ಮಂಡ್ಯ

ಅಂಬರೀಶ್ ಕುಟುಂಬಕ್ಕೆ ಮಂಡ್ಯ ಟಿಕೆಟ್ ನಿರಾಕರಿಸಿದ ಹೆಚ್‍ಡಿಕೆ
ಮಂಡ್ಯ

ಅಂಬರೀಶ್ ಕುಟುಂಬಕ್ಕೆ ಮಂಡ್ಯ ಟಿಕೆಟ್ ನಿರಾಕರಿಸಿದ ಹೆಚ್‍ಡಿಕೆ

January 15, 2019

ಮಂಡ್ಯ: ದಿ|| ಮಾಜಿ ಸಚಿವ, ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅಥವಾ ಪುತ್ರ ಅಭಿಷೇಕ್‍ಗೆ ಮಂಡ್ಯ ಲೋಕಸಭಾ ಟಿಕೆಟ್ ಕೊಡಲು ಸಾಧ್ಯವಿಲ್ಲ ಎಂದು ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರೇನು ಜೆಡಿಎಸ್‍ನಲ್ಲಿರಲಿಲ್ಲ,ಅವರು ಕಾಂಗ್ರೆಸ್‍ನಲ್ಲಿ ಶಾಸಕರಾಗಿದ್ದವರು,ಈಗ ಅವರ ಪತ್ನಿಯಾಗಲಿ,ಪುತ್ರನಾಗಲಿ ನಮ್ಮಲ್ಲಿ ಟಿಕೇಟ್ ಕೇಳುವ ಪ್ರಶ್ನೆಯೇನೂ ಉದ್ಬವ ವಾಗುವುದಿಲ್ಲ ಎಂದರು. ಅಂಬರೀಶ್ ನಿಧನದ ವೇಳೆ ಅಂಬಿ ಅವರಿಗೆ ಗೌರವ ಸಲ್ಲಿಸಲು ನನ್ನ ಕರ್ತವ್ಯ ಮಾಡಿದೆ,ಜನರ ಭಾವನೆಗಳಿಗೆ ಸ್ಪಂದಿಸಿದೆ ಅಷ್ಟೆ, ಮಂಡ್ಯಕ್ಕೆ ಅಂಬರೀಶ್ ಪಾರ್ಥೀವ…

ಸಕ್ಕರೆ ನಾಡಲ್ಲಿ ಕ್ಷೀಣಿಸುತ್ತಿದೆ ಸಂಕ್ರಾಂತಿ ವೈಭವ
ಮಂಡ್ಯ

ಸಕ್ಕರೆ ನಾಡಲ್ಲಿ ಕ್ಷೀಣಿಸುತ್ತಿದೆ ಸಂಕ್ರಾಂತಿ ವೈಭವ

January 15, 2019

ಭಾರತೀನಗರ: ಹೊಸ ವರ್ಷದ ಪ್ರಪ್ರಥಮ ಹಬ್ಬ ಮಕರ ಸಂಕ್ರಾಂತಿ, ಈ ಹಬ್ಬ ಬರುವ ಎಲ್ಲಾ ಹಬ್ಬಗಳಿಗೂ ಮುನ್ನುಡಿಯಾಗಿದೆ. ಸಂಕ್ರಾಂತಿ ಎಂದಾ ಕ್ಷಣ ರೈತರು ತಮ್ಮ ಜಾನುವಾರುಗಳನ್ನು ಶೃಂಗರಿಸಿ, ದನಗಳನ್ನು ಕಿಚ್ಚಾಯಿಸುವುದು ಸಂಭ್ರಮದ ಕ್ಷಣವಾಗಿತ್ತು. ಆದರೆ ಬರದ ಕರಿನೆರಳಿನಿಂದಾಗಿ ರೈತರು ತಮ್ಮ ಜಾನು ವಾರುಗಳನ್ನು ಮಾರಿಕೊಳ್ಳುವುದರ ಮೂಲಕ ಎತ್ತುಗಳ ಸಂಖ್ಯೆ ಗಣನೀಯವಾಗಿ ವರ್ಷದಿಂದ ವರ್ಷದಿಂದ ಕಡಿಮೆಯಾದ ಹಿನ್ನೆಲೆ ಯಲ್ಲಿ ಸಂಕ್ರಾಂತಿಯ ವೈಭವ ಕ್ಷೀಣಿಸುವಂತಿದೆ. ಹಬ್ಬಗಳು ನಮ್ಮ ಸಂಸ್ಕøತಿಯ ಪ್ರತೀಕವಾಗಿವೆ. ಹಬ್ಬಗಳ ಆಚರಣೆ ನಮ್ಮ ಪೂರ್ವಿಕರು ಸ್ನೇಹ ವಿಶ್ವಾಸದಿಂದ, ಸೌಹಾ…

ಮಾದರಿ ಪಟ್ಟಣವಾಗಲಿದೆ ಪಾಂಡವಪುರ
ಮಂಡ್ಯ

ಮಾದರಿ ಪಟ್ಟಣವಾಗಲಿದೆ ಪಾಂಡವಪುರ

January 15, 2019

ಪಾಂಡವಪುರ: ಪಾಂಡವಪುರ ಪಟ್ಟಣವನ್ನು ಸಕಲ ಸೌಕರ್ಯ ನಿರ್ಮಿ ಸುವ ಮೂಲಕ ಮೈಸೂರಿಗೆ ಪರ್ಯಾಯ ಉಪಕೇಂದ್ರವನ್ನಾಗಿ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ಪಟ್ಟಣದ ಡಾ.ರಾಜಕುಮಾರ್ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನ 14.5 ಕೋಟಿ ರೂ. ವೆಚ್ಚದ ಪುರಸಭೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಅವರು ಮಾತನಾ ಡಿದರು. ಮೂರು ಬಾರಿ ಶಾಸಕನಾಗಿ, ಈಗ ಜಿಲ್ಲಾ ಉಸ್ತುವಾರಿ ಸಚಿವನಾಗಿ ಪಟ್ಟಣಕ್ಕೆ ಏನೇನು ಸೌಲಭ್ಯಗಳು ಬೇಕೆಂಬುದನ್ನು ಮನ ಗಂಡಿರುವ ತಾವು ಶಕ್ತಿ…

ದೇವಸ್ಥಾನದ ಹುಂಡಿ ಕದಿಯಲು  ಬಂದವರಿಂದ ಕಾವಲುಗಾರನ ಕೊಲೆ
ಮಂಡ್ಯ

ದೇವಸ್ಥಾನದ ಹುಂಡಿ ಕದಿಯಲು ಬಂದವರಿಂದ ಕಾವಲುಗಾರನ ಕೊಲೆ

January 15, 2019

ಮಂಡ್ಯ: ದೇವಸ್ಥಾನದಲ್ಲಿ ಹುಂಡಿ ಹಣ ಕದಿಯಲು ಬಂದ ಖದೀಮರು ಕಾವಲುಗಾರನನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದ ಮುತ್ತುರಾಯಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ನಡೆದಿದೆ. ಬಸವಯ್ಯ (55) ಎಂಬುವವರನ್ನೇ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಭಾನು ವಾರ ರಾತ್ರಿ ತೊಪ್ಪನಹಳ್ಳಿ ಗ್ರಾಮದ ಮುತ್ತುರಾಯಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಒಡೆಯಲು ಕಳ್ಳರು ಮುಂದಾಗಿ ದ್ದಾರೆ. ಈ ವೇಳೆ ತಡೆಯಲು ಬಂದ ದೇವಸ್ಥಾನದಲ್ಲಿ ತಮಟೆ ಬಡಿಯೋ ಕೆಲಸದ ಜೊತೆಗೆ ಕಾವಲುಗಾರನ ಕೆಲಸ ಮಾಡುತ್ತಿದ್ದ ಬಸವಯ್ಯ ಅವರ ಮೇಲೆ…

ಸಾಲ ಬಾಧೆ: ಮುಂದುವರೆದ ರೈತ ಆತ್ಮಹತ್ಯೆ
ಮಂಡ್ಯ

ಸಾಲ ಬಾಧೆ: ಮುಂದುವರೆದ ರೈತ ಆತ್ಮಹತ್ಯೆ

January 15, 2019

ಮಂಡ್ಯ: ಸಾಲಬಾದೆ ತಾಳಲಾರದೆ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂ ಕಿನ ಕನ್ನಲಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಗ್ರಾಮದ ದೊಡ್ಡಚನ್ನಯ್ಯನವರ ಮಗ ಕರಿಚನ್ನಯ್ಯ (49) ಎಂಬಾತನೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೈತ. ಗ್ರಾಮದಲ್ಲಿ ಒಂದೂವರೆ ಎಕರೆ ಜಮೀನು ಹೊಂದಿದ್ದ ಕರಿ ಚನ್ನಯ್ಯ ಕೃಷಿ ಚಟುವಟಿಕೆಗಾಗಿ ಮದ್ದೂರಿನ ಗ್ರಾಮೀಣ ಕೂಟದಲ್ಲಿ 50 ಸಾವಿರ, ಗ್ರಾಮದ ವಿಎಸ್‍ಎಸ್‍ಎನ್‍ಬಿಯಲ್ಲಿ 30 ಸಾವಿರ, ಖಾಸಗಿಯಾಗಿ 2.20 ಲಕ್ಷ ಸೇರಿದಂತೆ ಒಟ್ಟಾರೆ 3 ಲಕ್ಷಕ್ಕೂ ಹೆಚ್ಚು ಸಾಲ ಮಾಡಿ…

ಹುಲ್ಲಿನ ಮೆದೆಗಳಿಗೆ ಬೆಂಕಿ:  ನಾಲ್ಕು ಲಕ್ಷ ರೂ. ನಷ್ಟ
ಮಂಡ್ಯ

ಹುಲ್ಲಿನ ಮೆದೆಗಳಿಗೆ ಬೆಂಕಿ: ನಾಲ್ಕು ಲಕ್ಷ ರೂ. ನಷ್ಟ

January 15, 2019

ಮಂಡ್ಯ: ತಾಲೂಕಿನ ಕಿರಗಂದೂರು ಗ್ರಾಮದಲ್ಲಿ ಹುಲ್ಲಿನ ಮೆದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ನಾಲ್ಕು ಲಕ್ಷಕ್ಕೂ ಹೆಚ್ಚು ನಷ್ಟವಾಗಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಗ್ರಾಮದ ಸಿz್ದÉೀಗೌಡ ಎಂಬುವರ ನಾಲ್ಕು ಎಕರೆ, ಗದ್ದೇಗೌಡ ಅವರ ಎರಡು ಎಕರೆ, ಗಿರಿಜಾ ಅವರ ಎರಡು ಎಕರೆ, ಚಿಕ್ಕಯ್ಯ ಅವರ ಎರಡೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಹುಲ್ಲು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಗ್ರಾಮದ ಹೊರಭಾಗದಲ್ಲಿ ಇವರುಗಳು ಹುಲ್ಲಿನ ಮೆದೆಗಳನ್ನು ಅಕ್ಕಪಕ್ಕದಲ್ಲಿ ಹಾಕಿದ್ದರು. ಇಂದು ಮಧ್ಯಾಹ್ನ ಆಕಸ್ಮಿಕವಾಗಿ ಹುಲ್ಲಿನ ಮೆದೆಗೆ ಬೆಂಕಿ ಬಿದ್ದಿದ್ದು,…

ಅರೆಕೆರೆ ನಾಡಕಚೇರಿಯಲ್ಲಿ   ಕಂಪ್ಯೂಟರ್, ಲ್ಯಾಪ್‍ಟಾಪ್ ಕಳವು
ಮಂಡ್ಯ

ಅರೆಕೆರೆ ನಾಡಕಚೇರಿಯಲ್ಲಿ ಕಂಪ್ಯೂಟರ್, ಲ್ಯಾಪ್‍ಟಾಪ್ ಕಳವು

January 15, 2019

ಮಂಡ್ಯ: ಖದೀಮರ ತಂಡವೊಂದು ನಾಡ ಕಚೇರಿಗೆ ಕನ್ನ ಹಾಕಿ, ಕಂಪ್ಯೂಟರ್, ಲ್ಯಾಪ್‍ಟಾಪ್ ಕಳವು ಮಾಡಿ ಪರಾರಿಯಾಗಿರುವ ಪ್ರಕರಣ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಕಳ್ಳರು ನಾಡಕಚೇರಿಯ ಬಾಗಿಲು ಮುರಿದು ಒಳನುಗ್ಗಿ ಈ ಕೃತ್ಯ ಎಸಗಿದ್ದಾರೆ. ಕಚೇರಿಯಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಕೆಲ ಫೈಲ್‍ಗಳು ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಅರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಕೂಡ ಭೇಟಿ…

ನನ್ನ ರಾಜಕೀಯ ಭವಿಷ್ಯ ವರಿಷ್ಠರ ನಿರ್ಧಾರದಂತೆ
ಮಂಡ್ಯ

ನನ್ನ ರಾಜಕೀಯ ಭವಿಷ್ಯ ವರಿಷ್ಠರ ನಿರ್ಧಾರದಂತೆ

January 13, 2019

ಭಾರತೀನಗರ: ನನ್ನ ರಾಜಕೀಯ ಭವಿಷ್ಯದ ಬಗ್ಗೆ ಪಕ್ಷದ ವರಿಷ್ಠರು ನಿರ್ಧಸಲಿದ್ದು, ಅವರ ಆದೇಶ ದಂತೆ ನಡೆಯುತ್ತೇನೆ ಎಂದು ಚಿತ್ರನಟ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಭಾರತೀನಗರದ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣನವರ ನಿವಾಸದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಶಾಸಕರು, ಜನಪ್ರತಿನಿಧಿಗಳು, ಕಾರ್ಯ ಕರ್ತರು ಮುಖಂಡರು ಒತ್ತಾಯಿಸುತ್ತಿದ್ದು, ಅವರ ಒತ್ತಾಯವನ್ನು ಗೌರವಿಸುತ್ತೇನೆ. ಆದರೂ ಸ್ಪರ್ಧೆಯ ಬಗ್ಗೆ ಪಕ್ಷದ ವರಿಷ್ಠರದ್ದೇ ಅಂತಿಮ ತೀರ್ಮಾನ ಎಂದು ಹೇಳಿದರು. ಅಪಸ್ವರ ಸಹಜ: ರಾಜ್ಯದಲ್ಲಿ…

ಹೆಚ್‍ಡಿಕೆ ಬಗ್ಗೆ ಹಗುರ ಮಾತು ಸಲ್ಲದು
ಮಂಡ್ಯ

ಹೆಚ್‍ಡಿಕೆ ಬಗ್ಗೆ ಹಗುರ ಮಾತು ಸಲ್ಲದು

January 13, 2019

ಮಂಡ್ಯ: ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಒಬ್ಬ ಕ್ಲರ್ಕ್ ಇದ್ದಂತೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ಒಂದು ರಾಜ್ಯದ ಮುಖ್ಯಮಂತ್ರಿಗಳ ಕುರಿತು ಹಗುರವಾಗಿ ಮಾತ ನಾಡಬಾರದು ತಿರುಗೇಟು ನೀಡಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಹೇಳಿಕೆ ಖಂಡಿಸಿದರಲ್ಲದೆ, ಮುಖ್ಯ ಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಉತ್ತಮ ಕೆಲಸ ಮಾಡು ತ್ತಿದ್ದು, ಪ್ರಧಾನಿ ಏಕೆ ಪದೇ ಪದೇ ಕರ್ನಾಟಕದ ಬಗ್ಗೆಯೇ ಮಾತನಾಡುತ್ತಾರೆ. ದೇಶದ ಪ್ರಧಾನಮಂತ್ರಿ ಒಬ್ಬ ಮುಖ್ಯಮಂತ್ರಿ…

ಕಳವಿಗೆ ಯತ್ನಿಸಿದ ಕಳ್ಳರಿಂದ ಮಾಲೀಕರಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ
ಮಂಡ್ಯ

ಕಳವಿಗೆ ಯತ್ನಿಸಿದ ಕಳ್ಳರಿಂದ ಮಾಲೀಕರಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ

January 13, 2019

ಕೆ.ಆರ್.ಪೇಟೆ: ಬಾಗಿಲು ಮುರಿದು ಒಳನುಗ್ಗಲು ಖದೀಮರು ಯತ್ನಿಸುತ್ತಿದ್ದ ವೇಳೆ ಬಂದ ಮನೆ ಮಾಲೀ ಕರಿಗೆ ಮಾರಕಾಸ್ತ್ರ ಗಳಿಂದ ಬೆದರಿಸಿ ಪರಾರಿಯಾಗಿ ರುವ ಘಟನೆ ಶನಿವಾರ ಸಂಜೆ ಪಟ್ಟಣದ ನಡೆದಿದೆ. ಪಟ್ಟಣದ ಹೊಸ ಕಿಕ್ಕೇರಿ ರಸ್ತೆಯ ನಿವಾಸಿಗಳಾದ ಡಾ.ಪಿ.ಎನ್.ಎನ್.ಗುಪ್ತ ಹಾಗೂ ಪುತ್ರ ಡಾ. ಬದ್ರಿನಾಥ್ ಪಟ್ಟಣದ ಬಸ್ ನಿಲ್ದಾಣದ ಎದುರು ಖಾಸಗಿ ಕ್ಲಿನಿಕ್ ನಡೆಸುತ್ತಿದ್ದು, ಕೆಲಸ ಮುಗಿಸಿ ನಿತ್ಯ ಏಳು ಗಂಟೆಗೆ ಮನೆ ಬರುವುದು ವಾಡಿಕೆ. ಆದರೆ ಈ ದಿನ ಡಾ.ಬದ್ರಿನಾಥ್ ಮೈಸೂರಿಗೆ ಹೋಗಬೇಕಾಗಿದ್ದ ಕಾರಣ ಒಂದು ಗಂಟೆ…

1 55 56 57 58 59 108
Translate »