ಗುಂಡ್ಲುಪೇಟೆ: ಕೃಷಿ ಇಲಾಖೆಯಲ್ಲಿ ದೊರಕುವ ಮಾಹಿತಿ ಹಾಗೂ ಸವಲತ್ತುಗಳನ್ನು ಸದ್ಬಳಕೆ ಮಾಡಿ ಕೊಂಡು ರೈತರು ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಕೃಷಿ ಇಲಾಖೆಯ ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕಿನ 4 ಹೋಬಳಿಗಳಲ್ಲಿಯೂ ನಾಲ್ಕು ದಿನಗಳ ಕಾಲ ಸಂಚರಿಸುವ ಈ ಕೃಷಿ ಅಭಿಯಾನ ರಥವು ಆಧುನಿಕ ಹಾಗೂ ಸುಧಾರಿತ ಕೃಷಿ ಧಾನ್ಯಗಳನ್ನು ಮತ್ತು ಇಲಾಖೆಯಿಂದ ದೊರಕುವ ಸವಲತ್ತುಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಿದೆ. ರಾಸಾಯನಿಕ…
ಪ್ರಕೃತಿ ವಿಕೋಪ ಸಂತ್ರಸ್ತರ ನಿಧಿಗಾಗಿ ನಾಟಕ ಪ್ರದರ್ಶನ
October 26, 2018ಮಡಿಕೇರಿ: ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಮತ್ತು ಮೈಸೂರಿನ ನಟನ ಸಂಸ್ಥೆ ಯಿಂದ ನಗರದಲ್ಲಿ ಆಯೋಜಿಸಲ್ಪಟ್ಟ ಹೆಸರಾಂತ ಕಲಾವಿದ ಮಂಡ್ಯ ರಮೇಶ್ ನಿರ್ದೇಶನದ ಚೋರ ಚರಣದಾಸ ನಾಟಕ ಕಲಾಪ್ರೇಮಿಗಳ ಮನತಟ್ಟು ವಲ್ಲಿ ಸಫಲವಾಯಿತು. ಚೋರಚರಣದಾಸ ನಾಟಕಕ್ಕೆ ಭಾರತೀಯ ವಿದ್ಯಾಭವನದ ಸಭಾಂಗಣ ಸಂಪೂರ್ಣ ಭರ್ತಿಯಾಗಿದ್ದು ಕಲಾಪ್ರೇಮಿಗಳ ಸ್ಪಂದನೆಗೆ ಸಾಕ್ಷಿಯಾಗಿತ್ತು. ನಾಟಕ ಪ್ರದರ್ಶನಕ್ಕೆ ಮುನ್ನ ಮಾತನಾಡಿದ ರಂಗನಿರ್ದೇಶಕ ಮಂಡ್ಯ ರಮೇಶ್, ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಸ್ವಸ್ಥ ಮನಃಸ್ಥಿತಿ ಯನ್ನು ರೂಪಿಸಲು ರಂಗಭೂಮಿಯ ಮೂಲಕ ಆತ್ಮಾವಲೋಕನಕ್ಕೆ ಹೊರಟು ನಟನ ಎಂಬ…
ಸಮಾನ ವೇತನ, ಉದ್ಯೋಗ ಭದ್ರತೆಗೆ ಆಗ್ರಹಿಸಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಪ್ರತಿಭಟನೆ
October 26, 2018ಮಡಿಕೇರಿ: ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ನೌಕ ರರಿಗೆ ಸಮಾನ ವೇತನ ಮತ್ತು ಸೇವಾ ಭದ್ರತೆಯನ್ನು ಒದಗಿಸಬೇಕೆಂದು ಒತ್ತಾಯಿಸಿ ಮೂರು ತಾಲೂಕು ಗಳ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ನಗರದ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಛೇರಿ ಯಿಂದ ಮೆರವಣಿಗೆ ಮೂಲಕ ಸಾಗಿದ ನೌಕರರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಜಮಾಯಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಸಂಘದ ಅಧ್ಯಕ್ಷ ಎಂ.ಮಹದೇವಪ್ಪ ಮಾತ ನಾಡಿ, ಜೀತ ವ್ಯವಸ್ಥೆಯ ಮತ್ತೊಂದು ರೂಪ…
ಕೊಡಗು ಮತ್ತೆ ತನ್ನ ವೈಭವ ಪಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ ಕಲಾವಿದ ಮಂಡ್ಯ ರಮೇಶ್
October 26, 2018ಮಡಿಕೇರಿ: ಪ್ರಕೃತ್ತಿ ವಿಕೋಪದಿಂದ ನಲುಗಿರುವ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ವೈಭವವು ಕೆಲವೇ ತಿಂಗಳಲ್ಲಿ ಮರುಕಳುಹಿಸಲಿದ್ದು, ಈ ನಿಟ್ಟಿನಲ್ಲಿ ಆತಂಕ ಬೇಕಾಗಿಲ್ಲ. ಬದುಕನ್ನು ಛಲದಿಂದ ಎದುರಿಸುವ ಸ್ಥೆರ್ಯ ಎಲ್ಲರಲ್ಲಿಯೂ ಮೂಡಲಿ ಎಂದು ಹೆಸರಾಂತ ಕಲಾವಿದ ಮಂಡ್ಯ ರಮೇಶ್ ಮನವಿ ಮಾಡಿದರು. ಭಾರತೀಯ ವಿದ್ಯಾಭವನದ ವತಿಯಿಂದ ಪ್ರಕೃತ್ತಿ ವಿಕೋಪ ಸಂತ್ರಸ್ಥರ ನಿಧಿಗಾಗಿ ಆಯೋಜಿತ ನಾಟಕ ಪ್ರದರ್ಶನದ ಸಂದರ್ಭ ಮಾತನಾಡಿದ ಮಂಡ್ಯ ರಮೇಶ್, ಕೊಡಗು ಜಿಲ್ಲೆ ನಿಸರ್ಗ ಸೌಂದ ರ್ಯದೊಂದಿಗೆ ಕಾಫಿ, ಕಿತ್ತಳೆ, ಜೇನಿನಂಥ ಅಪೂರ್ವತೆಗೆ ಉದಾಹರಣೆಯಾಗಿತ್ತು. ಈಗ ಸಂಭ ವಿಸಿರುವ…
ಕೊಡಗಿನ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275ರ ಅಗಲೀಕರಣಕ್ಕೆ ತೀವ್ರ ವಿರೋಧ
October 25, 2018ಮೈಸೂರು: ಕೊಡಗಿನ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275ರ ಅಗಲೀಕರಣಕ್ಕೆ ವಿರೋಧ ವ್ಯಕ್ತಪಡಿಸಿ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಅಧ್ಯಕ್ಷ ನಿವೃತ್ತ ಕರ್ನಲ್ ಸಿ.ಪಿ.ಮುತ್ತಣ್ಣ ಅವರು ಕೇಂದ್ರ ಭೂ ಸಾರಿಗೆ, ಹೆದ್ದಾರಿ, ಹಡಗು ಮತ್ತು ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ. ಹಾಲಿ ಇರುವ ಎರಡು ಪಥದ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿದರೆ ಪರಿಸರಕ್ಕೆ ಹಾನಿಯಾಗುತ್ತದೆ ಎಂದಿರುವ ಅವರು, ಉದ್ದೇ ಶಿತ ನಾಲ್ಕು ಪಥದ ರಸ್ತೆಯು 70 ಮೀಟರ್ ಸಮತಟ್ಟಾದ…
ವಿರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪರ ವೀಣಾ ಅಚ್ಚಯ್ಯ ಪ್ರಚಾರ
October 25, 2018ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೆಟ್ಟ ಪ್ರದೇಶವಾದ ಅರಸು ನಗರ ಹಾಗೂ ಇತರ ವಾರ್ಡ್ಗಳಿಗೆ ಭೇಟಿ ನೀಡದಾಗ ಇತ್ತೀಚೆಗೆ ಸುರಿದ ಮಹಾ ಮಳೆಯಿಂದಾಗಿ ಬಡಕುಟುಂಬಗಳ ಮನೆಯ ಗೋಡೆ ಕುಸಿದು ನಷ್ಟ ಸಂಭವಿಸಿದ್ದರೂ ಪಂಚಾ ಯಿತಿಯ ಬಿಜೆಪಿ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಲ್ಲಿನ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರಲ್ಲದೆ, ಜನರು ಈಗ ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷದತ್ತ ಒಲವುತೋರಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ವೀಣಾ ಅಚ್ಚಯ್ಯ ಹೇಳಿದರು. ಪಟ್ಟಣ ಪಂಚಾಯಿತಿ ಚುನಾವಣೆಗೆ ಅರಸು…
ಮಡಿಕೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ
October 25, 2018ಮಡಿಕೇರಿ: ಮಹರ್ಷಿ ವಾಲ್ಮೀಕಿ ಅಖಂಡ ಭಾರತ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಕಾವೇರಿ ಕಲಾ ಕ್ಷೇತ್ರ ದಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಾನವೀಯತೆಯೇ ಧರ್ಮ ಎಂಬು ದನ್ನು ಪ್ರತಿಪಾದಿಸಿದ ಮಹಾನ್ ದಾರ್ಶ ನಿಕ ಮಹರ್ಷಿ ವಾಲ್ಮೀಕಿಯ ಜೀವನ ಚರಿ ತ್ರೆಯನ್ನು ಪ್ರತಿಯೊಬ್ಬರೂ…
ಕೊಡಗಿನ ಪ್ರಕೃತಿ ವಿಕೋಪ ಪರಿಹಾರಕ್ಕೆ ಕೇಂದ್ರದಿಂದ ಬಿಡಿಗಾಸೂ ಬಂದಿಲ್ಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಆರೋಪ
October 25, 2018ಕುಶಾಲನಗರ: ಮೈತ್ರಿ ಸರ್ಕಾರದಿಂದ ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಬಿಡಿಗಾಸನ್ನು ನೀಡದೆ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಆರೋಪಿಸಿದರು. ಕುಶಾಲನಗರದಲ್ಲಿ ಪಟ್ಟಣ ಪಂಚಾಯಿತಿ ಚುನಾವಣೆಯ ತಮ್ಮ ಪಕ್ಷದ ಅಭ್ಯರ್ಥಿ ಪರ ಮನೆ ಮನೆಗಳಿಗೆ ಹೋಗಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕೃತಿ ವಿಕೋಪಕ್ಕೆ ತುತ್ತಾದ ಕೊಡಗು ಜಿಲ್ಲೆಯನ್ನು ಕೇಂದ್ರ ಸರ್ಕಾರ ನಿರ್ಲಕ್ಷ್ಯಿಸಲು ಮೈಸೂರು-ಕೊಡಗು ಸಂಸದರೂ ಸೇರಿ ದಂತೆ…
ಕಾರ್ಮಿಕ ಮುಖಂಡ ಭರತ್ಗೆ ಬೆದರಿಕೆ ಕರೆ
October 25, 2018ಮಡಿಕೇರಿ: ಕಾರ್ಮಿಕ ಮುಖಂಡರು ಹಾಗೂ ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅವರಿಗೆ ದೂರವಾಣಿ ಕರೆಯ ಮೂಲಕ ಅನಾಮಧೇಯ ವ್ಯಕ್ತಿ ಜೀವ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಬಂಧಿಸುವಂತೆ ಗ್ರಾಪಂ ನೌಕರರ ಸಂಘದ ವಿರಾಜಪೇಟೆ ತಾಲೂಕು ಕಾರ್ಯದರ್ಶಿ ಟಿ.ಜಿ.ಸಚಿತ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.19 ರಂದು ಸಂಜೆ ದೂರವಾಣಿ ಕರೆಯ ಮೂಲಕ ಅನಾಮಧೇಯ ವ್ಯಕ್ತಿ ಭರತ್ ಅವರಿಗೆ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಅ.20 ಸಿದ್ದಾಪುರ ಠಾಣೆಗೆ ದೂರು ನೀಡಲಾಗಿದ್ದು, ಆರೋಪಿಯನ್ನು…
ರೈಲು ಇಲ್ಲದ ಜಿಲ್ಲೆಯಲ್ಲೊಂದು ರೈಲ್ವೆ ಸ್ಟೇಷನ್: ಪ್ರಕೃತಿ ಮುನಿಸಿಗೆ ಹಳಿ ಇಳಿದು ಯಾರ್ಡ್ ಸೇರಿದ ಟೂರಿಸ್ಟ್ ಎಕ್ಸ್ಪ್ರೆಸ್
October 24, 2018ಮಡಿಕೇರಿ: ಈ ರೈಲ್ವೇ ಸ್ಟೇಷ ನ್ನಲ್ಲಿರೋದು ಕೇವಲ ಒಬ್ಬ ಟಿಕೇಟ್ ಕಲೆಕ್ಟರ್.. ಸ್ಷೇಷನ್ನಲ್ಲಿ ರೈಲಿಗಾಗಿ ಕಾದು ಕುಳಿತಿರೋ ಬೆರಳೆಣಿಕೆಯ ಜನ.. ರೈಲಿನ ವೇಳಾಪಟ್ಟಿ ತಿಳಿದು ಹತಾಶೆಯಿಂದ ನಿರ್ಗಮಿಸುತ್ತಿರುವ ಹೊರ ಊರ ಅತಿ ಥಿಗಳು.. ಪ್ರಕೃತಿ ವಿಕೋಪದ ಬಳಿಕ ಹಳಿಯಿಂದ ಇಳಿದು ‘ಯಾರ್ಡ್’ ಸೇರಿದ ‘ಟೂರಿಸ್ಟ್ ಎಕ್ಸ್ಪ್ರೆಸ್’.. ಇದು ಮಡಿಕೇರಿಯಲ್ಲಿ ಕಂಡು ಬರುವ ದೃಶ್ಯ. ರೈಲ್ವೇ ಹಳಿ ಇಲ್ಲದ ದೇಶದ ಏಕೈಕ ಜಿಲ್ಲೆ ಎಂಬ ಹೆಸರು ಪಡೆದಿರುವ ಕೊಡಗು, ಅದರಲ್ಲೂ ಜಿಲ್ಲಾ ಕೇಂದ್ರ ಮಡಿಕೇರಿಗೆ ರೈಲು ಬಂದದ್ದಾದರೂ ಯಾವಾಗ…