ಕುಶಾಲನಗರ: ಇಲ್ಲಿನ ಪಟ್ಟಣ ಪಂಚಾಯಿತಿಗೆ ಅ.28 ರಂದು ಚುನಾ ವಣೆ ನಡೆಯುವ ಹಿನ್ನೆಲೆಯಲ್ಲಿ ಮಂಗಳ ವಾರ ಜಾತ್ಯಾತೀತ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಪಕ್ಷದ ಅಭ್ಯರ್ಥಿಗಳ ಪರ ವಿವಿಧ ವಾರ್ಡ್ ಗಳಲ್ಲಿ ಮತಯಾಚನೆ ಮಾಡಿದರು. ಪಕ್ಷದ ಮುಖಂಡರೊಂದಿಗೆ 15ನೇ ವಾರ್ಡ್ನ ಅಭ್ಯರ್ಥಿ ಎನ್.ಸಿ. ಗಣೇಶ್, 10ನೇ ವಾರ್ಡಿನ ವಿ.ಎನ್.ಆನಂದ್ ಕುಮಾರ ಸೇರಿದಂತೆ ಇತರೆ ಅಭ್ಯರ್ಥಿಗಳ ಪರ ವಾರ್ಡ್ಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಟ್ಟಣ ಪಂಚಾ ಯಿತಿಯಲ್ಲಿ…
ಅಕ್ರಮ ನಾಟ ಸಾಗಾಟ: ಲಾರಿ ವಶ, ಅರೋಪಿಗಳ ಬಂಧನ
October 24, 2018ಸಿದ್ದಾಪುರ: ಅಕ್ರಮವಾಗಿ ಮರದ ನಾಟಗಳನ್ನ ಸಾಗಿಸುತ್ತಿದ್ದ ಲಾರಿ ಯೊಂದಿಗೆ ಇಬ್ಬರು ಅರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ವಿರಾಜಪೇಟೆ ತಾಲೂಕು ಆಮ್ಮತ್ತಿ ಸಮೀಪದ ಚಂಬೆಬೆಳ್ಳೂರು ಗ್ರಾಮದ ಮಾರ್ಗವಾಗಿ ಲಾರಿಯೊಂದರಲ್ಲಿ ಅಕ್ರಮ ವಾಗಿ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿ ಅಂದಾಜು 2 ಲಕ್ಷ ಮೌಲ್ಯದ ಮರದೊಂದಿಗೆ ಆರೋಪಿಗಳಾದ ಎಡಪಾಲ ಗ್ರಾಮದ ಹಸ್ಸನ್, ಹೆಗ್ಗಳ ಗ್ರಾಮದ ರಂಜಿತ್ ಎಂಬುವರನ್ನು ಬಂಧಿಸಿ ವಾಹನ ವಶಪಡಿಸಿಕೊಂಡಿದ್ದಾರೆ. ಲಾರಿಯಲ್ಲಿ ನೇರಳೆ,…
ಬೇಟೆ ವೇಳೆ ವ್ಯಕ್ತಿಗೆ ಗುಂಡೇಟು: ಓರ್ವನ ಬಂಧನ
October 24, 2018ಮಡಿಕೇರಿ: ಹಂದಿ ಬೇಟೆ ಯಾಡುವ ವೇಳೆ ವ್ಯಕ್ತಿಯೋರ್ವನಿಗೆ ಗುಂಡೇಟು ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಬಂಧಿ ಸುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ತಂಡ ಯಶಸ್ವಿಯಾಗಿದೆ. ದಕ್ಷಿಣ ಕೊಡಗಿನ ವೆಸ್ಟ್ನೆಮ್ಮಲೆ ಗ್ರಾಮದ ಕಾಳಿಮಾಡ ದಿನೇಶ್ ದೇವಯ್ಯ (45) ಅ.18ರಂದು ಹೆಮ್ಮೆತಾಳು ಗ್ರಾಮದಲ್ಲಿರುವ ತನ್ನ ಮಾವನ ಮನೆಗೆ ಬಂದಿದ್ದು, ಅ. 21 ರಂದು ಸಂಜೆ ಕಾಳಿಮಾಡ ದಿನೇಶ್ ದೇವಯ್ಯ ಸ್ನೇಹಿತ ಅಯ್ಯಕುಟ್ಟೀರ ರಂಜಿತ್ ಮಾಚಯ್ಯ ಅವರೊಂದಿಗೆ ಹಂದಿ ಬೇಟೆಗೆಂದು ಹೋಗಿದ್ದರು ಎನ್ನಲಾಗಿದೆ. ಆದರೆ ಕತ್ತಲಿನಲ್ಲಿ ಕಾಡುಹಂದಿಗೆಂದು ಹೊಡೆದ ಗುಂಡು…
ಕಾವೇರಿ ಮಾತೆ ಎಲ್ಲರ ಕಷ್ಟ ಪರಿಹರಿಸುವ ಶಕ್ತಿದಾತೆ
October 24, 2018ವಿರಾಜಪೇಟೆ: ಕೊಡಗು ಕಾವೇರಿ ಮಾತೆ, ಪ್ರಕೃತಿಯ ತವರೂರು, ಇತ್ತೀಚಿಗೆ ಭಾರಿ ಮಳೆಯಿಂದಾಗಿ ಅನೇಕರು ಮನೆ ಆಸ್ತಿ ಕಳೆದುಕೊಂಡಿದ್ದರು, ಶ್ರೀ ಕಾವೇರಿ ಮಾತೆ ಯಾರನ್ನು ಕೈಬಿಡದೆ ಎಲ್ಲರ ಕಷ್ಟವನ್ನು ಪರಿಹರಿಸುವಂತ ಶಕ್ತಿದಾತೆ ಎಂದು ಮನಿ ಯಪಂಡ ಕಾಂತಿ ಸತೀಶ್ ಹೇಳಿದರು. ವಿರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಕೊಡವ ಸಮಾಜ ಪೊಮ್ಮ ಕ್ಕಡ ಒಕ್ಕೂಟದ ವತಿಯಿಂದ ಆಯೋಜಿಸ ಲಾಗಿದ್ದ ‘ಶ್ರೀ ಕಾವೇರಿ ತೀರ್ಥ ಪೂಜಾ ಕಾರ್ಯಕ್ರಮ’ದ ಅಧ್ಯಕ್ಷತೆ ವಹಿಸಿದ್ದ ಕಾಂತಿ ಸತೀಶ್ ಮಾತನಾಡಿ, ಕೊಡಗಿನ ಕಾವೇರಿ ನದಿ ರಾಜ್ಯ ಹಾಗೂ…
ದಶಕದಿಂದ ನೆನೆಗುದಿಗೆ ಬಿದ್ದಿರುವ ಸರ್ಕಾರಿ ಶಾಲೆಯ ಶತಮಾನೋತ್ಸವ ಭವನ ಕಾಮಗಾರಿ
October 23, 2018ಸೋಮವಾರಪೇಟೆ: ಕಳೆದ ಹಲವು ವರ್ಷಗಳಿಂದ ಗ್ರಹಣ ಹಿಡಿದಿದ್ದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಭವನಕ್ಕೆ ಕೊನೆಗೂ ಮುಕ್ತಿ ಕಾಣುವ ಲಕ್ಷಣ ಕಾಣುತ್ತಿದೆ. ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ 100 ವರ್ಷ ತುಂಬಿದ ಸವಿನೆನಪಿಗಾಗಿ ನಿರ್ಮಿಸಲು ಉದ್ದೇಶಿಸಿರುವ ಶತಮಾನೋತ್ಸವ ಭವನ ಅನುದಾನದ ಕೊರತೆ ಯಿಂದ ಕಳೆದ 11 ವರ್ಷಗಳಿಂದ ನೆನೆ ಗುದಿಗೆ ಬಿದ್ದಿದ್ದ ಭವನದ ಕಾಮಗಾರಿ ಮುಂದುವರೆಸಲು ಮಾಜಿ ಸಚಿವ ಜೀವಿಜಯ ಮುಂದಾಗಿದ್ದು, ರೂ. 3.60 ಕೋಟಿ ವೆಚ್ಚದ ಯೋಜನೆ ಸಿದ್ದಗೊಂಡಿದೆ. ಶಾಲೆಯ ಪಕ್ಕದಲ್ಲಿ…
ಬಾರ್ ಪರವಾನಗಿ ರದ್ದು ಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ
October 23, 2018ಮಡಿಕೇರಿ: ಇಬ್ಬರು ಕ್ಯಾಂಟೀನ್ ನೌಕರರ ಮೇಲೆ 2 ದಿನಗಳ ಹಿಂದೆ ನಡೆದ ಗುಂಡಿನ ದಾಳಿ ಪ್ರಕರಣ ದಿಂದ ಅಸಮಾಧಾನಗೊಂಡಿರುವ ನಗರದ ಹಿಲ್ರಸ್ತೆ ನಿವಾಸಿಗಳು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಸ್ಥಳೀಯ ಕಾವೇರಿ ಬಾರ್ ಪರವಾನಗಿ ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪಿಎಫ್ಐ ಸಂಘಟನೆ ಮತ್ತು ಸಲಫಿ ಮಸೀದಿಯ ಆಡಳಿತ ಮಂಡಳಿಯ ಪ್ರಮುಖರು ಬಾರ್ ಎದುರು ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು. ಬಾರ್ ಪರವಾನಗಿಯನ್ನು ತಕ್ಷಣ ರದ್ದುಗೊಳಿಸಬೇಕು ಮತ್ತು ಗುಂಡು ಹಾರಿಸಿದ ಆರೋಪಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು….
ಪಪಂ ಚುನಾವಣೆ; ಬಿಜೆಪಿ ಅಭ್ಯರ್ಥಿ ಪರ ಶಾಸಕ ಬೋಪಯ್ಯ ಪ್ರಚಾರ
October 23, 2018ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಕಳೆದ ಐದು ವರ್ಷಗಳಿಂದ ಬಿಜೆಪಿ ಆಡಳಿತ ನಡೆಸಿ ಬಂದ ಅನುದಾನದಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ಪಟ್ಟಣ ಪಂಚಾಯಿತಿ ಚುನಾವಣೆಗೆ ಅರಸು ನಗರದ ಎರಡನೇ ವಾರ್ಡ್ನಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಪಿ.ವಿಷ್ಣು ಅವರ ಪರ ಚುನಾವಣಾ ಪ್ರಚಾರ ಕೈಗೊಂಡ ಅವರು ಮಾತನಾಡುತ್ತಾ, ಪಂಚಾಯಿತಿಯ ರೂ, ಐದು ಕೋಟಿ ಅನುದಾನದಲ್ಲಿ. ಪಟ್ಟಣ ವ್ಯಾಪ್ತಿಯ ರಸ್ತೆ, ತಡೆಗೋಡೆ, ವಿದ್ಯುತ್ ಹಾಗೂ ಜನತೆಗೆ ನೀರಿನ ಸೌಲಭ್ಯಕ್ಕಾಗಿ ರೂ,1,70…
ಪೊನ್ನಂಪೇಟೆಯಲ್ಲಿ ದುರಂತ ಕವಿಗೆ ಮುತ್ತಿನ ಕಾವ್ಯ ಲಹರಿ
October 22, 2018ಪೊನ್ನಂಪೇಟೆ: ಕೊಡಗಿನ ನಿಜವಾದ ಸಾಂಸ್ಕೃತಿಕ ಕೇಂದ್ರ ಪೊನ್ನಂ ಪೇಟೆ. ಇಲ್ಲಿ ಅನೇಕ ವರ್ಷಗಳಿಂದ ನಾಟಕ, ಸಂಗೀತ, ಸಂಸ್ಕೃತಿ ಕಾರ್ಯ ಕ್ರಮಗಳು ನಿರಂತರವಾಗಿ ನಡೆಯುತ್ತಾ ಬಂದಿದೆ. ಇಲ್ಲಿ ಅನೇಕ ಕಲಾವಿದರು ಹುಟ್ಟಿ ಬಂದಿದ್ದಾರೆ. ಈ ಪರಂಪರೆಯನ್ನು ಅರ್ಥಪೂರ್ಣವಾಗಿ ಮುಂದುವರೆಸುತ್ತಿ ರುವವರು ಕೊಡಗಿನ ರಂಗಕಲಾವಿದ ರಾದ ಅಡ್ಡಂಡಕಾರ್ಯಪ್ಪ ದಂಪತಿಗಳು. ಹೀಗೆ ಪ್ರಶಂಸಿಸಿದವರು ಹಿರಿಯ ಸಾಹಿತಿ ಬಾಚಿರಣಿಯಂಡ ಅಪ್ಪಣ್ಣ. ಪೊನ್ನಂಪೇಟೆ ರಂಗಭೂಮಿ ಪ್ರತಿಷ್ಠಾನ ರಂಗಭೂಮಿ ವಠಾರದಲ್ಲಿ ನಡೆಸಿದ ವಾರ್ಷಿಕ ಕಾರ್ಯಕ್ರಮ ‘ಮುತ್ತ್ ಕಾವ್ಯ ಲಹರಿ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು…
ಪೊಲೀಸ್ ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ
October 22, 2018ಮಡಿಕೇರಿ: ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಆಸ್ತಿ ರಕ್ಷಣೆ ಸಂದರ್ಭದಲ್ಲಿ ಬಲಿಯಾದ ಪೊಲೀಸ್ ಹುತಾತ್ಮರಿಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯ ಕ್ರಮದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ನಿವೃತ್ತ ಪೊಲೀಸ್ ಅಧೀಕ್ಷ ಕರ ಪರವಾಗಿ ಅಪ್ಪಯ್ಯ, ಉಪ ಪೊಲೀಸ್ ವರಿಷ್ಠಾಧಿಕಾರಿಗಳ ಪರವಾಗಿ ಸುಂದರ ರಾಜ್, ಉಪ ವಿಭಾಗಾಧಿಕಾರಿ ಟಿ.ಜವರೇ ಗೌಡ, ಪೊಲೀಸ್ ನಿರೀಕ್ಷಕ ಮೇದಪ್ಪ, ಜಿಲ್ಲಾಸಶಸ್ತ್ರ…
ಪಪಂ ಚುನಾವಣೆ; ಜೆಡಿಎಸ್ನಿಂದ ಪ್ರಚಾರಕ್ಕೆ ಚಾಲನೆ
October 22, 2018ವಿರಾಜಪೇಟೆ: ಜನಪ್ರತಿನಿಧಿ ಗಳು ಜನಪರ ಅಭಿವೃದ್ಧಿ ಕಾಮಗಾರಿ ಗಳಿಗೆ ಒತ್ತು ನೀಡುವುದರೊಂದಿಗೆ ಜನ ತೆಯ ಅಗತ್ಯ ಬೇಡಿಕೆಗಳನ್ನು ಈಡೇರಿ ಸಲು ಜಾತ್ಯಾತೀತ ಮನೋಭಾವನೆವುಳ್ಳ, ಜನತೆಯ ಸಮಸ್ಯೆಗಳಿಗೆ ನೇರವಾಗಿ ನಿರಂ ತರ ಸ್ಪಂದಿಸುವ ಅಭ್ಯರ್ಥಿಗಳನ್ನು ಮತ ದಾರರು ಬೆಂಬಲಿಸುವಂತಾಗಬೇಕು ಎಂದು ಜಾತ್ಯಾತೀತ ಜನತಾ ದಳದ ಜಿಲ್ಲಾ ಸಮಿತಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು. ಪಟ್ಟಣದ ಹದಿನೈದನೇ ವಾರ್ಡ್ ಗಾಂಧಿ ನಗರದಿಂದ ಪಟ್ಟಣ ಪಂಚಾಯಿತಿ ಚುನಾ ವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಪಿ.ಎ.ಮಂಜುನಾಥ್ ಅವರ ಪರ ಚುನಾ ವಣಾ…