ಮಂಡ್ಯ

ಸಾವಿಗೆ ಆಹ್ವಾನಿಸಿದ ಮೊಬೈಲ್ ಸಂಭಾಷಣೆ
ಮಂಡ್ಯ

ಸಾವಿಗೆ ಆಹ್ವಾನಿಸಿದ ಮೊಬೈಲ್ ಸಂಭಾಷಣೆ

October 29, 2018

ನಿಂತಿದ್ದ ಬೈಕ್‍ಗೆ ಮತ್ತೊಂದು ಬೈಕ್ ಡಿಕ್ಕಿ: ನಿವೃತ್ತ ಶಿಕ್ಷಕ ಸಾವು ಮಳವಳ್ಳಿ: ನಿಂತಿದ್ದ ಬೈಕ್‍ಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ಮಳವಳ್ಳಿ ಪಟ್ಟಣದ ಹೊರವಲಯದಲ್ಲಿ ಶನಿವಾರ ನಡೆದಿದೆ. ಪಟ್ಟಣದ ಎನ್‍ಇಎಸ್ ಬಡಾವಣೆಯ ನಿವಾಸಿ ಹಾಗೂ ನಿವೃತ್ತ ಶಿಕ್ಷಕ ಮರಿಸ್ವಾಮಿ(65) ಮೃತಪಟ್ಟವರು. ಘಟನೆಯ ವಿವರ: ಮರಿಸ್ವಾಮಿ ಅವರು ತಮ್ಮ ಪತ್ನಿಯೊಂದಿಗೆ ತಾಲೂಕಿನ ತೆಂಕಹಳ್ಳಿ ದೇವಸ್ಥಾನಕ್ಕೆ ಬೈಕ್‍ನಲ್ಲಿ ಹೋಗುತ್ತಿರು ವಾಗ ಮಾರ್ಗ ಮಧ್ಯದಲ್ಲಿ ಅವರಿಗೆ ಮೊಬೈಲ್ ಕರೆ ಬಂದಿತು. ಕೂಡಲೇ ಅವರು ಬೈಕ್‍ಅನ್ನು ರಸ್ತೆ…

ಮೋದಿಗಿಂತ ಮನಮೋಹನ್ ಸಿಂಗ್ ಆಡಳಿತವೇ ಉತ್ತಮ: ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅಭಿಮತ
ಮಂಡ್ಯ

ಮೋದಿಗಿಂತ ಮನಮೋಹನ್ ಸಿಂಗ್ ಆಡಳಿತವೇ ಉತ್ತಮ: ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅಭಿಮತ

October 29, 2018

ಮಂಡ್ಯ: ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಶ್ರೀಮಂತರ ಪರ ಇದೆ. ಮೋದಿಗೆ ಹೋಲಿಸಿದರೆ ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಅವರು ಉತ್ತಮ ಆಡಳಿತ ನೀಡಿದ್ದಾರೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹೆಚ್.ವಿಶ್ವನಾಥ್ ಹೇಳಿದರು. ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಆರ್‍ಟಿಐ, ಆಧಾರ್ ಕಾರ್ಡ್ ಜಾರಿ ಮಾಡುವ ಮಹತ್ವದ ನಿರ್ಧಾರ ತೆಗೆದು ಕೊಂಡಿದ್ದರು. ಆದರೆ,…

ಪಾಂಡವಪುರದಲ್ಲಿ ಸಿಎಂ ಪ್ರಚಾರ ವೇಳೆ ದುರ್ಘಟನೆ
ಮಂಡ್ಯ

ಪಾಂಡವಪುರದಲ್ಲಿ ಸಿಎಂ ಪ್ರಚಾರ ವೇಳೆ ದುರ್ಘಟನೆ

October 28, 2018

ಪಾಂಡವಪುರ: ಜೆಡಿಎಸ್ ಚುನಾವಣಾ ಪ್ರಚಾರ ಸಭೆಯ ವೇಳೆ ವೇದಿಕೆ ಮುಂಭಾಗದಲ್ಲಿದ್ದ ನಾಲೆಗೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಪಾಂಡವಪುರ ಪಟ್ಟಣದಲ್ಲಿ ಶನಿವಾರ ನಡೆದಿದೆ. ಜಕ್ಕನಹಳ್ಳಿ ಗ್ರಾಮದ ವೆಂಕಟಶೆಟ್ಟಿ ಪುತ್ರ ಕುಮಾರ (38) ಮೃತ ವ್ಯಕ್ತಿ. ಪಟ್ಟಣದ ಪಾಂಡವಪುರ ಕ್ರೀಡಾಂಗ ಣದ ಬಳಿ ಆಯೋಜಿಸಲಾಗಿದ್ದ ಜೆಡಿಎಸ್ ಬಹಿರಂಗ ಪ್ರಚಾರ ಸಭೆಯ ವೇಳೆ ವೇದಿಕೆ ಸಮೀಪದಲ್ಲಿದ್ದ ವಿಶ್ವೇಶ್ವರಯ್ಯ ನಾಲೆಗೆ ಬಿದ್ದು ಕುಮಾರ ಮೃತಪಟ್ಟಿದ್ದಾರೆ. ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗ ವಹಿಸಿದ್ದ ಕುಮಾರ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ನೀರು ಕುಡಿಯಲು ನಾಲೆಯ…

ಹೆಚ್‍ಡಿಕೆಯಿಂದ ತೊಘಲಕ್ ದರ್ಬಾರ್: ಯಡಿಯೂರಪ್ಪ
ಮಂಡ್ಯ

ಹೆಚ್‍ಡಿಕೆಯಿಂದ ತೊಘಲಕ್ ದರ್ಬಾರ್: ಯಡಿಯೂರಪ್ಪ

October 27, 2018

ಮಳವಳ್ಳಿ: ರೈತರ ಸಾಲ ಮನ್ನಾ ಮಾಡುವುದಾಗಿ 5 ತಿಂಗಳಿನಿಂದ ಬೊಬ್ಬೆ ಹೊಡೆಯುತ್ತಾ ಕಾಲಹರಣ ಮಾಡುತ್ತಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ತೊಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು. ಪಟ್ಟಣದ ಕನಕದಾಸ ಕ್ರೀಡಾಂಗಣ ದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕುಮಾರಸ್ವಾಮಿ ಅವರು ಸಾಲಮನ್ನಾ ವಿಚಾರದಲ್ಲಿ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಜೊತೆಗೆ, ಯಡಿಯೂರಪ್ಪ ಒಂದು ಸಮು ದಾಯದ ಓಲೈಕೆ…

ಮಂಡ್ಯ ಜಿಲ್ಲೆಯಲ್ಲಿ ಹೆಚ್‍ಡಿಕೆ-ಬಿಎಸ್‍ವೈ ಬಿರುಸಿನ ಪ್ರಚಾರ
ಮಂಡ್ಯ

ಮಂಡ್ಯ ಜಿಲ್ಲೆಯಲ್ಲಿ ಹೆಚ್‍ಡಿಕೆ-ಬಿಎಸ್‍ವೈ ಬಿರುಸಿನ ಪ್ರಚಾರ

October 27, 2018

ಮಂಡ್ಯ, ಮಳವಳ್ಳಿ, ಮದ್ದೂರು, ಶ್ರೀರಂಗಪಟ್ಟಣ, ನಾಗಮಂಗಲದಲ್ಲಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ಪ್ರವಾಸ ಮಂಡ್ಯ: ಲೋಕಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಪರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಪರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿರುಸಿನ ಪ್ರಚಾರ ನಡೆಸಿದರು. ಸಿಎಂ ಕುಮಾರಸ್ವಾಮಿ ಅವರು ಜಿಲ್ಲೆಯ ಮಳವಳ್ಳಿ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣದಲ್ಲಿ ನಡೆದ ಜೆಡಿಎಸ್- ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿಯನ್ನು…

ಅಕ್ಕಿಹೆಬ್ಬಾಳು ಗ್ರಾಪಂ ವಿರುದ್ಧ ಕರವೇ ಪ್ರತಿಭಟನೆ
ಮಂಡ್ಯ

ಅಕ್ಕಿಹೆಬ್ಬಾಳು ಗ್ರಾಪಂ ವಿರುದ್ಧ ಕರವೇ ಪ್ರತಿಭಟನೆ

October 27, 2018

ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿಯಲ್ಲಿ ಕೆಲವು ನೌಕರರು ಮತ್ತು ಪಂಚಾಯಿತಿ ಸದಸ್ಯರು ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿ ದ್ದಾರೆ ಎಂದು ಆರೋಪಿಸಿ ಅಕ್ಕಿಹೆಬ್ಬಾಳು ಪಂಚಾಯಿತಿ ಕಚೇರಿಯ ಮುಂಭಾಗ ಶುಕ್ರವಾರ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಗ್ರಾಪಂ ಕಚೇರಿಯ ಮುಂದೆ ಸಮಾ ವೇಶಗೊಂಡ ಕರವೇ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಧಿಕಾರಿಗಳು ಹಾಗೂ ಸದಸ್ಯರ ವಿರುದ್ಧ ಘೋಷಣೆ ಕೊಗಿದರು. ಪಂಚಾಯಿತಿಯಲ್ಲಿ ಆಶ್ರಯ ಮನೆ, ಇ-ಸ್ವತ್ತು ಖಾತೆ ಬದಲಾವಣೆ, ವಿವಿಧ ಲೈಸೆನ್ಸ್ ದೃಢೀಕರಣ ಪತ್ರ,…

ಅನುಮಾನಾಸ್ಪದವಾಗಿ ಯುವತಿ ಸಾವು
ಮಂಡ್ಯ

ಅನುಮಾನಾಸ್ಪದವಾಗಿ ಯುವತಿ ಸಾವು

October 27, 2018

ಶ್ರೀರಂಗಪಟ್ಟಣ:  ಸಂಬಂ ಧಿಕರ ಮನೆಗೆ ಬಂದಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ದೊಡ್ಡಪಾಳ್ಯ ಗ್ರಾಮದಲ್ಲಿ ನಡೆದಿದೆ. ಮಂಡ್ಯ ತಾಲೂಕಿನ ಹನಿಯಂಬಾಡಿ ಗ್ರಾಮದ ಸೌಮ್ಯ(23) ಮೃತಪಟ್ಟ ಯುವತಿ. ಸೌಮ್ಯ ಮೈಸೂರಿನ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ದೊಡ್ಡಪಾಳ್ಯ ಗ್ರಾಮದ ತನ್ನ ದೊಡ್ಡಮ್ಮನ ಮನೆಗೆ ಬಂದಿದ್ದಳು. ಆದರೆ, ಗುರುವಾರ ರಾತ್ರಿ ಅಧಿಕ ರಕ್ತ ದೊತ್ತಡದಿಂದ ಬಳಲಿ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಸಂಬಂಧಿಕರು ತಿಳಿಸಿ ದ್ದಾರೆ. ಆದರೆ, ಆಕೆ ಗರ್ಭವತಿಯಾ ಗಿದ್ದು, ಇನ್ನೂ ವಿವಾಹವಾಗಿರಲಿಲ್ಲ. ಹಾಗಾಗಿ, ಸೌಮ್ಯಳ ಸಾವು…

ಸಕ್ಕರೆ ನಾಡಿನಲ್ಲಿ ಕದನ ಕುತೂಹಲ: ಇಂದು ಕೆಆರ್ ಪೇಟೆಯಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಚುನಾವಣಾ ಪ್ರಚಾರ
ಮಂಡ್ಯ

ಸಕ್ಕರೆ ನಾಡಿನಲ್ಲಿ ಕದನ ಕುತೂಹಲ: ಇಂದು ಕೆಆರ್ ಪೇಟೆಯಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಚುನಾವಣಾ ಪ್ರಚಾರ

October 26, 2018

ಮಂಡ್ಯ: ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಇನ್ನು 9 ದಿನಗಳಷ್ಟೇ ಬಾಕಿ ಇದ್ದು, ಒಕ್ಕಲಿಗರ ಶಕ್ತಿಕೇಂದ್ರ ಮಂಡ್ಯವನ್ನು ವಶಕ್ಕೆ ಪಡೆಯಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಹಾಗೂ ಬಿಜೆಪಿ ಕಸರತ್ತು ಆರಂಭಿಸಿವೆ. ಸಕ್ಕರೆ ನಾಡಿನಲ್ಲಿ ಚುನಾ ವಣಾ ಪ್ರಚಾರ ಬಿರುಸಿನಿಂದ ಸಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮತ್ತು ಬಿಜೆಪಿ ಅಭ್ಯರ್ಥಿ ಮಧ್ಯ ನೇರ ಪೈಪೋಟಿ ಕಂಡು ಬರುತ್ತಿದೆ. ಇದೇ ವೇಳೆ ಎರಡೂ ಕಡೆಯ ಅಭ್ಯರ್ಥಿಗಳಿಗೂ ಒಳೇಟಿನ ಆತಂಕ ಶುರುವಾಗಿದೆ. ಬಿಜೆಪಿ ಮತ್ತು ಮೈತ್ರಿಕೂಟದ ಅಭ್ಯರ್ಥಿಗಳು ಮತ್ತು ನಾಯಕರು ಜಿಲ್ಲೆಯಾ ದ್ಯಂತ…

ಎಲ್‍ಆರ್‍ಎಸ್, ಜಮೀರ್ ವಿರುದ್ಧ ಚುನಾವಣಾಧಿಕಾರಿಗೆ ದೂರು
ಮಂಡ್ಯ

ಎಲ್‍ಆರ್‍ಎಸ್, ಜಮೀರ್ ವಿರುದ್ಧ ಚುನಾವಣಾಧಿಕಾರಿಗೆ ದೂರು

October 26, 2018

ಮಂಡ್ಯ:  ಚುನಾವಣಾ ನೀತಿ, ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ಜೆಡಿಎಸ್ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ಮತ್ತು ಸಚಿವ ಜಮೀರ್ ಅಹಮದ್ ವಿರುದ್ಧ ಪಕ್ಷೇತರ ಅಭ್ಯರ್ಥಿ ಜಿ.ಬಿ.ನವೀನ್‍ಕುಮಾರ್ ಅವರು ಗುರುವಾರ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಮಾದರಿ ಮತಪತ್ರದಲ್ಲಿ ನನ್ನ ಚಿಹ್ನೆಯನ್ನು ತಪ್ಪಾಗಿ ನಮೂದಿಸಿ ಮತದಾರರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಎಲ್.ಆರ್.ಶಿವರಾಮೇಗೌಡ ವಿರುದ್ಧ ಮತ್ತು ಮತದಾರ ರಿಗೆ ಹಣ ಹಂಚಿದ್ದಾರೆಂದು ಆರೋಪಿಸಿ ಸಚಿವ ಜಮೀರ್ ಅಹಮದ್ ವಿರುದ್ಧ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗಿದೆ. ಎಲ್‍ಆರ್‍ಎಸ್ ವಿರುದ್ದ ದೂರು: ಮತ…

ಆಸ್ತಿ ವಿವಾದ: ತಮ್ಮನನ್ನು ಕೊಂದ ಅಣ್ಣ
ಮಂಡ್ಯ

ಆಸ್ತಿ ವಿವಾದ: ತಮ್ಮನನ್ನು ಕೊಂದ ಅಣ್ಣ

October 26, 2018

ಮಂಡ್ಯ: ಆಸ್ತಿ ವಿವಾದ ಹಿನ್ನೆಲೆ ಯಲ್ಲಿ ಅಣ್ಣನೇ ಒಡಹುಟ್ಟಿದ ತಮ್ಮನನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಮರಲಿಂಗನದೊಡ್ಡಿ ಗ್ರಾಮದಲ್ಲಿ ಗುರು ವಾರ ಮುಂಜಾನೆ ನಡೆದಿದೆ. ದೀಪಕ್ ಕುಮಾರ್ (36) ಕೊಲೆಯಾದ ವ್ಯಕ್ತಿ ಯಾಗಿದ್ದು, ಸಹೋದರ ಸದಾಶಿವ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಘಟನೆ ಹಿನ್ನೆಲೆ: ಇಂದು ಮುಂಜಾನೆ ದೀಪಕ್‍ಕುಮಾರ್ ಮನೆಯಿಂದ ಹೊರ ಬರುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ಸಹೋದರ ಸದಾಶಿವ, ದೀಪಕ್ ಮೇಲೆ ದಾಳಿ ಮಾಡಿ ಕುತ್ತಿಗೆಗೆ ಚಾಕು ಇರಿದು ಹತ್ಯೆ ಮಾಡಿದ್ದಾನೆ. ತಡೆಯಲು ಬಂದ ತಾಯಿ ನಿಂಗಮ್ಮ…

1 62 63 64 65 66 108
Translate »