ಮಂಡ್ಯ: ಖಾಸಗಿ ಬಸ್ಸಿನಲ್ಲಿ ನೇಣು ಬಿಗಿದುಕೊಂಡು ಚಾಲಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ನಗರದ ಸಮೀಪ ಚಿಕ್ಕಮಂಡ್ಯ ಗ್ರಾಮದಲ್ಲಿ ನಡೆದಿದೆ. ಕಾರ್ತಿಕ್(22) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಕಾರ್ತಿಕ್ ಬಸ್ಸೊಂದನ್ನು ಲೀಸ್ಗೆ ಪಡೆದು ಓಡಿಸುತ್ತಿದ್ದರು. ಕಾರ್ತಿಕ್ ತಂದೆ-ತಾಯಿ ಬೆಂಗಳೂರಿನಲ್ಲಿ ನೆಲೆಸಿದ್ದರು. ರಾತ್ರಿ ಚಿಕ್ಕಮಂಡ್ಯ ಗ್ರಾಮದ ಶನಿದೇವರ ದೇವಸ್ಥಾನ ಬಳಿ ಬಸ್ ನಿಲ್ಲಿಸಿ ಅದರೊಳಗೆ ವಿಶ್ರಾಂತಿ ಪಡೆಯುತ್ತಿದ್ದರು. ಬೆಳಗ್ಗೆ ವೇಳೆಗೆ ಕಾರ್ತಿಕ್ ಬಸ್ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಮಂಡ್ಯ ಸೆಂಟ್ರಲ್ ಠಾಣೆ ಪೊಲೀಸರು…
ಕೆಎಸ್ಆರ್ ಟಿಸಿ ಬಸ್ ಹರಿದು ವ್ಯಕ್ತಿ ಸಾವು
June 9, 2018ಭಾರತೀನಗರ: ಬೈಕ್ನಿಂದ ಆಯತಪ್ಪಿ ಬಿದ್ದ ವ್ಯಕ್ತಿ ತಲೆ ಮೇಲೆ ಕೆಎಸ್ಆರ್ ಟಿಸಿ ಬಸ್ ಹರಿದು ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೌಡಯ್ಯನ ದೊಡ್ಡಿ ಗೇಟ್ ಬಳಿ ಜರುಗಿದೆ. ಮಂಡ್ಯ ತಾಲೂಕಿನ ಕಬ್ಬನಹಳ್ಳಿ ಗ್ರಾಮದ ನಿವಾಸಿ ಶಿವಲಿಂಗಯ್ಯ(50) ಸಾವನ್ನಪ್ಪಿದವರು. ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿಯ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಪ್ರಥಮ ದರ್ಜೆ ಗುಮಾಸ್ತನಾಗಿ ಕಾರ್ಯ ನಿರ್ವ ಹಿಸುತ್ತಿದ್ದ ಶಿವಲಿಂಗಯ್ಯ ಕಾರ್ಯ ನಿಮಿತ್ತ ಕೆ.ಎಂ.ದೊಡ್ಡಿಗೆ ತಮ್ಮ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕೆ.ಎಂ.ದೊಡ್ಡಿ ಸಿಪಿಐ ನವೀನ್, ಎಸ್ಐ ಅಯ್ಯನಗೌಡ ಸ್ಥಳಕ್ಕೆ…
ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿಮದ್ದೂರಿನ ವಿವಿಧೆಡೆ ಸರಣ ಪ್ರತಿಭಟನೆ
June 9, 2018ಮದ್ದೂರು: ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಮದ್ದೂರಿನ ವಿವಿಧೆಡೆ ಸರಣ ಪ್ರತಿಭಟನೆ ನಡೆದಿದೆ. ಕಬ್ಬಿನ ಬಾಕಿ ಹಣ ಪಾವತಿ ಮತ್ತು ರಾಜ್ಯ ಸರ್ಕಾರ ಟನ್ ಕಬ್ಬಿಗೆ ಸಾವಿರ ರೂ. ಪ್ರೋತ್ಸಾಹ ಧನ ನೀಡುವಂತೆ ಒತ್ತಾಯಿಸಿ ತಾಲೂಕಿನ ಕೊಪ್ಪ ಎನ್ಎಸ್ಎಲ್ ಕಾರ್ಖಾನೆಗೆ ರೈತರು ಮುತ್ತಿಗೆ ಹಾಕಿದರೇ, ಅವಧಿಗೂ ಮುನ್ನವೇ ರೈತರ ಚಿನ್ನಾಭರಣವನ್ನು ಬಹಿರಂಗ ಹರಾಜು ಹಾಕುತ್ತಿರುವ ಪಟ್ಟಣದ ಐಐಎಫ್ಎಲ್ ಗೋಲ್ಡ್ ಲೋನ್ ಕ್ರಮ ಖಂಡಿಸಿ ರೈತರು ಹಾಗೂ ವೇತನ ಪಾವತಿಗೆ ಆಗ್ರಹಿಸಿ ಟಾಸ್ಕ್ವರ್ಕ್ ನೌಕರರು ಪ್ರತಿಭಟನೆ ನಡೆಸಿದ್ದಾರೆ. ಕಬ್ಬಿನ…
ಜಿಲ್ಲೆಯ ವಿವಿಧೆಡೆ ಪ್ರತ್ಯೇಕ ಪ್ರತಿಭಟನೆ
June 8, 2018ಮಂಡ್ಯ: ಜಿಲ್ಲೆಯ ವಿವಿಧೆಡೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಲವು ಸಂಘಟನೆಗಳ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಮಂಡ್ಯದಲ್ಲಿ ಕಾಲಾ ಚಿತ್ರದ ವಿರುದ್ಧ ಕನ್ನಡ ಸೇನೆ, ಕದಂಬ ಸೈನ್ಯ, ಅಕ್ರಮ ಖಾತೆ ವಿರುದ್ಧ ಬೂದನೂರು ಗ್ರಾಪಂ ಎದುರು ಗ್ರಾಮಸ್ಥರು, ಮದ್ದೂರಲ್ಲಿ ನೀರು ಘಂಟಿ ಗಳು, ಕೆ.ಆರ್.ಪೇಟೆಯಲ್ಲಿ ಸಚಿವ ಸ್ಥಾನ ನೀಡದಿರುವ ಕ್ರಮ ಖಂಡಿಸಿ ಮಾದಿಗ ಸಮುದಾಯ ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ. ಮಂಡ್ಯ: ಬಹುಭಾಷಾ ನಟ ರಜನಿ ಕಾಂತ್ ಅಭಿಯನದ ‘ಕಾಲಾ’ ಚಿತ್ರ ಬಿಡು ಗಡೆ ವಿರೋಧಿಸಿ…
ಶಾಲಾ ಬಸ್ ಬೈಕ್ಗೆ ಡಿಕ್ಕಿ: ಸವಾರ ಸಾವು
June 8, 2018ಪಾಂಡವಪುರ: ಶಾಲಾ ವಾಹನ ಹಾಗೂ ಬೈಕ್ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿ ರುವ ಘಟನೆ ತಾಲೂಕಿನ ಕಾಮನಾಯಕನಹಳ್ಳಿ ಗೇಟ್ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.ತಾಲೂಕಿನ ಸಣಬ ಗ್ರಾಮದ ನಿವಾಸಿ ಹಾಗೂ ಗ್ರಾಪಂ ಸದಸ್ಯ ಶಿವಣ್ಣ(43) ಅಪ ಘಾತದಲ್ಲಿ ಮೃತಪಟ್ಟವರು. ಘಟನೆ ಹಿನ್ನೆಲೆ: ಚಿನಕುರುಳಿಯ ಎಸ್ಟಿಜಿ ಪಬ್ಲಿಕ್ ಶಾಲೆಗೆ ಸೇರಿದ ಬಸ್ ಗುರುವಾರ ಬೆಳಿಗ್ಗೆ ಕಾಮನಾಯಕನ ಹಳ್ಳಿಯಿಂದ ಶಾಲಾ ಮಕ್ಕಳನ್ನು ಕರೆದೊ ಯ್ಯುತ್ತಿದ್ದ ವೇಳೆ ಗ್ರಾಮದ ತಿರುವಿನಲ್ಲಿ ಶಿವಣ್ಣ ಅವರ ಬೈಕ್ಗೆ ಡಿಕ್ಕಿ…
ಮಾದಿಗ ಸಮುದಾಯಕ್ಕೆ ಸಿಗದ ಸಚಿವ ಸ್ಥಾನ: ಪ್ರತಿಭಟನೆ
June 8, 2018ಕೆ.ಆರ್.ಪೇಟೆ: ಸಮ್ಮಿಶ್ರ ಸರ್ಕಾರದಲ್ಲಿ ಮಾದಿಗ(ಆದಿಜಾಂಬವ) ಸಮುದಾಯದ ನಾಯಕರಿಗೆ ಸಚಿವ ಸ್ಥಾನ ನೀಡದ ಕ್ರಮ ಖಂಡಿಸಿ ತಾಲೂಕು ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಸದಸ್ಯರು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸಮುದಾಯದ ಕಾಂಗ್ರೆಸ್ ಹಿರಿಯ ನಾಯಕರಾದ ಸಂಸದ ಕೆ.ಹೆಚ್.ಮುನಿಯಪ್ಪ ಪುತ್ರಿ ರೂಪಾ ಶಶಿಧರ್ಗೆ ಕಡೇ ಗಳಿಗೆಯಲ್ಲಿ ಸಚಿವ ಸ್ಥಾನ ನೀಡದೇ ವಂಚಿಸಲಾಗಿದೆ. ಹಾಗೆಯೇ ಉತ್ತರ ಕರ್ನಾಟಕ ಭಾಗದ ಆರ್.ಬಿ.ತಿಮ್ಮಾಪೂರ್ ಅಥವಾ ಮೈಸೂರಿನ ಪ್ರಭಾವಿ ನಾಯಕ ಧರ್ಮಸೇನಾ ಅವರಿಗಾದರೂ ಸಚಿವ…
ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ಮತದಾನಕ್ಕೆ ಸಕಲ ಸಿದ್ಧತೆ
June 8, 2018ಮಂಡ್ಯ: ಕರ್ನಾಟಕ ವಿಧಾನ ಪರಿ ಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜೂ.8ರಂದು ಮತದಾನ ನಡೆಯಲಿದ್ದು ಜಿಲ್ಲೆಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಜೂ.8ರಂದು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದ್ದು, ಕೆ.ಆರ್. ಪೇಟೆ ತಾಲೂಕಿನ ಮಿನಿ ವಿಧಾನಸೌಧದ ತಾಲೂಕು ಕಚೇರಿ, ನಾಗಮಂಗಲ ತಾಲೂಕಿನ ಮಿನಿ ವಿಧಾನಸೌಧದ ತಾಲೂಕು ಕಚೇರಿ ಕೋರ್ಟ್ ಹಾಲ್ (ಕೊಠಡಿ ಸಂಖ್ಯೆ.104), ಪಾಂಡವಪುರ ತಾಲೂಕಿನ ಮಿನಿ ವಿಧಾನ ಸೌಧದ ತಾಲೂಕು ಕಚೇರಿಯ ಕೋರ್ಟ್ ಹಾಲ್-2 ರಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ. ಮಂಡ್ಯ…
ಪಾವತಿಯಾಗದ ಕಬ್ಬಿನ ಬಾಕಿ ಹಣ, ತೀರದ ಗೋಳು
June 8, 2018ಸಿಹಿ ಬೆಳೆಯುವ ರೈತರಿಗೆ ಕಹಿ ತಿನ್ನುವ ಪರಿಸ್ಥಿತಿ ನ್ಯಾಯಾಲಯದ ಆದೇಶ ಪಾಲಿಸದ ಕಾರ್ಖಾನ ಭಾರತೀನಗರ: ಕೃಷ್ಣರಾಜ ಸಾಗರ ಜಲಾಶಯ ನಿರ್ಮಿಸಿದಾಗ ಮಂಡ್ಯ ಜಿಲ್ಲೆಯ ರೈತರ ಬದುಕು ಹಸನಾಗುತ್ತದೆ. ಅನ್ನದಾತರು ಆರ್ಥಿಕ ಬಿಕ್ಕಟ್ಟಿನಿಂದ ಹೊರ ಬಂದು ಅವರ ಬದುಕು ಪ್ರಗತಿದಾಯಕ ವಾಗಬಹುದು ಎಂಬ ದೊಡ್ಡ ಮಟ್ಟದ ನಿರೀಕ್ಷೆ ಇಡಲಾಗಿತ್ತು. ಆದರೆ, ಪ್ರಸ್ತುತದ ದಿನಗಳಲ್ಲಿ ಅದು ಸುಳ್ಳಾಗಿದೆ. ನಾಡಿಗೆ ಸಿಹಿ ಹಂಚುವ ಅನ್ನದಾತ ಇಂದು ಕಹಿ ಉಣ್ಣುವ ಪರಿಸ್ಥಿತಿ ಯಲ್ಲಿದ್ದಾನೆ. ಹೌದು ವರ್ಷ ಪೂರ್ತಿ ಜಮೀನಿನಲ್ಲಿ ದುಡಿಯುವ ರೈತರಿಗೆ ಅವರ…
70 ವರ್ಷಗಳ ಬಳಿಕ ಪಾಂಡವಪುರಕ್ಕೆ ಶಾಪ ವಿಮೋಚನೆ!
June 7, 2018ಮೇಲುಕೋಟೆಗೆ ಪ್ರಥಮ ಬಾರಿಗೆ ಮಂತ್ರಿಗಿರಿ- ಕಳಚಿದ ಸಚಿವ ಸ್ಥಾನವಿಲ್ಲದ ಕ್ಷೇತ್ರವೆಂಬ ಹಣೆಪಟ್ಟಿ ಸಕ್ಕರೆ ನಾಡಿಗೆ ಡಬಲ್ ಧಮಾಕ- ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣಗೆ ಸಚಿವ ಸ್ಥಾನ ನಾಗಯ್ಯ ಲಾಳನಕೆರೆ ಮಂಡ್ಯ: ಇದು ಪಾಂಡವಪುರ ಅಲಿಯಾಸ್ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ರಾಜಕೀಯ ವೃತ್ತಾಂತ. ಸ್ವಾತಂತ್ರ್ಯ ಬಂದ 70 ವರ್ಷಗಳ ಬಳಿಕ ಇದೀಗ ಶಾಪವಿಮೋಚನೆ ಪಡೆದ ಕ್ಷೇತ್ರ ವೆಂಬ ಕೀರ್ತಿಗೆ ಭಾಜನವಾಗುತ್ತಿರುವ ಪಾಂಡವಪುರ ರಾಜಕೀಯ ಚಿತ್ರಣ!ವಿಧಾನಸಭಾ ಕ್ಷೇತ್ರವಾಗಿದ್ದ ಪಾಂಡವ ಪುರ. 2008ರಲ್ಲಿ ನಡೆದ ಕ್ಷೇತ್ರ ವಿಂಗಡಣೆ ಯಿಂದಾಗಿ ಮೇಲುಕೋಟೆ ಕ್ಷೇತ್ರವಾಗಿ ನಾಮಕರಣಗೊಂಡಿತು….
ರಜನಿಕಾಂತ್ ಹೇಳಿಕೆ ಖಂಡಿಸಿ ಪ್ರತಿಭಟನೆ
June 7, 2018ಮಂಡ್ಯ: ಕಾವೇರಿ ನದಿ ನೀರು ವಿಚಾರದಲ್ಲಿ ತಮಿಳು ನಟ ರಜನಿಕಾಂತ್ ಅವರು ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಬುಧ ವಾರ ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯಿತು. ಬಹುಭಾಷಾ ನಟರಾಗಿ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ಚಲಚಿತ್ರ ಗಳಲ್ಲಿ ಅಭಿನಯಿಸಿರುವ ರಂಜನಿಕಾಂತ್ ಅವರು ಕನ್ನಡಿಗರ ಬಗ್ಗೆ ಕಾವೇರಿ ವಿಷಯ ದಲ್ಲಿ ಅಗೌರವಯುತವಾಗಿ, ಸ್ವಾರ್ಥಪರ ವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಗೆ ಮತ್ತೋರ್ವ ನಟ ಪ್ರಕಾಶ್ರೈ ಅವರು ಬೆಂಬಲಿಸುವಂತೆ ಹೇಳಿಕೆ ನೀಡಿರುವುದು ಖಂಡನೀಯವಾಗಿದೆ…