ಕುಶಾಲನಗರ: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಪಟ್ಟಣ ಗ್ರಾಮ ದಲ್ಲಿ ಭತ್ತದ ಬೆಳೆಯನ್ನು ಕಾಡಾನೆಗಳು ತುಳಿದು ನಾಶಪಡಿಸಿವೆ. ಗ್ರಾಮದ ನಿಂಗರಾಜು, ಎಂ.ಬಿ.ಬಸವರಾಜು ಸೇರಿ ದಂತೆ ಇನ್ನಿತರ ರೈತರಿಗೆ ಸೇರಿದ ಭತ್ತದ ಗದ್ದೆಗಳು ಕಾಡಾನೆಗಳ ಪಾಲಾ ಗಿವೆ. ಇದರಿಂದಾಗಿ ರೈತ ರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕಾಡಾನೆಗಳಿಂದಾಗಿರುವ ನಷ್ಟವನ್ನು ಭರಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ರಾತ್ರಿ ಕಾವಲು ಕಾಯುವ ನಮ್ಮನ್ನೂ ಕಾಡಾನೆಗಳು ಓಡಿಸಿಕೊಂಡು ಬರುತ್ತಿವೆ. ಜೀವ ಹಾನಿಯಾಗುವ ಮುನ್ನ ಅರಣ್ಯ ಇಲಾಖೆ…
ಜಗದಾತ್ಮನಂದಜೀ ಪರಿಪೂರ್ಣ ಶ್ರೇಷ್ಠ ಸಂತ
November 28, 2018ಗೋಣಿಕೊಪ್ಪಲು: ಪೊನ್ನಂ ಪೇಟೆ ರಾಮಕೃಷ್ಣ ಶಾರದಾಶ್ರಮದಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ಜಗದಾತ್ಮ ನಂದಜೀ ಮಹರಾಜ್ ಅವರ ಶ್ರದ್ಧಾಂ ಜಲಿ ಕಾರ್ಯಕ್ರಮದಲ್ಲಿ ಸನ್ಯಾಸಿಗಳು ಜಗ ದಾತ್ಮನಂದಜೀ ಮಹರಾಜ್ ಅವರ ಗುಣ ಗಾನ ಮಾಡಿದರು. ಜಗದಾತ್ಮನಂದಜೀ ಮಹರಾಜ್ ಶ್ರೇಷ್ಠ ಸಂತರಾಗಿದ್ದರು ಎಂಬ ಮಾತುಗಳು ಕೇಳಿ ಬಂದವು. ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರ ಮದ ಅಧ್ಯಕ್ಷ ಬೋಧಸ್ವರೂಪ ನಂದಜೀ ಪ್ರಾಸ್ತಾವಿಕವಾಗಿ ಮಾತನಾಡಿ, ಜಗದಾತ್ಮ ನಂದಜೀ ಅವರ ಮಾತಿನಧಾಟಿಗಳು ಸ್ವಾಮಿ ವಿವೇಕಾನಂದರನ್ನು ನೆನೆಸಿಕೊಳ್ಳುವಂತಿತ್ತು. ವಿವೇಕಾನಂದರ ಬಗ್ಗೆ ಅವರು ಹೆಚ್ಚು ಆನಂದದಿಂದ ಹೇಳಿಕೊಳ್ಳುತ್ತಿದ್ದರು. ವಿವೇ ಕಾನಂದರ ಸಂದೇಶಗಳನ್ನು…
ಹಿಂದೂ ಭಕ್ತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
November 28, 2018ಕುಶಾಲನಗರ: ಕೇರಳದ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಹಿಂದೂ ಧರ್ಮದ ಪರವಾಗಿ ಹೋರಾಟ ನಡೆಸುತ್ತಿರುವ ಹಿಂದೂ ಭಕ್ತರ ಮೇಲೆ ಕೇರಳ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಹಿಂದೂ ಜನಜಾಗೃತಿ ಸಮಿತಿ ಹಾಗೂ ವಿವಿಧ ಹಿಂದೂಪರ ಸಂಘಟನೆಯ ಕಾರ್ಯ ಕರ್ತರು ಇಲ್ಲಿನ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿ ಹಿಂದೂ ಭಕ್ತರ ಮೇಲೆ ಪೊಲೀ ಸರು ಲಾಠಿ ಪ್ರಹಾರ ಮಾಡುತ್ತಿದ್ದಾರೆ. ಧರ್ಮವಿರೋಧಿಗಳ ರಕ್ಷಣೆಯನ್ನು ಕೇರಳ ಸರ್ಕಾರ…
ಮಡಿಕೇರಿ ಜ್ಯುವೆಲರಿ ಅಂಗಡಿಯಲ್ಲಿ ಗೋಡೆ ಕೊರೆದು ಕಳ್ಳತನ ಕಳ್ಳರ ಪಾಲಿಗೆ ಸಿಕ್ಕಿದ್ದು 3 ಬೆಳ್ಳಿ ಉಂಗುರ
November 28, 2018ಮಡಿಕೇರಿ: ಚಿನ್ನಾಭರಣ ಮಳಿ ಗೆಯ ಗೋಡೆ ಕೊರೆದು ಸಾವಿರ ರೂ. ಮುಖ ಬೆಲೆಯ 3 ಬೆಳ್ಳಿ ಉಂಗುರಗಳನ್ನು ಕಳವು ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಮಹದೇವಪೇಟೆಯ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಇತರ ಜುವೆಲರಿ ಮಳಿಗೆಗಳ ವರ್ತಕರಲ್ಲಿ ಆತಂಕ ಮೂಡಿಸಿದೆ. ಘಟನೆ ವಿವರ: ಮೂಲತಃ ಕೇರಳ ಇರಿಟ್ಟಿ ನಿವಾಸಿಯಾದ ಶಾಹೀರ್ ಎಂಬುವರು ಮಹ ದೇವಪೇಟೆಯಲ್ಲಿ ಫಾತಿಮಾ ಹೆಸರಿನ ಜುವೆಲರಿ ಮಳಿಗೆ ಆರಂಭಿಸಿದ್ದರು. ಸೋಮ ವಾರ ರಾತ್ರಿ ಎಂದಿನಂತೆ ಅಂಗಡಿ ಬಾಗಿಲು ಮುಚ್ಚಿ ಶಾಹೀರ್ ಮನೆಗೆ ತೆರಳಿದ್ದರು….
3 ದಶಕಗಳಿಂದ ಮುಚ್ಚಿಹೋಗಿದ್ದ ಐತಿಹಾಸಿಕ ಪಯ್ಯಡ ಮಂದ್ ಪುನರಾರಂಭ
November 28, 2018ಪೊನ್ನಂಪೇಟೆ: ಸುಮಾರು 30 ವರ್ಷಗಳಿಂದ ಕಾರಣಾಂತರದಿಂದ ಮುಚ್ಚಿ ಹೋಗಿದ್ದ ಹುದಿಕೇರಿ ಗ್ರಾಮ ಪಮಚಾಯಿತಿ ವ್ಯಾಪ್ತಿಯ ಹೈಸೊಡ್ಲೂರ್ ಗ್ರಾಮದ ಐತಿಹಾಸಿಕ ಪಯ್ಯಡ ಮಂದ್ ಸಂಭ್ರಮ-ಸಡಗರದೊಂದಿಗೆ ಪುನರಾರಂಭವಾಗಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾ ಡೆಮಿ ಮತ್ತು ಹೈಸೊಡ್ಲೂರ್ ಗ್ರಾಮದ ಶ್ರೀ ಮಹಾದೇವ ದೇವಸ್ಥಾನ ಸಮಿತಿಯೊಂದಿಗೆ ಗ್ರಾಮದ ತಕ್ಕ ಮುಖ್ಯಸ್ಥರು ಸೇರಿ ಮಂದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಅವರು ಮಂದ್ನ ಸುತ್ತ ಸಾಂಪ್ರದಾಯಿಕ ಪುತ್ತರಿ ಕೋಲಾಟ್ ಆಡುವ ಮೂಲಕ ಮಂದ್ ಪುನ ರಾರಂಭ…
ನ.30, ವಿಯೆಟ್ನಾಂ ಕರಿಮೆಣಸು ಆಮದು ವಿರೋಧಿಸಿ ಡೆಲ್ಲಿ ಚಲೋ
November 28, 2018ಗೋಣಿಕೊಪ್ಪಲು: ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿಯ ವತಿಯಿಂದ ನ.30ರಂದು ನವದೆಹಲಿಯ ರಾಮ್ಲೀಲಾ ಮೈದಾನದಲ್ಲಿ ರೈತರ ಬೃಹತ್ ಪ್ರತಿಭಟನೆಯು ಉತ್ತರ ಪ್ರದೇಶದ ರೈತ ಚಳವಳಿಯ ಮುಖಂಡ ವಿ.ಎಂ.ಸಿಂಗ್ ನೇತೃತ್ವದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದಿಂದ ನೂರಕ್ಕೂ ಅಧಿಕ ರೈತರು ಡೆಲ್ಲಿ ಚಲೋ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಹೇಳಿದರು. ದಕ್ಷಿಣ ಭಾರತದಿಂದ ಕರ್ನಾಟಕ ರಾಜ್ಯ ರೈತ ಸಂಘದ…
ಡಿ.1 ರಂದು ಸರ್ಕಾರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸ್ಥಳ ನಿಯುಕ್ತಿ
November 28, 2018ಮಡಿಕೇರಿ: 2016-17ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (6-8) ಸಂಬಂಧ ಆಯ್ಕೆ ಯಾದ ಅಭ್ಯರ್ಥಿಗಳ ಮುಖ್ಯ ಆಯ್ಕೆಪಟ್ಟಿ ಯನ್ನು ನ.23 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಸಭೆಯಲ್ಲಿ ಎಲ್ಲಾ ಜಿಲ್ಲೆಯ ಉಪ ನಿರ್ದೇಶಕರಿಗೆ ವಿತರಿಸಿ ನವೆಂಬರ್, 27 ರಿಂದ ಡಿಸೆಂಬರ್, 14 ರವರೆಗೆ ಕೌನ್ಸಿಲಿಂಗ್ ಮಾಡಿ ಸ್ಥಳ ನಿಯುಕ್ತಿಗೊಳಿಸಲು ಆದೇಶಿಸಿರುತ್ತಾರೆ. ಈ ಸಂಬಂಧ ಕೊಡಗು ಜಿಲ್ಲೆಯಲ್ಲಿ 17 ಆಂಗ್ಲ ಭಾಷಾ ಶಿಕ್ಷಕರು, 06 ಗಣಿತ/ ವಿಜ್ಞಾನ ಶಿಕ್ಷಕರು ಮತ್ತು 4 ಸಮಾಜ ವಿಜ್ಞಾನ…
ಇಂದು ಕನ್ನಡ ರಾಜ್ಯೋತ್ಸವ, ವಿವಿಧ ಸ್ಪರ್ಧೆಗಳು
November 28, 2018ಮಡಿಕೇರಿ: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಸ್ಪರ್ಧೆಗಳು £ವೆಂಬರ್ 28 ರಂದು ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆಯಲಿದೆ. ನ.28ರಂದು ಬೆಳಗ್ಗೆ 10 ಗಂಟೆಗೆ ಕುವೆಂಪು ಪುತ್ಥಳಿಗೆ ಮಾಲಾರ್ಪಣೆ, ನಂತರ ಕಲಾಕ್ಷೇತ್ರದ ಮುಂಭಾಗ ಕನ್ನಡ ಧ್ವಜಾರೋಹಣ, 10.30 ಗಂಟೆಗೆ ಉದ್ಘಾ ಟನಾ ಕಾರ್ಯಕ್ರಮ ನಡೆಯಲಿದೆ. ನಗರ ಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್.ಮಚ್ಚಾಡೋ, ನಾಪೋಕ್ಲು…
ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ 4ನೇ ಕರಡು ಅಧಿಸೂಚನೆ
November 27, 2018ಮಡಿಕೇರಿ: ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಸಚಿವಾಲಯದಿಂದ 4ನೇ ಕರಡು ಅಧಿಸೂಚನೆ ಹೊರಬಿದ್ದಿದ್ದು, ಡಿಸೆಂಬರ್ 2ರ ಒಳಗೆ ಕೊಡಗಿನ ಜನರು ವೈಯಕ್ತಿಕ ಆಕ್ಷೇಪಣೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕೆಂದು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿದೆ. ನಗರದ ಖಾಸಗಿ ಹೋಟೆಲೊಂದರಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಪ್ಪಚ್ಚುರಂಜನ್ ನೇತೃತ್ವದಲ್ಲಿ ತುರ್ತುಸಭೆ ನಡೆಯಿತು. ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರ…
ಬಾರಿಕಾಡು ತೋಟದ ಬಳಿ ಆನೆ ಸಾವು
November 27, 2018ವಿರಾಜಪೇಟೆ: ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡು ಗ್ರಾಮದ ತೋಟವೊಂದರ ಬಳಿ ಹೆಣ್ಣಾನೆಯೊಂದು ಸಾವನ್ನಪ್ಪಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸೋಮವಾರ ಬೆಳಿಗ್ಗೆ 8.30 ಸಮಯದಲ್ಲಿ ಗ್ರಾಮಸ್ಥರು ಕೆಲಸಕ್ಕೆ ತೆರಳುವ ಸಂದರ್ಭ ಅದೇ ಗ್ರಾಮದ ತಾಲೂಕು ಪಂಚಾ ಯಿತಿ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ ಅವರ ತೋಟದ ಬದಿಯಲ್ಲಿ ಆನೆಯೊಂದು ನರಳುತ್ತಿರುವುದನ್ನು ಕಂಡು ಗ್ರಾಮಸ್ಥರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಈ ಕಾಡಾನೆಗೆ ಸುಮಾರು 60 ವರ್ಷ ವಯಸ್ಸಿರಬಹುದು ಎನ್ನಲಾಗಿದೆ. ಅನಾ ರೋಗ್ಯದಿಂದ ನಿತ್ರಾಣವಾಗಿದ್ದ…










