ಜಗದಾತ್ಮನಂದಜೀ ಪರಿಪೂರ್ಣ ಶ್ರೇಷ್ಠ ಸಂತ
ಕೊಡಗು

ಜಗದಾತ್ಮನಂದಜೀ ಪರಿಪೂರ್ಣ ಶ್ರೇಷ್ಠ ಸಂತ

November 28, 2018

ಗೋಣಿಕೊಪ್ಪಲು: ಪೊನ್ನಂ ಪೇಟೆ ರಾಮಕೃಷ್ಣ ಶಾರದಾಶ್ರಮದಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ಜಗದಾತ್ಮ ನಂದಜೀ ಮಹರಾಜ್ ಅವರ ಶ್ರದ್ಧಾಂ ಜಲಿ ಕಾರ್ಯಕ್ರಮದಲ್ಲಿ ಸನ್ಯಾಸಿಗಳು ಜಗ ದಾತ್ಮನಂದಜೀ ಮಹರಾಜ್ ಅವರ ಗುಣ ಗಾನ ಮಾಡಿದರು. ಜಗದಾತ್ಮನಂದಜೀ ಮಹರಾಜ್ ಶ್ರೇಷ್ಠ ಸಂತರಾಗಿದ್ದರು ಎಂಬ ಮಾತುಗಳು ಕೇಳಿ ಬಂದವು.

ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರ ಮದ ಅಧ್ಯಕ್ಷ ಬೋಧಸ್ವರೂಪ ನಂದಜೀ ಪ್ರಾಸ್ತಾವಿಕವಾಗಿ ಮಾತನಾಡಿ, ಜಗದಾತ್ಮ ನಂದಜೀ ಅವರ ಮಾತಿನಧಾಟಿಗಳು ಸ್ವಾಮಿ ವಿವೇಕಾನಂದರನ್ನು ನೆನೆಸಿಕೊಳ್ಳುವಂತಿತ್ತು. ವಿವೇಕಾನಂದರ ಬಗ್ಗೆ ಅವರು ಹೆಚ್ಚು ಆನಂದದಿಂದ ಹೇಳಿಕೊಳ್ಳುತ್ತಿದ್ದರು. ವಿವೇ ಕಾನಂದರ ಸಂದೇಶಗಳನ್ನು ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡಿದ್ದರು. ಕಠಿಣ ಪರಿ ಸ್ಥಿತಿಯಲ್ಲೂ ಎಲ್ಲರಿಗೂ ಸಾಂತ್ವನದ ಮಾತು ಗಳು ಆತ್ಮವಿಶ್ವಾಸ ಮೂಡಿಸುತ್ತಿತ್ತು. ಅವರ ಲ್ಲಿದ್ದ ಆಧ್ಯಾತ್ಮಿಕ ಸ್ಪೂರ್ತಿ, ಪುಸ್ತಕ ಪ್ರೀತಿ, ಸ್ಮರಣಶಕ್ತಿ, ಸಾಧನೆ ಬಗೆಗಿನ ಕಾಳಜಿ ನಮಗೆ ಇಂದು ಬಳುವಳಿಯಾಗಿ ಉಳಿ ದಿದೆ. ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿ ಸುವ ಮೂಲಕ ಅವರ ಸೇವೆ ಜನರಿಗೆ ನಿತ್ಯ ದೊರಕುವಂತೆ ಯೋಜನೆ ರೂಪಿ ಸಲಾಗಿದೆ ಎಂದರು.

ರಾಮಕೃಷ್ಣ ಮಿಷನ್‍ನ ಹಿರಿಯ ಸ್ವಾಮೀಜಿ ನಿರ್ಭಯಾನಂದಜೀ ಮಹಾರಾಜ್ ತಮ್ಮ ನುಡಿನಮನದಲ್ಲಿ ಬದುಕಲು ಕಲಿಯಿರಿ ಕೃತಿ ಬಗ್ಗೆ ಮಾತನಾಡಿ, ಸುಮಾರು 3.5 ಲಕ್ಷ ಮುದ್ರಣ ಕಂಡಿರುವ ಬದುಕಲು ಕಲಿಯಿರಿ ಪುಸ್ತಕವನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಎಂದು ಭಾವಿಸಿ ಕೃತಿ ಕಾರ ಜಗದಾತ್ಮನಂದಜೀ ಅವರ ಶ್ರದ್ಧಾಂ ಜಲಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ನಡೆಸಬೇಕಿದೆ ಎಂದರು.

ಸರ್ಕಾರ ವೋಟ್-ನೋಟಿಗಾಗಿ ಸಾಕಷ್ಟು ಪುಸ್ತಕವನ್ನು ಒತ್ತಡಕ್ಕೆ ಮಣಿದು ಮುದ್ರಿ ಸುತ್ತದೆ. ಉತ್ತಮ ಬದುಕು ಕಲ್ಪಿಸುವ ಲಕ್ಷಾಂತರ ಮುದ್ರಣ ಕಂಡಿರುವ ಬದು ಕಲು ಕಲಿಯಿರಿ ಕೃತಿಕಾರ ಜಗದಾತ್ಮ ನಂದಜೀ ಅವರ ಶ್ರದ್ಧಾಂಜಲಿಯನ್ನು ವಿಶೇಷವಾಗಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸಬೇಕಿದೆ. ಈ ಕೃತಿ ಕನ್ನಡ ಸಾಹಿತ್ಯಕ್ಕೆ ನೀಡಿರುವ ದೊಡ್ಡಮಟ್ಟದ ಕೊಡುಗೆಯಾ ಗಿದೆ. ಇದು ರಾಜಕಾರಿಣಿಗಳು ಓದಲೇ ಬೇಕಾದ ಪುಸ್ತಕವಾಗಿದೆ. ಮುಖ್ಯಮಂತ್ರಿ, ಪ್ರಧಾನಮಂತ್ರಿ ಕೂಡ ಈ ಪುಸ್ತಕದಿಂದ ಪ್ರಭಾವಿತರಾಗಬೇಕು. ಬೆಂಗಳೂರಿನ ಮೇಯರ್ ಒಬ್ಬ ಈ ಪುಸ್ತಕ ಓದಿ ನೈಜ ಸೇವೆಗೆ ತನ್ನ ಅಧಿಕಾರವನ್ನು ಮುಡಿಪಾಗಿಸಿ ಕೊಂಡಿದ್ದ ಎಂಬುದನ್ನು ಸ್ಮರಿಸಿಕೊಂಡರು.

ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತ ನಾಡಿ, ಬಸವಣ್ಣ ಹೇಳಿದಂತೆ ಯಾರಿಗೆ ಸಾವಿರುತ್ತದೋ ಅವರು ಮತ್ತೆ ಹುಟ್ಟಿಬ ರಬೇಕು. ಜಗದಾತ್ಮನಂದಾಜೀ ಕೂಡ ಮತ್ತೆ ಹುಟ್ಟಿ ಬರಬೇಕಿದೆ. ಅವರು ಪೊನ್ನಂ ಪೇಟೆಯಲ್ಲಿ ನಿರ್ಮಿಸಿರುವ ವಿಶ್ವಭಾವೈಕ್ಯತಾ ಮಂದಿರ ಎಂದಿಗೂ ಭಾವೈಕ್ಯತೆಯ ಸಂಕೇತ ವಾಗಿದೆ. ಎಲ್ಲರಿಗೂ ಪ್ರೀತಿ ಹಂಚಿದ ಇವರು ಪರಿಪೂರ್ಣ ಶ್ರೇಷ್ಠ ಸಂತ ಎಂದರು.

ನಿತ್ಯಾಸ್ತನಂದಜೀ ಮಾತನಾಡಿ, ಜಗತ್ಮಾ ನಂದಜಿ ಅವರು ಹೃದಯವಂತಿಕೆ, ವೈಚಾ ರಿಕತೆ, ಭಕ್ತಿಭಾವ ಹಾಗೂ ಜನಸೇವೆ ಚಿಂತನೆ ಯಲ್ಲಿದ್ದ ಸನ್ಯಾಸಿಯಾಗಿದ್ದರು. ಸೇವೆ, ಸಾಧನೆ, ಪರಹಿತ ಚಿಂತನೆಯ ವಿಶೇಷತೆಯಲ್ಲಿಯೇ ಬದುಕು ಸಾಗಿಸಿದವರು ಎಂದರು. ಸನ್ಯಾ ಸಿಗಳಾದ ಸ್ವಾಮೀ ತಪೋಯಜ್ಞನಂದಜೀ, ಆತ್ಮಾವಿನಂದಾಜಿ, ಸತ್ಯೇಶನಂದಾಜೀ, ಆತ್ಮ ನಂದಾಜೀ, ಜಿಟಕಾನಂದಾಜೀ, ಮುಕ್ತಿ ನಂದಾಜೀ, ಚಲ್ಲಕೆರೆ ಮಠದ ತ್ಯಾಗಮಹಿ, ಸಲಹಾ ಸಮಿತಿ ಸದಸ್ಯ ಕೆ.ಪಿ. ಉತ್ತಪ್ಪ, ಸ್ವಾಮೀಜಿಯ ಒಡನಾಡಿ ಅನಂತಶಯನ, ಭಕ್ತಾಧಿಗಳಾದ ಹರೀಶ್, ಕೆ.ಎನ್.ಹೆಗ್ಡೆ ಜಗದಾತ್ಮನಂದಜೀ ಅವರಿಗೆ ನಡಿನಮನ ಸಲ್ಲಿಸಿದರು.
ಸ್ವಾಮಿ ಸ್ವತ್ಮರಾಮನಂದಜೀ ಅವರಿಂದ ಭಜನೆ ಹಾಗೂ ಹಾಡು ಮೂಡಿ ಬಂತು. ಪರಹಿತನಂದಾಜಿ ಅವರಿಂದ ವೇದಿಕ್ ಪಠಣ ನಡೆಯಿತು. ಇದಕ್ಕೂ ಮುನ್ನ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಬದುಕಲು ಕಲಿಯಿರಿ ಪುಸ್ತಕ ಶೇ. 50 ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಇಡ ಲಾಗಿತ್ತು. ಸ್ವಾಮೀಜಿ ಅವರ ಹಸ್ತಾಕ್ಷರದ ಬರಹಗಳ ಆಯ್ದ ತುಣುಕುಗಳನ್ನು ಪ್ರದ ರ್ಶನಕ್ಕೆ ಇಡಲಾಗಿತ್ತು. ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ ರಲ್ಲದೆ, ಅವರ ಹೆಸರಿನಲ್ಲಿ ಪ್ರಸಾದ ಸ್ವೀಕ ರಿಸುವ ಮೂಲಕ ಕೃಪೆಗೆ ಪಾತ್ರರಾದರು. ವಿದ್ಯಾರ್ಥಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಯುವಕರಲ್ಲಿ ಸಬಲೀಕರಣ, ಆಧ್ಯಾತ್ಮಿಕ ದಲ್ಲಿ ಅಂತರ್‍ಪ್ರಯೋಗ ಮಾಡಲು ಹಾಗೂ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಮೂರು ದೂರದೃಷ್ಠಿ ಇಟ್ಟುಕೊಂಡು ದತ್ತಿನಿಧಿ ಸ್ಥಾಪಿಸುವುದಾಗಿ ಸಭೆಯಲ್ಲಿ ಘೋಷಿಸಲಾಯಿತು. ಇದರಂತೆ ಯುವ ಸಬಲೀಕರಣಕ್ಕೆ ಪ್ರೋತ್ಸಾಹ ನೀಡುವುದು, ಜನರಲ್ಲಿ ಅಂತರ್ ಯೋಗ ಮೂಡಿಸಲು ಯೋಗ, ಬಡ ವಿದ್ಯಾರ್ಥಿಗಳ ಶಿಕ್ಷಣ ಪ್ರೋತ್ಸಾಹಕ್ಕೆ ನಿಧಿ ಸ್ಥಾಪನೆ ಮಾಡ ಲಾಯಿತು. ಭಕ್ತಾಧಿಗಳು 5 ಸಾವಿರ ಧನಸಹಾಯದ ಮೂಲಕ ಪ್ರೋತ್ಸಾಹ ನೀಡುವಂತೆ ಅಧ್ಯಕ್ಷ ಬೋಧಸ್ವರೂ ಪನಂದಜೀ ಕೋರಿದರು.

ಬದುಕಲು ಕಲಿಯಿರಿ ಕೃತಿಯ ಜನ ಪ್ರಿಯತೆ ಕಂಡು ಮೈಸೂರಿನಲ್ಲಿ ಬದುಕಲು ಕಲಿಯಿರಿ ಉತ್ಸವ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಹಸ್ತಾಕ್ಷರದ ಮೂಲಕ ಪತ್ರದಲ್ಲಿ ಎಲ್ಲಾ ಭಕ್ತರಿಗೂ ಸಕಾರಾತ್ಮಕವಾಗಿ ಸಾಧನೆ ಮಾಡಲು ಉತ್ಸುಕತೆಯಲ್ಲಿದ್ದ ಅವರ ಹಸ್ತಾಕ್ಷರದ ವಿಶೇಷ ಸಂಚಿಕೆ ಹೊರತರುವ ಚಿಂತನೆ ಇದೆ ಎಂದು ಅಧ್ಯಕ್ಷ ಬೋದಸ್ವರೂಪ ನಂದಜೀ ತಿಳಿಸಿದರು.

Translate »