ಶ್ರೀರಂಗಪಟ್ಟಣ: ತಾಲೂಕಿನ ನಗುವನಹಳ್ಳಿ ಗ್ರಾಮದ ಲಕ್ಷ್ಮಿನಾರಾಯಣ ಸ್ವಾಮಿ ದೇವಾಲಯ ಎರಡು ತಿಂಗಳಿಂದ ಬಂದ್ ಆಗಿದ್ದು, ಭಕ್ತರಲ್ಲಿ ನಿರಾಸೆ ಮೂಡಿಸಿದೆ. ಮ್ಯೆಸೂರು ಸಚ್ಚಿದಾನಂದ ಆಶ್ರಮದ ಸುಪರ್ದಿಯಲ್ಲಿರುವ ದೇವಾಲಯವನ್ನು ದಿಢೀರ್ ಮುಚ್ಚಲಾಗಿದೆ. ಇದರಿಂದ ದೇವಾ ಲಯದಲ್ಲಿ ಪೂಜಾ ಕೈಂಕರ್ಯ ಸ್ಥಗಿತ ಗೊಂಡಿದ್ದು, ಭಕ್ತರ ಆಕ್ರೋಶಕ್ಕೆ ಕಾರಣ ವಾಗಿದೆ. ದೇಗುಲ 1972ರಲ್ಲಿ ಮೇಲು ಕೋಟೆ ರಾಮದೇವರ ಮಠದ ನಾರಾಯಣ ಸ್ವಾಮಿ ಎಂಬುವರಿಂದ ಸ್ಥಾಪನೆಯಾಗಿದೆ. ದೇಗುಲ ನಿರ್ಮಾಣಕ್ಕೆ ಸ್ಥಳೀಯರಾದ ಬಸವರಾಜು ಮತ್ತು ಜಯಲಕ್ಷ್ಮಿ ದಂಪತಿ ಅಗತ್ಯ ಸಂಪನ್ಮೂಲ ಒದಗಿಸಿದ್ದು, 8 ಎಕರೆ ಜಮೀನನ್ನು…
ಗಣಿಗಾರಿಕೆ ಸ್ಥಗಿತ: ಕೂಲಿ ಕಾರ್ಮಿಕರ ಬದುಕು ಅತಂತ್ರ
December 13, 2018ಪಾಂಡವಪುರ: ಬೇಬಿ ಬೆಟ್ಟದ ಸುತ್ತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ ಕಲ್ಲುಕ್ವಾರೆಯನ್ನೇ ನಂಬಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಆತ್ಮ ಹತ್ಯೆಯ ಹಾದಿ ಹಿಡಿಯುವಂತಾಗಿದೆ ಎಂದು ಸುತ್ತ್ತಲಿನ ಗ್ರಾಮಗಳ ಗ್ರಾಮಸ್ಥರು ದೂರಿದ್ದಾರೆ. ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಬೇಬಿ ಬೆಟ್ಟದ ಸುತ್ತ್ತಲಿನ ಬೇಬಿ, ಶಿಂಡಬೋಗನಹಳ್ಳಿ, ಕಾವೇರಿ ಪುರ ಹಾಗೂ ಹೊನಗಾನಹಳ್ಳಿ ಗ್ರಾಮಸ್ಥರು ಜಿಲ್ಲಾಡಳಿತ ನಮ್ಮ ಬದುಕನ್ನು ಗಮನದಲ್ಲಿಟ್ಟುಕೊಂಡು ಕಲ್ಲುಕ್ವಾರೆ ಕೆಲಸಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಬೇಬಿಬೆಟ್ಟದ ಸುತ್ತ್ತಲಿನ ಗ್ರಾಮಗಳಾದ ಕಾವೇರಿಪುರ, ಬೇಬಿ,…
ಮುಂದಿನ ಚುನಾವಣೆಗೂ ನಾನೇ ಜೆಡಿಎಸ್ ಅಭ್ಯರ್ಥಿ: ಸಂಸದ ಶಿವರಾಮೇಗೌಡ ವಿಶ್ವಾಸ
December 6, 2018ಮಂಡ್ಯ: ಮುಂದಿನ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿಯೂ ನಾನೇ ಜೆಡಿಎಸ್ ಅಭ್ಯರ್ಥಿ. ನನಗೇ ಟಿಕೆಟ್ ನೀಡುವಂತೆ ದೇವೇಗೌಡರನ್ನು ಕೇಳುತ್ತೇನೆ ಎಂದು ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಭಾರಿ ಬಹುಮತದ ಗೆಲುವು ಸಾಧಿಸಿರುವ ಎಲ್.ಆರ್.ಶಿವರಾಮೇಗೌಡ ಹೇಳಿದರು. ನಗರದ ಡಿಸಿ ಕಚೇರಿಯಲ್ಲಿ ಬುಧವಾರ ನೂತನ ಜನಸಂಪರ್ಕ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸುದ್ದಿ ಗಾರರೊಂದಿಗೆ ಅವರು ಮಾತನಾಡಿದರು. ಐದೂವರೇ ತಿಂಗಳಿಗೇ ವಾಪಸು ಹೋಗಲು ಅಖಾಡಕ್ಕೆ ಬಂದಿಲ್ಲ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿಯೂ ನನಗೇ ಜೆಡಿಎಸ್ ಟಿಕೆಟ್ ನೀಡಬೇಕು ಎಂದು ಕೇಳುತ್ತೇನೆ. ನಾನು…
ಜಿಲ್ಲಾದ್ಯಂತ ಅಂಬಿ 12ನೇ ದಿನದ ಕಾರ್ಯ ಆಚರಣೆ
December 6, 2018ಮಂಡ್ಯ: ದಿವಂಗತ ಮಾಜಿ ಸಚಿವ ರೆಬಲ್ ಸ್ಟಾರ್ ಅಂಬರಿಶ್ ಅವರ 12ನೇ ದಿನದ ಪುಣ್ಯ ತಿಥಿಯನ್ನು ಅಂಬರೀಶ್ ಅಭಿಮಾನಿಗಳು ಜಿಲ್ಲಾದ್ಯಂತ ಬುಧವಾರ ಆಚರಿಸಿದರು. ಮಂಡ್ಯ, ಮದ್ದೂರು, ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕು ಕೇಂದ್ರಗಳು ಮಾತ್ರವಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಅಂಬ ರೀಶ್ ತಿಥಿ ಕಾರ್ಯದ ವಿಧಿ ವಿಧಾನಗಳನ್ನು ಆಚರಿಸುವ ಮೂಲಕ ಅನ್ನದಾನ ನಡೆಸಿರುವ ಬಗ್ಗೆ ವರದಿಯಾಗಿದೆ. ಮಂಡ್ಯ ತಾಲೂಕಿನ ಉಪ್ಪುರುಕನ ಹಳ್ಳಿ ಯಲ್ಲಿ ಬಿಜೆಪಿ ಶಿವಕುಮಾರಾಧ್ಯ ಮತ್ತು ಪಕ್ಷಾತೀತವಾಗಿ ಅಂಬಿ ಅಭಿಮಾನಿಗಳು ಅಂಬರೀಶ್ ಭಾವಚಿತ್ರವನ್ನಿಟ್ಟು ತಿಥಿ ಕಾರ್ಯ ಮಾಡಿರುವ ಅಭಿಮಾನಿಗಳು….
ಬಸ್ ದುರಂತ: ವದೇಸಮುದ್ರದಲ್ಲಿ ಸಾಮೂಹಿಕ ತಿಥಿ ಕಾರ್ಯ
December 6, 2018ಪಾಂಡವಪುರ: ತಾಲೂಕಿನ ಕನಗನಮರಡಿ ಬಳಿ ಬಸ್ ದುರಂತದಲ್ಲಿ ಸಾವನ್ನಪ್ಪಿದ ವದೇಸಮುದ್ರ ಗ್ರಾಮದ 8 ಮಂದಿಯ ತಿಥಿ ಕಾರ್ಯ ಬುಧವಾರ ಸಾಮೂಹಿಕವಾಗಿ ನಡೆಯಿತು. ವದೇ ಸಮುದ್ರ ಗ್ರಾಮದ ಚಿಕ್ಕಯ್ಯ, ಕರಿಯಪ್ಪ, ಪ್ರಶಾಂತ್, ರವಿಕುಮಾರ್, ಕಮಲಮ್ಮ, ರತ್ನಮ್ಮ, ಶಶಿಕಲಾ, ಪವಿತ್ರ ಹಾಗೂ ಚಿಕ್ಕಕೊಪ್ಪಲು ಗ್ರಾಮದ ಕೆಂಪಯ್ಯ, ಪಾಪಣ್ಣಗೌಡ ಹಾಗೂ ದಿವ್ಯ ಅವರ ಕಾರ್ಯ ನಡೆಯಿತು. ಬೆಳಿಗ್ಗೆ 11.30ರ ಸುಮಾರಿಗೆ ಮೃತರ ಸಂಬಂಧಿಕರು ತಮ್ಮ ಮನೆಗಳಿಂದ ತಂದಿದ್ದ ತಿಂಡಿ, ತಿನಿಸುಗಳನ್ನು ಸಮಾಧಿಯ ಮೇಲೆ ಎಡೆ ಇಟ್ಟು ತಮ್ಮ ಸಂಪ್ರದಾಯ ದಂತೆ ಸಾಮೂಹಿಕವಾಗಿ…
ಸಂಘಟಿತ ಹೋರಾಟದಿಂದ ಗಂಗಾಮತಸ್ಥರ ಅಭಿವೃದ್ಧಿ ಸಾಧ್ಯ
December 6, 2018ಮಂಡ್ಯ: ಗಂಗಾಮತಸ್ಥರು ಸಾಮಾ ಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅಭಿವೃದ್ದಿ ಹೊಂದಬೇಕಾದರೆ ಸಂಘಟಿತ ಹೋರಾಟ ನಡೆಸಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.ನಗರದ ಗಾಂಧಿ ಭವನದಲ್ಲಿ ಬುಧವಾರ ಜಿಲ್ಲಾ ಗಂಗಾಮತಸ್ಥರ ಸಂಘ ಆಯೋ ಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾ ಟಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿಯೂ ಮೀನುಗಾರರ ಬೇಡಿಕೆ ಈಡೇರಿಲ್ಲ. ಅವರಿಗೆ ದೊರೆಯ ಬೇಕಿದ್ದ ಸೌಲಭ್ಯಗಳು ಸಿಗದೆ ಉಳ್ಳವರ ಪಾಲಾಗುತ್ತಿವೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಬೇಕಾದರೆ ಸಂಘಟಿತ ಹೋರಾಟ ನಡೆಸಬೇಕು. ಆ ಮೂಲಕ ಆಳುವ ವರ್ಗದ…
ರಾತ್ರೋರಾತ್ರಿ ಮಂಡ್ಯ ಮನೆ ಖಾಲಿ ಮಾಡಿದ ಮಾಜಿ ಸಂಸದೆ ರಮ್ಯಾ
December 4, 2018ಮಂಡ್ಯ: ಮಾಜಿ ಸಂಸದೆ ರಮ್ಯಾ, ಮಂಡ್ಯ ವಿದ್ಯಾನಗರದ ಕೆ.ಆರ್.ರಸ್ತೆಯಲ್ಲಿದ್ದ ತಮ್ಮ ಬಾಡಿಗೆ ಮನೆ ಯನ್ನು ಭಾನುವಾರ ರಾತ್ರೋರಾತ್ರಿ ಖಾಲಿ ಮಾಡಿದ್ದಾರೆ. 2013ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದ ರಮ್ಯಾ ಅವರು, ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ಸಾದತ್ ಆಲಿಖಾನ್ ಅವರ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಆದರೆ ಕಳೆದ ಭಾನುವಾರ ತಡರಾತ್ರಿ 2 ಲಾರಿಗಳಲ್ಲಿ ಮನೆಯಲ್ಲಿದ್ದ ಪೀಠೋಪಕರಣಗಳು ಸೇರಿದಂತೆ ಇತರೆ ಸಾಮಾನು ಸರಂಜಾಮುಗಳನ್ನು ಬೆಂಗಳೂರಿಗೆ ಸಾಗಿಸಿದ್ದಾರೆ. ಭಾನುವಾರ ರಾತ್ರಿ ಹತ್ತು ಗಂಟೆ ಯಿಂದ…
ಸಂಗಮದಲ್ಲಿ ಅಭಿಷೇಕ್ಗೌಡರಿಂದ ಅಸ್ಥಿ ವಿಸರ್ಜನೆ ಕಾವೇರಿ ಮಡಿಲಲ್ಲಿ ಅಂಬಿ ಅಸ್ಥಿ ಲೀನ
November 29, 2018ಮಂಡ್ಯ: ಅನಾರೋಗ್ಯದಿಂದ ಶನಿವಾರ ಅಗಲಿದ ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಸ್ಥಿಯನ್ನು ಶ್ರೀರಂಗಪಟ್ಟಣದಲ್ಲಿರುವ ಸಂಗಮದಲ್ಲಿ ಬುಧವಾರ ವಿಸರ್ಜನೆ ಮಾಡಲಾಯಿತು. ಮಧ್ಯಾಹ್ನ ಬೆಂಗಳೂರಿನಿಂದ ಮೂರು ಮಡಿಕೆಗಳಲ್ಲಿ ತರಲಾಗಿದ್ದ ಅಸ್ಥಿಯನ್ನು ಶಾಸ್ತ್ರೋಕ್ತವಾಗಿ ಅಂಬರೀಶ್ ಪುತ್ರ ಅಭಿಷೇಕ್ ಗೌಡ ಅವರು ವಿಸರ್ಜನೆ ಮಾಡಿದರು. ಒಟ್ಟು ಆರು ಮಡಿಕೆಗಳಲ್ಲಿ ಅಂಬರೀಶ್ ಅಸ್ಥಿಯನ್ನು ಸಂಚಯನ ಮಾಡಲಾಗಿತ್ತು. ಈ ಪೈಕಿ ಮೂರು ಮಡಿಕೆಗಳಲ್ಲಿರುವ ಅಸ್ಥಿ ಯನ್ನು ಇಂದು ಶ್ರೀರಂಗಪಟ್ಟಣದ ಸಂಗಮದಲ್ಲಿ ವಿಸರ್ಜನೆ ಮಾಡಲಾಯಿತು. ಇನ್ನುಳಿದ 3 ಮಡಿಕೆಯಲ್ಲಿರುವ ಅಸ್ಥಿಯ ಪೈಕಿ ಒಂದು ಬೆಂಗಳೂರಿನ…
ಬರಪೀಡಿತ ತಾಲೂಕುಗಳಲ್ಲಿ ನರೇಗಾ ಸಮರ್ಪಕ ಅನುಷ್ಠಾನಗೊಳಿಸಿ
November 29, 2018ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಾವೇದ್ ಅಖ್ತರ್ ಸೂಚನೆ ಮಂಡ್ಯ: ಬರಪೀಡಿತ ತಾಲೂಕುಗಳಲ್ಲಿ ರಾಷ್ಟ್ರೀಯ ಗ್ರಾಮೀಣಾ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಾವೇದ್ ಅಖ್ತರ್ ಸೂಚಿಸಿದರು. ನಗರದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯಾವ ತಾಲೂಕುಗಳಲ್ಲಿ ಕನಿಷ್ಠ ಮಳೆ ಯಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಕುಡಿಯುವ…
ಬೆಳೆ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ
November 29, 2018ಮದ್ದೂರು: ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಬುಧವಾರ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ ನಡೆಯಿತು.ತಾಲೂಕು ಕಚೇರಿಯ ಮುಂಭಾಗ ಸಮಾವೇಶಗೊಂಡ ವೇದಿಕೆಯ ಕಾರ್ಯ ಕರ್ತರು, ರೈತರು ಬೆಳೆ ಪರಿಹಾರ ನೀಡುವಂತೆ ಘೋಷಣೆ ಕೂಗಿದರು. ತಾಲೂಕಿನ ಕೊಪ್ಪದ ಎನ್ಎಸ್ಎಲ್ ಕಾರ್ಖಾನೆಯ ಕಲುಷಿತ ನೀರು ನದಿಗೆ ಸೇರಿ ನೀರು ಕಲುಷಿತಗೊಂಡಿರುವುದ ರಿಂದ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಹಾಗೂ ಪರಿಸರ ಮಾಲಿನ್ಯ ಅಧಿಕಾರಿಗಳು ನದಿಯ ನೀರನ್ನು ಮುಂದಿನ ಆದೇಶವ ರೆಗೆ ಬಳಸದಂತೆ ರೈತರಿಗೆ ಸೂಚಿಸಿದ್ದಾರೆ. ಇದ್ದರಿಂದ ಶಿಂಷಾನದಿಯ ಎಡ ಮತ್ತು…