ಕುಶಾಲನಗರ: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಶ್ರೀ ಗಣಪತಿ ದೇವಾಲಯದ ವಾರ್ಷಿಕ ರಥೋತ್ಸವವು ಸೋಮವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು. ವಾರ್ಷಿಕ ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಅಭಿಷೇಕ, ಅರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತ ವಾಗಿ ಬಸವಾಪಟ್ಟಣದ ಸುಬ್ಬುಕೃಷ್ಣ ದೀಕ್ಷಿತ್ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ನಾಗೇಂದ್ರಬಾಬು ಹಾಗೂ ವಿವಿಧ ದೇವಸ್ಥಾನ ಗಳ ಅರ್ಚಕರ ನೇತೃತ್ವದಲ್ಲಿ ನೆರವೇರಿದವು. ಈ ಐತಿಹಾಸಿಕ ಗಣಪತಿ ರಥೋತ್ಸವಕ್ಕೆ ಮೈಸೂರು ಮತ್ತು ಹಾಸನ ಜಿಲ್ಲೆಗಳ ಗಡಿ ಭಾಗದ ಜನರು…
ವಿರಾಜಪೇಟೆಯಲ್ಲಿ ‘ಸಂವಿಧಾನ ದಿನಾಚರಣೆ’
November 27, 2018ವಿರಾಜಪೇಟೆ: ದೇಶದ ಮೌಲ್ಯಯುತವಾದ ಸಂವಿಧಾನದ ಕಾನೂನು ಗಳನ್ನು ಪ್ರತಿಯೋಬ್ಬರು ತಿಳಿದುಕೊಳ್ಳುವ ಮೂಲಕ ಕಾನೂನಿಗೆ ಗೌರವಿಸುವಂತಾ ಗಬೇಕು ಎಂದು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ. ರಮಾ ಹೇಳಿದರು. ‘ಸಂವಿಧಾನ ದಿನಾಚರಣೆ’ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘದ ಆಶ್ರಯ ದಲ್ಲಿ ನ್ಯಾಯಾಲಯದ ಆವರಣದಲ್ಲಿ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶರು ಮಾತನಾಡಿದರು. ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಸಂವಿಧಾನದಲ್ಲಿ ಅಧಿಕ ಪ್ರಾಮು ಖ್ಯತೆ ಕೊಡಲಾಗಿದೆ. ನಾವುಗಳು ನ್ಯಾಯಾಂಗ…
ಸಂವಿಧಾನ ಓದಿ ಉತ್ತಮ ಪ್ರಜೆಗಳಾಗಲು ಕರೆ
November 27, 2018ಮಡಿಕೇರಿ: ರಾಷ್ಟ್ರದ ಸಂವಿ ಧಾನ ಕಾನೂನು ಪುಸ್ತಕವಿದ್ದಂತೆ, ಜೊತೆಗೆ ಅದೊಂದು ಮಹಾಗ್ರಂಥ ಎಂಬುದನ್ನು ಮರೆಯುವಂತಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ವಿಜಯ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ವಕೀಲರ ಸಂಘ ಇವರ ಜಂಟಿ ಆಶ್ರಯದಲ್ಲಿ ನಗರದ ನ್ಯಾಯಾಲಯದ ಸಭಾಂಗಣದಲ್ಲಿ ಸೋಮವಾರ ನಡೆದ “ಸಂವಿಧಾನ ದಿನಾಚರಣೆ” ಕಾರ್ಯಕ್ರಮ ದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು. ದೇಶದ ಸಂವಿಧಾನ ಓದಿದವರು ಯಾವುದೇ ರೀತಿಯ ತಪ್ಪು ಮಾಡಲು ಹೋಗುವುದಿಲ್ಲ, ಅಪರಾಧ ಮಾಡಲು ಮನಸ್ಸು…
ಅಂಚೆ ಬೆಟ್ಟದಲ್ಲಿ ಕಾರ್ಮಿಕ ಆತ್ಮಹತ್ಯೆ
November 27, 2018ಗೋಣಿಕೊಪ್ಪಲು: ಸಿದ್ದಾಪುರ ಠಾಣಾ ವ್ಯಾಪ್ತಿಯ ಅಂಚೆ ಬೆಟ್ಟ ಕಾಫಿ ತೋಟದ ಕಾರ್ಮಿಕ ಕುಮಾರ್(38) ಎಂಬಾತ ವಾಸವಿದ್ದ ಲೈನ್ ಮನೆಯ ಸಮೀಪವಿರುವ ಆಲದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ನಂಜನಗೂಡು ತಾಲೂಕಿನ ಕಳಂದ ಹೋಬಳಿಯ ನಿವಾಸಿಯಾಗಿರುವ ಮಾರಶೆಟ್ಟಿ ಎಂಬುವರ ಮಗ ಕುಮಾರ್ ಕಳೆದ ಒಂದು ತಿಂಗಳ ಹಿಂದೆ ಕೊಡಗಿಗೆ ಕಾಫಿ ತೋಟದ ಕೆಲಸಕ್ಕಾಗಿ ಕುಟುಂಬ ಸಮೇತ ಆಗಮಿಸಿದ್ದ. ಕುಮಾರ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸಿದ್ದಾಪುರ ಸಮುದಾಯ…
`ಉದ್ಯೋಗ ಖಾತ್ರಿ’ಯಿಂದ ಗ್ರಾಮೀಣಾಭಿವೃದ್ಧಿ
November 26, 2018ಎಚ್.ಡಿ.ಕೋಟೆ: ಉದ್ಯೋಗ ಖಾತ್ರಿಯಿಂದ ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುಕೂಲ ವಾಗಲಿದ್ದು, ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಗೊಳಿಸುವಂತೆ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳಿಗೆ ಶಾಸಕ ಸಿ.ಅನಿಲ್ ಕುಮಾರ್ ಕಿವಿಮಾತು ಹೇಳಿದರು. ತಾಲೂಕಿನ ಮನುಗನಹಳ್ಳಿ ಗ್ರಾಮದಲ್ಲಿ 16 ಲಕ್ಷ ರೂ. ವೆಚ್ಚದ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ ನಾಡಿದ ಅವರು, ಗ್ರಾಮಗಳ ಅಭಿವೃದ್ಧಿಗೆ ಉದ್ಯೋಗ ಖಾತ್ರಿ ಯೋಜನೆ ಪೂರಕ ವಾಗಿದೆ. ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿ ಕೊಳ್ಳುವಲ್ಲಿ ಈ…
ಸಿವಿಲ್ ಪೊಲೀಸ್ ಪೇದೆ ನೇಮಕಾತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ
November 26, 2018ಹಾಸನ: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಪ್ರಕರಣ ಜನ ಮಾನಸದಿಂದ ಮರೆಯಾಗುವ ಮುನ್ನವೇ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಅದನ್ನು ಅಭ್ಯರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಕಿಂಗ್ಪಿನ್ ಸೇರಿದಂತೆ 117 ಮಂದಿಯನ್ನು ಹಾಸನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ನ.25 ರಂದು ನಡೆಯಬೇಕಾ ಗಿದ್ದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಪ್ರವೇಶ ಪರೀಕ್ಷೆಯನ್ನು ದಿನಾಂಕ ಸೂಚಿ ಸದೇ ಪೊಲೀಸ್ ನೇಮಕಾತಿ ವಿಭಾಗದ ಎಡಿ ಜಿಪಿ ಅವರು…
ಪುಟ್ಟ ವಯಸ್ಸಲ್ಲೇ ಅಪ್ರತಿಮ ಸಾಧನೆ ತೋರಿದ ಕೊಡಗು ಬಾಲಕನ ಹೆಸರು ವಂಡರ್ ಬುಕ್ ಆಫ್ ರೆಕಾರ್ಡ್, ಭಾರತ್ ವಲ್ರ್ಡ್ ರೆಕಾರ್ಡ್ನಲ್ಲಿ ದಾಖಲು
November 26, 2018ಸೋಮವಾರಪೇಟೆ, ನ.25- ಪುಟ್ಟ ಬಾಲಕ ಅಸಾಧಾರಣ ನೆನಪಿನ ಶಕ್ತಿಯಿಂದ ಗಮನ ಸೆಳೆದು ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಬರೆದಿದ್ದಾನೆ. ಹೆಸರು ಅನ್ಷ್ (ANSH) 4 ವರ್ಷ. ಇದೀಗ ಶಿಶು ವಿಹಾರ ಸೇರಿರುವ ಪೋರ ಈಗಾಗಲೇ ಅಂತರಾಷ್ಟ್ರೀಯ ವಂಡರ್ ಬುಕ್ಕ್ ಆಫ್ ರೆಕಾರ್ಡ್ ಹಾಗೂ ಭಾರತ್ ವಲ್ರ್ಡ್ ರೆಕಾರ್ಡ್ ಬುಕ್ನಲ್ಲಿ ತನ್ನ ಸಾಧ ನೆಯ ಹೆಸರನ್ನು ದಾಖಲಿಸಿ ಕೊಂಡಿದ್ದಾನೆ. 2.2 ವರ್ಷದಲ್ಲೆ ಮಗನ ನೆನಪಿನ ಶಕ್ತಿ ಯನ್ನು ಅರಿತ ತಾಯಿ ಆಶಾ ಹಾಗೂ ತಂದೆ ಅಶ್ವಿನ್ ಆತನ ಪ್ರತಿಭೆಗೆ ಮತ್ತಷ್ಟು…
ವಿರಾಜಪೇಟೆ ಕೊಡವ ಸಮಾಜದಿಂದ ಹುತ್ತರಿ ಆಚರಣೆ
November 26, 2018ವಿರಾಜಪೇಟೆ: ವಿರಾಜಪೇಟೆ ಕೊಡವ ಸಮಾಜದಿಂದ ಹುತ್ತರಿ ಹಬ್ಬ ವನ್ನು ಸಾಂಪ್ರ ದಾಯಿಕವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನ.23 ರಂದು ರಾತ್ರಿ 7.30 ಗಂಟೆಗೆ ಕೊಡವ ಸಮಾಜದ ನೆಲ್ಲಕ್ಕಿಯಲ್ಲಿ ನೆರೆ ಕಟ್ಟಲಾಯಿತು. ರಾತ್ರಿ 8.30ಗಂಟೆಗೆ ಕೊಡವ ಸಮಾಜದ ಗದ್ದೆಯಲ್ಲಿ ಸಮುದಾಯದ ಹಿರಿಯರಾದ ಕೂತಂಡ ನಾಣಯ್ಯ ನೇತೃತ್ವದಲ್ಲಿ ಪೂಜೆ ನೆರವೇರಿಸಿ ಕದಿರು ತೆಗೆಯಲಾಯಿತು. ನಂತರ ಮೆರವಣಿಗೆ ಯಲ್ಲಿ ಸಾಮೂಹಿಕವಾಗಿ ಕೊಡವ ಸಮಾ ಜದ ಸಭಾಂಗಣಕ್ಕೆ ಆಗಮಿಸಿದ ಸಮು ದಾಯದವರು ನೆಲ್ಲಕ್ಕಿಯಲ್ಲಿ ಕದಿರಿಗೆ ಪೂಜೆ ಸಲ್ಲಿಸಿದ ಬಳಿಕ…
ಮಂಜಿನ ನಗರಿಯಲ್ಲಿ ಅಂಬರೀಶ್ ಹೆಜ್ಜೆ…
November 26, 2018ಮಡಿಕೇರಿ: ಕನ್ನಡ ಚಿತ್ರೋದ್ಯ ಮದ ಹೆಸರಾಂತ ಹಿರಿಯ ನಟ, ಮಾಜಿ ಸಚಿವ, ಕಾಂಗ್ರೆಸ್ನ ಹಿರಿಯ ಮುಖಂಡ, ಮಂಡ್ಯದ ಗಂಡು ಅಂಬರೀಷ್ ಅವರ ಅಗಲಿಕೆಗೆ ಕೊಡಗು ಜಿಲ್ಲೆ ಕೂಡ ಕಂಬನಿ ಮಿಡಿದಿದೆ. ಕೊಡಗು ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಅಂಬ ರೀಷ್ ತಮ್ಮ ಬಿಡುವಿನ ಸಮಯವನ್ನು ಕಳೆಯಲು ಜಿಲ್ಲೆಯನ್ನೇ ಆಯ್ಕೆ ಮಾಡಿ ಕೊಳ್ಳುತ್ತಿದ್ದರು. ಸುಂಟಿಕೊಪ್ಪ ನಿವಾಸಿ, ಉಪಾಸಿ ಸಂಸ್ಥೆಯ ಮಾಜಿ ಅಧ್ಯಕ್ಷ, ಉದ್ಯಮಿ, ಕಾಫಿ ಬೆಳೆಗಾರ ವಿನೋದ್ ಶಿವಪ್ಪ ಅವರ ಸಹೋ ದರ ಆನಂದ್ ಬಸಪ್ಪ, ಕೆಪಿಸಿಸಿ ಮುಖಂಡ…
ಡಿಸೆಂಬರ್ 1ರಂದು ಅಯೋಧ್ಯ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆಗೆ ಆಗ್ರಹಿಸಿ ಜನಾಗ್ರಹ ಸಭೆ
November 26, 2018ಮಡಿಕೇರಿ: ಶ್ರೀರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಡಿ.1 ರಂದು ಮಡಿಕೇರಿಯಲ್ಲಿ ಬೃಹತ್ ಜನಾಗ್ರಹ ಸಭೆ ಆಯೋಜಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ನ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಹೆಚ್ಪಿಯ ಪ್ರಧಾನ ಕಾರ್ಯದರ್ಶಿ ನರಸಿಂಹ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಹಲವಾರು ವರ್ಷಗಳಿಂದಲೂ ಹೋರಾಟ ನಡೆಸಲಾಗುತ್ತಿದ್ದು, ಇಂದಿನವರೆಗೆ 73 ಬೃಹತ್ ಹೋರಾಟ ನಡೆದಿದೆ. 1984ರಿಂದ ವಿಹೆಚ್ಪಿ ರಾಮಮಂದಿರ…










