ಪಾಂಡವಪುರ: ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕಣಿವೆಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜಮೀನಿನಲ್ಲಿ ತರಕಾರಿ ಬೇಸಾಯ ಮಾಡುತ್ತಿದ್ದರು. ಇದಕ್ಕಾಗಿ ಜಮೀನಿನಲ್ಲಿ ಕೊರೆಸಿದ್ದ ಎರಡೂ ಬೋರ್ವೆಲ್ನಲ್ಲಿ ನೀರು ಬಾರದೆ ನಷ್ಟ ಅನುಭವಿಸಿದ್ದರು. ಅಲ್ಲದೆ 5 ಲಕ್ಷ ರೂ. ಕೈಸಾಲ ಮಾಡಿದ್ದರು ಎನ್ನಲಾಗಿದೆ. ಸಾಲಗಾರರ ಒತ್ತಡ ತಾಳಲಾರದೇ ತಮ್ಮ ಜಮೀನಿನ ಬಳಿ ಮರಕ್ಕೆ ಶುಕ್ರವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾ ಗಿದ್ದಾರೆ. ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ
ಕಿಡ್ನಿ ಮಾರಾಟ ಜಾಲದ ವಂಚನೆ: ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ
January 10, 2019ಮಳವಳ್ಳಿ : ಕಿಡ್ನಿ ಮಾರಾಟ ಜಾಲಕ್ಕೆ ಸಿಲುಕಿ ವಂಚನೆಗೊಳಗಾದ ಮಹಿಳೆಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಮಳವಳ್ಳಿಯ ಗಂಗಾಮತ ಬೀದಿ ನಿವಾಸಿ ವೆಂಕಟಮ್ಮ (48) ಎಂಬುವರೇ ಕಿಡ್ನಿ ಮಾರಾಟ ಜಾಲ ವಂಚನೆ ಗೊಳಗಾಗಿ ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ಮಳವಳ್ಳಿ ಪಟ್ಟಣದಲ್ಲಿ ವೆಂಕಟಮ್ಮ ಮಾತ್ರವಲ್ಲದೆ, ಮತ್ತೊಬ್ಬ ಮಹಿಳೆಯನ್ನೂ ಸಹ ಈ ಜಾಲದ ಮಹಿಳೆಯೋರ್ವಳು ವಂಚಿಸಿದ್ದಾಳೆ ಎಂಬುದು ಕೂಡ ಬೆಳಕಿಗೆ ಬಂದಿದೆ. ಸೊಪ್ಪು, ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ವೆಂಕಟಮ್ಮ, ಬೇರೆಯ ವರ ಜಮೀನನ್ನು ಗುತ್ತಿಗೆಗೆ ಪಡೆದು…
ಜಿಲ್ಲೆಯಲ್ಲಿ ಭಾರತ್ ಬಂದ್ ವಿಫಲ
January 10, 2019ಮಂಡ್ಯ: ಕೇಂದ್ರದ ಕಾರ್ಮಿಕ ನೀತಿಗಳು, ರಸ್ತೆ ಸುರಕ್ಷತಾ ಕಾಯ್ದೆ ಗಳನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ 2ನೇ ದಿನದ ಭಾರತ್ ಬಂದ್ ಜಿಲ್ಲೆಯ ವಿಫಲವಾಯಿತು. ನಗರದ ಪೇಟಿ ಬೀದಿ, ಜೈನರ ಬೀದಿ, ವಿ.ವಿ. ರಸ್ತೆ, ಆರ್.ಪಿ. ರಸ್ತೆ, ಗುತ್ತಲು ರಸ್ತೆ, ನೂರಡಿ ರಸ್ತೆ ಸೇರಿದಂತೆ ನಗರ ಮತ್ತು ಜಿಲ್ಲಾದ್ಯಂತ ಎಲ್ಲಾ ವರ್ಗದ ವ್ಯಾಪಾರಿ ಗಳು ತಮ್ಮ ಅಂಗಡಿ-ಮುಂಗಟ್ಟು ಗಳನ್ನು ಎಂದಿನಂತೆ ತೆರೆದು ವ್ಯಾಪಾರ ನಡೆಸಿದರು. ಎಂದಿನಂತೆ ಸಾರಿಗೆ ಬಸ್…
ಹಣದಾಸೆಗೆ ಕಿಡ್ನಿ ಮಾರಲು ಯತ್ನಿಸಿದ್ದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ
January 10, 2019ಮಳವಳ್ಳಿ: ಹಣದ ಆಸೆಗೆ ಕಿಡ್ನಿ ಮಾರಲು ಮಧ್ಯವರ್ತಿಗಳಿಗೆ ಕಮಿಷನ್ ನೀಡಿ ಮೋಸ ಹೋದ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಶಂಕಾಸ್ಪದ ಘಟನೆ ನಡೆದಿದೆ. ಪಟ್ಟಣದ ಗಂಗಾಮತ ಬೀದಿಯ ವೆಂಕಟಮ್ಮ(48) ಆತ್ಮಹತ್ಯೆಗೆ ಶರಣಾದ ಮಹಿಳೆ. ಇವರು ಸೊಪ್ಪು ಮಾರಿಕೊಂಡು ಜೀವನ ಸಾಗಿಸುತ್ತಿದ್ದರು. ಮನೆಯಲ್ಲಿನ ತೊಂದರೆಗಳನ್ನೆಲ್ಲಾ ತೀರಿಸಿಕೊಳ್ಳಲು ಕಿಡ್ನಿ ಮಾರುವ ನಿರ್ಧಾರಕ್ಕೆ ಬಂದಿದ್ದರು ಎನ್ನ ಲಾಗಿದೆ. ಪರಿಚಯಸ್ಥೆ ಮಹಿಳೆಯೊಬ್ಬರೂ ಕಿಡ್ನಿ ಮಾರಲು ಮುಂದಾದರೇ 30 ಲಕ್ಷ ರೂ.ಗಳನ್ನು ಕೊಡಿಸುವುದಾಗಿ ಪುಸ ಲಾಯಿಸಿ ವೆಂಕಟಮ್ಮರಿಂದ ಕಮಿಷನ್ ಹಣವಾಗಿ 3 ಲಕ್ಷ…
ಸಾಲದ ಬಾಧೆಗೆ ಟೈಲರ್ ಆತ್ಮಹತ್ಯೆ
January 10, 2019ಕೆ.ಆರ್.ಪೇಟೆ: ಸಾಲದ ಬಾಧೆ ತಾಳಲಾರದೆ ವ್ಯಕ್ತಿ ಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಪಟ್ಟಣದ ನಡೆದಿದೆ. ಮೂಲತಃ ಬೆಡದಹಳ್ಳಿ ಗ್ರಾಮದ ಟೈಲರ್ ದೇವರಾಜು (50) ಆತ್ಮಹತ್ಯೆ ಮಾಡಿಕೊಂಡವರು. ಇವರು ಹಲವು ವರ್ಷಗಳಿಂದ ಪಟ್ಟಣದ ಹಳೆ ವಿಜಯಬ್ಯಾಂಕ್ ರಸ್ತೆ ಯಲ್ಲಿ ಟೈಲರ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸು ತ್ತಿದ್ದರು. ತಮ್ಮ ಬೆಡದಹಳ್ಳಿ ಊರಿನಲ್ಲಿ ಜಮೀನು ಹೊಂದಿರುವ ದೇವರಾಜು ಅವರು ಬೇಸಾಯಕ್ಕೆ ವಿಜಯಬ್ಯಾಂಕಿನಲ್ಲಿ ಬೇಸಾಯ ಸಾಲ ಹಾಗೂ ಟೈಲರ್ ವೃತ್ತಿಗಾಗಿ ಖಾಸಗಿ ವ್ಯಕ್ತಿಗಳಿಂದ ಲಕ್ಷಾಂತರ ರೂ. ಕೈ…
ಬೋನಿಗೆ ಬಿದ್ದ ಚಿರತೆ
January 10, 2019ಶ್ರೀರಂಗಪಟ್ಟಣ: ರೈತರ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಕೊನೆಗೂ ತಾಲೂಕಿನ ಶ್ರೀನಿವಾಸ ಅಗ್ರಹಾರ ಬಳಿ ಇರಿಸಿದ್ದ ಬೋನಿಗೆ ಬಿದ್ದಿದೆ. ಒಂದುವರೆ ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಒಂದು ವಾರದಿಂದ ಗ್ರಾಮದ ಹೊರ ವಲಯದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಈ ಚಿರತೆ ಕುರಿ, ಮೇಕೆ, ಹಸುಗಳ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ಇದರಿಂದ ರೈತರು ಆತಂಕಗೊಂಡಿ ದ್ದರು. ಇದೀಗ ಅರಣ್ಯ ಇಲಾಖೆಯು ಚಿರತೆಯನ್ನು ಹಿಡಿಯುವಲ್ಲಿ…
ಪಾಂಡವಪುರ ಪುರಸಭೆ ಅಧಿಕಾರಿಗಳು, ಸದಸ್ಯರ ಸಭೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕ್ರಮ: ಸಚಿವ ಪುಟ್ಟರಾಜು
January 3, 2019ರಸ್ತೆ, ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ಶುಶ್ರೂಷಕರ, ಪೌರಕಾರ್ಮಿಕ ಸಮಸ್ಯೆ ಪರಿಹರಿಸಲು ಸಚಿವರ ಭರವಸೆ ಪಾಂಡವಪುರ:ಪಾಂಡವಪುರ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ಪಟ್ಟಣದ ಪುರಸಭೆ ಕಚೇರಿ ಸಭಾಂ ಗಣದಲ್ಲಿ ಪಟ್ಟಣದ ಅಭಿವೃದ್ಧಿ ಸಂಬಂಧ ನಡೆದ ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಪಟ್ಟಣದ ಪುರಸಭೆ ವ್ಯಾಪ್ತಿ ಯಲ್ಲಿ ನಡೆಯಬೇಕಿದ್ದ ಅಭಿವೃದ್ಧಿ ಕೆಲಸಗಳ ಕ್ರಿಯಾ ಯೋಜನೆ ತಯಾರಿಸಬೇಕು. ಕೂಡಲೇ,…
ರಾಗಿ, ತೆಂಗಿನ ಫಸಲಿಗೆ ಕಿಡಿಗೇಡಿಗಳಿಂದ ಬೆಂಕಿ
January 3, 2019ಕೆ.ಆರ್.ಪೇಟೆ: ತೆಂಗಿನ ಮರಗಳು ಹಾಗೂ ರಾಗಿ ಫಸಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಬೆಂಕಿಗೆ ಆಹುತಿಯಾಗಿರುವ ಘಟನೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಂಗಣ್ಣ, ಜಯರಾಮೇಗೌಡ, ಜವರೇಗೌಡ, ಮಹೇಶ್, ಮಂಜಮ್ಮ ಸೇರಿದಂತೆ ಸುಮಾರು ಏಳೆಂಟು ಮಂದಿಗೆ ಸೇರಿದ ತೆಂಗಿನ ಮರಗಳು ಮತ್ತು ರಾಗಿ ಫಸಲಿನ ಮೆದೆಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಹೋಗಿದೆ. ಈ ಬಗ್ಗೆ ತಿಳಿಯುತ್ತಿದ್ದಂತೆಯೇ ತಾಲೂಕು ಪಂಚಾಯಿತಿ ಸದಸ್ಯ ಬಿ.ಎನ್.ದಿನೇಶ್ ಅವರು ಟ್ಯಾಂಕರ್ ಮೂಲಕ…
ಅಂಬೇಡ್ಕರ್ ಪುತ್ಥಳಿ ಬಳಿ ಅಂತಧರ್ಮೀಯ ವಿವಾಹ
January 3, 2019ಮಂಡ್ಯ, ಜ.2- ನಗರದ ಜಿಲ್ಲಾಧಿಕಾರಿ ಕಚೇರಿಯ ಕಾವೇರಿವನದಲ್ಲಿರುವ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಎದುರು ಬುಧವಾರ ಅಂತರ್ಧರ್ಮೀಯ ಪ್ರೇಮಿಗಳ ವಿವಾಹ ನಡೆಯಿತು. ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದ ಹಿಂದೂ ಧರ್ಮದ ಆದಿಕರ್ನಾಟಕ ಸಮು ದಾಯದ ಅನುಪ್ರಿಯಾ(19) ಮತ್ತು ಮುಸ್ಲಿಂ ಧರ್ಮದ ಸಲ್ಮಾನ್ ಅವರು ಪ್ರಗತಿಪರ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಐದಾರು ವರ್ಷದಿಂದ ಪ್ರೀತಿಸುತ್ತಿದ್ದರು. ಹೀಗಾಗಿ ಎರಡೂ ಕುಟುಂಬಗಳ ಒಪ್ಪಿಗೆಯಿಂದ ಬುಧವಾರ ಮದುವೆ ನಡೆದಿದೆ ಎನ್ನಲಾಗಿದೆ. ವಿವಾಹವು ಬುದ್ದಿಸ್ಟ್ಸ್ ಆಫ್ ಇಂಡಿಯಾ ನೇತೃತ್ವದಲ್ಲಿ…
ಹೆಣ್ಣು ಮಕ್ಕಳ ರಕ್ಷಣೆ ಜಾಗೃತಿ ಜಾಥಾ ಭ್ರೂಣ ಹತ್ಯೆ ತಡೆಗೆ ಹೋರಾಟ ಅಗತ್ಯ: ಡಿಎಚ್ಓ
January 3, 2019ಮಂಡ್ಯ, ಜ.2- ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞರ ಸಂಘ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಜಾಗೃತಿ ಜಾಥಾ ನಡೆಸಲಾಯಿತು. ನಗರದ ಡಿಎಚ್ಓ ಕಚೇರಿ ಆವರಣ ದಲ್ಲಿ ಡಿಎಚ್ಓ ಡಾ.ಎಚ್.ಪಿ.ಮಂಜೇ ಗೌಡ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಹೆಣ್ಣು ಮಕ್ಕಳ ರಕ್ಷಣೆಗಾಗಿ ದೇಶಾದ್ಯಂತ ಇಂದು ವಾಕಥಾನ್ ಮೂಲಕ ಅರಿವು ಮೂಡಿ ಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಂಡು, ಹೆಣ್ಣು ಮಕ್ಕಳ ಅನುಪಾತದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ…