ…
ಹೇಮಾವತಿಗೆ ಹೆಚ್ಚಿದ ಒಳಹರಿವು: ನದಿ ದಂಡೆಯ ಜನತೆಗೆ ಎಚ್ಚರಿಕೆ
July 12, 2018ಹಾಸನ: ಹೇಮಾವತಿ ಜಲಾ ಶಯದ ಜಲಾನಯ ಪ್ರದೇಶದಲ್ಲಿ ಸತತ ವಾಗಿ ಮಳೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುತ್ತಿದರಿಂದ. ಯಾವುದೇ ಘಳಿಗೆಯಲ್ಲಾದರೂ ನದಿಗೆ ನೀರನ್ನು ಬಿಡುವ ಸಾಧ್ಯತೆಗಳಿದೆ. ಹಾಗಾಗಿ ನದಿ ದಂಡೆಯ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಲು ಕೋರಲಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 29922 ಅಡಿಯಿದ್ದು, ಇಂದು ಬೆಳಗ್ಗೆ 6ಗಂಟೆಗೆ 20,535 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯ 2912 ಅಡಿ ದಾಟಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಲಾ ಶಯಕ್ಕೆ ನೀರು ಹರಿದು ಬರುವ…
ಅರಸೀಕೆರೆ ನಗರಸಭೆಯ ಜಾಣ ಕುರುಡು
July 12, 2018ಅರಸೀಕೆರೆ: ಅರ್ಧಶತಕಕ್ಕೂ ಹೆಚ್ಚು ಐತಿಹ್ಯ ಹೊಂದಿರುವ ಅರಸೀಕೆರೆ ಶುಕ್ರವಾರ ಸಂತೆ ಮೈದಾನದಲ್ಲಿ ಮೂಲ ಸೌಲಭ್ಯವಿಲ್ಲದೆ ರೈತರು, ವ್ಯಾಪಾರಿಗಳು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದ್ದು, ನಗರಸಭೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ನಗರದ ಶುಕ್ರವಾರ ಸಂತೇಮೈದಾನ ದಲ್ಲಿ ನಗರಸಭೆ ನಿರ್ಲಕ್ಷದಿಂದ ರೈತರು, ವ್ಯಾಪಾರಿಗಳು ತೊಂದರೆ ಅನುಭವಿ ಸುತ್ತಿದ್ದಾರೆ. ತಮ್ಮ ಉತ್ಪನ್ನಕ್ಕೆ ಬೆಲೆ ಇಲ್ಲದೆ ನಷ್ಟವಾಗುವುದು ಒಂದೆಡೆಯಾದರೆ, ಮೈದಾನದಲ್ಲಿ ಸೂಕ್ತ ಛಾವಣಿ , ಮೂಲ ಸೌಕರ್ಯವಿಲ್ಲದೆ ಮತ್ತೊಂದು ರೀತಿ ಸಂಕಷ್ಟ ಎದುರಿಸುವಂತಾಗಿದೆ. ತಾಲೂಕಿಗೆ ವಾಣಿಜ್ಯ ಕೇಂದ್ರ: ಈ ಸಂತೇ ಮೈದಾನವು ತಾಲೂಕಿನ ಕಸಬಾ,…
ಅಂಗನವಾಡಿ ನೌಕರರಿಂದ ಡಿಸಿ ಕಚೇರಿ ಚಲೋ
July 11, 2018ಹಾಸನ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವ ದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘ ಸಾವಿರಾರು ಕಾರ್ಯಕರ್ತರು ಡಿಸಿ ಕಚೇರಿ ಚಲೋ ನಡೆಸಿದರು. ನಗರದ ಹೇಮಾವತಿ ಪ್ರತಿಮೆ ಬಳಿ ಹಿರಿಯ ಸಂಘಟಕಿ ಸೌಭಾಗ್ಯ ಬೃಹತ್ ಬ್ಯಾನರ್ನಲ್ಲಿ ಸಹಿ ಮಾಡುವುದರ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಭಾರೀ ಮೆರವಣಿಗೆ ಹೊರಟ ಪ್ರತಿಭಟ ನಾಕಾರರು, ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರಲ್ಲದೆ, ಆವರಣದಲ್ಲಿ ಜಮಾವಣೆಗೊಂಡು ಬೇಡಿಕೆ ಈಡೇರಿಕೆಗೆ ಘೋಷಣೆ ಕೂಗಿದರು. ಐಸಿಡಿಎಸ್ ಯೋಜನೆಯಡಿಯಲ್ಲಿ ಕೆಲಸ…
ಸಂವಿಧಾನ ಆಶಯದಂತೆ ಕಾರ್ಯ ನಿರ್ವಹಿಸಿ: ನ್ಯಾ. ಡಿ.ಹೆಚ್. ವಾಘೇಲ
July 11, 2018ಹಾಸನ: ಮಾನವ ಹಕ್ಕುಗಳನ್ನು ರಕ್ಷಿಸಲು ಸಂವಿಧಾನದ ಮೂಲ ಭೂತ ಆಶಯದಂತೆ ಅಧಿಕಾರಿಗಳ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಿ.ಹೆಚ್.ವಾಘೇಲಾ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಬಾಕಿ ಇರುವ ಪ್ರಕರಣಗಳ ವಿಮರ್ಶೆ ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು, ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಗರಿಷ್ಠ ನೆರವನ್ನು ಒದಗಿಸುವ ಮನೋಭಾವ ಹೊಂದಿರಬೇಕು ಎಂದರು. ಜನಸಾಮಾನ್ಯರು ಜೀವನದ ಸಮಸ್ಯೆ ಕುಂದು-ಕೊರತೆಗಳನ್ನು ಎದುರಿಸುತ್ತಿರು ತ್ತಾರೆ. ಅವನ್ನು ಬಗೆಹರಿಸಲು…
ವಿದ್ಯುತ್ ತಂತಿ ತುಳಿದು ಇಬ್ಬರು ಸಾವು
July 11, 2018ಆಲೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ರಾಯರಕೊಪ್ಪಲು ಬಳಿ ನಡೆಸಿದೆ. ನಟರಾಜ್(35), ಕುಮಾರ್ (48) ಎಂಬುವರು ಮೃತಪಟ್ಟವರು. ಜಮೀನಲ್ಲಿ ಕೆಲಸ ಮಾಡುವಾಗ ತುಂಡಾಗಿ ಬಿದ್ದಿದ್ದ ತಂತಿ ತುಳಿದಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಲೂರು ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರಿಹಾರಕ್ಕೆ ಆಗ್ರಹಿಸಿ ರೈತರ ಹೋರಾಟ ಸಮಿತಿ ಪ್ರತಿಭಟನೆ
July 10, 2018ಹಾಸನ: ನಾಲೆಗಳ ನಿರ್ಮಾಣ ಹಂತದಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರಕ್ಕೆ ಆಗ್ರಹಿಸಿ ಹೇಮಾವತಿ ಮತ್ತು ಯಗಚಿ ನಾಲೆಗಾಗಿ ಜಮೀನು ಕಳೆದುಕೊಂಡ ರೈತರ ಹೋರಾಟ ಸಮಿತಿ ಕಾರ್ಯಕರ್ತರು ನಗರದಲ್ಲಿ ಭಾರೀ ಪ್ರತಿಭಟನೆ ನಡೆಸಿದರು. ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಎನ್.ಆರ್. ವೃತ್ತದ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾ ಯಿಸಿದರು. ಘೋಷಣೆ ಕೂಗುವ ಮೂಲಕ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಹಾಸನ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ನಾಲೆ ನಿರ್ಮಾಣ ಹಂತದಲ್ಲಿ ಜಮೀನು ಕಳೆದುಕೊಂಡ…
ಸಂಪೂರ್ಣ ಸಾಲಮನ್ನಾ, ಹಾಲಿನ ದರ ಏರಿಕೆಗೆ ರೈತರ ಆಗ್ರಹ
July 10, 2018ಹಾಸನ: ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ಹಾಲಿನ ದರ ಹೆಚ್ಚಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟಿಸಲಾಯಿತು. ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿ ಬೇಡಿಕೆ ಈಡೇರಿಸು ವಂತೆ ಘೋಷಣೆ ಕೂಗಿದರು. ನಾಲ್ಕೈದು ವರ್ಷದಿಂದ ಜಿಲ್ಲೆಯು ಬರಗಾಲಕ್ಕೆ ತುತ್ತಾಗಿ ರೈತರು ಸಂಕಷ್ಟಕ್ಕೀಡಾಗಿದ್ದರು. ಈ ಬಾರಿ ಪೂರ್ವ ಮುಂಗಾರಿನಿಂದ ಹರ್ಷಗೊಂಡ ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದರು. ಆದರೆ ಮುಂಗಾರು ಆರಂಭವಾಗಿ ನಿಂದಲೂ…
ಚನ್ನರಾಯಪಟ್ಟಣ ಜನತೆಯಿಂದ ಡಿಸಿ ದೂರು ಸ್ವೀಕಾರ
July 10, 2018ಚನ್ನರಾಯಪಟ್ಟಣ: ಜಿಲ್ಲಾಧಿ ಕಾರಿ ರೋಹಿಣಿ ಸಿಂಧೂರಿ ಅವರಿಂದು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ಅರ್ಜಿ ಸ್ವೀಕರಿಸಿ, ಕೂಡಲೇ ಬಗೆಹರಿಸು ವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸುಮಾರು ನಾಲ್ಕುಗಂಟೆಗಳ ಕಾಲ ಅತ್ಯಂತ ತಾಳ್ಮೆಯಿಂದ ಎಲ್ಲರ ಕುಂದುಕೊರತೆ ಗಳನ್ನು ಆಲಿಸಿದ ಜಿಲ್ಲಾಧಿಕಾರಿಯವರು ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆ ಹರಿಸಿದರು. ಸುಮಾರು 310ಕ್ಕೂ ಅಧಿಕ ಅರ್ಜಿಗಳು ಸ್ವೀಕಾರವಾದವು. ನೂರಾರು ವೈಯಕ್ತಿಕ ಹಾಗೂ ಹತ್ತಾರು ಸಾರ್ವ ಜನಿಕ ಸಮಸ್ಯೆಗಳನ್ನು ಬಗೆ ಹರಿಸುವಂತೆ ಕೋರಿ ಪಟ್ಟಣದ ಜನತೆ ಅರ್ಜಿ ಸಲ್ಲಿಸಿದರು. ಜಮೀನು ಮಂಜೂರಾತಿ…
ನೀರಿಗಾಗಿ ಕೈಕಟ್ಟಿ ನಿಲ್ಲುವ ದುಸ್ಥಿತಿ ನಿರ್ಮಾಣ: ಕೇಂದ್ರದ ವಿರುದ್ಧ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅಸಮಾಧಾನ
July 9, 2018ಬೇಲೂರು: ರಾಜ್ಯದ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ, ರೈತರು ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿ ನಾಲ್ಕು ಜಲಾಶಯ ಇದ್ದರೂ ನೀರಿಗಾಗಿ ಕೇಂದ್ರ ಸರ್ಕಾರದ ಅನುಮತಿಗಾಗಿ ಕೈಕಟ್ಟಿ ನಿಲ್ಲಬೇಕಾದ ದುಸ್ಥಿತಿ ನಿರ್ಮಾಣವಾಗಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನ ಹಗರೆ ಗ್ರಾಮದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಕಾಮ ಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.ರೈತರ 34 ಸಾವಿರ ಕೋಟಿ ರೂ. ಸಾಲವನ್ನು ಒಂದೇ ಬಾರಿ ಮನ್ನಾ…